ಶ್ರೀನಿವಾಸಪುರ:ತಾಲೂಕಿನ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳನ್ನು ಶಾಸಕರ ಅನುಧಾನದಲ್ಲಿ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಇಂದು ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿದ ನಂತರ ಮಾತನಾಡಿ ಅವರು ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ 1.5 ಕೋಟಿ ವೆಚ್ಚದಲ್ಲಿ ನೂತನವಾಗಿ ರಾಜಗೋಪುರ ನಿರ್ಮಾಣ ಮಾಡಲಾಗುತ್ತದೆ ಹಾಗು ದೇವಾಲಯದ ಸುತ್ತ ಮೂಲಸೌಕರ್ಯ ಕಲ್ಪಿಸಲು ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ದೈವ ಪ್ರೆರಣೆ
ಈ ಕಾಮಗಾರಿಯ ಮಾಡುವಂತೆ ಯಾರು ನನಗೆ ಕೇಳಲಿಲ್ಲ ಭಗವಂತನೆ ನನಗೆ ಪ್ರೇರಣೆ ನೀಡಿ, ನನ್ನಿಂದ ಈ ಕಾಮಗಾರಿ ಮಾಡಿಸಲು ಅವಕಾಶ ಕಲ್ಪಿಸಿದ್ದಾರೆ ಅದಕ್ಕೆ ನಾನು ಧನ್ಯ ಎಂದ ಅವರು. ಪಟ್ಟಣದಲ್ಲಿನ ಇನ್ನಷ್ಟು ಹಳೇಯ ದೇವಸ್ಥಾನಗಳ ಅಭಿವೃದ್ಧಿಗೆ ಆದ್ಯತೆ ಕೊಡಲಾಗುವುದು ಎಂದರು.
ಆರ್ಯ ವೈಶ್ಯ ಮಂಡಳಿ ಮುಖಂಡ ವೈ.ಆರ್.ಎಸ್.ಪ್ರಕಾಶ್ ಮಾತನಾಡಿ ಗುತ್ತಿಗೆದಾರರು ಶಿಲ್ಪಿಗಳು ಹಾಗು ಇದರ ಉಸ್ತುವಾರಿ ವಹಿಸಿಕೊಂಡಿರುವ ಇಲಾಖೆ ಇಂಜಿನೀಯರ್ ಅವರು ಸ್ಥಳೀಯರ ಸಹಕಾರವನ್ನು ಪಡೆದು ಗುಣಮಟ್ಟದ ಕಾಮಗಾರಿ ಮಾಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಸರ್ವೇಶ್, ಪುರಸಭೆ ಮುಖ್ಯಧಿಕಾರಿ ನಾಗರಾಜ್, ಇಂಜಿನೀಯರ್ ಶ್ರೀನಿವಾಸ್, ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿನಾರಾಯಣಸ್ವಾಮಿ,ಮಾಜಿ ಸದಸ್ಯ ಇಂದಿರಾ ಭವನ್ ರಾಜಣ್ಣ, ಶಂಕರಮಠ ವ್ಯವಸ್ಥಾಪಕ ಶಿವಪ್ರಸಾದ್,ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಬಿಜೆಪಿ ಮುಖಂಡ ರೋಣೂರ್ ಚಂದ್ರಶೇಖರ್, ತಾ.ಪಂ ಮಾಜಿ ಸದಸ್ಯ ಹಳೇಪೇಟೆ ಮಂಜುನಾಥ್ರೆಡ್ಡಿ,ಮುಖಂಡ ಬಿ ಎಲ್.ರಾಮಣ್ಣ ,ಎಸ್ಬಿಆರ್ ಅಮರನಾಥ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕಲ್ಲೂರು ಶಂಕರ್ರೆಡ್ಡಿ , ಶೇಷಾಪುರ ಗೋಪಾಲ್, ಥೀಯೆಟರ್ ಲಕ್ಷಮಣರೆಡ್ಡಿ, ಅಂಬೇಡ್ಕರ್ಪಾಳ್ಯ ಸಿ.ರವಿ, ಪೊಲುಶಿವಾರೆಡ್ಡಿ,ಎಸ್.ಎನ್.ಆರ್ ಸುಧಾಕರರೆಡ್ಡಿ, ಜನತಾಕ್ಯಾಂಟಿನ್ ಮಂಜುನಾಥ್, ಶ್ರೀನಾಥ್ಬಾಬು,ರಿಲಿಯನ್ಸ್ ಸುಜಯ್, ಜೆರಾಕ್ಸ್ ಬದ್ರಿ, ಬಿಂದು ಶ್ರೀನಿವಾಸರೆಡ್ಡಿ , ಯಲ್ದೂರು ಮಣಿ ಮುಂತಾದವರು ಇದ್ದರು.
Trending
- ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅಯ್ಕೆ
- ನರಸಿಂಹಸ್ವಾಮಿ ದೇವಾಲಯ ರಾಜಗೋಪುರಕ್ಕೆ ವೆಂಕಟಶಿವಾರೆಡ್ದಿ ಭೂಮಿಪೂಜೆ.
- ಶ್ರೀನಿವಾಸಪುರ ಜೆಡಿಎಸ್ ಟಿಕೆಟ್ ಹೊರಗಿನವರಿಗೆ ಇಲ್ಲ,ಭುಗಿಲೆದ್ದ ಅಸಮಾಧಾನ!
- ಶ್ರೀನಿವಾಸಪುರ:ಅನುಮಾನಸ್ಪದ ಹಸು ಸಾಗಾಟ ಪೊಲೀಸರಿಗೆ ಒಪ್ಪಿಸಿದ ಜನತೆ!
- ಬೆಟ್ಟಿಂಗ್ ಹಣ ಹೊಂದಿಸಲು ಸರ್ಕಾರಿ ಕಚೇರಿಗಳಲ್ಲಿ ಲ್ಯಾಪ್ಟಾಪ್ ಕಳ್ಳತನ!
- ತಮಿಳುನಾಡು ವಿಜಯ್ ಸಂಪುಟದಲ್ಲಿ 4 ದಶಕಗಳ ನಂತರ ಬ್ರಾಹ್ಮಣ ಸಚಿವ!
- ತಮಿಳುನಾಡು ರಾಜಕೀಯ ದಿನಕ್ಕೊಂದು ಬದಲಾವಣೆ ಕ್ಷಣಕ್ಕೊಂದು ತಿರುವು!
- ಶ್ರೀನಿವಾಸಪುರ:SSLC ಪವನ ವಿದ್ಯಾ ಭವನ ವಿದ್ಯಾರ್ಥಿ ತಾಲೂಕಿಗೆ ಮೊದಲಿಗ!
Thursday, May 14



