ಶ್ರೀನಿವಾಸಪುರ:ರಣ ಬಿಸಿಲಿಗೆ ಜನ ತತ್ತರಿಸಿ ಹೋಗಿದ್ದಾರೆ ಬೆಂಕಿಯಂತ ಕಿರಣಗಳು ಜನರ ಮೇಲೆ ಬಿಳುತಿದ್ದು ಬಿಸಿಲ ಪ್ರತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಬಿಸಿಲ ತಾಪ ಮಾನ 36-37 ಕ್ಕೂ ಹೆಚ್ಚು ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು,ರಣ ರಣ ಬಿಸಿಲಿನ ಆರ್ಭಟಕ್ಕೆ ಜನ ಹೈರಾಣರಾಗಿದ್ದಾರೆ.ಜೀವನಾಡಿ ಮಾವಿಗೂ ಮಾರಕಬಿಸಿಲ ತಾಪಕ್ಕೆ ಶ್ರೀನಿವಾಸಪುರ ಜೀವನಾಡಿ ಮಾವಿಗೆ ಮಾರಕವಾಗಿದೆ.ತೀವ್ರವಾದ ಬಿಸಿಲು ಮತ್ತು ನೀರಿನ ಕೊರತೆಯಿಂದಾಗಿ ಮಾವಿನ ಕಾಯಿಗಳು ದೊಡ್ಡದಾಗುವ ಮುನ್ನವೇ ನೆಲಕ್ಕೆ ಉದುರಿ ಹೋಗುತ್ತಿವೆ,ಜೊತೆಗೆ ಮಾವಿನ ಬೆಳೆಗೆ ವಿವಿಧ ರೋಗಗಳು ಕಾಣಿಸಿಕೊಳ್ಳುತ್ತಿವೆ ಬಿಸಿಲಿನ ತಾಪ ಹೀಗೆಯೇ ಮುಂದುವರೆದರೆ ಮಾವಿನ ಇಳುವರಿ ಕಡಿಮೆಯಾಗುತ್ತದೆ ಎಂದು ಮಾವು ಬೆಳೆಗಾರರು ಆತಂಕದಿಂದ ಹೇಳುತ್ತಾರೆ.ಬಿಸಿಲಿನ ತಾಪ ತಾಳಲಾಗದೆ ಜನತೆ ಬಾಯಾರಿಕೆ ನೀಗಿಸಿಕೊಳ್ಳಲು ಕಲ್ಲಂಗಡಿ ಹಣ್ಣು, ತಂಪು ಪಾನೀಯಗಳಿಗೆ ಮುಗಿಬಿದ್ದಿದ್ದಾರೆ. ದಿನದಿಂದ ದಿನಕ್ಕೆ ಬೇಸಿಗೆಯ ಬಿಸಿಲಿನ ಝಳ ಏರಿಕೆಯಾಗುತ್ತಿದ್ದು,ಬಿಸಿಲಿನ ಧಗೆಗೆ ಜನಜೀವನ ತತ್ತರಿಸಿದೆ,ಮನೆಯಿಂದ ಹೊರಗೆ ಬರಲು ಭಯ ಬೀಳುತ್ತಿದ್ದಾರೆ.ಸೂರ್ಯನ ಆರ್ಭಟಕ್ಕೆ ಕಾಂಕ್ರೀಟ್ ರಸ್ತೆ, ಕಟ್ಟಡಗಳು ಹಾಗು ಮನೆಯ ಚಾವಣಿ ಕಾದ ಕಾವಲಿಯಂತಾಗಿವೆ. ಡಾಂಬರು ರಸ್ತೆಗಳು ಬಿಸಿಲ ತಾಪನ್ನು…
Author: Srinivas_Murthy
ನ್ಯೂಜ್ ಡೆಸ್ಕ್:ಭಾರತದ ತಂತ್ರಜ್ಞಾನ ಇತಿಹಾಸದಲ್ಲಿ ಇಂದು ಮತ್ತೊಂದು ಸುವರ್ಣ ಅಧ್ಯಾಯ ದಾಖಲಾಗಿದೆ. ಆಂಧ್ರಪ್ರದೇಶದ ರಾಜಧಾನಿ ಅಮರಾವತಿಯನ್ನು ದೇಶದ ಮೊತ್ತಮೊದಲ ‘ಕ್ವಾಂಟಮ್ ವ್ಯಾಲಿ’ (Quantum Valley) ಎಂದು ಘೋಷಿಸಲಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹಮ್ಮಿಕೊಂಡಿದ್ದು ಇದಕ್ಕಾಗಿ ಸುಮಾರು 10,000 ಕೋಟಿ ರೂಪಾಯಿಗಳ ಬಂಡವಾಳ ಹೂಡಿಕೆಯನ್ನು ನಿಗದಿಪಡಿಸಲಾಗಿದೆ.ಕ್ವಾಂಟಮ್ ಕಂಪ್ಯೂಟಿಂಗ್ ಎನ್ನುವುದು ಸಾಂಪ್ರದಾಯಿಕ ಕಂಪ್ಯೂಟರ್ಗಳಿಗಿಂತ ಲಕ್ಷಾಂತರ ಪಟ್ಟು ವೇಗವಾಗಿ ಕೆಲಸ ಮಾಡುವ ತಂತ್ರಜ್ಞಾನವಾಗಿದ್ದು ಇದು ರಕ್ಷಣೆ, ಔಷಧ ಸಂಶೋಧನೆ ಮತ್ತು ಹವಾಮಾನ ಮುನ್ಸೂಚನೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದಿಯಂತೆ.ಅಮರಾವತಿಯ ಈ ವ್ಯಾಲಿಯಲ್ಲಿ ಜಾಗತಿಕ ಮಟ್ಟದ ಸಂಶೋಧನಾ ಪ್ರಯೋಗಾಲಯಗಳು, ಐಟಿ ಕಂಪನಿಗಳ ಕ್ವಾಂಟಮ್ ವಿಭಾಗಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಒಂದೇ ಸೂರಿನಡಿ ಕಾರ್ಯನಿರ್ವಹಿಸಲಿದ್ದು. ಐಐಟಿ (IIT) ಮತ್ತು ಐಐಎಸ್ಸಿ (IISc) ಯಂತಹ ಸಂಸ್ಥೆಗಳು ಇಲ್ಲಿ ತಮ್ಮ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಈಗಾಗಲೇ ಒಪ್ಪಂದ ಮಾಡಿಕೊಂಡಿವೆ.ಈ ಯೋಜನೆಯಿಂದಾಗಿ ಮುಂದಿನ ಮೂರು ವರ್ಷಗಳಲ್ಲಿ ಆಂಧ್ರಪ್ರದೇಶದಲ್ಲಿ 50,000 ಕ್ಕೂ ಹೆಚ್ಚು ಉನ್ನತ ತಂತ್ರಜ್ಞಾನದ ಉದ್ಯೋಗಗಳು ಸೃಷ್ಟಿಯಾಗುವ…
ನ್ಯೂಜ್ ಡೆಸ್ಕ್: ಹಾರ್ಮುಝ್ ಜಲಸಂಧಿಯಲ್ಲಿ ಶನಿವಾರ ಭಾರತೀಯ ಧ್ವಜ ಹೊತ್ತ ಹಡಗಿನ ಮೇಲೆ ಇರಾನ್ ಪಡೆಗಳು ಗುಂಡಿನ ದಾಳಿ ನಡೆಸಿದ ಘಟನೆಯನ್ನು ಭಾರತ ಸರ್ಕಾರವು ಗಂಭೀರವಾಗಿ ಪರಿಗಣಿಸಿದೆ. ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಭಾರತವು ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫಥಾಲಿ ಅವರನ್ನು ಕರೆಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.ಹಾರ್ಮುಝ್ ಜಲಸಂಧಿಯಲ್ಲಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಈ ರಾಜತಾಂತ್ರಿಕ ಕ್ರಮ ಕೈಗೊಳ್ಳಲಾಗಿದೆ. ಸರಕಾರಿ ಮೂಲಗಳು ಹೇಳಿವೆ. ಅಂತರಾಷ್ಟ್ರೀಯ ಜಲಮಾರ್ಗದಲ್ಲಿ ಭಾರತೀಯ ನಾವಿಕರ ಮತ್ತು ಹಡಗುಗಳ ಸುರಕ್ಷತೆಯ ಬಗ್ಗೆ ಭಾರತವು ತನ್ನ ಕಳವಳವನ್ನು ಇರಾನ್ ಮುಂದೆ ಸ್ಪಷ್ಟವಾಗಿ ಮಂಡಿಸಿದೆ.ಭಾರತೀಯ ಹಡಗುಗಳ ಮೇಲೆ ನಡೆದ ಈ ದಾಳಿ ರಾಜತಾಂತ್ರಿಕ ವಲಯದಲ್ಲಿ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಇರಾನ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಭಾರತದೊಂದಿಗಿನ ಇರಾನ್ನ ಸಂಬಂಧವು ಅತ್ಯಂತ ಗಟ್ಟಿಯಾಗಿದೆ ಮತ್ತು ಈ ಸಣ್ಣ ಘಟನೆಯಿಂದ ಸಂಬಂಧದಲ್ಲಿ ಯಾವುದೇ ಬಿರುಕು ಮೂಡುವುದಿಲ್ಲ ಎಂದು ಇರಾನ್ ರಾಯಭಾರಿ ಹೇಳಿದೆ ಹಡಗುಗಳ ಮೇಲೆ ನಡೆಸಲಾದ ಗುಂಡಿನ ದಾಳಿಯು ಕೇವಲ ಎಚ್ಚರಿಕೆಯ…
ಬೆಂಗಳೂರು: ಭಾರತದ ಪ್ರಖ್ಯಾತ ಕೊರಿಯರ್ ಸಂಸ್ಥೆ,ದಿ ಪ್ರೊಫೆಷನಲ್ ಕೊರಿಯರ್ಸ್(ಟಿಪಿಸಿ) The Professional Couriers ವತಿಯಿಂದ ಹೊಸ ಸೇವೆ ಪ್ರೊ ಇಎಕ್ಸ್ ಎಕ್ಸ್ಪ್ರೆಸ್ ಎಂಬ ಅಲ್ಟ್ರಾ ಪ್ರೀಮಿಯಂ ನೂತನ ಸೇವೆಯನ್ನು ಆರಂಭಿಸಿದ್ದು ಇದರ ಲೋಕಾರ್ಪಣೆ ಕಾರ್ಯವನ್ನು ಬೆಂಗಳೂರಿನ ಸ್ಟಾರ್ ಹೋಟೆಲ್ ಒಂದರಲ್ಲಿ ನಡೆದ ಭವ್ಯವಾದ ವೇದಿಕೆ ಕಾರ್ಯಕ್ರಮದಲ್ಲಿ ದಿ ಪ್ರೊಫೆಷನಲ್ ಕೊರಿಯರ್ಸ್ ಚೇರ್ಮನ್ ಥಾಮಸ್ ಜಾನ್,ವ್ಯವಸ್ಥಾಪಕ ನಿರ್ದೇಶಕ ಅಹಮದ್ ಮಿರನ್,ಐಟಿ ನಿರ್ದೇಶಕ ಶ್ರೀನಾಥ್,ಹಣಕಾಸು ನಿರ್ದೇಶಕ ಓಮನ್ ಚಾಕೋ,ಆಡಳಿತ ನಿರ್ದೇಶಕ ಸುರೇಶ್ ಭರ್ತನ್,ವಿತರಣ ನಿರ್ದೇಶಕ ಅಬ್ರಹಾಂ, ಪ್ರೊ ಇಎಕ್ಸ್ ಎಕ್ಸ್ಪ್ರೆಸ್ ಲೊಗೊ ಬಿಡುಗಡೆ ಮಾಡಿ ಪ್ರೊಫೆಷನಲ್ ಕೊರಿಯರ್ ಸಂಸ್ಥೆ ಉದ್ಯೋಗಿಗಳಿಗೆ ಹೊಸ ಸೇವೆ ಪ್ರೊ ಇಎಕ್ಸ್ ಕುರಿಯಂತೆ ಕಾರ್ಯಾಗಾರಕ್ಕೆ ಚಾಲನೆ ನೀಡಿದರು.ದೇಶದಲ್ಲಿ ತನ್ನದೆ ಆದ ಬೃಹತ್ ವಿತರಣಾ ಜಾಲ ಹೊಂದಿರುವ ಟಿಪಿಸಿ, ವಿಶ್ವಾಸಾರ್ಹ, ಪರಿಣಾಮಕಾರಿ ಮತ್ತು ಗ್ರಾಹಕ-ಕೇಂದ್ರಿತ ವಿತರಣೆಗಳನ್ನು ಮಾಡುತ್ತಿದ್ದು ಭಾರತದ ಪ್ರತಿಯೊಂದು ಮೂಲೆಯಲ್ಲು ತನ್ನದೆ ಸಾಮರ್ಥ್ಯದ ಕಚೇರಿಗಳನ್ನು ನಿರ್ವಹಿಸುತ್ತ ರಾಷ್ಟ್ರದ ಅತಿದೊಡ್ಡ ನಂ-1 ಕೊರಿಯರ್ ಮತ್ತು ಎಕ್ಸ್ಪ್ರೆಸ್ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ.ದೇಶೀಯ…
ಶ್ರೀನಿವಾಸಪುರ:ಭಾರತೀಯ ಸೇನೆಯಲ್ಲಿ 22 ವರ್ಷಗಳಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ತಾ.ಗುಲ್ಲಕುಂಟೆ ಗ್ರಾಮದ ಲಕ್ಷ್ಮೀನಾರಯಣ್ ಅವರನ್ನು ಅವರ ಮನೆಯಲ್ಲೆ ಕರ್ನಾಟಕ ಸರ್ಕಾರದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಸನ್ಮಾನಿಸಿ ಗೌರವ ಸಲ್ಲಿಸಿದರು.ಸೈನಿಕರನ್ನು ಗೌರವಿಸಬೇಕು ಅವರ ಜೀವನದ ಮಾರ್ಗದರ್ಶನ ನಮ್ಮ ಯುವಕರಿಗೆ ಸಿಗಬೇಕು ಎಂದರು.ಗುಲ್ಲಕುಂಟೆ ಗ್ರಾಮದ ಮುನಿವೆಂಕಟಪ್ಪ ಸಾಕಮ್ಮ ದಂಪತಿ ಪುತ್ರ ಲಕ್ಷ್ಮೀನಾರಯಣ್ ಅವರು ಭಾರತೀಯ ಸೇನೆಗೆ ಸೇರಿ ಲಡಾಕ್,ಪಂಜಾಬ್ ಮಣಿಪುರ,ಜಮ್ಮುಕಾಶ್ಮೀರ,ಹೈದರಾಬಾದ್, ರಾಜಸ್ಥಾನ ರಾಜ್ಯಗಳಲ್ಲಿ ಸೇವೆ ಸಲ್ಲಿಸಿದ್ದಾರೆ,ಬಿಇ ಇಂಜನಿಯರ್ ಪದವಿದರರಾದ ಲಕ್ಷ್ಮೀನಾರಯಣ್ ಭಾರತೀಯ ಸೇನೆಯಲ್ಲಿ ಇ.ಎಮ್.ಇ ಕೊರ್ ವರ್ಕಶಾಪ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸೈನಿಕರೊಂದಿಗೆ ಗಡಿಭಾಗದ ಕ್ಯಾಂಪ್ ಗಳಲ್ಲಿ ಆಧುನಿಕ ತಂತ್ರಜ್ಞಾನದ ರಕ್ಷಣಾ ಉಪಕರಣಗಳು, ಸೈಬರ್ ಸಾಮರ್ಥ್ಯದ ಉಪಕರಣಗಳು, ಬಾಹ್ಯಾಕಾಶ ಸಂಪರ್ಕ ಸಾಧನೆಗಳ ನಿರ್ವಹಣೆ ಮಾಡುತ್ತಿದ್ದಾಗಿ ಹೇಳುತ್ತಾರೆ. ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತುಪಲ್ಲಿನಾರಯಣಸ್ವಾಮಿ,ಹೊಳೂರುಸಂತೋಷ್,ದಿಗುಪಲ್ಲಿ ಚಲಪತಿ,ಯುವ ಮುಖಂಡ ಸುಜಯ್,ದುರ್ಗಾಪ್ರಸಾದ್,ಗೌತಮ್ ನಾಯ್ಡು,ಬುಜ್ಜಿ,ಜಯರಾಮರೆಡ್ಡಿ, ಚೌಡರೆಡ್ಡಿ ಗೊರಮಾಕಲಹಳ್ಳಿಶ್ರೀನಿವಾಸ್ ಮತ್ತಿತರರು ಇದ್ದರು.
ನ್ಯೂಸ್ ಡೆಸ್ಕ್ :ಆಂಧ್ರದ ರಾಜಧಾನಿಯಾಗಿ ಅಮರಾವತಿ ಎನ್ನುವ ಅಧಿಕೃತ ಘೋಷಣೆ ಹೊರಬಿದ್ದಿದೆ.ಈಗ್ಗೆ ಹನ್ನೆರಡು ವರ್ಷಗಳಿಂದ ಇದ್ದ ಅನಿಶ್ಚಿತತೆಗೆ ತೆರೆಬಿದ್ದಿದೆ. ಹಲವಾರು ಕಾರಣಗಳಿಂದ ರಾಜಧಾನಿ ವಿಚಾರ ಗೊಂದಲದ ಗೂಡಾಗಿ ವಿವಾದಕ್ಕೆ ಕಾರಣವಾಗಿ ಘೋಷಣೆ ಮುಂದಕ್ಕೆ ಹೋಗುತ್ತಲೇ ಇತ್ತು. ಹಾಲೀ ಸಿಎಂ ಚಂದ್ರಬಾಬು ನಾಯ್ಡು ಅವರು ವಿಶೇಷ ಆಸಕ್ತಿ ವಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ ಪರಿಣಾಮ ಈಗ ಸಾಕಾರಗೊಂಡಿದೆ.2014ರಲ್ಲಿ ಅಖಂಡ ಆಂಧ್ರ ಪ್ರದೇಶ ವಿಭಜನೆಗೊಂಡು ಹೈದರಾಬಾದ್ ಕೇಂದ್ರವಾಗಿ ತೆಲಂಗಾಣ ಹುಟ್ಟಿಕೊಂಡಿತ್ತು. ಕರ್ನೂಲ್ ಅನಂತಪುರ ಸೇರಿದಂತೆ ರಾಯಲಸೀಮಾ ರಾಜಮಂಡ್ರಿ ವಿಶಾಖಪಟ್ಟಣಂ ಸೇರಿದಂತೆ ಕರಾವಳಿ ಚಿತ್ತೂರು,ತಿರುಪತಿ ಮದನಪಲ್ಲಿ ಒಳಗೊಂಡ 26ಜಿಲ್ಲೆಗಳ ಪ್ರದೇಶವನ್ನು ಆಂಧ್ರಪ್ರದೇಶದ ಎಂದು ಗುರುತಿಸಲಾಗಿದ್ದು ಅಂದಿನಿಂದ, ರಾಜಧಾನಿ ಪ್ರಕ್ರಿಯೆಗೆ ಚಾಲನೆ ಸಿಕ್ಕಿತು. ಆಂಧ್ರ ವಿಭಜನೆಯಾಗಿ ಬಂದ ಮೊದಲ ಚಂದ್ರಬಾಬು ನೇತೃತ್ವದ ಸರ್ಕಾರ ಹೈದರಾಬಾದ್ ಮಹಾನಗರ ತೆಲಂಗಾಣಕ್ಕೆ ರಾಜಧಾನಿ ಅಂದರೆ ಆಂಧ್ರಪ್ರದೇಶದಕ್ಕೆ ರಾಜಧಾನಿ ಬೇಕು ಎಂದು ಗುಂಟೂರು ನಗರ ಹಾಗೂ ಗ್ರಾಮೀಣ ಪ್ರಾಂತ್ಯದ ಪ್ರದೇಶಗಳನ್ನು ಕ್ರೂಡಿಕರಿಸಿ ಅಮರಾವತಿ ಎಂದು ನಾಮಕರಣ ಮಾಡಿ ಇದೆ ಆಂಧ್ರದ…
ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಬಹುತೇಕ ಇಲಾಖೆ ಅಧಿಕಾರಿಗಳು ಪಾಲ್ಗೋಳ್ಳದೆ ನಿರ್ಲಕ್ಷ್ಯ ವಹಿಸಿದ್ದು ತಾಲೂಕು ಆಡಳಿತದ ಕಾರ್ಯವೈಖರಿಗೆ ಸಾಕ್ಷಿಯಾಗಿತ್ತು ಶ್ರೀನಿವಾಸಪುರ:ಭಾರತದ ಮಾಜಿ ಉಪಪ್ರಧಾನಿ,ಕೃಷಿ ಸಚಿವ,ಕಾರ್ಮಿಕ, ರೈಲ್ವೆ, ದೂರ ಸಂಪರ್ಕ, ರಕ್ಷಣೆ ಸೇರಿದಂತೆ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಡಾ.ಬಾಬು ಜಗಜೀವನರಾಮ್ ಭಾರತದಲ್ಲಿ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದು ಬಡವರ ಆಹಾರ ಕೊರತೆ ನೀಗಿಸಿದ ಬಾಬೂಜಿ ಎಂದೇ ಹೆಸರಾದರು ಬಾಬು ಜಗಜೀವನರಾಂ ನಿಸ್ವಾರ್ಥ ಸೇವೆ, ಸ್ವಾತಂತ್ರ್ಯ ಚಳವಳಿ ಮತ್ತು ಸಮರ್ಪಣಾ ಭಾವನೆ ನಮಗೆಲ್ಲ ಆದರ್ಶ ಎಂದು ಶಾಸಕ ವೆಂಕಟಶಿವಾರೆಡ್ದಿ ಹೇಳಿದರು.ಡಾ. ಬಾಬು ಜಗಜೀವನರಾಮ್ 119ನೇ ಜಯಂತಿ ಕಾರ್ಯಕ್ರಮದ ಅಂಗವಾಗಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿಸಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕೃಷಿ ಸಚಿವರಾಗಿದ್ದ ಜಗಜೀವನರಾಮ್ ಬಾರಿ ಅಣೆಕಟ್ಟು ನಿರ್ಮಿಸಿ ನೀರಾವರಿ ಕಲ್ಪಿಸಿದರಲ್ಲದೆ ರಸಗೊಬ್ಬರ ಕಾರ್ಖಾನೆಗಳನ್ನು ಆರಂಭಿಸಿ ಬೆಳೆಯ ಇಳುವರಿಯನ್ನು ಹೆಚ್ಚಿಸುವ ಅತ್ಯಾಧುನಿಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹಸಿರು ಕ್ರಾಂತಿಗೆ ಮುನ್ನೂಡಿ ಬರೆದರು ಅವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೋಂಡಿರುವುದು ನನ್ನ ಸೌಭಾಗ್ಯ ಎಂದರು.ಕಾರ್ಯಕ್ರಮದಲ್ಲಿ…
ಬೆಂಗಳೂರು:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನೀಡುವ 25-26 ಸಾಲಿನ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿಯನ್ನು ಶ್ರೀನಿವಾಸಪುರದ ಮಹಿಳಾ ಉದ್ಯಮಿ ಗುಂಡಮನತ್ತ ರತ್ನಮ್ಮ ಅವರಿಗೆ ಪ್ರದಾನ ಮಾಡಲಾಗಿದೆ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ 2025 -26 ನೇ ಸಾಲಿನ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯನ್ನು ಇಂದು 24.03.2026 ಮಂಗಳವಾರ,ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶಸ್ತಿ ನೀಡಿ ಗೌರವಿಸಿದರು.ತಾಲೂಕಿನ ಕಸಬಾ ಹೋಬಳಿಯ ಗುಂಡಮ್ಮನತ್ತ ಗ್ರಾಮದ ರತ್ನಮ್ಮ ಅವರು Vedhik Enterprises ಮಹಿಳಾ ಕ್ಷೇತ್ರದಲ್ಲಿ ಉದ್ಯಮಿಯಾಗಿ ಉತ್ತಮ ಸಾಧನೆ ಮಾಡಿದ್ದು ಸಿರಿಧಾನ್ಯಗಳ ಉತ್ಪನ್ನಗಳ ಉದ್ಯಮ ನಡೆಸುತ್ತಿರುವ ಅವರನ್ನು ರಾಜ್ಯಮಟ್ಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಂಘ ಸಂಸ್ಥೆಗಳು ಗುರುತಿಸಿ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ.ಕರ್ನಾಟಕ ಸರ್ಕಾರದ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆದು ಕೋಲಾರ ಜಿಲ್ಲೆಗೆ ಕೀರ್ತಿ…
ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಹೊರವಲಯದ ರೈಲ್ವೇ ನಿಲ್ದಾಣಕ್ಕೆ ಹೊಂದಿಕೊಂಡು ನಂಬಿಹಳ್ಳಿ ರಸ್ತೆಯಲ್ಲಿರುವ ಉನಿಕಿಲಿ ಗ್ರಾಮದ ಶತಮಾನಗಳಷ್ಟು ಹಳೆಯದಾದ ದೇವಾಲಯವನ್ನು ಶಿಲಾಮಯ ಕಟ್ಟಡವಾಗಿ ಜೀರ್ಣೋದ್ಧಾರ ಮಾಡಲಾಗಿದ್ದು ದೇವಾಲಯದ ಸ್ಥಿರಬಿಂಬ ಪ್ರತಿಷ್ಠಾಪನಾ ಮತ್ತು ಕುಂಭಾಭಿಷೇಕ ಮಹೋತ್ಸವದ ಎರಡು ದಿನಗಳ ಕಾಲ ಮಹಾಗಣಪತಿ ಹೋಮ,ನವಗ್ರಹ ಹೋಮ, ಮೃತ್ಯುಂಜಯ ಹೋಮ, ಕುಂಬಾಭಿಷೇಖ, ವಿಮಾನಗೋಪುರ, ಧ್ವಜಸ್ಥಂಭ, ಪೂಜಾ ಕಾರ್ಯಕ್ರಮಗಳೊಂದಿಗೆ ದೇವಾಲಯವನ್ನು ಲೋಕಾರ್ಪಾಣೆ ಮಾಡಲಾಯಿತು.ಹೊಯಿಸಳರ ಕಾಲಾವಧಿಯದು ಎಂದು ಅಂದಾಜಿಸಿರುವ ಶ್ರೀ ನಿಳಾ-ಭೂನೀಳಾ ಸಮೇತ ಶ್ರೀ ಚನ್ನರಾಯಸ್ವಾಮಿ (ಚನ್ನಕೇಶವ ದೇವರು) ದೇವಾಲಯವನ್ನು ಹದಿನೇಂಟು ಕಂಬಗಳ ಶಿಲಾಮಯವಾದ ಭವ್ಯ ದೇವಾಲಯವಾಗಿ ನಿರ್ಮಿಸಲಾಗಿದೆ. ಶಿಥಿಲವಾಗಿದ್ದ ದೇಗುಲದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿ ಮಣ್ಣಿನ ಅಡಿಯಲ್ಲಿ ಹೂತು ಹೋಗಿ ಬಿಳಚಿಕೊಂಡಿದ್ದ ಶ್ರೀ ಭೂನೀಳಾ ಸಮೇತ ಶ್ರೀ ಚನ್ನರಾಯಸ್ವಾಮಿಯವರ ಮೂಲ ವಿಗ್ರಹಗಳನ್ನು ಸಂರಕ್ಷಿಸಿ ಅವುಗಳನ್ನು ಪುನರ್ ಪ್ರತಿಷ್ಠಾಪನೆ ಮಾಡಲಾಗಿದೆ.ದೇವಾಲಯ ಜೀರ್ಣೋದ್ಧಾರ ಕಾರ್ಯದಲ್ಲಿ ಇವೊ ಆನಂದ್ಶ್ರೀ ಭೂನೀಳಾ ಸಮೇತ ಶ್ರೀ ಚನ್ನರಾಯಸ್ವಾಮಿ ದೇವಾಲಯ ಜೀರ್ಣೋದ್ಧಾರಕ್ಕೆ ಮೂಲ ಕಾರಣಕರ್ತರು ಹಾಗು ಸ್ವಚ್ಚತೆಯಿಂದ ಹಿಡಿದು ಪೂಜಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದ ಉನಿಕಿಲಿ ಮೂಲದವರಾಗಿ ಚಿಂತಾಮಣಿ ತಾಲೂಕು ಪಂಚಾಯಿತಿ…
ಶ್ರೀನಿವಾಸಪುರ: ಬೀದಿಯಲ್ಲಿ ಕಸ ಹಾಕುವ ವಿಚಾರದಲ್ಲಿ ಗಲಾಟೆ ನಡೆದು ವ್ಯಕ್ತಿಯೊಬ್ಬರು ಅಮಾನುಷವಾಗಿ ಕೊಲೆಯಾಗಿದ್ದು ಮತ್ತೋರ್ವ ವ್ಯಕ್ತಿ ಗಾಯಗೊಂಡ ಘಟನೆ ಶ್ರೀನಿವಾಸಪುರ ತಾಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ನಡೆದಿದೆ ಮೃತಪಟ್ಟ ವ್ಯಕ್ತಿಯನ್ನು ಗೌನಿಪಲ್ಲಿ ನಿವಾಸಿ ಶಾಜು ಖಾನ್ (65) ಎಂದು ಗುರುತಿಸಲಾಗಿದೆ.ಗ್ರಾಮದಲ್ಲಿ ವಾಸಿಂ ಎನ್ನುವವರು ಮಟನ್ ಅಂಗಡಿ ಇಟ್ಟುಕೊಂಡಿದ್ದಾರೆ ಅಲ್ಲಿ ಕಸ ಹಾಕುವ ಬಗ್ಗೆ ಮೃತ ಶಾಜುಖಾನ್ ಹಾಗು ವಾಸಿಂ ನಡುವೆ ಮೊದಲಿನಿಂದಲೂ ವೈಮನಸ್ಯ ಇದ್ದು ಇಂದು ಕಸ ಹಾಕುವ ಸಂಬಂಧ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ ವಾಸಿಂ ಪರವಾಗಿ ಶಬ್ಬೀರ್ ಎನ್ನುವ ಬೆಂಬಲಕ್ಕೆ ನಿಂತಿದ್ದು ಇದು ಮಾತಿಗೆ ಮಾತು ಬೆಳೆದು ಗಲಾಟೆ ದೊಡ್ಡದಾಗಿದೆ. ವಾಸಿಂ ಮಟನ್ ಕತ್ತರಿಸುವ ಮಚ್ಚಿನಿಂದ ಶಾಜುಖಾನ್ ಮೇಲೆ ಬಿಸಿದ್ದಾನೆ ಮಚ್ಚು ಬೀಸಿದ ರಭಸಕ್ಕೆ ಶಾಜುಖಾನ್ ಕತ್ತುಗೆ ತಗುಲಿದೆ ದೊಡ್ಡದಾಗಿ ಗಾಯವಾಗಿದೆ ತೀವ್ರವಾಗಿ ರಕ್ತ ಸಾವ್ರಾವಾಗಿ ಶಾಜುಖಾನ್ ಪ್ರಾಣ ಬಿಟ್ಟಿದ್ದು ಮೃತನೊಂದಿಗೆ ಇದ್ದ ವ್ಯಕ್ತಿಗೂ ಗಾಯಗಳಾಗಿವೆ.ಗಲಾಟೆ ಸಂದರ್ಭದಲ್ಲಿ ಆರೋಪಿ ವಾಸಿಂ ಹಾಗೂ ಬೆಂಬಲಕ್ಕೆ ನಿಂತಿದ್ದ ಶಬ್ಬಿರ್ ಸ್ಥಳದಿಂದ ಪರಾರಿಯಾಗಿದ್ದಾರೆ.ಗೌನಿಪಲ್ಲಿ…


