ಶ್ರೀನಿವಾಸಪುರ:ಇಕ್ಕಟಿನ ವಾಹನದಲ್ಲಿ ನಾಲ್ಕು ಹಸುಗಳನ್ನು ಸಾಗಿಸುತ್ತಿರುವ ಬಗ್ಗೆ ಸಾರ್ವಜನಿಕರು ಅನುಮಾನದಿಂದ ವಾಹನ ಸಮೇತ ಹಸುಗಳನ್ನು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಸೋಮವಾರ ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.
ಚಿಂತಾಮಣೆಯಿಂದ ಐಸ್ ಕ್ರಿಮ್ ಮಾರುವ ವಾಹನದಲ್ಲಿ ನಾಲ್ಕು ಹಸುಗಳನ್ನು ತುಂಬಿಕೊಂಡು ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ವೃತ್ತದ ಮೂಲಕ ಮುಳಬಾಗಿಲು ಕಡೆ ಹೋಗಲಾಗುತ್ತಿತ್ತು.ವಾಹನದಲ್ಲಿದ್ದ ಹಸುವೊಂದು ಅಬ್ಬರಿಸುತ್ತ ಇದ್ದ ಬಗ್ಗೆ ಗಮನಿಸಿದ ಸ್ಥಳೀಯರು ವಾಹನವನ್ನು ಹಿಂಬಾಲಿಸಿ ತಡೆದು ಪರಿಶೀಲನೆ ನಡೆಸಿದ್ದಾರೆ. ಸಣ್ಣ ಇಕ್ಕಾಟಾದ ಜಾಗದ ವಾಹನದಲ್ಲಿ ನಾಲ್ಕು ಹಸುಗಳಿದ್ದು, ಇದು ಅಕ್ರಮ ಸಾಗಾಟ ಇರಬಹುದು ಎಂದು ಸಾರ್ವಜನಿಕರು ಅನುಮಾನಗೊಂಡು ವಾಹನ ಸುತ್ತುವರೆದು ಪ್ರಶ್ನಿಸಿದ್ದಾರೆ.ಹಸುಗಳೊಂದಿಗೆ ವಾಹನದಲ್ಲಿದ್ದವರು ನೀಡುತ್ತಿದ್ದ ಹೇಳಿಕೆಗಳು ಅನುಮಾನ್ಪದ ರೀತಿಯಲ್ಲಿದ್ದು ಜನರು ಸಂಶಯಗೊಂಡು ವಾಹನ ಮತ್ತು ಹಸುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ದಾವಿಸಿದ ಶ್ರೀನಿವಾಸಪುರ ಪಿಸ್ಸೈ ಜಯರಾಮ್ ವಾಹನದಲ್ಲಿದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ವಾಹನದಲ್ಲಿದ್ದ ಎಲ್ಲ ಹಸುಗಳು ನಾಟಿ ಹಸುಗಳಾಗಿದ್ದು ಅವುಗಳನ್ನು ಕೋಲಾರದ ಅರಾಬಿಕೊತ್ತನೂರು ಬಳಿ ಇರುವ ಗೋಶಾಲೆಗೆ ರವಾನಿಸಲಾಗಿದೆ.
Trending
- ಯುರೋಪ್ ತಂತ್ರಜ್ಞಾನದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಜಾರಿ!
- ಚಿಂತಾಮಣಿ ಕೈಲಾಸಗಿರಿ ದೇವಾಲಯ ಸಂದರ್ಶಿಸಿದ ಕರ್ನಾಟಕ ಮಹಿಳಾ ಶಾಸಕಿಯರು!
- ಶ್ರೀನಿವಾಸಪುರ ರೈಲು ಮಾರ್ಗವಾಗಿ ಒಂದೇ ರಾತ್ರಿ ಹತ್ತದಿನೈದು ರೈಲುಗಳ ಸಂಚಾರ!
- ಕೆಜಿ ತೋತಾಪುರಿ ಮಾವಿಗೆ 4 ರೂ. ಬೆಂಬಲ ಬೆಲೆ ಘೋಷಿಸಿದ ಆಂಧ್ರ ಸರ್ಕಾರ!
- ಮಾವು ಬೆಂಬಲ ಬೆಲೆ ನಿಧಾನ,ಹೋರಾಟಕ್ಕೆ ಸಜ್ಜಾಗುತ್ತಿರುವ ರೈತರು!
- ಶ್ರೀನಿವಾಸಪುರ:ಹಣ ಒಡವೆ ದೋಚಿ,ಕಾರು ಸಮೇತ ಪರಾರಿಯಾಗಿದ್ದ ಖದೀಮರ ಬಂಧನ!
- ಬೆಂಗಳೂರು:ಹೆಬ್ಬಾಳ-ಸರ್ಜಾಪುರ Red Line ಮೆಟ್ರೋ ಮಾರ್ಗ!
- ಭೈರನದೊಡ್ಡಿ:ನಾಮಧಾರಿ ನಗರ್ತ ಸಮುದಾಯ ಸಮಾವೇಶ
Friday, June 26



