ಶ್ರೀನಿವಾಸಪುರ:ವಾರಂತ್ಯದ ಒಳಗಾಗಿ ಮಾವಿಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡುವುದಾಗಿ ರೈತ ಮುಖಂಡರು ಘೋಷಿಸಿದರು.
ಇಂದು ಮಂಗಳವಾರ ಕಾರ್ಮಿಕ ಸಂಘಟನೆ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ಧಿಗೋಷ್ಠಿಯಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು ಭಾಗವಹಿಸಿದ್ದು,ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಮಾತನಾಡಿ ಒಂದು ಟನ್ ಮಾವು ಬೆಳೆಯಲು ಹತ್ತರಿಂದ ಹದಿನೈದು ಸಾವಿರ ಖರ್ಚಾಗುತ್ತಿದೆ ನಂತರದಲ್ಲಿ ಅದನ್ನು ಕೊಯ್ಲು ಮಾಡಿ ತಂದು ಮಂಡಿಗೆ ಹಾಕಿದರೆ ಖರ್ಚು, ಕಮೀಷನ್ ಎಲ್ಲಾ ಹೋಗಿ ಒಂದು ಟನ್ನಿಗೆ ಕೇವಲ ಇನ್ನೂರು ರೂಪಾಯಿಗಳು ಮಾತ್ರ ಬೆಳೆಗಾರನಿಗೆ ಉಳಿಯುತ್ತಿದೆ.ಮಾವನ್ನು ಈ ಭಾಗದಲ್ಲಿ ಜೀವನಾಡಿ ಬೆಳೆಯಾಗಿ ಸಾವಿರ ಸಾವಿರ ಕುಟುಂಬಗಳು ನಂಬಿದ್ದು ಇವತ್ತು ಅಸಾಯಕತೆಯಿಂದ ನರಳುತ್ತಿದ್ದಾರೆ ಎಂದು ಮಾವು ಬೆಳೆಗಾರರ ಸಮಸ್ಯಗಳ ಸರಮಾಲೆಯನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಇಂತಹ ಸಂದರ್ಭದಲ್ಲಿ ಸರ್ಕಾರಗಳು ಬೆಳೆಗಾರನ ಕೈ ಹಿಡಿಯುವ ಅವಶ್ಯಕತೆ ಇದೆ ಇದಕ್ಕಾಗಿ ಪ್ರತಿ ಟನ್ ಮಾವಿನಕಾಯಿಗೆ ಕನಿಷ್ಠ ಹತ್ತು ಸಾವಿರ ಬೆಂಬಲ ಬೆಲೆ ನೀಡಬೇಕಿದೆ ಮಾವು ಕೊಯ್ಲು ಅರ್ದ ಭಾಗ ಮುಗಿದಿದೆ ಸಣ್ಣ-ಪುಟ್ಟ ಮಾವು ಬೆಳೆಗಾರರು ಕೊಯ್ಲು ಮಾಡಲು ಆರ್ಥಿಕ ಸಾಮರ್ಥ್ಯ ಇಲ್ಲದೆ ಮರದಲ್ಲೆ ಮಾವನ್ನು ಬಿಡುತ್ತಿದ್ದಾರೆ ಈ ಎಲ್ಲಾ ವಿದ್ಯಮಾನ್ಯಗಳ ಬಗ್ಗೆ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಇದೆ ಆದರೂ ಸರ್ಕಾರ ಈ ಕುರಿತಾಗಿ ಯಾವುದೆ ನಿರ್ಧಾರ ಕೈಗೊಂಡಿಲ್ಲ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ ಎಂದು ಆರೋಪಿಸಿದರು.
ಮಾವು ಬೆಳೆಗಾರರ ಸಂಘದ ಕಾರ್ಯದರ್ಶಿ ಪಾತಕೋಟನವೀನ್ ಕುಮಾರ್ ಮಾತನಾಡಿ ಮಾವುಬೆಳೆಗಾರರ ಸಮಸ್ಯ ಕುರಿತಂತೆ ಸರ್ಕಾರ ಈ ತಕ್ಷಣ ನಿಲವು ಪ್ರಕಟಿಸಬೇಕು ಬೆಂಬಲ ಬೆಲೆ ವಿಚಾರವಾಗಿ ಆದ್ಯತೆ ಮೆರೆಗೆ ನಿರ್ಧಾರ ತಗೆದುಕೊಳ್ಳಬೇಕು ಇಲ್ಲದಿದ್ದರೆ ಈ ತಿಂಗಳ 19 ನಂತರ ಜಿಲ್ಲೆಯ ಎಲ್ಲಾ ರೈತ ಸಂಘಟನೆಗಳು ಒಗ್ಗೂಡಿ ಹೋರಾಟ ಮಾಡುವುದಾಗಿ ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಪ್ರಾಂತ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸೂರ್ಯನಾರಯಣ್,ಪಾರೂಖ್,ರೈತ ಸಂಘದ ಈರಪ್ಪರೆಡ್ಡಿ, ಬೈರೆಡ್ಡಿ ಮುಂತಾದವರು ಇದ್ದರು.
Trending
- ತಿರುಮಲ ನಡಿಗೆ ಮಾರ್ಗದಲ್ಲಿ ಅಂಜನೇಯ ವಿಗ್ರಹ ಕದ್ದು ಸಿಕ್ಕಿಬಿದ್ದ ಖದೀಮ!
- ಪ್ರೇರಣಾತ್ಮಕ ಕಥೆ:ದಿನಗೂಲಿ ನೌಕರಿ ಮಾಡುತ್ತ PHD ಪದವಿ ಪಡೆದ ಮಹಿಳೆ!
- viral video ಬೆಟ್ಟದ ತುದಿಯಲ್ಲಿ ಬೈಕ್ ಸಾಹಸ ಕೂದಲೆಳೆ ಅಂತರದಲ್ಲಿ ಯುವಕ ಬಚಾವ್!
- ಚಿಂತಾಮಣಿಯಲ್ಲಿ ಪಾಂಡುರಂಗ ವಿಠಲ ಮಂದಿರ ಲೋಕಾರ್ಪಣೆ
- ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಣೆ!
- ಶ್ರೀನಿವಾಸಪುರ:ಅಭಿವೃದ್ಧಿ ವಂಚಿತ ಇತಿಹಾಸ ಪ್ರಸಿದ್ಧ ಯಲ್ದೂರು!
- ಖಾಸಗಿ ಫೈನಾನ್ಸ್ ಕಿರುಕುಳ,ತಾಯಿ ಮಗ ಮಗಳು ಆತ್ಮಹತ್ಯೆ!
- ಕೋಲಾರ ಜಿಲ್ಲೆಗೆ ಆಗಸ್ಟ್ 1ರಿಂದ ಹೊಸ ಜಿಲ್ಲಾಧಿಕಾರಿ ರವಿಕುಮಾರ್. M.R
Friday, July 31



