ಶ್ರೀನಿವಾಸಪುರ: ನಿಲಟೂರು ಬಳಿಯ ಪವನ ವಿದ್ಯಾ ಭವನ ಪ್ರೌಢಶಾಲೆ ವಿದ್ಯಾರ್ಥಿ ಲಲಿತ್ ರೆಡ್ಡಿ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ 620 ಅಂಕಗಳನ್ನು ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 10ನೇ ಸ್ಥಾನವನ್ನು ಪಡೆದಿರುವುದಾಗಿ ಶಾಲಾ ಆಡಳಿತ ಮಂದಳಿ ಹೇಳಿದೆ.
2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಭೂತಪೂರ್ವ ಯಶಸ್ಸು ದಾಖಲಿಸಿದ್ದು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸಂಸ್ಥೆಯು ಶೇ. 100 ರಷ್ಟು ಫಲಿತಾಂಶವನ್ನು ದಾಖಲಿಸುವ ಮೂಲಕ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ಆರ್. ತಿಮ್ಮಸಂದ್ರ ಗ್ರಾಮದ ಕೃಷಿಕ ದಂಪತಿ ಜಯರಾಮರೆಡ್ಡಿ ಮತ್ತು ಚಂದ್ರಕಲಾ ಅವರ ಪುತ್ರನಾದ ಲಲಿತ್ ರೆಡ್ಡಿ,620 ಅಂಕಗಳನ್ನು ಗಳಿಸಿ ಗ್ರಾಮೀಣ ಭಾಗದ ಪ್ರತಿಭೆಯಾಗಿ ಹೊರಹೊಮ್ಮಿದ್ದಾನೆ.
ಶ್ರೀ ಪವನ ವಿದ್ಯಾ ಭವನ ಶಾಲೆ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಇದಕ್ಕಾಗಿ ಶಿಕ್ಷಕರ ಸಮರ್ಪಕ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ನಿರಂತರ ಶ್ರಮ ಈ ವರ್ಷದ ಫಲಿತಾಂಶದಲ್ಲಿ ಕಾಣಸಿಗುತ್ತಿದೆ ಎಂದು ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ಎನ್. ಗಿರೀಶ್, ಮುಖ್ಯ ಶಿಕ್ಷಕಿ ಎನ್. ಗೀತಾ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಸಾಧಕ ವಿದ್ಯಾರ್ಥಿಗಳನ್ನು ಶ್ಲಾಘಿಸಿದ್ದಾರೆ.
Trending
- ತಮಿಳುನಾಡು ರಾಜಕೀಯ ದಿನಕ್ಕೊಂದು ಬದಲಾವಣೆ ಕ್ಷಣಕ್ಕೊಂದು ತಿರುವು!
- ಶ್ರೀನಿವಾಸಪುರ:SSLC ಪವನ ವಿದ್ಯಾ ಭವನ ವಿದ್ಯಾರ್ಥಿ ತಾಲೂಕಿಗೆ ಮೊದಲಿಗ!
- ತಮಿಳುನಾಡು:ವಿಜಯ್ ತಾತ ತೆಲಗು ಭಾಷಿಕ ತಂದೆ ಕನ್ನಡ ಸಿನಿಮಾ ನಿರ್ದೇಶಕ!
- ಮಾಲೂರು ರಾಜಕೀಯಕ್ಕಾಗಿ ಕೋಮುಲ್ ಮೇಲೆ ಆರೋಪ ಒಳ್ಳೆಯ ಬೆಳವಣಿಗೆಯಲ್ಲ!
- ಶ್ರೀನಿವಾಸಪುರ:ಶಿಕ್ಷಕರ ಸಂಘದ ಚುನಾವಣೆ ರೆಡ್ಡೆಪ್ಪ ಬಣಕ್ಕೆ ಗೆಲವು!
- ಮಾವು ನಷ್ಟಕ್ಕೆ ಪರಿಹಾರ ನೀಡುವಂತೆ ಶಾಸಕ ವೆಂಕಟಶಿವಾರೆಡ್ಡಿ ಮನವಿ
- ಶ್ರೀನಿವಾಸಪುರ:ಪ್ರಥಮ ವರ್ಷದ ನರಸಿಂಹಸ್ವಾಮಿ ರಥೋತ್ಸವ
- ಶ್ರೀನಿವಾಸಪುರ:ಆಲಿಕಲ್ಲು ಸಹಿತ ಬಿರುಗಾಳಿ ಮಳೆಗೆ ಮಾವು ನೆಲದ ಪಾಲು!
Saturday, May 9



