Author: Srinivas_Murthy

ಶ್ರೀನಿವಾಸಪುರ:ಪಟ್ಟಣದ ಎಂ.ಜಿ.ರಸ್ತೆ ತರಾಕಾರಿ ಅಂಗಡಿಗಳ ವೃತ್ತದಲ್ಲಿ ಅತಿವೇಗದಿಂದ ಬಂದ ದ್ವಿಚಕ್ರವಾಹನ ಸವಾರರು ಡಿಕ್ಕಿಯಾಗಿ ಮತ್ತೊಂದು ದ್ವಿಚಕ್ರವಾಹನದಲ್ಲಿ ಹೋಗಿತಿದ್ದ ಮಹಿಳೆ ಹಾಗು ವಾಹನ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ಬೆಳೆಗ್ಗೆ ನಡೆದಿರುತ್ತದೆ.ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.ಗಾಯಗೊಂಡ ವ್ಯಕ್ತಿಯನ್ನು ಎಪಿಎಂಸಿ ಮಾರುಕಟ್ಟೆಯಲ್ಲಿ ನೌಕರಿ ಮಾಡುವ ವೇಣು ಎಂದು ಗುರುತಿಸಲಾಗಿದೆ. ಗಾಯಾಳು ವೇಣು ಮಾರುಕಟ್ಟೆಗೆ ಹೋಗಲು ನೆಹರು ರಸ್ತೆಯಿಂದ ಆಜಾದ್ ರಸ್ತೆ ಮೂಲಕ ಹೋಗಲು ತರಕಾರಿ ಮಾರುಕಟ್ಟೆ ವೃತ್ತದಿಂದ ಸಾಗುತ್ತಿರುವಾಗ ಎಂ.ಜಿ.ರಸ್ತೆಯಲ್ಲಿ ಮುಳಬಾಗಿಲು ವೃತ್ತದ ಕಡೆಯಿಂದ ಬಂದಂತ ಇಬ್ಬರು ಯುವಕರಿದ್ದ ಪಲ್ಸರ್ ಬೈಕ್ ಅತಿಯಾದ ವೇಗದಿಂದ ಬಂದು ವೇಣು ಚಲಾಯಿಸುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿ ಹೋಡೆದ್ದಿರುತ್ತಾರೆ.ಗುದ್ದಿದ ರಭಸಕ್ಕೆ ವೇಣು ಅಜಾದ್ ರಸ್ತೆಯಲ್ಲಿ ತರಕಾರಿ ಅಂಗಡಿಗಳ ಬಳಿ ಇಟ್ಟಿದ್ದ ಕಲ್ಲುಗಳ ಮೇಲೆ ಬಿದ್ದು ತಲೆಗೆ ತೀವ್ರವಾದ ಪೆಟ್ಟಾಗಿದೆ ಆತನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ.ಅತಿಯಾದ ವೇಗದಿಂದ ಬಂದ ಯುವಕರಿದ್ದ ಪಲ್ಸರ್ ಬೈಕ್ ಎಂ.ಜಿ.ರಸ್ತೆಯಲ್ಲಿನ ತರಕಾರಿ ಅಂಗಡಿಯ ತೆಂಗಿನಕಾಯಿ ಸ್ಟಾಂಡ್ ಗುದ್ದಿ ಮೇಲಕ್ಕೆ ಎಗುರಿ ಬಿದಿದ್ದು ದ್ವಿಚಕ್ರವಾಹನದಲ್ಲಿದ್ದ ಯುವಕರು ಗಾಯಗೊಂಡಿದ್ದಾರೆ.ಎಂ.ಜಿ.ರಸ್ತೆಯಲ್ಲಿ…

Read More

ನ್ಯೂಜ್ ಡೆಸ್ಕ್:ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸಬೇಕೆಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದು ಗುರುವಾರ ಸಿಎಂ ಚಂದ್ರಬಾಬು ನಾಯ್ಡು ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಚಿವರೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿಅಗ್ರಿಗೋಲ್ಡ್ ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮೂವರು ಸದಸ್ಯರ ಸಮಿತಿ ರಚಿಸುವಂತೆ ಆದೇಶಿಸಿದ್ದಾರೆ. ಎಂಟು ರಾಜ್ಯಗಳಲ್ಲಿ 19 ಲಕ್ಷ ಸಂತ್ರಸ್ತರಿದ್ದು,ಆಂಧ್ರಪ್ರದೇಶದಲ್ಲಿ 11 ಲಕ್ಷ ಸಂತ್ರಸ್ತರಿದ್ದಾರೆ. ಈ ವಂಚನೆ ಪ್ರಕರಣದಲ್ಲಿ ಸಂತ್ರಸ್ತರ ಹಣ ದುರುಪಯೋಗ ಪಡಿಸಿಕೊಂಡವರಲ್ಲಿ ಹಿಂದಿನ ವೈಎಸ್‌ಆರ್‌ಸಿಪಿ ಸರ್ಕಾರದಲ್ಲಿದ್ದ ಕೆಲವು ಪ್ರಮುಖ ಅಧಿಕಾರಿಗಳೂ ಪಾಲುದಾರರಾಗಿದ್ದಾರೆ ಅದಕ್ಕಾಗಿಯೇ ಅವರು ಈ ಪ್ರಕರಣದ ಕುರಿತು ಮೂವರು ಸದಸ್ಯರ ಸಮಿತಿಯನ್ನು ರಚಿಸಲು ಆದೇಶಿಸಿದ್ದಾರೆ.ಅಗ್ರಿಗೋಲ್ಡ್‌ನಲ್ಲಿ ಹೂಡಿಕೆ ಮಾಡುವ ಮೂಲಕ ವಂಚನೆಗೊಳಗಾದ ಎಲ್ಲರಿಗೂ ನ್ಯಾಯ ಸಿಗಬೇಕು ಎಂದು ಸಿಎಂ ಚಂದ್ರಬಾಬು ಸ್ಪಷ್ಟಪಡಿಸಿದ್ದಾರೆ.

Read More

ನ್ಯೂಜ್ ಡೆಸ್ಕ್:ಕೇರಳದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆಯ್ಕೆ ಮಾಡಿದೆ. ಈ ನಿಟ್ಟಿನಲ್ಲಿ, ಎಐಸಿಸಿ ಗುರುವಾರ ನವದೆಹಲಿಯಲ್ಲಿ ಸತೀಶನ್ ಅವರ ಹೆಸರನ್ನು ಕೇರಳದ ಮುಖ್ಯಮಂತ್ರಿಯಾಗಿ ಘೋಷಿಸಿತು.ಕೇರಳ ರಾಜ್ಯದ ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಕಳೆದೊಂದು ವಾರದಿಂದ ನಡೆದಿದ್ದ ರಾಜಕೀಯ ಸಸ್ಪೆನ್ಸ್‌ ಕೊನೆಗೂ ಅಂತ್ಯವಾಗಿದ್ದು ಯುಡಿಎಫ್ ಮತ್ತು ಕಾಂಗ್ರೆಸ್ ಮೈತ್ರಿಕೂಟದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಯಾಗಿದ್ದಾರೆ.ಕೇರಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನಾಗಿದ್ದ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಈ ಮುಖ್ಯಮಂತ್ರಿ ಪದವಿ ರೇಸ್ ನಲ್ಲಿ ರಮೇಶ್ ಚೆನ್ನಿತ್ತಲ ಮತ್ತು ಕೆ.ಸಿ. ವೇಣುಗೋಪಾಲ್ ಸ್ಪರ್ಧೆಯಲ್ಲಿದ್ದರು. ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಹೈಕಮಾಂಡ್ ನಿಂದ ಸಾಕಷ್ಟು ಆಶೀರ್ವಾದ ಇತ್ತಾದರೂ, ಕೇರಳದಲ್ಲಿ ಪಕ್ಷದ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡಿರುವ ಪಕ್ಷದ ಹೈಕಮಾಂಡ್ ವಿ.ಡಿ. ಸತೀಶನ್ ಅವರನ್ನು ಆಯ್ಕೆ ಮಾಡಿದೆ.2026ರ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಭರ್ಜರಿ ಜಯ ಸಾಧಿಸಿದ…

Read More

ಶ್ರೀನಿವಾಸಪುರ:ತಾಲೂಕಿನ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳನ್ನು ಶಾಸಕರ ಅನುಧಾನದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಇಂದು ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ ನಂತರ ಮಾತನಾಡಿ ಅವರು ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ 1.5 ಕೋಟಿ ವೆಚ್ಚದಲ್ಲಿ ನೂತನವಾಗಿ ರಾಜಗೋಪುರ ನಿರ್ಮಾಣ ಮಾಡಲಾಗುತ್ತದೆ ಹಾಗು ದೇವಾಲಯದ ಸುತ್ತ ಮೂಲಸೌಕರ್ಯ ಕಲ್ಪಿಸಲು ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.ದೈವ ಪ್ರೆರಣೆಈ ಕಾಮಗಾರಿಯ ಮಾಡುವಂತೆ ಯಾರು ನನಗೆ ಕೇಳಲಿಲ್ಲ ಭಗವಂತನೆ ನನಗೆ ಪ್ರೇರಣೆ ನೀಡಿ, ನನ್ನಿಂದ ಈ ಕಾಮಗಾರಿ ಮಾಡಿಸಲು ಅವಕಾಶ ಕಲ್ಪಿಸಿದ್ದಾರೆ ಅದಕ್ಕೆ ನಾನು ಧನ್ಯ ಎಂದ ಅವರು. ಪಟ್ಟಣದಲ್ಲಿನ ಇನ್ನಷ್ಟು ಹಳೇಯ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು ಎಂದರು.ಆರ‍್ಯ ವೈಶ್ಯ ಮಂಡಳಿ ಮುಖಂಡ ವೈ.ಆರ್.ಎಸ್.ಪ್ರಕಾಶ್ ಮಾತನಾಡಿ ಗುತ್ತಿಗೆದಾರರು ಶಿಲ್ಪಿಗಳು ಹಾಗು ಇದರ ಉಸ್ತುವಾರಿ ವಹಿಸಿಕೊಂಡಿರುವ ಇಲಾಖೆ ಇಂಜಿನೀಯರ್ ಅವರು ಸ್ಥಳೀಯರ ಸಹಕಾರವನ್ನು ಪಡೆದು ಗುಣಮಟ್ಟದ ಕಾಮಗಾರಿ ಮಾಡುವಂತೆ…

Read More

ಕೋಲಾರ:ಶ್ರೀನಿವಾಸಪುರ ಕ್ಷೇತ್ರದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರೆ ನಮ್ಮ ನಾಯಕರು ಅವರೇನಾದರೂ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೆ ಆದರೆ ಅಗ ತೂಪಲ್ಲಿ ನಾರಾಯಣಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ ಎಂದು ಜೆಡಿಎಸ್ ಪಕ್ಷದಲ್ಲಿ ಮುಖಂಡರೊಬ್ಬರು ಹೇಳಿಕೊಂಡಿದ್ದಾರೆ.ಸಿಎಂಆರ್.ಶ್ರೀನಾಥ್ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಲಿದ್ದಾರೆಂಬ ವದಂತಿಗಳು ಹರಿದಾಡುತ್ತಿರುವ ಸಮಯದಲ್ಲಿ ಶ್ರೀನಿವಾಸಪುರದಲ್ಲಿ ಸ್ಪರ್ದಿಸಲು ಹೊರಗಿನವರಿಗೆ ಅವಕಾಶವಿಲ್ಲ ಕಾರ್ಯಕರ್ತರು ಒಪ್ಪುವುದೂ ಇಲ್ಲ ಎಂಬ ಮಾತು ದಳಪತಿಗಳಿಂದಲೆ ಕೇಳಿಬರುತ್ತಿದೆ.ಶಾಸಕರು ಹಿಂದೆ ಸರಿದರೆ ಅಹಿಂದಾಗೆ ಅವಕಾಶವೆಂಕಟಶಿವಾರೆಡ್ಡಿ ಅವರು ಶಾಸಕರಾಗಿದ್ದು, ಇಲ್ಲಿ ಬೇರೆಯವರ ಸ್ಪರ್ಧೆ ವಿಷಯ ಅಪ್ರಸ್ತುತ,ಎರಡನೆ ಸಾಲಿನಲ್ಲಿ ತೂಪಲ್ಲಿ ನಾರಾಯಣಸ್ವಾಮಿ ಇದ್ದಾರೆ ಅವರು ಜಿಪಂ ಅಧ್ಯಕ್ಷರಾಗಿ, ಪಕ್ಷಕ್ಕಾಗಿ ನಿಷ್ಟೆಯಿಂದ ಕೆಲಸ ಮಾಡಿಕೊಂಡು ಬಂದಿದ್ದು ಅವರೊಂದಿಗೆ ಮತ್ತೊಬ್ಬ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಅಹಿಂದ ಮುಖಂಡ ಎಂದು ಗುರುತಿಸಿಕೊಂಡಿರುವವರು ಹೇಳಿಕೊಂಡಿರುವುದು ಏನೆಂದರೆ ಶ್ರೀನಿವಾಸಪುರದಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ್ದೇವೆ, ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿದಿದ್ದೇವೆ,ಅವಕಾಶ ಕೊಟ್ಟರೆ ನಾನು MLA ಅಭ್ಯರ್ಥಿ ಎಂದು ಎಂದು ತಮ್ಮ ಮನದಾಳದ ಮಾತನ್ನು Indirectly ಹೇಳಿದ್ದಾರೆ.ಸಿಎಂಆರ್.ಶ್ರೀನಾಥ್ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದಾರೆ…

Read More

ಶ್ರೀನಿವಾಸಪುರ:ಇಕ್ಕಟಿನ ವಾಹನದಲ್ಲಿ ನಾಲ್ಕು ಹಸುಗಳನ್ನು ಸಾಗಿಸುತ್ತಿರುವ ಬಗ್ಗೆ ಸಾರ್ವಜನಿಕರು ಅನುಮಾನದಿಂದ ವಾಹನ ಸಮೇತ ಹಸುಗಳನ್ನು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಸೋಮವಾರ ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.ಚಿಂತಾಮಣೆಯಿಂದ ಐಸ್ ಕ್ರಿಮ್ ಮಾರುವ ವಾಹನದಲ್ಲಿ ನಾಲ್ಕು ಹಸುಗಳನ್ನು ತುಂಬಿಕೊಂಡು ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ವೃತ್ತದ ಮೂಲಕ ಮುಳಬಾಗಿಲು ಕಡೆ ಹೋಗಲಾಗುತ್ತಿತ್ತು.ವಾಹನದಲ್ಲಿದ್ದ ಹಸುವೊಂದು ಅಬ್ಬರಿಸುತ್ತ ಇದ್ದ ಬಗ್ಗೆ ಗಮನಿಸಿದ ಸ್ಥಳೀಯರು ವಾಹನವನ್ನು ಹಿಂಬಾಲಿಸಿ ತಡೆದು ಪರಿಶೀಲನೆ ನಡೆಸಿದ್ದಾರೆ. ಸಣ್ಣ ಇಕ್ಕಾಟಾದ ಜಾಗದ ವಾಹನದಲ್ಲಿ ನಾಲ್ಕು ಹಸುಗಳಿದ್ದು, ಇದು ಅಕ್ರಮ ಸಾಗಾಟ ಇರಬಹುದು ಎಂದು ಸಾರ್ವಜನಿಕರು ಅನುಮಾನಗೊಂಡು ವಾಹನ ಸುತ್ತುವರೆದು ಪ್ರಶ್ನಿಸಿದ್ದಾರೆ.ಹಸುಗಳೊಂದಿಗೆ ವಾಹನದಲ್ಲಿದ್ದವರು ನೀಡುತ್ತಿದ್ದ ಹೇಳಿಕೆಗಳು ಅನುಮಾನ್ಪದ ರೀತಿಯಲ್ಲಿದ್ದು ಜನರು ಸಂಶಯಗೊಂಡು ವಾಹನ ಮತ್ತು ಹಸುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ದಾವಿಸಿದ ಶ್ರೀನಿವಾಸಪುರ ಪಿಸ್ಸೈ ಜಯರಾಮ್ ವಾಹನದಲ್ಲಿದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ವಾಹನದಲ್ಲಿದ್ದ ಎಲ್ಲ ಹಸುಗಳು ನಾಟಿ ಹಸುಗಳಾಗಿದ್ದು ಅವುಗಳನ್ನು ಕೋಲಾರದ ಅರಾಬಿಕೊತ್ತನೂರು ಬಳಿ ಇರುವ ಗೋಶಾಲೆಗೆ ರವಾನಿಸಲಾಗಿದೆ.

Read More

ನ್ಯೂಜ್ ಡೆಸ್ಕ್:ಆನ್‌ಲೈನ್ ಬೆಟ್ಟಿಂಗ್ ವ್ಯಸನಿಯಾಗಿ ಹಣ ಹೊಂದಿಸಲು ಸರ್ಕಾರಿ ಕಚೇರಿಗಳಲ್ಲಿ ಲ್ಯಾಪ್‌ಟಾಪ್‌ ಮತ್ತು ಪ್ರಿಂಟರ್‌ಗಳನ್ನು ಕದಿಯುತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಆಂಧ್ರ ಪೋಲಿಸರು ಬಂಧಿಸಿ ಕದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ.ಪೋಲಿಸರು ವಶಪಡಿಸಿಕೊಳ್ಳಲಾದ 30 ಪ್ರಿಂಟರ್‌ಗಳು ಮತ್ತು 3 ಲ್ಯಾಪ್‌ಟಾಪ್‌ಗಳ ಮೌಲ್ಯ 8,10,400 ಲಕ್ಷ ರೂ. ಎಂದು ಅಂದಾಜಿಸಿದ್ದಾರೆ. ಚಿತ್ತೂರು ಜಿಲ್ಲೆಯ ಎಸ್.ಆರ್. ಪುರಂ ಮಂಡಲದ ಕನ್ಯಾಕಪುರಂ ಗ್ರಾಮದ ಮಹೇಶ್ ಎಂಜಿನಿಯರಿಂಗ್ ವಿದ್ಯಾರ್ಥಿ ಆನ್‌ಲೈನ್ ಬೆಟ್ಟಿಂಗ್ ಮತ್ತು ಐಷಾರಾಮಿ ಜೀವನದ ಚಟಕ್ಕೆ ಸುಲಭವಾಗಿ ಹಣ ಗಳಿಸಲು ಕಳ್ಳತನವನ್ನು ವೃತ್ತಿಯಾಗಿ ಆರಿಸಿಕೊಂಡು ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಪ್ರಿಂಟರ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ಕಳ್ಳತನ ಮಾಡುತ್ತಿದ್ದನಂತೆ ಇವನ ವಿರುದ್ದ ಆಂಧ್ರಪ್ರದೇಶದ ಚಿತ್ತೂರು, ತಿರುಪತಿ ಮತ್ತು ಅನ್ನಮಯ ಜಿಲ್ಲೆಗಳಲ್ಲಿ 18 ಪ್ರಕರಣಗಳು ದಾಖಲಾಗಿವೆ.

Read More

ನ್ಯೂಜ್ ಡೆಸ್ಕ್:ತಮಿಳುನಾಡಿನಲ್ಲಿ 20 ನೇ ಶತಮಾನದ ಆರಂಭದಲ್ಲಿ, ಮದ್ರಾಸ್ ಪ್ರೆಸಿಡೆನ್ಸಿ ಆಡಳಿತಾವಧಿಯಲ್ಲಿ ಸರ್ಕಾರಿ ಉದ್ಯೋಗ, ಶೈಕ್ಷಣಿಕ ಕ್ಷೇತ್ರ ರಾಜಕೀಯ ರಂಗದಲ್ಲಿ ಬ್ರಾಹ್ಮಣರು ಪ್ರಾಬಲ್ಯ ಇತ್ತು.ದ್ರಾವಿಡ ಪಕ್ಷಗಳ ಉದಯಿಸುವ ಮೊದಲು,ರಾಜಗೋಪಾಲಾಚಾರಿ, ವೆಂಕಟರಾಮನ್ ಮತ್ತು ಟಿಟಿ ಕೃಷ್ಣಮಾಚಾರಿಯಂತಹ ಪ್ರಭಾವಿ ಬ್ರಾಹ್ಮಣ ವ್ಯಕ್ತಿಗಳು ತಮಿಳು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಶೇ3% ಪ್ರತಿಶತ ಬ್ರಾಹ್ಮಣರು ಉದ್ಯೋಗದಲ್ಲಿ ಶೇಕಡಾ 70 ಕ್ಕೂ ಹೆಚ್ಚು ಪಾಲು ಪಡೆದಿದ್ದಾರೆ ಎಂದು ವಿರೋಧಿಸಿ ಬ್ರಾಹ್ಮಣೇತರರಿಗೆ ನ್ಯಾಯ ಸೀಗಬೇಕು ಎಂಬ ಬೇಡಿಕೆಯೊಂದಿಗೆ, 1916 ರಲ್ಲಿ ಜಸ್ಟೀಸ್ ಪಾರ್ಟಿ ಉದ್ಭವಿಸಿತು ಪೆರಿಯಾರ್ ನಿಲವುಗಳನ್ನು ಬೆಂಬಲಿಸುವ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಂದ ದ್ರಾವಿಡ ಸಿದ್ಧಾಂತ ಬಲಗೊಂಡಿತು ಎನ್ನುತ್ತಾರೆ.ಎಂ.ಜಿ.ಆರ್ ಅವಕಾಶ ನೀಡಿದ್ದರು.ಎಂಜಿ ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದಾಗ,ಎಚ್.ವಿ. ಹಂಡೆ ಎಂಬ ಬ್ರಾಹ್ಮಣ ವ್ಯಕ್ತಿ ಆರೋಗ್ಯ ಸಚಿವರಾಗಿದ್ದರು, ಎಐಎಡಿಎಂಕೆ ಮುಖ್ಯಸ್ಥೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸ್ವತಃ ಬ್ರಾಹ್ಮಣರಾದರೂ,ತಮ್ಮ ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಅವಕಾಶ ನೀಡಿರಲಿಲ್ಲ, ಪಕ್ಷದಲ್ಲಿ ಪ್ರಭಾವಿಯಾಗಿದ್ದ ಬ್ರಾಹ್ಮಣ ಸಮಾಜದ ವಿ. ಮೈತ್ರೇಯನ್ ಅವರನ್ನು ಜಯಲಲಿತಾ ಮೂರು ಬಾರಿ…

Read More

ನ್ಯೂಜ್ ಡೆಸ್ಕ್:ತಮಿಳುನಾಡಿನಲ್ಲಿ ರಾಜಕೀಯ ದಿನಕ್ಕೊಂದು ಬದಲಾವಣೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಸಿನಿಮಯ ರೀತಿಯಲ್ಲಿ ರಾಜಕೀಯದಲ್ಲೂ ಸಸ್ಪೆನ್ಸ್ ಮೂಡುತ್ತಿದೆ ಮತ್ತೊಂದು ಬದಲಾವಣೆ ಅಂದರೆ ರಾತ್ರಿಯಿಂದ ಇಚಿಗೆ ವಿದುತಲೈ ಚಿರುತೈಗಲ್ ಕಚ್ಚಿ (VCK) ವಿಜಯ್ ಯಿಂದ ದೂರ ಸರಿಯುವ ಮಾತಾಡಿದ್ದು ಈಗ ಬೆಳಿಗ್ಗೆ ಶನಿವಾರ ಸಂಜೆ 4 ಗಂಟೆಗೆ ವಿಜಯ್ ಅವರ ಟಿವಿಕೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ತನ್ನ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದಿಯಂತೆ.ಇದರಿಂದ ತಮಿಳುನಾಡಿನಲ್ಲಿ ರಾಜ್ಯ ಸರ್ಕಾರ ರಚನೆಯಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಅಂತಿಮ ಘಟ್ಟ ತಲುಪಬಹುದು ಎನ್ನಲಾಗುತ್ತಿದೆ.234 ಸದಸ್ಯ ಬಲದ ತಮಿಳುನಾಡು ಅಸೆಂಬ್ಲಿಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ಅಗತ್ಯ ಬಹುಮತ ಸಮೀಪಿಸುತ್ತಿರುವ ಹಿನ್ನಲೆಯಲ್ಲಿರಾಜಕೀಯ ವಲಯಗಳಲ್ಲಿ ಘೋಷಣೆ ಹೊರ ಬಂದಿದೆ ಎನ್ನಲಾಗುತ್ತಿದೆ.TVK ಈಗಾಗಲೇ ಹಲವಾರು ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದು ಅಧಿಕಾರದ ಗಡಿ ತಲುಪಲು ಕೇವಲ ಇಬ್ಬರು ಶಾಸಕರ ಬೆಂಬಲದ ಅಗತ್ಯವಿದೆ. ಇದಲ್ಲದೆ, ಪಕ್ಷದ ಮೂಲಗಳ ಪ್ರಕಾರ, ಟಿವಿಕೆ ನಾಯಕರು ಔಪಚಾರಿಕವಾಗಿ ವಿಸಿಕೆ ಅಧ್ಯಕ್ಷ ತೋಲ್ ಅವರನ್ನು ಮಾತನಾಡಿ ಸರ್ಕಾರ…

Read More

ಶ್ರೀನಿವಾಸಪುರ: ನಿಲಟೂರು ಬಳಿಯ ಪವನ ವಿದ್ಯಾ ಭವನ ಪ್ರೌಢಶಾಲೆ ವಿದ್ಯಾರ್ಥಿ ಲಲಿತ್ ರೆಡ್ಡಿ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ 620 ಅಂಕಗಳನ್ನು ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 10ನೇ ಸ್ಥಾನವನ್ನು ಪಡೆದಿರುವುದಾಗಿ ಶಾಲಾ ಆಡಳಿತ ಮಂದಳಿ ಹೇಳಿದೆ.2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಭೂತಪೂರ್ವ ಯಶಸ್ಸು ದಾಖಲಿಸಿದ್ದು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸಂಸ್ಥೆಯು ಶೇ. 100 ರಷ್ಟು ಫಲಿತಾಂಶವನ್ನು ದಾಖಲಿಸುವ ಮೂಲಕ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ.ಆರ್. ತಿಮ್ಮಸಂದ್ರ ಗ್ರಾಮದ ಕೃಷಿಕ ದಂಪತಿ ಜಯರಾಮರೆಡ್ಡಿ ಮತ್ತು ಚಂದ್ರಕಲಾ ಅವರ ಪುತ್ರನಾದ ಲಲಿತ್ ರೆಡ್ಡಿ,620 ಅಂಕಗಳನ್ನು ಗಳಿಸಿ ಗ್ರಾಮೀಣ ಭಾಗದ ಪ್ರತಿಭೆಯಾಗಿ ಹೊರಹೊಮ್ಮಿದ್ದಾನೆ.ಶ್ರೀ ಪವನ ವಿದ್ಯಾ ಭವನ ಶಾಲೆ ಗ್ರಾಮೀಣ ​ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಇದಕ್ಕಾಗಿ ಶಿಕ್ಷಕರ ಸಮರ್ಪಕ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ನಿರಂತರ ಶ್ರಮ ಈ ವರ್ಷದ ಫಲಿತಾಂಶದಲ್ಲಿ ಕಾಣಸಿಗುತ್ತಿದೆ ಎಂದು ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ಶಾಲೆಯ ಆಡಳಿತ ಮಂಡಳಿಯ…

Read More