ಕೋಲಾರ:ಶ್ರೀನಿವಾಸಪುರ ಕ್ಷೇತ್ರದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರೆ ನಮ್ಮ ನಾಯಕರು ಅವರೇನಾದರೂ ಚುನಾವಣಾ ಕಣದಿಂದ ಹಿಂದೆ ಸರಿದಿದ್ದೆ ಆದರೆ ಅಗ ತೂಪಲ್ಲಿ ನಾರಾಯಣಸ್ವಾಮಿ ಅಭ್ಯರ್ಥಿಯಾಗಲಿದ್ದಾರೆ ಎಂದು ಜೆಡಿಎಸ್ ಪಕ್ಷದಲ್ಲಿ ಮುಖಂಡರೊಬ್ಬರು ಹೇಳಿಕೊಂಡಿದ್ದಾರೆ.ಸಿಎಂಆರ್.ಶ್ರೀನಾಥ್ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಯಾಗಲಿದ್ದಾರೆಂಬ ವದಂತಿಗಳು ಹರಿದಾಡುತ್ತಿರುವ ಸಮಯದಲ್ಲಿ ಶ್ರೀನಿವಾಸಪುರದಲ್ಲಿ ಸ್ಪರ್ದಿಸಲು ಹೊರಗಿನವರಿಗೆ ಅವಕಾಶವಿಲ್ಲ ಕಾರ್ಯಕರ್ತರು ಒಪ್ಪುವುದೂ ಇಲ್ಲ ಎಂಬ ಮಾತು ದಳಪತಿಗಳಿಂದಲೆ ಕೇಳಿಬರುತ್ತಿದೆ.ಶಾಸಕರು ಹಿಂದೆ ಸರಿದರೆ ಅಹಿಂದಾಗೆ ಅವಕಾಶವೆಂಕಟಶಿವಾರೆಡ್ಡಿ ಅವರು ಶಾಸಕರಾಗಿದ್ದು, ಇಲ್ಲಿ ಬೇರೆಯವರ ಸ್ಪರ್ಧೆ ವಿಷಯ ಅಪ್ರಸ್ತುತ,ಎರಡನೆ ಸಾಲಿನಲ್ಲಿ ತೂಪಲ್ಲಿ ನಾರಾಯಣಸ್ವಾಮಿ ಇದ್ದಾರೆ ಅವರು ಜಿಪಂ ಅಧ್ಯಕ್ಷರಾಗಿ, ಪಕ್ಷಕ್ಕಾಗಿ ನಿಷ್ಟೆಯಿಂದ ಕೆಲಸ ಮಾಡಿಕೊಂಡು ಬಂದಿದ್ದು ಅವರೊಂದಿಗೆ ಮತ್ತೊಬ್ಬ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಅಹಿಂದ ಮುಖಂಡ ಎಂದು ಗುರುತಿಸಿಕೊಂಡಿರುವವರು ಹೇಳಿಕೊಂಡಿರುವುದು ಏನೆಂದರೆ ಶ್ರೀನಿವಾಸಪುರದಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ್ದೇವೆ, ಪಕ್ಷಕ್ಕಾಗಿ ನಿಷ್ಟೆಯಿಂದ ದುಡಿದಿದ್ದೇವೆ,ಅವಕಾಶ ಕೊಟ್ಟರೆ ನಾನು MLA ಅಭ್ಯರ್ಥಿ ಎಂದು ಎಂದು ತಮ್ಮ ಮನದಾಳದ ಮಾತನ್ನು Indirectly ಹೇಳಿದ್ದಾರೆ.ಸಿಎಂಆರ್.ಶ್ರೀನಾಥ್ ಶ್ರೀನಿವಾಸಪುರ ಕ್ಷೇತ್ರದಲ್ಲಿ ಕಾರ್ಯಕರ್ತರೊಂದಿಗೆ ಬೆರೆಯುತ್ತಿದ್ದಾರೆ…
Author: Srinivas_Murthy
ಶ್ರೀನಿವಾಸಪುರ:ಇಕ್ಕಟಿನ ವಾಹನದಲ್ಲಿ ನಾಲ್ಕು ಹಸುಗಳನ್ನು ಸಾಗಿಸುತ್ತಿರುವ ಬಗ್ಗೆ ಸಾರ್ವಜನಿಕರು ಅನುಮಾನದಿಂದ ವಾಹನ ಸಮೇತ ಹಸುಗಳನ್ನು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಸೋಮವಾರ ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.ಚಿಂತಾಮಣೆಯಿಂದ ಐಸ್ ಕ್ರಿಮ್ ಮಾರುವ ವಾಹನದಲ್ಲಿ ನಾಲ್ಕು ಹಸುಗಳನ್ನು ತುಂಬಿಕೊಂಡು ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ವೃತ್ತದ ಮೂಲಕ ಮುಳಬಾಗಿಲು ಕಡೆ ಹೋಗಲಾಗುತ್ತಿತ್ತು.ವಾಹನದಲ್ಲಿದ್ದ ಹಸುವೊಂದು ಅಬ್ಬರಿಸುತ್ತ ಇದ್ದ ಬಗ್ಗೆ ಗಮನಿಸಿದ ಸ್ಥಳೀಯರು ವಾಹನವನ್ನು ಹಿಂಬಾಲಿಸಿ ತಡೆದು ಪರಿಶೀಲನೆ ನಡೆಸಿದ್ದಾರೆ. ಸಣ್ಣ ಇಕ್ಕಾಟಾದ ಜಾಗದ ವಾಹನದಲ್ಲಿ ನಾಲ್ಕು ಹಸುಗಳಿದ್ದು, ಇದು ಅಕ್ರಮ ಸಾಗಾಟ ಇರಬಹುದು ಎಂದು ಸಾರ್ವಜನಿಕರು ಅನುಮಾನಗೊಂಡು ವಾಹನ ಸುತ್ತುವರೆದು ಪ್ರಶ್ನಿಸಿದ್ದಾರೆ.ಹಸುಗಳೊಂದಿಗೆ ವಾಹನದಲ್ಲಿದ್ದವರು ನೀಡುತ್ತಿದ್ದ ಹೇಳಿಕೆಗಳು ಅನುಮಾನ್ಪದ ರೀತಿಯಲ್ಲಿದ್ದು ಜನರು ಸಂಶಯಗೊಂಡು ವಾಹನ ಮತ್ತು ಹಸುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ದಾವಿಸಿದ ಶ್ರೀನಿವಾಸಪುರ ಪಿಸ್ಸೈ ಜಯರಾಮ್ ವಾಹನದಲ್ಲಿದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ವಾಹನದಲ್ಲಿದ್ದ ಎಲ್ಲ ಹಸುಗಳು ನಾಟಿ ಹಸುಗಳಾಗಿದ್ದು ಅವುಗಳನ್ನು ಕೋಲಾರದ ಅರಾಬಿಕೊತ್ತನೂರು ಬಳಿ ಇರುವ ಗೋಶಾಲೆಗೆ ರವಾನಿಸಲಾಗಿದೆ.
ನ್ಯೂಜ್ ಡೆಸ್ಕ್:ಆನ್ಲೈನ್ ಬೆಟ್ಟಿಂಗ್ ವ್ಯಸನಿಯಾಗಿ ಹಣ ಹೊಂದಿಸಲು ಸರ್ಕಾರಿ ಕಚೇರಿಗಳಲ್ಲಿ ಲ್ಯಾಪ್ಟಾಪ್ ಮತ್ತು ಪ್ರಿಂಟರ್ಗಳನ್ನು ಕದಿಯುತಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಆಂಧ್ರ ಪೋಲಿಸರು ಬಂಧಿಸಿ ಕದ್ದ ಮಾಲನ್ನು ವಶಪಡಿಸಿಕೊಂಡಿದ್ದಾರೆ.ಪೋಲಿಸರು ವಶಪಡಿಸಿಕೊಳ್ಳಲಾದ 30 ಪ್ರಿಂಟರ್ಗಳು ಮತ್ತು 3 ಲ್ಯಾಪ್ಟಾಪ್ಗಳ ಮೌಲ್ಯ 8,10,400 ಲಕ್ಷ ರೂ. ಎಂದು ಅಂದಾಜಿಸಿದ್ದಾರೆ. ಚಿತ್ತೂರು ಜಿಲ್ಲೆಯ ಎಸ್.ಆರ್. ಪುರಂ ಮಂಡಲದ ಕನ್ಯಾಕಪುರಂ ಗ್ರಾಮದ ಮಹೇಶ್ ಎಂಜಿನಿಯರಿಂಗ್ ವಿದ್ಯಾರ್ಥಿ ಆನ್ಲೈನ್ ಬೆಟ್ಟಿಂಗ್ ಮತ್ತು ಐಷಾರಾಮಿ ಜೀವನದ ಚಟಕ್ಕೆ ಸುಲಭವಾಗಿ ಹಣ ಗಳಿಸಲು ಕಳ್ಳತನವನ್ನು ವೃತ್ತಿಯಾಗಿ ಆರಿಸಿಕೊಂಡು ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿಕೊಂಡು ಪ್ರಿಂಟರ್ಗಳು, ಲ್ಯಾಪ್ಟಾಪ್ಗಳು ಮತ್ತು ಇತರೆ ಎಲೆಕ್ಟ್ರಾನಿಕ್ ಸಾಧನಗಳನ್ನು ಕಳ್ಳತನ ಮಾಡುತ್ತಿದ್ದನಂತೆ ಇವನ ವಿರುದ್ದ ಆಂಧ್ರಪ್ರದೇಶದ ಚಿತ್ತೂರು, ತಿರುಪತಿ ಮತ್ತು ಅನ್ನಮಯ ಜಿಲ್ಲೆಗಳಲ್ಲಿ 18 ಪ್ರಕರಣಗಳು ದಾಖಲಾಗಿವೆ.
ನ್ಯೂಜ್ ಡೆಸ್ಕ್:ತಮಿಳುನಾಡಿನಲ್ಲಿ 20 ನೇ ಶತಮಾನದ ಆರಂಭದಲ್ಲಿ, ಮದ್ರಾಸ್ ಪ್ರೆಸಿಡೆನ್ಸಿ ಆಡಳಿತಾವಧಿಯಲ್ಲಿ ಸರ್ಕಾರಿ ಉದ್ಯೋಗ, ಶೈಕ್ಷಣಿಕ ಕ್ಷೇತ್ರ ರಾಜಕೀಯ ರಂಗದಲ್ಲಿ ಬ್ರಾಹ್ಮಣರು ಪ್ರಾಬಲ್ಯ ಇತ್ತು.ದ್ರಾವಿಡ ಪಕ್ಷಗಳ ಉದಯಿಸುವ ಮೊದಲು,ರಾಜಗೋಪಾಲಾಚಾರಿ, ವೆಂಕಟರಾಮನ್ ಮತ್ತು ಟಿಟಿ ಕೃಷ್ಣಮಾಚಾರಿಯಂತಹ ಪ್ರಭಾವಿ ಬ್ರಾಹ್ಮಣ ವ್ಯಕ್ತಿಗಳು ತಮಿಳು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಶೇ3% ಪ್ರತಿಶತ ಬ್ರಾಹ್ಮಣರು ಉದ್ಯೋಗದಲ್ಲಿ ಶೇಕಡಾ 70 ಕ್ಕೂ ಹೆಚ್ಚು ಪಾಲು ಪಡೆದಿದ್ದಾರೆ ಎಂದು ವಿರೋಧಿಸಿ ಬ್ರಾಹ್ಮಣೇತರರಿಗೆ ನ್ಯಾಯ ಸೀಗಬೇಕು ಎಂಬ ಬೇಡಿಕೆಯೊಂದಿಗೆ, 1916 ರಲ್ಲಿ ಜಸ್ಟೀಸ್ ಪಾರ್ಟಿ ಉದ್ಭವಿಸಿತು ಪೆರಿಯಾರ್ ನಿಲವುಗಳನ್ನು ಬೆಂಬಲಿಸುವ ಮೂಲಕ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಂದ ದ್ರಾವಿಡ ಸಿದ್ಧಾಂತ ಬಲಗೊಂಡಿತು ಎನ್ನುತ್ತಾರೆ.ಎಂ.ಜಿ.ಆರ್ ಅವಕಾಶ ನೀಡಿದ್ದರು.ಎಂಜಿ ರಾಮಚಂದ್ರನ್ ಮುಖ್ಯಮಂತ್ರಿಯಾಗಿದ್ದಾಗ,ಎಚ್.ವಿ. ಹಂಡೆ ಎಂಬ ಬ್ರಾಹ್ಮಣ ವ್ಯಕ್ತಿ ಆರೋಗ್ಯ ಸಚಿವರಾಗಿದ್ದರು, ಎಐಎಡಿಎಂಕೆ ಮುಖ್ಯಸ್ಥೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸ್ವತಃ ಬ್ರಾಹ್ಮಣರಾದರೂ,ತಮ್ಮ ಸಚಿವ ಸಂಪುಟದಲ್ಲಿ ಬ್ರಾಹ್ಮಣರಿಗೆ ಅವಕಾಶ ನೀಡಿರಲಿಲ್ಲ, ಪಕ್ಷದಲ್ಲಿ ಪ್ರಭಾವಿಯಾಗಿದ್ದ ಬ್ರಾಹ್ಮಣ ಸಮಾಜದ ವಿ. ಮೈತ್ರೇಯನ್ ಅವರನ್ನು ಜಯಲಲಿತಾ ಮೂರು ಬಾರಿ…
ನ್ಯೂಜ್ ಡೆಸ್ಕ್:ತಮಿಳುನಾಡಿನಲ್ಲಿ ರಾಜಕೀಯ ದಿನಕ್ಕೊಂದು ಬದಲಾವಣೆ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ ಸಿನಿಮಯ ರೀತಿಯಲ್ಲಿ ರಾಜಕೀಯದಲ್ಲೂ ಸಸ್ಪೆನ್ಸ್ ಮೂಡುತ್ತಿದೆ ಮತ್ತೊಂದು ಬದಲಾವಣೆ ಅಂದರೆ ರಾತ್ರಿಯಿಂದ ಇಚಿಗೆ ವಿದುತಲೈ ಚಿರುತೈಗಲ್ ಕಚ್ಚಿ (VCK) ವಿಜಯ್ ಯಿಂದ ದೂರ ಸರಿಯುವ ಮಾತಾಡಿದ್ದು ಈಗ ಬೆಳಿಗ್ಗೆ ಶನಿವಾರ ಸಂಜೆ 4 ಗಂಟೆಗೆ ವಿಜಯ್ ಅವರ ಟಿವಿಕೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ತನ್ನ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿಕೊಂಡಿದಿಯಂತೆ.ಇದರಿಂದ ತಮಿಳುನಾಡಿನಲ್ಲಿ ರಾಜ್ಯ ಸರ್ಕಾರ ರಚನೆಯಲ್ಲಿ ನಡೆಯುತ್ತಿರುವ ಬಿಕ್ಕಟ್ಟು ಅಂತಿಮ ಘಟ್ಟ ತಲುಪಬಹುದು ಎನ್ನಲಾಗುತ್ತಿದೆ.234 ಸದಸ್ಯ ಬಲದ ತಮಿಳುನಾಡು ಅಸೆಂಬ್ಲಿಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸಲು ಅಗತ್ಯ ಬಹುಮತ ಸಮೀಪಿಸುತ್ತಿರುವ ಹಿನ್ನಲೆಯಲ್ಲಿರಾಜಕೀಯ ವಲಯಗಳಲ್ಲಿ ಘೋಷಣೆ ಹೊರ ಬಂದಿದೆ ಎನ್ನಲಾಗುತ್ತಿದೆ.TVK ಈಗಾಗಲೇ ಹಲವಾರು ಪಕ್ಷಗಳ ಬೆಂಬಲವನ್ನು ಪಡೆದುಕೊಂಡಿದ್ದು ಅಧಿಕಾರದ ಗಡಿ ತಲುಪಲು ಕೇವಲ ಇಬ್ಬರು ಶಾಸಕರ ಬೆಂಬಲದ ಅಗತ್ಯವಿದೆ. ಇದಲ್ಲದೆ, ಪಕ್ಷದ ಮೂಲಗಳ ಪ್ರಕಾರ, ಟಿವಿಕೆ ನಾಯಕರು ಔಪಚಾರಿಕವಾಗಿ ವಿಸಿಕೆ ಅಧ್ಯಕ್ಷ ತೋಲ್ ಅವರನ್ನು ಮಾತನಾಡಿ ಸರ್ಕಾರ…
ಶ್ರೀನಿವಾಸಪುರ: ನಿಲಟೂರು ಬಳಿಯ ಪವನ ವಿದ್ಯಾ ಭವನ ಪ್ರೌಢಶಾಲೆ ವಿದ್ಯಾರ್ಥಿ ಲಲಿತ್ ರೆಡ್ಡಿ ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ 620 ಅಂಕಗಳನ್ನು ಗಳಿಸುವ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ಹಾಗೂ ರಾಜ್ಯ ಮಟ್ಟದಲ್ಲಿ 10ನೇ ಸ್ಥಾನವನ್ನು ಪಡೆದಿರುವುದಾಗಿ ಶಾಲಾ ಆಡಳಿತ ಮಂದಳಿ ಹೇಳಿದೆ.2025-26ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅಭೂತಪೂರ್ವ ಯಶಸ್ಸು ದಾಖಲಿಸಿದ್ದು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸಂಸ್ಥೆಯು ಶೇ. 100 ರಷ್ಟು ಫಲಿತಾಂಶವನ್ನು ದಾಖಲಿಸುವ ಮೂಲಕ ತಾಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದೆ.ಆರ್. ತಿಮ್ಮಸಂದ್ರ ಗ್ರಾಮದ ಕೃಷಿಕ ದಂಪತಿ ಜಯರಾಮರೆಡ್ಡಿ ಮತ್ತು ಚಂದ್ರಕಲಾ ಅವರ ಪುತ್ರನಾದ ಲಲಿತ್ ರೆಡ್ಡಿ,620 ಅಂಕಗಳನ್ನು ಗಳಿಸಿ ಗ್ರಾಮೀಣ ಭಾಗದ ಪ್ರತಿಭೆಯಾಗಿ ಹೊರಹೊಮ್ಮಿದ್ದಾನೆ.ಶ್ರೀ ಪವನ ವಿದ್ಯಾ ಭವನ ಶಾಲೆ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಇದಕ್ಕಾಗಿ ಶಿಕ್ಷಕರ ಸಮರ್ಪಕ ಮಾರ್ಗದರ್ಶನ ಹಾಗೂ ವಿದ್ಯಾರ್ಥಿಗಳ ನಿರಂತರ ಶ್ರಮ ಈ ವರ್ಷದ ಫಲಿತಾಂಶದಲ್ಲಿ ಕಾಣಸಿಗುತ್ತಿದೆ ಎಂದು ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದೆ. ಶಾಲೆಯ ಆಡಳಿತ ಮಂಡಳಿಯ…
ನ್ಯೂಜ್ ಡೆಸ್ಕ್: ತಮಿಳುನಾಡು ಚುನಾವಣೆಯಲ್ಲಿ ಚಾರಿತಾತ್ಮಕ ಗೆಲುವು ಸಾಧಿಸಿರುವ ದಳಪತಿ ವಿಜಯ್ ಮತ್ತು ಅವರ ಕುಟುಂಬದ ಬಗ್ಗೆ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ.ಅವರ ಪೋಷಕರು ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯವರು ಎನ್ನಲಾಗಿದ್ದು ವಿಜಯ್ ತಾತ ಚಿತ್ತೂರಿನಿಂದ ತಮಿಳುನಾಡಿನ ರಾಮೇಶ್ವರಂ ಗೆ ವಲಸೆ ಹೋದವರು ಹೇಳುತ್ತಾರೆ.ವಿಜಯ್ ತಂದೆ ಎಸ್.ಎ. ಚಂದ್ರಶೇಖರ್ ಪ್ರಸಿದ್ಧ ನಿರ್ದೇಶಕ ಸಿನಿಮಾ ನಿರ್ದೇಶಕರಾಗಿ ಖ್ಯಾತರಾಗಿದ್ದಾರೆ.ತಮಿಳು ಕನ್ನಡ ತೆಲಗು ಮತ್ತು ಹಿಂದಿ ಭಾಷೆಗಳಲ್ಲಿ ಸುಮಾರು 70 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಿರ್ದೇಶರಾಗಿ ಅಷ್ಟೆ ಅಲ್ಲ ನಿರ್ಮಾಪಕ ಮತ್ತು ಬರಹಗಾರರಾಗಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.80-90 ರ ದಶಕದಲ್ಲಿ ಸಮಾಜದ ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಕ್ರಾಂತಿಕಾರಿ ಕಥೆಗಳನ್ನು ಕನ್ನಡ ತೆಲಗು ಮತ್ತು ತಮಿಳು ಭಾಷೆಗಳಲ್ಲಿ ಸಿನಿಮಾ ಮಾಡಿ ಸೈ ಅನಿಸಿಕೊಂಡಿದ್ದಾರೆ.ಕನ್ನಡದ ನಂಟುಸ್ಯಾಂಡಲ್ವುಡ್ನ ಖ್ಯಾತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಸೇರಿದಂತೆ ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಶಂಕರ್ ನಾಗ್ ಅವರ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.ವಿಷ್ಣುವರ್ಧನ್ ನಾಯಕರಾಗಿದ್ದ “ವಿಷ್ಣು ದಾದಾ” “ಸಿಂಹ ಘರ್ಜನೆ” ಮತ್ತು “ಗೆಲುವು…
ಶ್ರೀನಿವಾಸಪುರ:ಮಾಲೂರು ರಾಜಕೀಯ ತಿಕ್ಕಾಟದಲ್ಲಿ ಕೋಲಾರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ (ಕೋಮುಲ್)ನ ಆಡಳಿತ ಮಂಡಳಿ ಮೇಲೆ ಅಕ್ರಮದ ಆರೋಪ ಮಾಡುವುದು ಸೂಕ್ತ ಅಲ್ಲ ಎಂದು ಕೋಮುಲ್ ನಿರ್ದೇಶಕ ಕಲ್ಲೂರುಮಂಜು ಹೇಳಿದರು.ಅವರು ಶ್ರೀನಿವಾಸಪುರದ ಕೋಮುಲ್ ಶಿಭಿರದ ಕಚೇರಿಯಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದರು ಮಾಜಿ ಶಾಸಕ ಮಂಜುನಾಥಗೌಡ ಅವರು ಮಾಲೂರು ಹಾಲಿ ಶಾಸಕ ಮತ್ತು ಕೋಮುಲ್ ಅಧ್ಯಕ್ಷ ನಂಜೇಗೌಡ ಅವರುಗಳ ನಡುವಿನ ರಾಜಕೀಯ ದ್ವೇಷಕ್ಕಾಗಿ ಪದೇ ಪದೇ ಕೋಮುಲ್ ಹೇಸರು ಉಲ್ಲೇಖಿಸಿ ಅಕ್ರಮ ನಡೆಯುತ್ತಿದೆ ಎಂದು ಆರೋಪ ಮಾಡುತ್ತಿರುವುದು ಸೂಕ್ತ ಅಲ್ಲ ಇದರಿಂದ ಒಕ್ಕೂಟದ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದರು.ನಿಮ್ಮ ರಾಜಕೀಯ ಆರೋಪ ಪ್ರತ್ಯಾರೋಪ ಮಾಲೂರಿಗೆ ಸೀಮಿತವಾಗಿರಲಿ ಹಾಗೆ ಸಾಮಾಜಿಕ ಕಾರ್ಯಕರ್ತ ಗೂಳಿಗಾನಹಳ್ಳಿ ನಾಗರಾಜ್ ಹಾಗು ವಕೀಲ ವೆಂಕಟಾಚಲಪತಿ ಮಾಡಿರುವ ಕೋಮೂಲ್ ಮೇಲಿನ ಆರೋಪದಲ್ಲಿ ಯಾವುದೆ ಉರಳಿಲ್ಲ.ನೇಮಕಾತಿ ವಿಚಾರವಾಗಿ ಇಡಿ ತನಿಖೆಯಾಗಿದೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ ವಿಚಾರಣೆ ನಡೆಯುತ್ತಿದೆ.ಈಗಾಗಲೆ ಹನ್ನೇರಡು ವರ್ಷಗಳ ಹಣದ ವಹಿವಾಟಿನ ಆಡಿಟ್ ಬಹಿರಂಗ ಮಾಡಲಾಗಿದೆ ಎಲ್ಲಾ ಪಾರದರ್ಶಕವಾಗಿದೆ ಚಿಂತಾಮಣಿ ಐಸ್…
ಶ್ರೀನಿವಾಸಪುರ:ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಚುನಾವಣೆ ಇಂದು ನಡೆಯಿತು ಸಂಜೆ ಮತ ಎಣಿಕೆ ನಡೆದು ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ರೊಣೂರುರೆಡ್ಡಪ್ಪ ನೇತೃತ್ವದ ಬಣದ ಅಭ್ಯರ್ಥಿಗಳು ಭರ್ಜರಿ ಗೆಲವು ಸಾಧಿಸಿದ್ದಾರೆ.ಒಟ್ಟು 13 ಸ್ಥಾನಗಳಿಗೆ 2 ಶಿಕ್ಷಕರ ಬಣಗಳಿಂದ 26 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.ಅವರಲ್ಲಿ 11 ಮಂದಿ ರೆಡ್ಡೆಪ್ಪ ಬಣದವರು ಗೆಲವು ಸಾಧಿಸಿದ್ದಾರೆ. 13 ಸ್ಥಾನಗಳಲ್ಲಿ ಒಂಬತ್ತು ಮಂದಿ ಪುರಷ ಅಭ್ಯರ್ಥಿಗಳು ನಾಲ್ಕು ಮಂದಿ ಮಹಿಳಾ ಅಭ್ಯರ್ಥಿಗಳು ಆಯ್ಕೆಯಾಗಬೇಕಿತ್ತು ಮಹಿಳಾ ಕ್ಷೇತ್ರದ ನಾಲ್ಕು ಅಭ್ಯರ್ಥಿಗಳು ಹಾಗು ಪುರುಷ ಕ್ಷೇತ್ರದಲ್ಲಿ 7 ಅಭ್ಯರ್ಥಿಗಳು ರೆಡ್ಡೆಪ್ಪ ಬಣದವರು ವಿಜೇತರಾಗಿದ್ದಾರೆ.ಇಬ್ಬರು ಅಭ್ಯರ್ಥಿಗಳು ಮೂರ್ತಿ ಹಾಗು ಬಿ.ಆರ್.ಪಿ ನಾಗರಾಜ್ ವಿರೋಧಿ ಬಣದ ಅಭ್ಯರ್ಥಿಗಳು ಗೆದ್ದಿರುತ್ತಾರೆ.ವಿಜೇತ ಅಭ್ಯರ್ಥಿಗಳ ವಿವರರೆಡ್ಡೆಪ್ಪ, ಭಯ್ಯಾರೆಡ್ಡಿ, ರಘುನಾಥರೆಡ್ಡಿ, ಶಿವಣ್ಣ, ವೇಣುಗೋಪಾಲ, ವೆಂಕಟರಾಮರೆಡ್ಡಿ, ವೇಣುಗೋಪಾಲರೆಡ್ಡಿ. ಮಹಿಳಾ ಕ್ಷೇತ್ರದಲ್ಲಿ ಅನುರಾಧ, ಅನಿತಾ, ನಾಗರತ್ನಮ್ಮ, ತನುಜ.ತಡ ರಾತ್ರಿ ಚುನಾವಣೆ ಫಲಿತಾಂಶಚುನಾವಣಾಧಿಕಾರಿಗಳಾಗಿ ಉಪನ್ಯಾಸಕ ಜೆ.ಗೋಪಿನಾಥ್,ಸಹಾಯಕರಾಗಿ ಲೋಕೆಶ್ ಮತ್ತು ಹನುಮೇಗೌಡ ಕಾರ್ಯನಿರ್ವಹಿಸಿದರು.ಚುನಾವಣೆ ಪ್ರಕ್ರಿಯೆ ಮುಗಿದು ಪೂರ್ತಿಯಾಗಿ ಚುನಾವಣೆ…
ಶ್ರೀನಿವಾಸಪುರ:ಈ ತಾಲೂಕಿನ ಜೀವನಾಡಿ ಬೆಳೆಯಾಗಿರುವ ಮಾವು ಬೆಳೆ ಬಿಸಿಲಿನ ತಾಪಮಾನದಿಂದ ಕುಂಠಿತವಾಗಿತ್ತು ಬುಧವಾರ ಸುರಿದ ಮಳೆಯಿಂದ ಅಳಿದುಳಿದ ಮಾವುಬೆಳೆ ನೆಲದ ಪಾಲಾಗಿದೆ ರೈತರು ನಷ್ಟಕ್ಕೊಳಗಾಗಿದ್ದಾರೆ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಅವರು ಗುರುವಾರ ಸಂಸದ ಮಲ್ಲೇಶ್ ಬಾಬು ಜೊತೆಗೂಡಿ ಮಳೆಯಿಂದ ನಷ್ಟಕ್ಕೆ ಒಳಗಾದ ಕಸಬಾ ಹೋಬಳಿ ದೊಡಮಲದೊಡ್ಡಿ ಸೇರಿದಂತೆ ಗ್ರಾಮಗಳ ವ್ಯಾಪ್ತಿಯ ಮಾವಿನ ತೋಟಗಳಿಗೆ ಭೇಟಿ ನೀಡಿದ್ದ ಅವರು ಬೆಳೆಗಾರರಿಗೆ ಅಗತ್ಯ ಪರಿಹಾರ ನೀಡಲು ವಹಿಸಬೇಕಾದ ಕ್ರಮದ ಕುರಿತು ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಶ್ರೀನಿವಾಸನ್ ಅವರಿಗೆ ಸೂಚಿಸಿದರು. ತಾಲೂಕು ಮಟ್ಟದ ಅಧಿಕಾರಿಗಳು ವರದಿ ನೀಡಿ ಪರಿಹಾರ ಕುರಿತಾಗಿ ವಿಪತ್ತು ನಿರ್ವಹಣೆ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಮಾವು ಬೆಳೆ ತಾಪಮಾನದ ತೀವ್ರ ಏರಿಕೆ, ಅಕಾಲಿಕ ಮಳೆಯಿಂದ ಕುಂಠಿತವಾಗಿ ರೈತರು ನಷ್ಟಕ್ಕೊಳಗಾಗುತ್ತಿರುವುದು ದುರಂತ ಎಷ್ಟೊ ಜನ ರೈತರು ಬೆಳೆ ವಿಮೆ ಸಹ ಮಾಡಿಸಿರುವುದಿಲ್ಲ ಆದ್ದರಿಂದ ರೈತರಿಗೆ ಅಗತ್ಯ ಪರಿಹಾರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಪಂಚಾಯಿತಿ ಮಾಜಿ…


