Author: Srinivas_Murthy

ಶ್ರೀನಿವಾಸಪುರ:ಲಂಚ ಪಡೆಯುತ್ತಿದ್ದ ಪಂಚಾಯಿತಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿ ಬಿದಿದ್ದಾರೆ.ನರೇಗಾ ಕಾಮಗಾರಿ ಸಂಬಂಧ ಸಪ್ಲೈ ಬಿಲ್ ಬಿಡುಗಡೆ ಮಾಡಲು ಗುತ್ತಿದಾರನಿಂದ ಲಂಚದ ಮುಂಗಡ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುತ್ತಾರೆ.ಶ್ರೀನಿವಾಸಪುರ ತಾಲೂಕಿನ ಹೋಬಳಿ ಕೇಂದ್ರವಾದ ಯಲ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2024-26 ನೇ ಸಾಲಿಗೆ ಸಂಬಂಧಪಟ್ಟಂತೆ ನರೇಗಾ ಯೋಜನೆಯಡಿಯಲ್ಲಿ ನಿರ್ವಹಿಸಲಾಗಿರುವ 32 ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ನರೇಗಾ ಗುತ್ತಿಗೆದಾರ ಪಂಚಾಯಿತಿ ವತಿಯಿಂದ ಕಾರ್ಯಾದೇಶ ಪಡೆದುಕೊಂಡು 40 ಲಕ್ಷ ರೂ.ವೆಚ್ಚದ ಸಾಮಗ್ರಿಗಳನ್ನು ಸರಬರಾಜು ಮಾಡಿದ್ದು ಬಿಲ್ಲಿನ ಮೊತ್ತ ಬಿಡುಗಡೆ ಮಾಡಲು ಕಮೀಷನ್ ರೂಪದಲ್ಲಿ ಆರೋಪಿಗಳು ಸೋಮವಾರ ಸಂಜೆ ಗುತ್ತಿಗೇದಾರ ಶಿವಕುಮಾರ್ ಮನೆಗೆ ಹೋಗಿ ಮೊದಲ ಕಂತಿನ ಲಂಚದ ಹಣ 5 ಲಕ್ಷ ರೂಗಳನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಗುತ್ತಿಗೆದಾರ ಶಿವಕುಮಾರ್ ಎಂಬುವವರು ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಲಾಗಿದೆ.ಪಿಡಿಒ ಸೇರಿ ನಾಲ್ಕು ಜನರ ಬಂಧನಯಲ್ದೂರು ಗ್ರಾಮ ಪಂಚಾಯಿತಿ ಪಿಡಿಒ ಕೆ.ವಿ.ನರೇಂದ್ರಬಾಬು,ಗ್ರೇಡ್‌–2 ಕಾರ್ಯದರ್ಶಿ ಶಿವಶಂಕರ್‌, ಜೂನಿಯರ್‌…

Read More

‘ಏಳೇಳು ಜನುಮದ ಬಾಂಧವ್ಯ’ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ಪತಿ-ಪತ್ನಿ ನಡುವಿನ ಅತ್ಯಂತ ಪವಿತ್ರ ಮತ್ತು ಗಾಢವಾದ ಸಂಬಂಧವನ್ನು ಪ್ರತಿಪಾದಿಸುತ್ತದೆ.ದಾಂಪತ್ಯ ಜೀವನ ಒಂದು ಜನ್ಮಕ್ಕೆ ಸೀಮಿತವಾಗದೆ, ಮುಂದಿನ ಏಳು ಜನ್ಮಗಳಿಗೂ ಜೊತೆಯಾಗಿ ಸಾಗುವ ಪ್ರೀತಿ, ನಂಬಿಕೆ ಮತ್ತು ಅನುಬಂಧದ ಸಂಕೇತ ಎನ್ನುತ್ತಾರೆ. ನ್ಯೂಜ್ ಡೆಸ್ಕ್:ಇದಕ್ಕೆ ಸಾಕ್ಷಿ ಎನ್ನುವಂತೆ ವೃದ್ಧ ದಂಪತಿ ಪ್ರಖ್ಯಾತ ತಿರುಮಲ ಮೆಟ್ಟಿಲು ಬೆಟ್ಟ ಹತ್ತುವಾಗ ಭಕ್ತರಿಗೆ ಕಂಡು ಬಂದಿದೆ.ತಿರುಮಲ ಮೆಟ್ಟಿಲುಗಳ ಮೇಲೆ ಅಪರೂಪದ ಅದ್ಭುತ ದೃಶ್ಯವೊಂದು ಇತ್ತಿಚಿಗೆ ಕಂಡುಬಂದಿದ್ದು ವೃದ್ಧ ದಂಪತಿ ನಡುವಿನ ಬಾಂಧವ್ಯ ಎಷ್ಟೊಂದು ಗಾಡವಾಗಿದೆ ಎಂಬುದನ್ನು ತೋರಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ಅದ್ಭುತ ದೃಶ್ಯ ವೈರಲ್ ಆಗಿದ್ದು ತಿರುಮಲಕ್ಕೆ ಹೋಗುವ ಅಲಿಪಿರಿ ಮೆಟ್ಟಿಲು ಮಾರ್ಗದಲ್ಲಿ ಮೆಟ್ಟಿಲುಗಳನ್ನು ಹತ್ತಲು ವೃದ್ಧ ಹೆಂಡತಿ ಪ್ರಯಾಸ ಪಡುತ್ತಿದ್ದಾಗ ವೃದ್ಧ ಗಂಡ ತನ್ನ ಬುಜದ ಮೇಲಿನ ಟವಲ್ ಅನ್ನು ಒಂದು ಭಾಗ ಕೈಗೆ ಸುತ್ತಿಕೊಂಡು ಮತ್ತೊಂದು ಭಾಗವನ್ನು ಹೆಂಡತಿಗೆ ನೀಡುತ್ತಾನೆ ಇದನ್ನು ಹಿಡಿದುಕೊಂಡ ಪತ್ನಿ ಭಕ್ತಿಂದ ಹೆಜ್ಜೆಗಳನ್ನು ಇಡುತ್ತ ಬೆಟ್ಟ ಹತ್ತುತ್ತಿರುವ ಅಪರೂಪದ ದೃಶ್ಯ…

Read More

ನ್ಯೂಜ್ ಡೆಸ್ಕ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸ ಈಗ ಶಕ್ತಿ ಆಗಿದೆ   ಸಚಿವರಾಗಬೇಕು ಎನ್ನುವ ಆಕಾಂಕ್ಷಿಗಳು ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.ಎನ್ ಚಲುವರಾಯಸ್ವಾಮಿ, ಮಧು ಬಂಗಾರಪ್ಪ, ಸಂತೋಷ್ ಲಾಡ್, ಕೆ ಎಂ ಶಿವಲಿಂಗೇಗೌಡ, ಶ್ರೀನಿವಾಸ್ ಮಾನೆ, ಯಾಸಿರ್ ಅಹ್ಮದ್ ಖಾನ್ ಪಠಾಣ್ ಮತ್ತು ಕೆ ವೆಂಕಟೇಶ್ ಅವರುಗಳು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಪ್ರಮುಖ ಆಕಾಂಕ್ಷಿಗಳು. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಕೂಡ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ತಮ್ಮ ಕ್ಷೇತ್ರದಲ್ಲಿ ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ  ಕೆಲವು ಜೆಡಿಎಸ್ ಕಾರ್ಯಕರ್ತರು ಅವರ ಕಡೆಗೆ ಚಪ್ಪಲಿ ಎಸೆದ ಘಟನೆ ಕುರಿತು ವಿವರಿಸಿ ಭಾವುಕರಾದರು.ಇದಕ್ಕೆ ಸಿದ್ದರಾಮಯ್ಯ ಮಾತನಾಡಿ ಪೊಲೀಸರ ಉಪಸ್ಥಿತಿಯ ಹೊರತಾಗಿಯೂ ಆಡಳಿತ ಪಕ್ಷದ ಶಾಸಕರೊಬ್ಬರು ಇಂತಹ ಘಟನೆಯನ್ನು ಎದುರಿಸಬೇಕಾಯಿತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.ಜೊತೆಗೆ ಸಿದ್ದರಾಮಯ್ಯ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕರೆ ಮಾಡಿ ಘಟನೆಯ ಕುರಿತು ಸೂಕ್ತ ತನಿಖೆ ನಡೆಸುವಂತೆ ಹೇಳಿದ ಅವರು…

Read More

ದೆಹಲಿ ಮಾದರಿಯಲ್ಲಿ ಬೆಂಗಳೂರಿನಿಂದ ಕೋಲಾರ ,ತುಮಕೂರು,ಮೈಸೂರು ಸೇರಿದಂತೆ ಇನ್ನೂ ಹಲವು ನಗರಗಳಿಗೆ ವಿಸ್ತರಿಸುವ ಆಲೋಚನೆ ಇರುವ ಸೆಮಿ-ಹೈ-ಸ್ಪೀಡ್‌ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್‌) ಕಾರಿಡಾರ್‌ಗಳನ್ನು ಪ್ರಸ್ತಾಪಿಸಿದ್ದು ತಾಂತ್ರಿಕವಾಗಿ ಆರ್‌ಆರ್‌ಟಿಎಸ್‌ ಎಂಬುದು ಉಪನಗರ ರೈಲಿನ ಭವಿಷ್ಯದ ಹಂತವಾಗಿದೆ. ನಮ್ಮ ಮೂಲಸೌಕರ್ಯ ಮತ್ತು ಸಿಗ್ನಲಿಂಗ್‌ ವಿನ್ಯಾಸವನ್ನು ಹೆಚ್ಚಿನ ವೇಗದ ಕಾರ್ಯಾಚರಣೆಗೆ ಬೆಂಬಲಿಸುವ ರೀತಿಯಲ್ಲಿ ಯೋಜಿಸಲಾಗುತ್ತಿದೆ,ಎಂದು ಕೆ-ರೈಡ್‌ ಅಧಿಕಾರಿಗಳು ಹೇಳಿದ್ದಾರೆ. ನ್ಯೂಜ್ ಡೆಸ್ಕ್:ಬೆಂಗಳೂರು ಉಪನಗರ ರೈಲು ಯೋಜನೆ(Bengaluru Suburban Railway Plan) ನಾಲ್ಕು ಮಾರ್ಗಗಳಲ್ಲಿ ಸಂಚರಿಸಲಿದ್ದು ಇದರ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.1980 ರಲ್ಲಿ ರೂಪುಗೊಂಡ ಈ ಯೋಜನೆಗೆ 2022ರಲ್ಲಿ ರೆಕ್ಕೆಪುಕ್ಕ ಬಂತಾದರೂ ನಂತರದಲ್ಲಿ ಮುಂದುವರಿದಿರಲಿಲ್ಲ, ಭೂ ಸ್ವಾಧೀನ, ಹಣಕಾಸು ಸಮಸ್ಯೆ, ರೈಲ್ವೆ ಸಚಿವಾಲಯದ ಜತೆಗಿನ ಸಮನ್ವಯದ ಕೊರತೆ, ಯೋಜನೆ ಅನುಷ್ಠಾನಕ್ಕೆ ಪರಿಣತ ತಂಡದ ಸಮಸ್ಯೆ ಹೀಗೆ ನಾನಾ ಕಾರಣಗಳಿಂದ ಯೋಜನೆ ನಿಂತಲ್ಲೇ ನಿಂತು ನಾಲ್ಕು ದಶಕಗಳಿಂದ ನನೆಗುದಿಗೆ ಬಿದ್ದಿತ್ತು. ಇದೀಗ ಸಮಸ್ಯೆಗಳಿಗೆ ಪರಿಹಾರ ಎನ್ನುವಂತೆ 148.3 ಕಿ.ಮೀ ಉದ್ದದ ಬೆಂಗಳೂರು ಉಪನಗರ ರೈಲು ಯೋಜನೆ…

Read More

ಚಿಂತಾಮಣಿ:ಕರ್ನಾಟಕ ವಿಧಾನಸಭೆ ಮಹಿಳಾ ಶಾಸಕಿಯರಾದ ಮಂಜುಳಾ ಅರವಿಂದ ಲಿಂಬಾವಳಿ,ಶಶಿಕಲಾ ಜೊಲ್ಲೆ, ಹಾಗು ಭಾಗೀರಥಿ ಮುರುಳ್ಯ ಮೂವರು ಶಾಸಕಿಯರು ಚಿಂತಾಮಣಿಯ ಕೈಲಾಸಗಿರಿ ಬೆಟ್ಟದಲ್ಲಿ ಪ್ರಸಿದ್ದ ಗುಹಾಂತರ ದೇವಾಲಯವಾದ ಚತುರ್ಮುಖ ಶಿವಲಿಂಗ (ನಾಲ್ಕು ಮುಖಗಳ ಶಿವ),ಜಗದಾಂಬೆ(ಪಾರ್ವತಿ ದೇವಿ) ಮತ್ತು ಶ್ರೀ ವಲ್ಲಭ ಗಣಪತಿ ದೇವರ ದರ್ಶನ ಪಡೆದರು.ಈ ಕುರಿತು ಹಿರಿಯ ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ತಮ್ಮ ಫೇಸ್ಬುಕ್ ಖಾತೆಯಲ್ಲಿ ತಾವು ಭೇಟಿ ನೀಡಿದ್ದ ಕೈಲಾಸಗಿರಿ ಬೆಟ್ಟದ ಬಗ್ಗೆ ಹಂಚಿಕೊಂಡಿದ್ದು ಪ್ರಕೃತಿಯ ಮಡಿಲಿನಲ್ಲಿ ಮಾನವ ನಿರ್ಮಿತ ಗುಹಾಂತರ ದೇವಾಲಯವಾಗಿದ್ದು ‘ಅಂಬಾಜಿದುರ್ಗ’ ಪರ್ವತ ಶ್ರೇಣಿಯ ಕಲ್ಲಿನ ಬೆಟ್ಟವನ್ನು ಕೊರೆದು ಅದ್ಭುತವಾಗಿ ಬೃಹದಾಕಾರದ ಗುಹಾಂತರ ದೇವಾಲಯಗಳ ಸಮುಚ್ಛಯವನ್ನು ನಿರ್ಮಿಸಲಾಗಿದೆ ಇಲ್ಲಿ ಗಿರಿಜಾ ಕಲ್ಯಾಣದಂತ ಸುಂದರ ಶಿಲ್ಪಕಲೆಗಳಿವೆ ಎಂದು ವರ್ಣಿಸಿದ್ದಾರೆ. ನಂತರ ಅವರು ಕೈವಾರದ ಐತಿಹಾಸಿಕ ಪುಣ್ಯಕ್ಷೇತ್ರ ಹಾಗೂ ಆಧ್ಯಾತ್ಮಿಕ ತಾಣವಾದ ಶ್ರೀ ಕೈವಾರ ಯೋಗೀ ತಾತಯ್ಯ ಮಠಕ್ಕೂ ಭೇಟಿ ನೀಡಿ ದರ್ಶನ ಪಡೆದಿರುತ್ತಾರೆ.

Read More

ಶ್ರೀನಿವಾಸಪುರ:ಬಂಗಾರಪೇಟೆ ಮಾರ್ಗವಾಗಿ ಬೆಂಗಳೂರು ತಲುಪುತ್ತಿದ್ದ ಚನೈ-ಮೈಸೂರು ಮಾರ್ಗದ ಸುಮಾರು ಹದಿನೈದು ರೈಲುಗಳು ಒಂದೇ ರಾತ್ರಿ ಕೋಲಾರ-ಶ್ರೀನಿವಾಸಪುರ-ಚಿಂತಾಮಣಿ-ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ತಲುಪಿವೆ.ಕೃಷ್ಣರಾಜಪುರಂ ಮತ್ತು ವೈಟ್‌ಫೀಲ್ಡ್ ಪ್ಯಾನಲ್ ಕ್ಯಾಬಿನ್ ನಡುವಿನ ರೈಲ್ವೆ ಮೂಲಸೌಕರ್ಯ ನವೀಕರಣಗಳಿಂದಾಗಿ, ನೈಋತ್ಯ ರೈಲ್ವೆ ಜೂನ್ 6 ಮತ್ತು ಜೂನ್ 8 ರ ನಡುವೆ ಹಲವಾರು ರೈಲು ಸೇವೆಗಳ ಕಾರ್ಯಾಚರಣೆಯನ್ನು ಪರಿಷ್ಕರಿಸಿದ ಪರಿಣಾಮ ರೈಲು ಸೇವೆಗಳ ಮಾರ್ಗ ಬದಲಾವಣೆ ಮಾಡಿದ್ದರಿಂದ ಹಿನ್ನಲೆಯಲ್ಲಿ ಕೆಲವು ರೈಲುಗಳನ್ನು ಅವುಗಳಲ್ಲಿ ಪ್ರಮುಖವಾದ ಚನೈ-ಮೈಸೂರು ಶತಾಬ್ದಿ ಎಕ್ಸಪ್ರೆಸ್, ವಂದೇಭಾರತ್, ಪುದುಚೆರಿ-ದಾದರ್ ಚಾಲುಕ್ಯ ಎಕ್ಸಪ್ರೆಸ್, ಧಾನಪುರ,ತಿರುಪತಿ-ಮೈಸೂರು, ಕನ್ಯಾಕುಮಾರಿ ಎಕ್ಸ್‌ಪ್ರೆಸ್, ತಿರುಪತಿ ಎಕ್ಸ್‌ಪ್ರೆಸ್, ವಂದೇ ಭಾರತ್, ಚೆನ್ನೈ-ಬೆಂಗಳೂರು ರೈಲುಗಳು, ಹುಬ್ಬಳ್ಳಿ ಎಕ್ಸ್‌ಪ್ರೆಸ್ ಮತ್ತು ಎರ್ನಾಕುಲಂ-ಬೆಂಗಳೂರು ರೈಲುಗಳಂತಹ ಸೇವೆಗಳ ರೈಲುಗಳನ್ನು ಬಂಗಾರಪೇಟೆಯಿಂದ ಕೋಲಾರ ಶ್ರೀನಿವಾಸಪುರ ಚಿಂತಾಮಣಿ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ತಲುಪಿವೆ ಎನ್ನಲಾಗಿದ್ದು ಇಡಿ ರಾತ್ರಿ ವೇಗದ ರೈಲುಗಳ ಒಡಾಟ ಅದರ ಕೂಗು ರೈಲ್ವೆ ನೀಲ್ದಾಣದ ಸುಮುತ್ತಲಿನ ಜನರನ್ನು ಒಂದಡೆ ಭಯಬ್ರಾಂತರನ್ನಾಗಿಸಿದೆ. ಮತ್ತೊಂದಡೆ ಆಶ್ಚರ್ಯ ಚಕಿತರನ್ನಾಗಿಸಿದೆ.

Read More

ಆಂಧ್ರಪರದೇಶ ಸರ್ಕಾರ ಅಲ್ಲಿನ ಮೂರು ಜಿಲ್ಲೆಗಳಲ್ಲಿ ತೋತಾಪುರಿ ಮಾವಿನ ಕಾಯಿಗೆ ಪ್ರತಿ ಕೆಜಿಗೆ 4 ರೂ ಬೆಂಬಲ ಬೆಲೆ ಘೋಷಿಸಿದೆ.ಆಂಧ್ರದ ಕೃಷಿ ಸಚಿವ ಅಚ್ಚಂನಾಯುಡು ಗುರುವಾರ ತಡ ಸಂಜೆ ಬೆಂಬಲ ಬೆಲೆ ಘೋಷಣೆ ಮಾಡಿದ್ದು ಆಂಧ್ರದ ಮೂರು ಜಿಲ್ಲೆಗಳಾದ ಅನ್ನಮಯ್ಯ,ಚಿತ್ತೂರು ಹಾಗು ತಿರುಪತಿ ಜಿಲ್ಲೆಗಳ ಮಾವು ಬೆಳೆಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ನ್ಯೂಜ್ ಡೆಸ್ಕ್:ತೋತಾಪುರಿ ಮಾವಿನ ಬೆಲೆ ತೀವ್ರ ಕುಸಿತದಿಂದ ಸಂಕಷ್ಟಕ್ಕೆ ಈಡಾಗಿದ್ದ ಆಂಧ್ರದ ರೈತರು ಮೂಲತಃ ಚಿತ್ತೂರು ಜಿಲ್ಲೆಯವರಾದ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದರು.ಸ್ವಂತ ಜಿಲ್ಲೆಯ ಮಾವು ಬೆಳೆಗಾರರನ್ನು ಕಾಪಾಡುವಂತೆ ಪ್ರತಿ ಕೆಜಿಗೆ 12 ರೂಪಾಯಿಂದ 16 ರೂಪಾಯಿ ಬೆಂಬಲ ಬೆಲೆ ನೀಡುವಂತೆ ಅಗ್ರಹಿಸಿದ್ದರು.ಇದಕ್ಕೆ ಸ್ಪಂದಿಸಿರುವ ಆಂಧ್ರ ಸರ್ಕಾರ ತೋತಾಪುರಿ ಮಾವಿನಕಾಯಿಗೆ ಕೆಜಿಗೆ 4 ರೂ. ಬೆಂಬಲ ಬೆಲೆ ಘೋಷಿಸಿದೆ. ಸಾವಿರಾರು ಮಾವಿನ ರೈತರಿಗೆ ಅಲ್ಪ ಪಟ್ಟದ ಪರಿಹಾರ ಸಿಕ್ಕಂತಾಗಿದೆ ಮಾವಿನಕಾಯಿ ಕೊಯ್ಲು ನಡೆಯುತ್ತಿದ್ದು ಬೆಳೆಗಾರರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವಲ್ಲಿ ಸರ್ಕಾರದ ನಿರ್ಧಾರ ನಿರ್ಣಾಯಕವಾಗಲಿದೆ ಎಂದು…

Read More

ಶ್ರೀನಿವಾಸಪುರ:ವಾರಂತ್ಯದ ಒಳಗಾಗಿ ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ರೈತ ಮುಖಂಡರು ಘೋಷಿಸಿದರು.ಇಂದು ಮಂಗಳವಾರ ಕಾರ್ಮಿಕ ಸಂಘಟನೆ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದು,ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಮಾತನಾಡಿ ಒಂದು ಟನ್ ಮಾವು ಬೆಳೆಯಲು ಹತ್ತರಿಂದ ಹದಿನೈದು ಸಾವಿರ ಖರ್ಚಾಗುತ್ತಿದೆ ನಂತರದಲ್ಲಿ ಅದನ್ನು ಕೊಯ್ಲು ಮಾಡಿ ತಂದು ಮಂಡಿಗೆ ಹಾಕಿದರೆ ಖರ್ಚು, ಕಮೀಷನ್ ಎಲ್ಲಾ ಹೋಗಿ ಒಂದು ಟನ್ನಿಗೆ ಕೇವಲ ಇನ್ನೂರು ರೂಪಾಯಿಗಳು ಮಾತ್ರ ಬೆಳೆಗಾರನಿಗೆ ಉಳಿಯುತ್ತಿದೆ.ಮಾವನ್ನು ಈ ಭಾಗದಲ್ಲಿ ಜೀವನಾಡಿ ಬೆಳೆಯಾಗಿ ಸಾವಿರ ಸಾವಿರ ಕುಟುಂಬಗಳು ನಂಬಿದ್ದು ಇವತ್ತು ಅಸಾಯಕತೆಯಿಂದ ನರಳುತ್ತಿದ್ದಾರೆ ಎಂದು ಮಾವು ಬೆಳೆಗಾರರ ಸಮಸ್ಯಗಳ ಸರಮಾಲೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಬೆಳೆಗಾರನ ಕೈ ಹಿಡಿಯುವ ಅವಶ್ಯಕತೆ ಇದೆ ಇದಕ್ಕಾಗಿ ಪ್ರತಿ ಟನ್ ಮಾವಿನಕಾಯಿಗೆ ಕನಿಷ್ಠ ಹತ್ತು ಸಾವಿರ ಬೆಂಬಲ ಬೆಲೆ ನೀಡಬೇಕಿದೆ ಮಾವು ಕೊಯ್ಲು…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದ ಪಾಲಿಟೆಕ್ನಿಕ್ ಹಿಂಭಾಗದ ಒಂಟಿ ಮನೆಯಲ್ಲಿ ಈಗ್ಗೆ ಇಪ್ಪತ್ತು ದಿನಗಳ ಹಿಂದೆ ಒಂಟಿಯಾಗಿದ್ದ ಮಹಿಳೆಯನ್ನು ಬೆದರಿಸಿ ಮನೆಯಲ್ಲಿದ್ದ ಹಾಗು ಆಕೆ ಧರಿಸಿದ್ದ ಚಿನ್ನದ ಆಭರಣಗಳು, ಮೊಬೈಲ್ ಫೋನ್ ದೋಚಿಕೊಂಡು ಮನೆಯ ಮುಂದೆ ನಿಲ್ಲಿಸಿದ್ದ ಮಾರುತಿ ಓಮ್ನಿ ಕಾರು ಸಮೇತ ಖದೀಮರು ಪರಾರಿಯಾಗಿದ್ದರು.ಈ ಬಗ್ಗೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ದೂರು ದಾಖಲಿಸಿಕೊಂಡ ಶ್ರೀನಿವಾಸಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಬಂಧಿಸಿ ಕಳುವಾದ ಆಭರಣ, ಮೊಬೈಲ್ ಫೋನ್ ಹಾಗೂ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕನಿಕಾ ಸಿಕ್ರಿವಾಲ್, ಹಾಗು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರವಿಶಂಕರ್ ಮಾರ್ಗದರ್ಶನದಲ್ಲಿ ಶ್ರೀನಿವಾಸಪುರ ವೃತ್ತ ನಿರೀಕ್ಷಕ ಶಂಕರಾಚಾರ್ಯ ಕಾರ್ಯಚರಣೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳ ಸಹಕಾರ ಪಡೆದು ಆರೋಪಿಗಳ ಸುಳಿವು ಪತ್ತೆಹಚ್ಚಿ ಬಂಧಿಸಲಾಗಿದ್ದು ಬಂಧಿತರಿಂದ ಕಳುವಾಗಿದ್ದ ಚಿನ್ನಾಭರಣ,ಮೊಬೈಲ್ ಫೋನ್ ಹಾಗೂ ಸುಮಾರು ಎರಡು ಲಕ್ಷ ರೂ. ಮೌಲ್ಯದ ಓಮ್ನಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳು ಕಳವು ಮಾಡಿದ್ದ ಆಭರಣಗಳನ್ನು ಕೋಲಾರದ ಕುಂಬಾರಪೇಟೆಯಲ್ಲಿರುವ ಚಿನ್ನಾಭರಣ ವ್ಯಾಪಾರಿಗೆ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.…

Read More

ಬೆಂಗಳೂರು:ರಾಜಧಾನಿ ಬೆಂಗಳೂರು ಜನತೆಯ ದಿನನಿತ್ಯದ ಸಂಚಾರದ ಪ್ರಮುಖ ಸಾರಿಗೆ ವ್ಯವಸ್ಥೆಯಾಗಿರುವ ನಮ್ಮ ಮೆಟ್ರೋದ ಪ್ರಸ್ತಾವಿತ ಕೆಂಪು ಲೈನ್‌ (Red Line)ಹೆಬ್ಬಾಳ-ಸರ್ಜಾಪುರ ಮಾರ್ಗವಾಗಿದ್ದು ಸುಮಾರು 37 ಕಿ.ಮೀ ಉದ್ದದ ಈ ಡಬಲ್‌ ಡೆಕ್ಕರ್‌ ಕಾರಿಡಾರ್‌ ಯೋಜನೆಯು ವೆಚ್ಚ ಕಡಿತ ಮತ್ತು ಪರಿಷ್ಕರಣೆ ಹಂತದಲ್ಲಿದೆ.ಇದು ಬೆಂಗಳೂರು ನಗರದ ಉತ್ತರ ಭಾಗದ ಕೈಗಾರಿಕಾ ಪ್ರದೇಶಗಳು ಹಾಗೂ ಆಗ್ನೇಯ ಭಾಗದ ಐಟಿ (IT) ಕಾರಿಡಾರ್‌ ನಡುವಿನ ಸಂಚಾರ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲಿದೆ ಎನ್ನುತ್ತಾರೆ ತಜ್ಞರು.ಕೆಂಪು ಮಾರ್ಗ ಎಂದೂ ಕರೆಯಲ್ಪಡುವ 36.59 ಕಿ.ಮೀ. ಉದ್ದದ ಈ ಮಾರ್ಗದಲ್ಲಿ ಒಟ್ಟು 28 ನಿಲ್ದಾಣಗಳು ಬರಲಿದ್ದು ಇದರಲ್ಲಿ 11 ಸುರಂಗ ಮಾರ್ಗದ ನಿಲ್ದಾಣಗಳಾಗಿವೆ.ಈ ಪೈಕಿ 14.45 ಕಿ.ಮೀ. ಸುರಂಗ ಮಾರ್ಗ ಮತ್ತು 22.14 ಕಿ.ಮೀ. ಎತ್ತರಿಸಿದ ಮಾರ್ಗದಲ್ಲಿ ಡಬಲ್‌ ಡೆಕ್ಕರ್‌ ನಿರ್ಮಾಣ ಮಾಡಲಾಗುತ್ತದೆ.ಡಿಪಿಆರ್‌ಗೆ ಸಿದ್ಧತೆ:ಈ ಮಾರ್ಗದ ಭೂತಾಂತ್ರಿಕ ಅಧ್ಯಯನಕ್ಕಾಗಿ ಬಿಎಂಆರ್‌ಸಿಎಲ್‌ ಟೆಂಡರ್‌ ಕರೆದಿದ್ದು ಇದಕ್ಕಾಗಿ 6.86 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಗುತ್ತಿಗೆದಾರರು ಕಾರ್ಯಾದೇಶ ಪಡೆದ 150 ದಿನಗಳಲ್ಲಿಈ ಅಧ್ಯಯನ…

Read More