Author: Srinivas_Murthy

ನ್ಯೂಜ್ ಡೆಸ್ಕ್:ಕರ್ನಾಟಕದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.ಕಮಿಷನ್ ಹಣ ಪಡೆಯುತ್ತಿದ್ದ ವೇಳೆ ಶಿರಹಟ್ಟಿ ಶಾಸಕ ಗುತ್ತಿಗೆದಾರರನಿಂದ 5 ಲಕ್ಷ ರೂಪಾಯಿ ಕಮಿಷನ್ ಹಣ ಪಡೆಯುತ್ತಿದ್ದಾಗ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಗದಗ ಜಿಲ್ಲೆಯ ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಬಾಲಾಜಿ ಆಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಶಾಸಕ ಡಾ.ಚಂದ್ರು ಲಮಾಣಿ ಹಾಗೂ ಅವರ ಇಬ್ಬರು ಪಿಎ ಗಳಾದ ಮಂಜುನಾಥ್ ಹಾಗೂ ಗುರು ಸೇರಿದಂತೆ ಮೂವರನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಲಕ್ಷ್ಮೀಶ್ವರ ಪಟ್ಟಣದಲ್ಲಿರುವ ಶಾಸಕ ಡಾ.ಚಂದ್ರು ಲಮಾಣಿ ಅವರ ಒಡೆತನದ ಬಾಲಾಜಿ ಖಾಸಗಿ ಆಸ್ಪತ್ರೆ ಆಸ್ಪತ್ರೆಯಾಗಿದ್ದು ಶಾಸಕ ಚಂದ್ರು ಲಮಾಣಿ ಸ್ವತಃ ವೈದ್ಯರು ಕೂಡಾ ಆಗಿದ್ದಾರೆ. ಈಗ ಕಮಿಷನ್ ಹಣಕ್ಕೆ ಕೈಯೊಡ್ಡಿದಾಗಲೇ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

Read More

ನ್ಯೂಜ್ ಡೆಸ್ಕ್: ಇಂಜಿನಿಯರ್ ಅಥವಾ ಡಾಕ್ಟರ್ ಆಗುವ ಕನಸು ಕಾಣುವ ಇಂದಿನ ಯುವ ಸಮುದಾಯಕ್ಕೆ ಸವಾಲು ಎನ್ನುವಂತೆ ಈ ಯುವಕ ತನ್ನ 15ನೇ ವಯಸ್ಸಿಗೆ ಹೈನುಗಾರಿಕೆ ಆರಂಭಿಸಿದ್ದಾನೆ ಈಗ ಅವನಿಗೆ 18 ವರ್ಷ ವಯಸ್ಸು ಅಂದು ತಾನು ಆಯ್ಕೆ ಮಾಡಿಕೊಂಡಿದ್ದ ಹೈನುಗಾರಿಕೆ ವ್ಯವಹಾರ ಇಂದು ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ದುಡಿಯುತ್ತಿದೆ.ಅದನ್ನು ಸಕಾರ ಗೊಳಿಸಿ ಯಶಸ್ವಿಯಾದ ಯುವಕ ಪಂಜಾಬ್‌ನ ಸೋಹಲ್‌ಪ್ರೀತ್ ಸಿಂಗ್ ಸಿಧು.ಇಂದಿನ ಯುವ ಸಮುದಾಯ what next ಮುಂದೇನು ಎಂಬ ಪ್ರಶ್ನೆಯೊಂದಿಗೆ ಹಲವಾರು ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ಇನ್ನೂ ಕೆಲವರು ವಿದೇಶದಲ್ಲಿ ವ್ಯಾಸಾಂಗ ಮಾಡಿ ಅಲ್ಲೆ ಉದ್ಯೋಗ ಆರಸಿಕೊಳ್ಳುವ ಆಲೋಚನೆಯಲ್ಲಿ ಇರುತ್ತಾರೆಪಂಜಾಬ್‌ನ ಈ ಯುವಕ ಯಾವ ಐಟಿ ಬಿಟಿಗೂ ಕಡಿಮೆ ಇಲ್ಲದಂತೆ ಹಸು ಹಾಗು ಎಮ್ಮೆ ಸಾಕಾಣಿಕೆಯಿಂದ ಪ್ರತಿ ತಿಂಗಳು 5 ರಿಂದ 6 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾನೆ. ತನ್ನ 15 ನೇ ವಯಸ್ಸಲ್ಲಿ ಓಂದು ಜಾನವಾರದೊಂದಿಗೆ ಡೈರಿ ಫಾರ್ಮ್ ಆರಂಭಿಸಿದ ಸಿದ್ದು ಅದರಿಂದ ಬಂದ ಪ್ರತಿ ರೂಪಾಯಿಯನ್ನು…

Read More

ಬೆಂಗಳೂರು: ಸಿಲಿಕಾನ್ ವ್ಯಾಲಿ ದೇಶದ ಐಟಿ ರಾಜಧಾನಿ ಎಂದೆಲ್ಲಾ ಪ್ರಸಿದ್ಧವಾದ ಬೆಂಗಳೂರಿನಲ್ಲಿ ಅನೇಕ ಬಹುರಾಷ್ಟ್ರೀಯ ಕಂಪನಿಗಳು, ಸ್ಟಾರ್ಟ್‌ಅಪ್‌ಗಳು ಮತ್ತು ದೊಡ್ಡ ಉದ್ಯಮಿಗಳು ನೆಲೆಸಿದ್ದಾರೆ ಆರ್ಥಿಕ ಅಭಿವೃದ್ಧಿ ತನ್ನದೆ ಆದ signature iconic ಆಗಿರುವ ಬೆಂಗಳೂರು ನಗರದಲ್ಲಿ “ಬಿಲಿಯನೇರ್ಸ್ ಸ್ಟ್ರೀಟ್” ಎಂಬ ರಸ್ತೆ ಇದೆ.ಈ ರಸ್ತೆಯಲ್ಲಿ ವಾಸಿಸುವಂತ ಬಹುತೇಕ ಉದ್ಯಮಿಗಳ ವ್ಯಾಪಾರ ಉದ್ಯಮ ದೇಶ ವಿದೇಶಗಳಲ್ಲಿ ಇದೆ.ಆ ರಸ್ತೆ ಇರುವುದು ಬೆಂಗಳೂರಿನ ಕೋರಮಂಗಲದ 3 ನೇ ಬ್ಲಾಕ್ ಪ್ರದೇಶದಲ್ಲಿದ್ದು ಇದನ್ನು “ಬಿಲಿಯನೇರ್ಸ್ ಸ್ಟ್ರೀಟ್” ಎನ್ನುತ್ತಾರೆ.ಸರ್ಕಾರಿ ದಾಖಲೆಗಳ ಪ್ರಕಾರ ಅಧಿಕೃತವಾಗಿ ಬಿಲಿಯನೇರ್ಸ್ ಸ್ಟ್ರೀಟ್ ಹೆಸರು ಅಲ್ಲ, ಆದರೆ ಇಲ್ಲಿ ವಾಸಿಸುವ ದೇಶದ, ಐಟಿ ಕ್ಷೇತ್ರದಲ್ಲಿ ಕೋಟ್ಯಂತರ ಅಲ್ಲ ಬಿಲಿಯನ್ Billions ಸಂಪಾದಿಸಿದವರು ಹಾಗೂ ಖ್ಯಾತ ಉದ್ಯಮಗಳ chairmans, ceo, co-founders, md ಗಳಂತಹ ಹುದ್ದೆಗಳಲ್ಲಿ ಇರುವ ಆರ್ಥಿಕ ದಿಗ್ಗಜರು ವಾಸಿಸುತ್ತಿರುವುದರಿಂದ ಹೆಸರು ಬಂದಿದೆ ಅಷ್ಟೆ ಅಲ್ಲ ಅಲ್ಲ ವಿಶಿಷ್ಟ ಸ್ಥಾನಮಾನ ಸಿಕ್ಕಿದೆ.ಈ ರಸ್ತೆ ಇಷ್ಟೊಂದು ದುಬಾರಿಯಾಗಲು ಪ್ರಮುಖ ಕಾರಣ ಐಟಿ ಉದ್ಯಮಗಳು ಎಲೆಕ್ಟ್ರಾನಿಕ್ ಸಿಟಿ,…

Read More

ಶ್ರೀನಿವಾಸಪುರ:ತಾಲೂಕಿನ ಸರಕಾರಿ ನೌಕರರ ಸಂಘದ ಕಟ್ಟಡದ ಬಾಡಿಗೆ ಹಣದ ವಿಚಾರವಾಗಿ ಹಾಲಿ-ಮಾಜಿ ಅಧ್ಯಕ್ಷರುಗಳ ನಡುವೆ ಆರೋಪ ಪ್ರತ್ಯಾರೋಪ ಹಾದಿ ಬಿದಿ ರಂಪವಾಗಿದೆ.ನೌಕರರ ಸಂಘದಲ್ಲಿ ಹಣಕಾಸು ಅವ್ಯವಹಾರ,ಹಣ ದುರುಪಯೋಗ ಆಗಿದೆ ಎಂದು ಹಾಲಿ ಅಧ್ಯಕ್ಷ ಬೈರೇಗೌಡರು ದೂರಿದರೆ ಅದಕ್ಕೆ ಮಾಜಿ ಅಧ್ಯಕ್ಷ ಬಂಗವಾದಿನಾಗರಾಜ್ ಅವರು ನನ್ನ ಅವಧಿಯಲ್ಲಿ ಕಪ್ಪುಚುಕ್ಕೆ ಇಲ್ಲದಂತೆ ಕಾರ್ಯನಿರ್ವಹಿಸಿ ತಾ.ಸಂಘದಲ್ಲಿ ಜವಾಬ್ದಾರಿಯಿಂದ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ ಎಂದು ಪ್ರತ್ಯೂತ್ತರ ನೀಡಿದ್ದಾರೆ. ಹಾಲಿ ಮತ್ತು ಮಾಜಿ ಅಧ್ಯಕ್ಷರ ನಡುವಿನ ಕಿತ್ತಾಟ ತಾರಕಕ್ಕೇರಿದೆ.ಹಾಲಿ ಮತ್ತು ಮಾಜಿ ಅಧ್ಯಕ್ಷರ ಇಬ್ಬರು ವೃತ್ತಿಯಲ್ಲಿ ಶಿಕ್ಷಕರು.ವೃತ್ತಿ ಮರೆತಂತಿರುವ ಇಬ್ಬರು ನಾನ-ನೀನಾ ಎಂದು ತೀರಾ ವೈಯುಕ್ತಿಕ ನಿಂದನೆಗೆ ಇಳಿಯುವ ಮೂಲಕ ವೃತ್ತಿ ಬದುಕಿನಲ್ಲಾಗಿದ್ದ ತಂಟೆ ತಕರಾರು ಹುಳುಕುಗಳನ್ನು ಪರಸ್ಪರ ಆರೋಪಿಸಿಕೊಂಡು ಸಮಾಜದ ಮುಂದೆ ಬೆತ್ತಲಾಗಿದ್ದಾರೆಮಾಜಿ ಅಧ್ಯಕ್ಷ ನಾಗರಾಜ್ ಶಿಕ್ಷಕ ವೃತ್ತಿಯಿಂದ ವಯೋ ನಿವೃತ್ತರಾಗಿದ್ದರೆ,ಹಾಲಿ ಅಧ್ಯಕ್ಷ ಬೈರೇಗೌಡ ತಾ.ಮುದಿಮಡಗು ಪ್ರೌಡಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಜನಾರ್ಧನ್ ನಮಗೆನೂ ಗೊತ್ತಿಲ್ಲ ನಾಗರಾಜ್ ನಿವೃತ್ತರಾದಾಗ ಅನಿವಾರ್ಯವಾಗಿ ಅಧ್ಯಕ್ಷನಾದೆ ಎನ್ನುತ್ತಾರೆ.ಇವೆಲ್ಲದರ ನಡುವೆ ನಿಕಟಪೂರ್ವ…

Read More

ನ್ಯೂಜ್ ಡೆಸ್ಕ್:ತೆಲಗು ರಾಜ್ಯಗಳಲ್ಲಿ ಸ್ಟಾರ್ ಹೀರೋಗಳ ಸಿನಿಮಾ ಬಿಡುಗಡೆಗೆ ಕಾದು ಕುಳಿತ ಅಭಿಮಾನಿಗಳು ತಮ್ಮ ನಟನ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗಲಿ ಎಂದು ಹರಕೆ ಹೊತ್ತು ಪುಜೆ ಹೋಮ ಹವನ ನಡೆಸುವುದು ಸಾಮನ್ಯ ಆದರೆ ಇಲ್ಲೊಬ್ಬ ತೆಲಗು ಸಿನಿಮಾಗಳ ಖ್ಯಾತ ನಿರ್ಮಾಪಕ ಬಂಡ್ಲ ಗಣೇಶ್ Bandla Ganesh ತಾವು ಅಭಿಮಾನಿಸುವ ರಾಜಕೀಯ ನಾಯಕನ ಶ್ರೇಯಸ್ಸು ಕೋರಿ ಹರಕೆ ಹೊತ್ತು ಹೈದರಾಬಾದ್ ನಿಂದ ತಿರುಮಲ ಶ್ರೀ ವೇಂಕಟೇಶ್ವರನ ಸನ್ನಿಧಾನಕ್ಕೆ ಇಪ್ಪತ್ತು ಮೂರು ದಿನಗಳ ಪಾದಯಾತ್ರೆ ಕೈಗೊಂಡು ಅದನ್ನು ಯಶಸ್ವಿಯಾಗಿ ಪೊರೈಸಿದ್ದಾರೆ.ಆಂಧ್ರದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ವೈಎಸ್‌ಆರ್‌ಸಿಪಿ ಜಗನ್ ರೆಡ್ಡಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಅಲ್ಲಿನ ವಿರೋಧ ಪಕ್ಷದ ನಾಯಕ ಚಂದ್ರಬಾಬುನಾಯ್ಡು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು, ಆ ಸಂದರ್ಭದಲ್ಲಿ ಚಂದ್ರಬಾಬು ಅವರು ಸುರಕ್ಷಿತವಾಗಿ ಜೈಲಿನಿಂದ ಹೊರಬಂದರೆ, ಹೈದರಾಬಾದ್‌ನಿಂದ ತಿರುಮಲಕ್ಕೆ ಕಾಲನಡಿಗೆಯಲ್ಲಿ ಬಂದು ದರ್ಶನ ಪಡೆಯುವುದಾಗಿ ನಿರ್ಮಾಪಕ ಬಂಡ್ಲ ಗಣೇಶ್ ಪ್ರತಿಜ್ಞೆ ಮಾಡಿ ಹರಕೆ ಹೊತ್ತಿದ್ದರು.ನಂತರದಲ್ಲಿ ಜೈಲಿನಿಂದ ಹೊರ ಬಂದ ಚಂದ್ರಬಾಬುನಾಯ್ಡು N Chandrababu Naidu…

Read More

ನ್ಯೂಜ್ ಡೆಸ್ಕ್:ಕೆನಡಾ ದೇಶದಲ್ಲಿ  ಕೆಲಸ ಮಾಡುತ್ತಿದ್ದ ನೆಲಮಂಗಲ ತಾಲ್ಲೂಕು, ತ್ಯಾಮಗೊಂಡ್ಲು ಪಟ್ಟಣದ ನಿವಾಸಿ ಚಂದನ್ ಕುಮಾರ್ (37) ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಮೃತ ಚಂದನ್ ಕುಮಾರ್ ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ನೆಲೆಸಿ, ಎಲ್ ಅಂಡ್ ಟಿ (L&T) ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು ಎನ್ನಲಾಗಿದೆ. ಫೆಬ್ರವರಿ 8 ರಂದು ಚಂದನ್ ಕೆನಡಾದ ವುಡ್​ಬೈನ್ ಮಾಲ್ ಬಳಿ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ದುಷ್ಕರ್ಮಿಗಳು ಗುಂಡಿನ ಸುರಿಮಳೆ ಸುರಿಸಿದ್ದಾರೆ ಈ ಸಂದರ್ಭದಲ್ಲಿ, ತೀವ್ರವಾಗಿ ಗಾಯಗೊಂಡಿದ್ದ ಚಂದನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಅಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂದು ತಿಳಿದುಬಂದಿದೆ! ಏಕಾಏಕಿ ನಡೆದಿರುವ ಗುಂಡಿನ ದಾಳಿಗೆ ನಿಖರವಾದ ಕಾರಣ ಏನು ಎತ್ತ ಎಂದು ಸದ್ಯಕ್ಕೆ ತಿಳಿದು ಬಂದಿಲ್ಲ.ಗುಂಡಿನ ದಾಳಿ ನೋಡಿದ ಸ್ಥಳೀಯರು ಹೇಳುವಂತೆ ಶೂಟೌಟ್ ನಡೆದ ಸಂದರ್ಭದಲ್ಲಿ ಅದನ್ನು  ಕಣ್ಣಾರೆ ನೋಡಿದ ಸ್ಥಳೀಯರು ಗಾಬರಿಗೊಂಡಿದ್ದು, ಮಾಲ್​ ಹೊರಗೆ ತಮ್ಮ ಕಾರಿನಲ್ಲಿ ಕುಳಿತು ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಓರ್ವ ವ್ಯಕ್ತಿಗೆ…

Read More

ಶ್ರೀನಿವಾಸಪುರ:ಕಾರ್ಮಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬೊಲೇರೋ ಅತಿ ವೇಗವಾಗಿ ಚಾಲನೆಯಿಂದ ವಾಹನ ರೈಲ್ವೆ  ಬ್ರಿಡ್ಜ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಮುಗುಚಿ ಬಿದ್ದು ವಾಹನದಲ್ಲಿದ್ದ ಮೂವರು ಕಾರ್ಮಿಕರು ಮೃತಪಟ್ಟು, 10 ಮಂದಿ ಗಾಯಗೊಂಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ.ಶ್ರೀನಿವಾಸಪುರ ತಾಲೂಕಿನ ದೊಡಮಲದೊಡ್ಡಿ ರೈಲ್ವೆ ಬ್ರಿಡ್ಜ್   ಬಳಿ ಘಟನೆ ಜರುಗಿದ್ದು, ಆಂದ್ರದ ಚೆಂಬಕೂರು ಗ್ರಾಮದ ಕೂಲಿ ಕಾರ್ಮಿಕರಾದ ವೆಂಕಟಮ್ಮ (55), ಮುನಿಯಪ್ಪ (56) ಶ್ರೀನಿವಾಸ@ಸೀನು (27) ಎಂಬುವರು ಮೃತಪಟ್ಟಿದ್ದಾರೆ.ಚೆಂಬಕೂರಿನಿಂದ ಹುಣಸೆ ಮರದಲ್ಲಿ ಕಾಯಿ ಉದುರಿಸುವ ಕೆಲಸಕ್ಕೆ 12 ಮಂದಿ ಕೂಲಿ ಕಾರ್ಮಿಕರನ್ನು ಶ್ರೀನಿವಾಸಪುರ-ಚಿಂತಾಮಣಿ ನಡುವಿನ ಆನೂರು ಗ್ರಾಮಕ್ಕೆ ಕರೆತಂದಿದ್ದರು, ಕೆಲಸ ಮುಗಿಸಿದ ಕೂಲಿ ಕಾರ್ಮಿಕರನ್ನು ಅವರ ಊರಾದ ಆಂಧ್ರದ ಚಂಬಕೂರಿಗೆ ಮತ್ತೆ ಬೊಲೆರೋ ವಾಹನದಲ್ಲಿ ಸಂಜೆ ವಾಪಸ್ ಕರೆದುಕೊಂಡು ಹೋಗುತ್ತಿರುವಾಗ ದೊಡಮದೊಡ್ಡಿ ಸಮೀಪದ ರೈಲ್ವೆ ಅಂಡರ್  ಬ್ರಿಡ್ಜ್  ಬಳಿ ವಾಹನ ಅತಿ ವೇಗವಾಗಿ ಚಲಾಯಿಸುತ್ತಿದ್ದದ್ದರಿಂದ  ಬ್ರೇಕ್ ಫೈಲೂರ್ ಆಗಿ ಚಾಲಕನ ನಿಯಂತ್ರಣ ತಪ್ಪಿದ್ದು ಬೊಲೆರೋ ರಸ್ತೆ ಮೇಲೆ ಮುಗಿಚಿ ಬಿದಿದ್ದೆ. ಬಿದ್ದ…

Read More

ಶ್ರೀನಿವಾಸಪುರ:ಹೆತ್ತ ಮಗುವನ್ನು ಬ್ರೋಕರ್ ಮೂಲಕ ಮಾರಾಟ ಮಾಡಿದ ಮಗುವಿನ ತಂದೆ ತಾಯಿ ಬ್ರೋಕರ್ ಸೇರಿದಂತೆ ಶ್ರೀನಿವಾಸಪುರ ಪೋಲಿಸರು ಐದು ಮಂದಿಯ ವಿರುದ್ದ ಕೇಸು ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ.ಶ್ರೀನಿವಾಸಪುರ ಪಟ್ಟಣದ ವೆಂಕಟೇಶ್ವರ ಬಡಾವಣೆಯ ನೀತು ಹಾಗೂ ರಾಘವೇಂದ್ರ ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದು ಇದರ ಜೊತೆಗೆ ಕಳೆದ ಆರೇಳು ದಿನಗಳ ಹಿಂದೆ ಪಟ್ಟಣದ ಖಾಸಗಿ ನರ್ಸಿಂಗ್​ ಹೋಂನಲ್ಲಿ ಮತ್ತೊಂದು ಗಂಡು ಮಗುವಿಗೆ ನೀತು ಜನ್ಮ ನೀಡಿದ್ದಾಳೆ.ಬಡತನದ ಹಿನ್ನಲೆಯಲ್ಲಿ ನೀತು ಹಾಗೂ ರಾಘವೇಂದ್ರ ದಂಪತಿ ಹುಟ್ಟಿದ ಮಗುವನ್ನು ಬ್ರೋಕರ್ ಮೂಲಕ ಮಾರಾಟ ಮಾಡಲು ನಿರ್ಧರಿಸಿ ನಾರಾಯಣಸ್ವಾಮಿ ಎಂಬ ವ್ಯಕ್ತಿಯ ಮೂಲಕ ಮಗು ಮಾರಾಟ ಮಾಡಿದ್ದಾರೆ.ಇದು ಶ್ರೀನಿವಾಸಪುರ ಪೊಲೀಸರಿಗೆ ಮಾಹಿತಿ ತಲುಪಿದೆ ಈ ಮೇರೆಗೆ ಕಾರ್ಯಾಚರಣೆ ನಡೆಸಿದ ಪೋಲಿಸರಿಗೆ ಮಧ್ಯವರ್ತಿ ಹಾಗೂ ಮಗುವನ್ನು ಖರೀದಿ ಮಾಡುತ್ತಿದ್ದವರು ಸೇರಿ ಒಟ್ಟು 5 ಮಂದಿ ಸಿಕ್ಕಿಬಿದಿದ್ದಾರೆ.ಮಗು ಮಾರಾಟ ಬಯಲಿಗೆ ಬಂದಿದ್ದು ಹೇಗೆ?ಶುಕ್ರವಾರ ಮಧ್ಯರಾತ್ರಿ 12.30ರ ಸಮಯದಲ್ಲಿ ಪೊಲೀಸರು ಕೊಳ್ಳೂರು ರಸ್ತೆ ಕಡೆಯಿಂದ ಗಸ್ತು ಮುಗಿಸಿ ವೆಂಕಟೇಶ್ವರ ಬಡಾವಣೆಯ ಕಡೆ ಬರುತ್ತಿರುವಾಗ…

Read More

ನ್ಯೂಜ್ ಡೆಸ್ಕ್:ಬೈಟೂ ಕಾಫಿ ನೀಡದ ಹೋಟೆಲ್ ಮೇಲೆ JCB ಮೂಲಕ ದಾಳಿ ಮಾಡಿಸಿದೆ ಮುನ್ಸಿಪಲ್ ಉದ್ಯೋಗಿಯನ್ನು ಅಲ್ಲಿನ ಜಿಲ್ಲಾಧಿಕಾರಿ ವಜಾ ಮಾಡಿರುವ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪ್ರೊದ್ದಟೂರ್ ನಗರದಲ್ಲಿ ನಡೆದಿರುತ್ತದೆ.ಮುನ್ಸಿಪಲ್ ನಲ್ಲಿ ಹೊರಗುತ್ತಿಗೆ ಉದ್ಯೋಗಿಯೊಬ್ಬ ಸ್ಥಳೀಯ ಹೋಟೆಲ್ ನಲ್ಲಿ ಕಾಫಿ ಕುಡಿಯಲು ಹೋಗಿ ಬೈಟೂ ಕಾಫಿ ಕೇಳಿದ್ದಾನೆ ಅದಕ್ಕೆ ಹೋಟೆಲ್ ಮಾಲಿಕ ಬೈಟೂ ಪದ್ಧತಿ ಇಲ್ಲಾ ಎಂದಿರುತ್ತಾನೆ.ಅದಕ್ಕೆ ಕೊಪಗೊಂಡ ಮುನ್ಸಿಪಲ್ ಉದ್ಯೋಗಿ ಕಚೇರಿಗೆ ವಾಪಸ್ಸು ಹೋಗಿ ಇಲಾಖೆ ಜೆಸಿಬಿ ಕಳಿಸಿ, ಬೈಟೂ ಕಾಫಿ ಇಲ್ಲಾ ಎಂದ ಹೋಟೆಲ್ ಮುಂಭಾಗದ ಅತಿಕ್ರಮಣ ತೆರವು ಮಾಡಿಕೊಂಡು ಬನ್ನಿ ಎಂದು ಸೂಚಿಸಿದ್ದಾನೆ. ಅದರಂತೆ ಜೆಸಿಬಿ ತೆಗೆದುಕೊಂಡು ಹೋದ ಮುನ್ಸಿಪಲ್ ಸಿಬ್ಬಂದಿ ಹೋಟೆಲ್ ಮುಂಭಾಗದಲ್ಲಿ ಕಾರ್ಯಾಚರಣೆಗೆ ಮುಂದಾದಾಗ ಹೋಟೆಲ್ ಮಾಲಿಕ ರಸ್ತೆ ಮೇಲೆ ಮಲಗಿ ಬೇಡಿಕೊಂಡಿದ್ದಾನೆ ಇದನ್ನು ಸ್ಥಳೀಯ ಜನತೆ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ ಜೊತೆಗೆ ಜನರು ತೀವ್ರವಾಗಿ ವಿರೋಧಿಸಿದ್ದಾರೆ. ವಿಷಯ ಮುನ್ಸಿಪಲ್ ಆಯುಕ್ತರ  ವರಿಗೂ ತಲುಪಿದೆ ನಂತರ ಜಿಲ್ಲಾಧಿಕಾರಿ ಗಮನಕ್ಕೆ ಹೋಗಿದೆ. ಇದು ದಬ್ಬಾಳಿಕೆ…

Read More

ಎಲ್ಲಾ ಪ್ರೇಮಿಗಳು ಮದುವೆಯಾಗಲು ಸಾಧ್ಯವಾಗುವುದಿಲ್ಲ ಹಲವಾರು ಕಾರಣಗಳಿಂದ, ಪ್ರೇಮ ಪ್ರೀತಿ ಮಧ್ಯದಲ್ಲಿ ನಿಂತುಹೊಗುತ್ತದೆ ಆದರೂ first love best love ಎಂದು ನೋವಿನಲ್ಲೂ ಭಗ್ನ ಪ್ರೇಮಿಗಳಾಗಿ ಬದುಕು ಸಾಗಿಸಲು ಮುಂದೆ ಸಾಗುತ್ತಾರೆ.ಇದೊಂದು ಅಂದ ಕಾಲತ್ತಿಲೈ ನಲವತ್ತು ವರ್ಷಗಳ ಹಿಂದಿನ love store. ಕುಟುಂಬದ ಹಿರಿಯರನ್ನು ಎದರು ಹಾಕಿಕೊಂಡು ಪ್ರೀತಿ ಗೆಲ್ಲಲು ಸಾಧ್ಯವಿಲ್ಲದ ಕಾಲದಲ್ಲಿ ಕದ್ದು ಮುಚ್ಚಿ ಪ್ರೀತಿ ಮಾಡುವಂತಹ ಕಾಲವದು ಇಂತಹ ಪ್ರೇಮ ಕಹಾನಿಗೆ ಈಗ 40 ವರ್ಷಗಳ ನಂತರ ಜೀವ ಬಂದಿದೆ. ನ್ಯೂಜ್ ಡೆಸ್ಕ್:ಕೇರಳದ ವಿಂಟೇಜ್ ಪ್ರೇಮಕಥೆ ಬಗ್ಗೆ ಕೇಳಿದವರಿಗೆ ಹೌದ ಇದೂ ಸಾಧ್ಯನಾ ಎಂದು ಆಶ್ಚರ್ಯ ಪಡಬಹುದಾದ ಕಥೆಯಿದು. ಎಲ್ಲಾ ಪ್ರೇಮಿಗಳು ಮದುವೆಯಾಗಲು ಸಾಧ್ಯವಾಗದು ಜಾತಿ ಧರ್ಮ ಇನ್ನೊಂದು ಮತ್ತೊಂದು ಎಂದೆಲ್ಲ ಅಡ್ಡಿ ಆತಂಕಗಳು ಎದುರಾಗುತ್ತವೆ ಈವುಗಳನೆಲ್ಲಾ ಮೆಟ್ಟಿ ನಿಲ್ಲುವ ಇಂದಿನ ಪ್ರೇಮಿಗಳಷ್ಟು ಧೈರ್ಯವಂತರಲ್ಲ ಅಂದಿನ ಪ್ರೇಮಿಗಳು ಯೌವನದಲ್ಲಿ ಬೇರ್ಪಟ್ಟ ಪ್ರೇಮಿಗಳು ತಮ್ಮ ಮಕ್ಕಳ ಸಹಾಯ ಸಹಕಾರದಿಂದ 65 ನೇ ವಯಸ್ಸಿನಲ್ಲಿ ವಿವಾಹವಾಗಿದ್ದಾರೆ. ವಿಂಟೇಜ್ ಪ್ರೇಮಕಥೆಯ ಹಿರೋ ಕೇರಳದ…

Read More