Author: Srinivas_Murthy

ಬೆಂಗಳೂರು: ಭಾರತದ ಪ್ರಖ್ಯಾತ ಕೊರಿಯರ್ ಸಂಸ್ಥೆ,ದಿ ಪ್ರೊಫೆಷನಲ್ ಕೊರಿಯರ್ಸ್(ಟಿಪಿಸಿ) The Professional Couriers ವತಿಯಿಂದ ಹೊಸ ಸೇವೆ ಪ್ರೊ ಇಎಕ್ಸ್ ಎಕ್ಸ್‌ಪ್ರೆಸ್ ಎಂಬ ಅಲ್ಟ್ರಾ ಪ್ರೀಮಿಯಂ ನೂತನ ಸೇವೆಯನ್ನು ಆರಂಭಿಸಿದ್ದು ಇದರ ಲೋಕಾರ್ಪಣೆ ಕಾರ್ಯವನ್ನು ಬೆಂಗಳೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದ ಭವ್ಯವಾದ ವೇದಿಕೆ ಕಾರ್ಯಕ್ರಮದಲ್ಲಿ ದಿ ಪ್ರೊಫೆಷನಲ್ ಕೊರಿಯರ್ಸ್ ಚೇರ್ಮನ್ ಥಾಮಸ್ ಜಾನ್,ವ್ಯವಸ್ಥಾಪಕ ನಿರ್ದೇಶಕ ಅಹಮದ್ ಮಿರನ್,ಐಟಿ ನಿರ್ದೇಶಕ ಶ್ರೀನಾಥ್,ಹಣಕಾಸು ನಿರ್ದೇಶಕ ಓಮನ್ ಚಾಕೋ,ಆಡಳಿತ ನಿರ್ದೇಶಕ ಸುರೇಶ್ ಭರ್ತನ್,ವಿತರಣ ನಿರ್ದೇಶಕ ಅಬ್ರಹಾಂ, ಪ್ರೊ ಇಎಕ್ಸ್ ಎಕ್ಸ್‌ಪ್ರೆಸ್ ಲೊಗೊ ಬಿಡುಗಡೆ ಮಾಡಿ ಪ್ರೊಫೆಷನಲ್ ಕೊರಿಯರ್ ಸಂಸ್ಥೆ ಉದ್ಯೋಗಿಗಳಿಗೆ ಹೊಸ ಸೇವೆ ಪ್ರೊ ಇಎಕ್ಸ್ ಕುರಿಯಂತೆ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.ದೇಶದಲ್ಲಿ ತನ್ನದೆ ಆದ ಬೃಹತ್ ವಿತರಣಾ ಜಾಲ ಹೊಂದಿರುವ ಟಿಪಿಸಿ, ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಗ್ರಾಹಕ-ಕೇಂದ್ರಿತ ವಿತರಣೆಗಳನ್ನು ಮಾಡುತ್ತಿದ್ದು ಭಾರತದ ಪ್ರತಿಯೊಂದು ಮೂಲೆಯಲ್ಲು ತನ್ನದೆ ಸಾಮರ್ಥ್ಯದ ಕಚೇರಿಗಳನ್ನು ನಿರ್ವಹಿಸುತ್ತ ರಾಷ್ಟ್ರದ ಅತಿದೊಡ್ಡ ನಂ-1 ಕೊರಿಯರ್ ಮತ್ತು ಎಕ್ಸ್‌ಪ್ರೆಸ್ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ.ದೇಶೀಯ…

Read More

ಶ್ರೀನಿವಾಸಪುರ:ಭಾರತೀಯ ಸೇನೆಯಲ್ಲಿ 22 ವರ್ಷಗಳಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಾ.ಗುಲ್ಲಕುಂಟೆ ಗ್ರಾಮದ ಲಕ್ಷ್ಮೀನಾರಯಣ್ ಅವರನ್ನು ಅವರ ಮನೆಯಲ್ಲೆ ಕರ್ನಾಟಕ ಸರ್ಕಾರದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸನ್ಮಾನಿಸಿ ಗೌರವ ಸಲ್ಲಿಸಿದರು.ಸೈನಿಕರನ್ನು ಗೌರವಿಸಬೇಕು ಅವರ ಜೀವನದ ಮಾರ್ಗದರ್ಶನ ನಮ್ಮ ಯುವಕರಿಗೆ ಸಿಗಬೇಕು ಎಂದರು.ಗುಲ್ಲಕುಂಟೆ ಗ್ರಾಮದ ಮುನಿವೆಂಕಟಪ್ಪ ಸಾಕಮ್ಮ ದಂಪತಿ ಪುತ್ರ ಲಕ್ಷ್ಮೀನಾರಯಣ್ ಅವರು ಭಾರತೀಯ ಸೇನೆಗೆ ಸೇರಿ ಲಡಾಕ್,ಪಂಜಾಬ್ ಮಣಿಪುರ,ಜಮ್ಮುಕಾಶ್ಮೀರ,ಹೈದರಾಬಾದ್, ರಾಜಸ್ಥಾನ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ,ಬಿಇ ಇಂಜನಿಯರ್ ಪದವಿದರರಾದ ಲಕ್ಷ್ಮೀನಾರಯಣ್ ಭಾರತೀಯ ಸೇನೆಯಲ್ಲಿ ಇ.ಎಮ್.ಇ ಕೊರ್ ವರ್ಕಶಾಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸೈನಿಕರೊಂದಿಗೆ ಗಡಿಭಾಗದ ಕ್ಯಾಂಪ್ ಗಳಲ್ಲಿ ಆಧುನಿಕ ತಂತ್ರಜ್ಞಾನದ ರಕ್ಷಣಾ ಉಪಕರಣಗಳು, ಸೈಬರ್ ಸಾಮರ್ಥ್ಯದ ಉಪಕರಣಗಳು, ಬಾಹ್ಯಾಕಾಶ ಸಂಪರ್ಕ ಸಾಧನೆಗಳ ನಿರ್ವಹಣೆ ಮಾಡುತ್ತಿದ್ದಾಗಿ ಹೇಳುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತುಪಲ್ಲಿನಾರಯಣಸ್ವಾಮಿ,ಹೊಳೂರುಸಂತೋಷ್,ದಿಗುಪಲ್ಲಿ ಚಲಪತಿ,ಯುವ ಮುಖಂಡ ಸುಜಯ್,ದುರ್ಗಾಪ್ರಸಾದ್,ಗೌತಮ್ ನಾಯ್ಡು,ಬುಜ್ಜಿ,ಜಯರಾಮರೆಡ್ಡಿ, ಚೌಡರೆಡ್ಡಿ ಗೊರಮಾಕಲಹಳ್ಳಿಶ್ರೀನಿವಾಸ್ ಮತ್ತಿತರರು ಇದ್ದರು.

Read More

ನ್ಯೂಸ್ ಡೆಸ್ಕ್ :ಆಂಧ್ರದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದೆ.ಈಗ್ಗೆ ಹನ್ನೆರಡು ವರ್ಷಗಳಿಂದ ಇದ್ದ ಅನಿಶ್ಚಿತತೆಗೆ ತೆರೆಬಿದ್ದಿದೆ. ಹಲವಾರು ಕಾರಣಗಳಿಂದ ರಾಜಧಾನಿ ವಿಚಾರ ಗೊಂದಲದ ಗೂಡಾಗಿ ವಿವಾದಕ್ಕೆ ಕಾರಣವಾಗಿ ಘೋಷಣೆ ಮುಂದಕ್ಕೆ ಹೋಗುತ್ತಲೇ ಇತ್ತು. ಹಾಲೀ ಸಿಎಂ ಚಂದ್ರಬಾಬು ನಾಯ್ಡು ಅವರು ವಿಶೇಷ ಆಸಕ್ತಿ ವಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಈಗ ಸಾಕಾರಗೊಂಡಿದೆ.2014ರಲ್ಲಿ ಅಖಂಡ ಆಂಧ್ರ ಪ್ರದೇಶ ವಿಭಜನೆಗೊಂಡು ಹೈದರಾಬಾದ್ ಕೇಂದ್ರವಾಗಿ ತೆಲಂಗಾಣ ಹುಟ್ಟಿಕೊಂಡಿತ್ತು. ಕರ್ನೂಲ್ ಅನಂತಪುರ ಸೇರಿದಂತೆ ರಾಯಲಸೀಮಾ ರಾಜಮಂಡ್ರಿ ವಿಶಾಖಪಟ್ಟಣಂ ಸೇರಿದಂತೆ ಕರಾವಳಿ ಚಿತ್ತೂರು,ತಿರುಪತಿ ಮದನಪಲ್ಲಿ ಒಳಗೊಂಡ 26ಜಿಲ್ಲೆಗಳ ಪ್ರದೇಶವನ್ನು ಆಂಧ್ರಪ್ರದೇಶದ ಎಂದು ಗುರುತಿಸಲಾಗಿದ್ದು ಅಂದಿನಿಂದ, ರಾಜಧಾನಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಆಂಧ್ರ ವಿಭಜನೆಯಾಗಿ ಬಂದ ಮೊದಲ ಚಂದ್ರಬಾಬು ನೇತೃತ್ವದ ಸರ್ಕಾರ ಹೈದರಾಬಾದ್ ಮಹಾನಗರ ತೆಲಂಗಾಣಕ್ಕೆ ರಾಜಧಾನಿ ಅಂದರೆ ಆಂಧ್ರಪ್ರದೇಶದಕ್ಕೆ ರಾಜಧಾನಿ ಬೇಕು ಎಂದು ಗುಂಟೂರು ನಗರ ಹಾಗೂ ಗ್ರಾಮೀಣ ಪ್ರಾಂತ್ಯದ ಪ್ರದೇಶಗಳನ್ನು ಕ್ರೂಡಿಕರಿಸಿ ಅಮರಾವತಿ ಎಂದು ನಾಮಕರಣ ಮಾಡಿ ಇದೆ ಆಂಧ್ರದ…

Read More

ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಬಹುತೇಕ ಇಲಾಖೆ ಅಧಿಕಾರಿಗಳು ಪಾಲ್ಗೋಳ್ಳದೆ ನಿರ್ಲಕ್ಷ್ಯ ವಹಿಸಿದ್ದು ತಾಲೂಕು ಆಡಳಿತದ ಕಾರ್ಯವೈಖರಿಗೆ ಸಾಕ್ಷಿಯಾಗಿತ್ತು ಶ್ರೀನಿವಾಸಪುರ:ಭಾರತದ ಮಾಜಿ ಉಪಪ್ರಧಾನಿ,ಕೃಷಿ ಸಚಿವ,ಕಾರ್ಮಿಕ, ರೈಲ್ವೆ, ದೂರ ಸಂಪರ್ಕ, ರಕ್ಷಣೆ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಡಾ.ಬಾಬು ಜಗಜೀವನರಾಮ್ ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು ಬಡವರ ಆಹಾರ ಕೊರತೆ ನೀಗಿಸಿದ ಬಾಬೂಜಿ ಎಂದೇ ಹೆಸರಾದರು ಬಾಬು ಜಗಜೀವನರಾಂ ನಿಸ್ವಾರ್ಥ ಸೇವೆ, ಸ್ವಾತಂತ್ರ‍್ಯ ಚಳವಳಿ ಮತ್ತು ಸಮರ್ಪಣಾ ಭಾವನೆ ನಮಗೆಲ್ಲ ಆದರ್ಶ ಎಂದು ಶಾಸಕ ವೆಂಕಟಶಿವಾರೆಡ್ದಿ ಹೇಳಿದರು.ಡಾ. ಬಾಬು ಜಗಜೀವನರಾಮ್ 119ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೃಷಿ ಸಚಿವರಾಗಿದ್ದ ಜಗಜೀವನರಾಮ್ ಬಾರಿ ಅಣೆಕಟ್ಟು ನಿರ್ಮಿಸಿ ನೀರಾವರಿ ಕಲ್ಪಿಸಿದರಲ್ಲದೆ ರಸಗೊಬ್ಬರ ಕಾರ್ಖಾನೆಗಳನ್ನು ಆರಂಭಿಸಿ ಬೆಳೆಯ ಇಳುವರಿಯನ್ನು ಹೆಚ್ಚಿಸುವ ಅತ್ಯಾಧುನಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹಸಿರು ಕ್ರಾಂತಿಗೆ ಮುನ್ನೂಡಿ ಬರೆದರು ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೋಂಡಿರುವುದು ನನ್ನ ಸೌಭಾಗ್ಯ ಎಂದರು.ಕಾರ್ಯಕ್ರಮದಲ್ಲಿ…

Read More

ಬೆಂಗಳೂರು:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನೀಡುವ 25-26 ಸಾಲಿನ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಶ್ರೀನಿವಾಸಪುರದ ಮಹಿಳಾ ಉದ್ಯಮಿ ಗುಂಡಮನತ್ತ ರತ್ನಮ್ಮ ಅವರಿಗೆ ಪ್ರದಾನ ಮಾಡಲಾಗಿದೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 2025 -26 ನೇ ಸಾಲಿನ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಇಂದು 24.03.2026 ಮಂಗಳವಾರ,ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ನೀಡಿ ಗೌರವಿಸಿದರು.ತಾಲೂಕಿನ ಕಸಬಾ ಹೋಬಳಿಯ ಗುಂಡಮ್ಮನತ್ತ ಗ್ರಾಮದ ರತ್ನಮ್ಮ ಅವರು Vedhik Enterprises ಮಹಿಳಾ ಕ್ಷೇತ್ರದಲ್ಲಿ ಉದ್ಯಮಿಯಾಗಿ ಉತ್ತಮ ಸಾಧನೆ ಮಾಡಿದ್ದು ಸಿರಿಧಾನ್ಯಗಳ ಉತ್ಪನ್ನಗಳ ಉದ್ಯಮ ನಡೆಸುತ್ತಿರುವ ಅವರನ್ನು ರಾಜ್ಯಮಟ್ಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಂಘ ಸಂಸ್ಥೆಗಳು ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದು ಕೋಲಾರ ಜಿಲ್ಲೆಗೆ ಕೀರ್ತಿ…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಹೊರವಲಯದ ರೈಲ್ವೇ ನಿಲ್ದಾಣಕ್ಕೆ ಹೊಂದಿಕೊಂಡು ನಂಬಿಹಳ್ಳಿ ರಸ್ತೆಯಲ್ಲಿರುವ ಉನಿಕಿಲಿ ಗ್ರಾಮದ ಶತಮಾನಗಳಷ್ಟು ಹಳೆಯದಾದ ದೇವಾಲಯವನ್ನು ಶಿಲಾಮಯ ಕಟ್ಟಡವಾಗಿ ಜೀರ್ಣೋದ್ಧಾರ ಮಾಡಲಾಗಿದ್ದು ದೇವಾಲಯದ ಸ್ಥಿರಬಿಂಬ ಪ್ರತಿಷ್ಠಾಪನಾ ಮತ್ತು ಕುಂಭಾಭಿಷೇಕ ಮಹೋತ್ಸವದ ಎರಡು ದಿನಗಳ ಕಾಲ ಮಹಾಗಣಪತಿ ಹೋಮ,ನವಗ್ರಹ ಹೋಮ, ಮೃತ್ಯುಂಜಯ ಹೋಮ, ಕುಂಬಾಭಿಷೇಖ, ವಿಮಾನಗೋಪುರ, ಧ್ವಜಸ್ಥಂಭ, ಪೂಜಾ ಕಾರ್ಯಕ್ರಮಗಳೊಂದಿಗೆ ದೇವಾಲಯವನ್ನು ಲೋಕಾರ್ಪಾಣೆ ಮಾಡಲಾಯಿತು.ಹೊಯಿಸಳರ ಕಾಲಾವಧಿಯದು ಎಂದು ಅಂದಾಜಿಸಿರುವ ಶ್ರೀ ನಿಳಾ-ಭೂನೀಳಾ ಸಮೇತ ಶ್ರೀ ಚನ್ನರಾಯಸ್ವಾಮಿ (ಚನ್ನಕೇಶವ ದೇವರು) ದೇವಾಲಯವನ್ನು ಹದಿನೇಂಟು ಕಂಬಗಳ ಶಿಲಾಮಯವಾದ ಭವ್ಯ ದೇವಾಲಯವಾಗಿ ನಿರ್ಮಿಸಲಾಗಿದೆ. ಶಿಥಿಲವಾಗಿದ್ದ ದೇಗುಲದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಮಣ್ಣಿನ ಅಡಿಯಲ್ಲಿ ಹೂತು ಹೋಗಿ ಬಿಳಚಿಕೊಂಡಿದ್ದ ಶ್ರೀ ಭೂನೀಳಾ ಸಮೇತ ಶ್ರೀ ಚನ್ನರಾಯಸ್ವಾಮಿಯವರ ಮೂಲ ವಿಗ್ರಹಗಳನ್ನು ಸಂರಕ್ಷಿಸಿ ಅವುಗಳನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ.ದೇವಾಲಯ ಜೀರ್ಣೋದ್ಧಾರ ಕಾರ್ಯದಲ್ಲಿ ಇವೊ ಆನಂದ್ಶ್ರೀ ಭೂನೀಳಾ ಸಮೇತ ಶ್ರೀ ಚನ್ನರಾಯಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಮೂಲ ಕಾರಣಕರ್ತರು ಹಾಗು ಸ್ವಚ್ಚತೆಯಿಂದ ಹಿಡಿದು ಪೂಜಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಉನಿಕಿಲಿ ಮೂಲದವರಾಗಿ ಚಿಂತಾಮಣಿ ತಾಲೂಕು ಪಂಚಾಯಿತಿ…

Read More

ಶ್ರೀನಿವಾಸಪುರ: ಬೀದಿಯಲ್ಲಿ ಕಸ ಹಾಕುವ ವಿಚಾರದಲ್ಲಿ ಗಲಾಟೆ ನಡೆದು ವ್ಯಕ್ತಿಯೊಬ್ಬರು ಅಮಾನುಷವಾಗಿ ಕೊಲೆಯಾಗಿದ್ದು ಮತ್ತೋರ್ವ ವ್ಯಕ್ತಿ ಗಾಯಗೊಂಡ ಘಟನೆ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ  ನಡೆದಿದೆ ಮೃತಪಟ್ಟ ವ್ಯಕ್ತಿಯನ್ನು ಗೌನಿಪಲ್ಲಿ ನಿವಾಸಿ ಶಾಜು ಖಾನ್ (65) ಎಂದು ಗುರುತಿಸಲಾಗಿದೆ.ಗ್ರಾಮದಲ್ಲಿ ವಾಸಿಂ ಎನ್ನುವವರು ಮಟನ್ ಅಂಗಡಿ ಇಟ್ಟುಕೊಂಡಿದ್ದಾರೆ ಅಲ್ಲಿ ಕಸ ಹಾಕುವ ಬಗ್ಗೆ ಮೃತ ಶಾಜುಖಾನ್ ಹಾಗು ವಾಸಿಂ ನಡುವೆ ಮೊದಲಿನಿಂದಲೂ ವೈಮನಸ್ಯ ಇದ್ದು ಇಂದು ಕಸ ಹಾಕುವ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ವಾಸಿಂ ಪರವಾಗಿ ಶಬ್ಬೀರ್ ಎನ್ನುವ ಬೆಂಬಲಕ್ಕೆ ನಿಂತಿದ್ದು ಇದು ಮಾತಿಗೆ ಮಾತು ಬೆಳೆದು ಗಲಾಟೆ ದೊಡ್ಡದಾಗಿದೆ. ವಾಸಿಂ ಮಟನ್ ಕತ್ತರಿಸುವ ಮಚ್ಚಿನಿಂದ ಶಾಜುಖಾನ್ ಮೇಲೆ ಬಿಸಿದ್ದಾನೆ ಮಚ್ಚು ಬೀಸಿದ ರಭಸಕ್ಕೆ ಶಾಜುಖಾನ್ ಕತ್ತುಗೆ ತಗುಲಿದೆ ದೊಡ್ಡದಾಗಿ ಗಾಯವಾಗಿದೆ ತೀವ್ರವಾಗಿ ರಕ್ತ ಸಾವ್ರಾವಾಗಿ ಶಾಜುಖಾನ್ ಪ್ರಾಣ ಬಿಟ್ಟಿದ್ದು ಮೃತನೊಂದಿಗೆ ಇದ್ದ ವ್ಯಕ್ತಿಗೂ ಗಾಯಗಳಾಗಿವೆ.ಗಲಾಟೆ ಸಂದರ್ಭದಲ್ಲಿ ಆರೋಪಿ ವಾಸಿಂ ಹಾಗೂ ಬೆಂಬಲಕ್ಕೆ ನಿಂತಿದ್ದ ಶಬ್ಬಿರ್ ಸ್ಥಳದಿಂದ ಪರಾರಿಯಾಗಿದ್ದಾರೆ.ಗೌನಿಪಲ್ಲಿ…

Read More

ಶ್ರೀನಿವಾಸಪುರ:ಪಟ್ಟಣದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆಯ ಮೇಲೆ ಪೊಲೀಸರು ದಾಳಿ ನಡೆಸಿ ದಂಧೆಯ ಕಿಂಗ್ ಪಿನ್ ಮಹಿಳೆ ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.ಪ್ರಕರಣದ ಕಿಂಗ್ ಪಿನ್ ಆಗಿರುವ ಮಹಿಳೆ ಶ್ರೀನಿವಾಸಪುರ ಪಟ್ಟಣದ ಜನವಸತಿ ಪ್ರದೇಶದ ಹಳೆಯ ಮನೆಯೊಂದರಲ್ಲಿ ದೀರ್ಘಕಾಲದಿಂದ ರಾಜಾರೋಷವಾಗಿ ಅನೈತಿಕ ಚಟುವಟಿಕೆಗಳು ನಡೆಸುತ್ತಿರುವ ಕುರಿತು ಸಾರ್ವಜನಿಕರು ಪೋಲಿಸರಿಗೆ ಸಮಾಚಾರ ನೀಡಿದ್ದರು ಇದರ ಅನ್ವಯ ಪೊಲೀಸರು ಶನಿವಾರ ಸಂಜೆ ಶ್ರೀನಿವಾಸಪುರ ವೃತ್ತ ನಿರೀಕ್ಷಕ (CPI) ಶಂಕರಾಚಾರ್ಯ ಹಾಗೂ ಉಪನಿರೀಕ್ಷಕ (PSI) ಜಯರಾಂ ಅವರ ನೇತೃತ್ವದ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.ಪೋಲಿಸ್ ದಾಳಿ ಸಂದರ್ಭದಲ್ಲೂ ದಂದೆಯಲ್ಲಿದ್ದ ಕಿಂಗ್ ಪಿನ್ ಮಹಿಳೆ, ಆಕೆಗೆ ಸಹಕಾರ ನೀಡುತಿದ್ದ ಇಬ್ಬರು ಮಹಿಳೆಯರು ಹಾಗೂ ಒಬ್ಬ ಯುವಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಒಳಪಡಿಸಿದ್ದಾರೆ.ಪೋಲಿಸರ ಕಾರ್ಯಚರಣೆ ನಾಗರಿಕರಿಗೆ ನೆಮ್ಮದಿರಾಮಕೃಷ್ಣ ಬಡಾವಣೆ ಹಾಗು ಪ್ರವಾಸಿ ಮಂದಿರದ ನಡುವಿನ ಹಿಂಬಾಗದ ಗುಂಪು ಮನೆಗಳ ಪ್ರದೇಶದಲ್ಲಿ ಅವ್ಯಾಹುತವಾಗಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಸ್ಥಳೀಯ ಜನರು ಮುಜಗರಕ್ಕೆ ಒಳಗಾಗಿದ್ದು ಹಲವಾರು ಬಾರಿ…

Read More

ಶ್ರೀನಿವಾಸಪುರ :ರಾತ್ರಿ ಗಸ್ತು ನಿರ್ವಹಿಸುತ್ತಿದ್ದ ಶ್ರೀನಿವಾಸಪುರ ಪೋಲಿಸ್ ಠಾಣೆ ಪೊಲೀಸ್ ಮುಖ್ಯ ಪೇದೆ ರಸ್ತೆ ಅಪಘಾತದಲ್ಲಿ ಸಾವನಪ್ಪಿರುವ ಧಾರುಣ ಘಟನೆ ಶ್ರೀನಿವಾಸಪುರ ಪಟ್ಟಣದ ಹೊರವಲಯದಲ್ಲಿ ನಡೆದಿದೆ.ಶ್ರೀನಿವಾಸಪುರ-ಕೋಲಾರ ರಾಜ್ಯ ಹೆದ್ದಾರಿಯ ಪಣಸಮಾಕಲಹಳ್ಳಿ ಬಳಿ ಘಟನೆ ನಡೆದಿದ್ದು ಮೃತರನ್ನು ಆನಂದ್ ಬಾಬು (45) ಎಂದು ಗುರುತಿಸಲಾಗಿದೆ. ಇವರು ಕಳೆದ ಒಂದೂವರೆ ವರ್ಷದಿಂದ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಆನಂದ್ ಬಾಬು ಎಂದಿನಂತೆ ತಮ್ಮ ದ್ವಿಚಕ್ರ ವಾಹನದಲ್ಲಿ ರಾತ್ರಿ ಗಸ್ತು ನಿರ್ವಹಿಸುತ್ತ ಪಣಸಮಾಕಲಹಳ್ಳಿ ಬಳಿ ಹೋಗುತ್ತಿದ್ದಾಗ ಕೋಲಾರದ ಕಡೆಯಿಂದ ಅತಿ ವೇಗ ಹಾಗು ಅಜಾಗುರವಾಗಿ ಬಂದಂತ ಬೊಲೆರೋ ವಾಹನ ಇವರ ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದು ರಸ್ತೆ ಬದಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದೆ ಪಕ್ಕದ ಹಳ್ಳಕ್ಕೆ ಬಿದ್ದಿದೆ. ಅಪಘಾತದ ತೀವ್ರತೆ ಎಷ್ಟಿತ್ತು ಎಂದರೆ ಬೊಲೆರೋ ವೇಗಕ್ಕೆ ಆನಂದ್ ಬಾಬು ಸ್ಥಳದಲ್ಲೇ ಮೃತಪಟ್ಟರೆ ರಸ್ತೆ ಬದಿ ವಿದ್ಯತ್ ಕಂಬಗಳು ಸಂಪೂರ್ಣ ಧರೆಗೆ ಉರಳಿದೆ.ವಿಷಯ ತಿಳಿಯುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ…

Read More

ಶ್ರೀನಿವಾಸಪುರ:ಬೈಕ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಒರ್ವ ವ್ಯಕ್ತಿ ಮೃತಪಟ್ಟ ಘಟನೆ ಚಿಂತಾಮಣಿ-ಹೊಸಕೋಟೆ ಹೆದ್ದಾರಿಯಲ್ಲಿ ನಂದಗುಡಿ ಹೋಬಳಿಯಲ್ಲಿ ಇರುವ ಸುಮಧುರ ಲಾಜಿಸ್ಟಿಕ್ಸ್ ಪಾರ್ಕ್ ಬಳಿ ಬುಧವಾರ ಸಂಜೆ ನಡೆದಿದ್ದು ಮೃತ ವ್ಯಕ್ತಿಯನ್ನು ಶ್ರೀನಿವಾಸಪುರ ಪಟ್ಟಣದ ಕರ್ನಾಟಕ ಬ್ಯಾಂಕ್ ಉಪ ವ್ಯವಸ್ಥಾಪಕ ಶ್ರೀಹರಿ ಎಂದು ಗರುತಿಸಲಾಗಿದೆ,ಮೃತನು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವ ತನ್ನ ಪತ್ನಿಯನ್ನು ಕಾಣಲು ಬ್ಯಾಂಕ್ ಕೆಲಸ ಮುಗಿಸಿ ಸಂಜೆ ಪಲ್ಸರ್ ಬೈಕ್‌ನಲ್ಲಿ ಮಾಡಿಕೆರೆ ಕ್ರಾಸ್-ಹೆಚ್.ಕ್ರಾಸ್ ಹೊಸಕೋಟೆ ಮೂಲಕ ಹೋಗುತ್ತಿದ್ದ ಚಿಂತಾಮಣಿ-ಹೊಸಕೋಟೆ ಹೆದ್ದಾರಿ ಡಿ:ಶೆಟ್ಟಿಹಳ್ಳಿ ಬಳಿ ಇರುವ ಸಮುಧರ್ ಲಾಜಿಸ್ಟಿಕ್ಸ್ ಪಾರ್ಕ್ ಒಳಗಿನಿಂದ ಲಾಜಸ್ಟಿಕ್ ಲಾರಿಯೊಂದು ಹೋರಬಂದಿದೆ ಅದಕ್ಕಿಂತ ಮುಂಚಿತವಾಗಿ ಹೋಗುವ ಧಾವಂತದಲ್ಲಿ ಎದರುಗಡೆಯಿಂದ ಬರುತ್ತಿದ್ದ ಲಾರಿಯನ್ನು ಗಮನಿಸದೆ ಮುನ್ನುಗ್ಗಿದ್ದು ಲಾರಿಗೆ ಡಿಕ್ಕಿ ಹೊಡೆದಿದೆ ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ ಪೆಟ್ಟಾಗಿ ಬಿದ್ದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ, ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಬಂದ ಹೊಸಕೋಟೆ ಸಂಚಾರಿ ಠಾಣೆಯ ಪೊಲೀಸರು ಬೇಟಿ ನೀಡಿ ಶವವನ್ನು ಆಸ್ಪತ್ರೆಗೆ ಸಾಗಿಸಿ ವಾಹನಗಳನ್ನು…

Read More