ಶ್ರೀನಿವಾಸಪುರ:ಆದಿ ಜಾಂಭವ ಸಮುದಾಯ ಭವನ ನಿರ್ಮಾಣ ಸಂಬಂಧ ಸರ್ಕಾದಿಂದ ಜಮೀನು ಮಂಜೂರು ಮಾಡಿಸುವುದಾಗಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಆದಿಜಾಂಭವ ಸಮುದಾಯದ ಮುಖಂಡರ ಬೇಡಿಕೆಯಂತೆ ಪಟ್ಟಣದ ಹೊರವಲಯದ ಕೋಲಾರ ರಸ್ತೆಯಲ್ಲಿ ಮ್ಯಾಂಗೋ ವ್ಯಾಲಿ ಶಾಲೆಯ ಬಳಿ ಸರ್ವೇ ನಂಬರ್ 187 ರಲ್ಲಿ ಸುಮಾರು ಒಂದು ಎಕರೆ 25 ಗುಂಟೆ ಜಮೀನಿಗೆ ಸಂಬಂದ ಪಟ್ಟಂತೆ ಸ್ಥಳ ಪರಶೀಲನೆ ನಡೆಸಿ ಮಾತನಾಡಿ ಈ ಸ್ಥಳವನ್ನು ಆದಿ ಜಾಂಭವ ಸಮುದಾಯ ಭವನ ನಿರ್ಮಾಣಕ್ಕಾಗಿ ಮಂಜೂರು ಮಾಡಿಸಲು ಸರ್ಕಾರದ ಹಂತದಲ್ಲಿ ಮಾತನಾಡುವುದಾಗಿ ಹೇಳಿದರು.ನಿರ್ಮಾಣ ಸಂಬಂಧ ಶಾಸಕರ ವಿಧಿಯಿಂದ 10 ಲಕ್ಷ ರೂಪಾಯಿ ಸಹಾಯ ನೀಡುವುದಾಗಿ ಘೋಷಿಸಿದರು.ಇದೇ ಸಂದರ್ಭದಲ್ಲಿ ಸಂಸದ ಮಲ್ಲೇಶ್ ಬಾಬು ತಮ್ಮ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 10 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿದರು.ಕಟ್ಟಡ ಕಾರ್ಮಿಕರಿಗೆ ಸಮುದಾಯ ಭವನಕಟ್ಟಡ ಕಾರ್ಮಿಕರಿಗೂ ಸಮುದಾಯ ಭವನ ನಿರ್ಮಾಣ ಮಾಡುವ ಸಂಬಂದ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟಿದ್ದು 3 ಕೋಟಿ ರೂಪಾಯಿಗಳು ಮಂಜೂರಾತಿ ಹಂತದಲ್ಲಿ ಇದೆ ಕಾರ್ಮಿಕ ಸಚಿವರ ಜೊತೆ…
Author: Srinivas_Murthy
ನ್ಯೂಜ್ ಡೆಸ್ಕ್:ದಾಳಿಕೊರ ಮತಾಂಧ ಮೊಹ್ಮದ್ ಘಜ್ನಿಯಿಂದ ಔರಂಗಜೇಬನವರೆಗೆ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದವರೆಲ್ಲಾ ಮಣ್ಣು ಮುಕ್ಕಿ ಸಮಾಧಿಯಾದರು.ಸೋಮನಾಥನ ಪವಿತ್ರ ವಿಗ್ರಹವನ್ನು ನಾಶಪಡಿಸಲಾಯಿತು.ಆದರೆ ಭಗವಾನ್ ಸೋಮನಾಥ ಅದೆಲ್ಲವನ್ನೂ ನೋಡುತ್ತಾ ಅಲ್ಲೇ ಅಚಲವಾಗಿ ನಿಂತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೊಹ್ಮಮದ್ ಘಜ್ನಿ 1026ರಲ್ಲಿ ಮೊದಲ ಬಾರಿಗೆ ಸೋಮನಾಥ ದೇವಾಲಯದ ಮೇಲೆ ದಾಳಿ ನಡೆಸಿ, ಚಿನ್ನಾಭರಣಗಳನ್ನೆಲ್ಲಾ ದೋಚಿದ್ದ ಈ ಘಟನೆ ನಡೆದು ಸಾವಿರ ವರ್ಷಗಳೇ ಕಳದಿದೆ ಸೋಮನಾಥದ ಇತಿಹಾಸವನ್ನು ಮರೆಮಾಡಲಾಗಿದೆ, ಧಾರ್ಮಿಕ ಮತಾಂಧತೆಯನ್ನು ಸರಳ ದರೋಡೆ ಎಂದು ಚಿತ್ರಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.1000 ವರ್ಷಗಳ ಹಿಂದೆ ಭಾರತದ ಮೇಲೆ ದಂಡೆತ್ತಿ ಬಂದವರು ತಾವು ಗೆದ್ದಿದ್ದೇವೆ ಎಂದು ಭಾವಿಸುತ್ತಿದ್ದರು, ಆದರೆ ಇಂದಿಗೂ ಸೋಮನಾಥ ದೇವಾಲಯದಲ್ಲಿ ಹಾರುತ್ತಿರುವ ಧ್ವಜವು ಭಾರತದ ಶಕ್ತಿ ಏನೆಂದು ಹೇಳುತ್ತಿದೆ ಎಂದು ಹೇಳಿದರು.ಶಿವನ ಮೊದಲ ಜ್ಯೋತಿರ್ಲಿಂಗವಾದ ಸೋಮನಾಥ ದೇವಾಲಯದ ನೆಲದಲ್ಲಿ ಪ್ರಧಾನಿ ಮೋದಿ ಆಧ್ಯಾತ್ಮಿಕ ಶಕ್ತಿಯನ್ನು ಅನುಭವಿಸಿದರಲ್ಲದೆ, ಸ್ವಾಭಿಮಾನ, ಶೌರ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಸ್ಪಷ್ಟ ಸಂದೇಶವನ್ನು ಸಹ…
ಸಿನಿ ಡೆಸ್ಕ್:ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್: A Fairy Tale For Grown-Ups’ ಚಿತ್ರವು ಘೋಷಣೆಯಾದ ದಿನದಿಂದಲೂ ಭಾರಿ ಸುದ್ದಿಯಲ್ಲಿದೆ. ಇದೀಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ.ಕೆಜಿಎಫ್ ಸರಣಿ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟ ಯಶ್, 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂಭ್ರಮದಲ್ಲಿ ಅವರ ಹೊಸ ಸಿನಿಮಾ ‘ಟಾಕ್ಸಿಕ್’ ಚಿತ್ರದ ಟೀಸರ್ (Teaser) ಬಿಡುಗಡೆಯಾಗಿದೆ. ಇದರಲ್ಲಿ ಯಶ್ ‘ರಾಯ’ ಎಂಬ ಹೆಸರಿನ ಗ್ಯಾಂಗ್ಸ್ಟರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಇದು ಅವರ ಹಿಂದಿನ ಚಿತ್ರಗಳಿಗಿಂತಲೂ ಹೆಚ್ಚು ರಗಡ್ ಮತ್ತು Dark ಶೇಡ್ನಿಂದ ಕೂಡಿದೆ.ಟೀಸರ್ನಲ್ಲಿ ಯಶ್ ಅವರ ಎಂಟ್ರಿ ಅತ್ಯಂತ ಮಾಸ್ ಆಗಿದ್ದು, ದೊಡ್ಡ ಹ್ಯಾಟ್ ಧರಿಸಿ, ಬಾಯಲ್ಲಿ ಸಿಗಾರ್ ಸೇದುತ್ತಾ ಶತ್ರುಗಳನ್ನು ಧೂಳೀಪಟ ಮಾಡುವ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ರಾಯ’ ಹೆಸರಿನ ಈ ಪಾತ್ರವು ಭೂಗತ ಲೋಕದ ಹೊಸ ಆಯಾಮವನ್ನು ತೆರೆದಿಡುವ ಮುನ್ಸೂಚನೆ ನೀಡಿದೆ ಚಿತ್ರದ ಹಿನ್ನೆಲೆ ಸಂಗೀತ ಮತ್ತು ಮೇಕಿಂಗ್ ಅಂತರಾಷ್ಟ್ರೀಯ ಗುಣಮಟ್ಟದಲ್ಲಿದ್ದು, ಯಶ್ ಅವರ ವಿಭಿನ್ನ ಮ್ಯಾನರಿಸಂ ಅಭಿಮಾನಿಗಳಿಗೆ ಕೂತುಹಲ…
ನ್ಯೂಜ್ ಡೆಸ್ಕ್:ಬೆಂಗಳೂರಿನಲ್ಲಿ ಭ್ರಷ್ಟಾಚಾರದ ವಿರುದ್ಧ ಸಿಬಿಐ (CBI) ಕಾರ್ಯಾಚರಣೆ ನಡೆಸಿ, ಭಾರಿ ಪ್ರಮಾಣದ ನಗದು ಹಾಗೂ ವಿದೇಶಿ ಕರೆನ್ಸಿಗಳನ್ನು ವಶಪಡಿಸಿಕೊಂಡಿದೆ. ಕೇಂದ್ರ ವಿದ್ಯುತ್ ಸಂಶೋಧನಾ ಸಂಸ್ಥೆಯ (CPRI) ಜಂಟಿ ನಿರ್ದೇಶಕ ರಾಜಾರಾಮ್ ಮೋಹನರಾವ್ ಚೆನ್ನು ಹಾಗೂ ಸುಧೀರ್ ಗ್ರೂಪ್ ಆಫ್ ಕಂಪನೀಸ್ನ ನಿರ್ದೇಶಕ ಅತುಲ್ ಖನ್ನಾ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿದೆ.ಕಾರ್ಯಾಚರಣೆ ನಡೆದಿದ್ದು ಹೇಗೆ?ಸುಧೀರ್ ಗ್ರೂಪ್ ಆಫ್ ಕಂಪನೀಸ್ ತಯಾರಿಸುವ ವಿದ್ಯುತ್ ಉಪಕರಣಗಳಿಗೆ ಅನುಕೂಲಕರವಾದ ಪರೀಕ್ಷಾ ವರದಿಗಳನ್ನು ನೀಡಲು ಜಂಟಿ ನಿರ್ದೇಶಕರು ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮಾಹಿತಿ ಸಿಬಿಐಗೆ ಲಭ್ಯವಾಗಿತ್ತು. ಗುರುವಾರವಷ್ಟೇ ಈ ಸಂಬಂಧ ಎಫ್ಐಆರ್ ದಾಖಲಿಸಿಕೊಂಡಿದ್ದ ಅಧಿಕಾರಿಗಳು ಶುಕ್ರವಾರ ಸಂಜೆ ಕಾರ್ಯಾಚರಣೆ ನಡೆಸಿದರು. 9.5 ಲಕ್ಷ ರೂಪಾಯಿ ಲಂಚದ ಹಣವನ್ನು ಪಡೆಯುತ್ತಿದ್ದ ಸಂದರ್ಭದಲ್ಲಿ ಅಧಿಕಾರಿಗಳನ್ನು red-handed ಆಗಿ ಹಿಡಿಯಲಾಗಿದೆ.ಮನೆಯಲ್ಲಿ ಇತ್ತು ರಾಶಿ ರಾಶಿ ನಗದು!ಬಂಧನದ ನಂತರ ಆರೋಪಿ ರಾಜಾರಾಮ್ ಮೋಹನರಾವ್ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳಿಗೆ ಅಚ್ಚರಿಯ ಕಾದಿತ್ತು. ಶೋಧ ಕಾರ್ಯದ ವೇಳೆ ಸುಮಾರು 3.59 ಕೋಟಿ ರೂಪಾಯಿ ನಗದು…
ಶ್ರೀನಿವಾಸಪುರ:ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಅವರೆಕಾಯಿ ಮಂಡಿ ವ್ಯಾಪಾರ ನಡೆತ್ತಿರುವುದರಿಂದ ರಸ್ತೆಯಲ್ಲಿ ಸಂಚಾರ ವ್ಯವಸ್ಥೆಗೆ ತೊಂದರೆಯಾಗಿದ್ದು ಶಾಲ ವಾಹನಗಳು ಅಂಬುಲೆನ್ಸ್ ಓಡಾಡಲು ಸಮಸ್ಯೆಯಾಗಿದ್ದು ಇದರಿಂದ ಅವರೆಕಾಯಿ ಮಂಡಿ ವಹಿವಾಟನ್ನು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸುವಂತೆ ಅಗ್ರಹಿಸಿ ಕನ್ನಡ ಹೋರಾಟಗಾರರು ಮತ್ತು ರೈತ ಮುಖಂಡರು ತರಕಾರಿ ಅಂಗಡಿಗಳ ವೃತ್ತದಲ್ಲಿ ಇಂದು ಗುರುವಾರ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಪುರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಪ್ರಕಾಶ್ ಹಾಗು ಪುರಸಭೆ ಮಾಜಿ ಸದಸ್ಯ ಮುತ್ತಕಪಲ್ಲಿ ಸರ್ದಾರ ನೇತೃತ್ವದಲ್ಲಿ ವ್ಯಾಪಾರಸ್ಥರ ಗುಂಪು ಪ್ರತಿಭಟನಾನಿರತರೊಂದಿಗೆ ಮಾತುಕತೆ ನಡೆಸಲು ಬಂದು ಮಾತನಾಡಿ ನಿಮ್ಮ ಪ್ರತಿಭಟನೆಯನ್ನು ನವೆಂಬರ್ ತಿಂಗಳಲ್ಲೆ ಮಾಡುವ ಮೂಲಕ ವಿರೋಧ ಮಾಡಿದ್ದರೆ ನಾವು ಇಲ್ಲಿ ವ್ಯವಹಾರ ಮಾಡುತ್ತಿರಲಿಲ್ಲ ಎಂದು ಸಮಜಾಯಿಸಿ ಕೊಟ್ಟರು ಇದಕ್ಕೆ ರೈತ ಹೋರಾಟಗಾರರು ಒಪ್ಪದೆ ನೀವು ಯಾವ ಆಧಾರದಲ್ಲಿ ಜನ ವಸತಿ ಪ್ರದೇಶವಾದ ಎಂ.ಜಿ.ರಸ್ತೆಯಲ್ಲಿ ವಹಿವಾಟು ನಡೆಸುತ್ತಿರ ಈ ಬಗ್ಗೆ ನಿಮಗೆ ಇದರ ಕುರಿತಾದ ಮಾಹಿತಿ ಇರಬೇಕು ನಿಮಗೆ ಅನುಮತಿ ನೀಡಿರುವ ಅಧಿಕಾರಿಗಳಿಗೆ ಅರಿವು ಇರಬೇಕು ಎಂದು ಪ್ರತಿಭಟನೆ…
ನ್ಯೂಜ್ ಡೆಸ್ಕ್:ಬಳ್ಳಾರಿ ಈ ಹಿಂದೆ ಗಣಿ ದೂಳಿನಿಂದಲೇ ಸದಾ ಸುದ್ದಿಯಲ್ಲಿತ್ತು ಈಗ ಬಳ್ಳಾರಿ ರಾಜಕೀಯ ಪಾರುಪತ್ಯಕ್ಕಾಗಿ ರಕ್ತ-ಸಿಕ್ತ ಕದನ ಸಾಕ್ಷಿಯಾಗಿದೆ.ಹೊಸ ವರ್ಷದ ದಿನವೇ ಪಿಸ್ತೂಲ್ ಸದ್ದಿನ ಶಬ್ದಕ್ಕೆ ಗಣಿ ನಾಡು ಬಳ್ಳಾರಿ ನಡುಗಿ ಹೋಗಿದೆ. ಬಳ್ಳಾರಿ ನಗರದಲ್ಲಿ ಇರುವ ಗಂಗಾವತಿ ಶಾಸಕ ಹಾಗು ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಮನೆ ಬಳಿ ವಾಲ್ಮೀಕಿ ಪುತ್ಥಳಿ ಅನಾವರಣ ಸಂಬಂದಿತ ಕಾರ್ಯಕ್ರಮದ ಬ್ಯಾನರ್ ಕಟ್ಟಿದ ವಿಚಾರವನ್ನು ಮುಂದಿಟ್ಟುಕೊಂಡು ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಹಾಗೂ ಬಳ್ಳಾರಿ ನಗರದ ಶಾಸಕ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಢಂ ಢಂ ಎಂದು ಗಾಳಿಯಲ್ಲಿ ಸುಮಾರು ಬಾರಿ ಫೈರಿಂಗ್ ಮಾಡಲಾಗಿದ್ದು ಕಲ್ಲು ತೂರಾಟ, ಖಾರದ ಪುಡಿ ಎರೆಚಾಟ, ದೊಣ್ಣೆಗಳಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ ಎನ್ನುವುದು ಜಗಜಾಹಿರವಾಗಿದೆ.ಜನವರಿ 01 ರಂದು ರಾತ್ರಿ ಬಳ್ಳಾರಿಯ ಪರಿಸ್ಥಿತಿ ಅದೆಷ್ಟರ ಮಟ್ಟಿಗೆ ಉದ್ವಿಗ್ನಗೊಂಡಿತ್ತು ಅಂದರೆ ಅಪ್ಪಟ ತೆಲಗಿನ ರಾಯಮಸೀಮೆ ಫ್ಯಾಕ್ಷನ್ ಸಿನಿಮಾಗಳ ಶೈಲಿಯಲ್ಲಿ ಫೈಟಿಂಗ್ ಮತ್ತು ಫೈರಿಂಗ್ ಆಗಿದ್ದು ಗಲಭೆಯಲ್ಲಿ ಅಮಾಯಕನೊರ್ವ ಮೃತಪಟ್ಟಿದ್ದಾನೆ,…
ಶ್ರೀನಿವಾಸಪುರ:ತಾಲೂಕಿನ ರೈತರು ತಮ್ಮ ಪೂರ್ವಜನರಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಜಮೀನಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯವಾಗಿ ತಮ್ಮ ವಶಕ್ಕೆ ತಗೆದುಕೊಂಡು ದಾಖಲೆಗಳನ್ನು ತೋರಿಸಿ ಇದು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಸಿಮೆಂಟ್ ಪಿಲ್ಲರ್ ನಿರ್ಮಿಸಿ ಗಡಿ ಗುರುತಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಪ್ರಾಂತ್ಯ ರೈತ ಸಂಘ ಕಾರ್ಮಿಕ ಹಿತ ರಕ್ಷಣಾ ಸಮಿತಿ ಮುಖಂಡರು ಹಾಗು ಮಾವು ಬೆಳೆಗಾರರ ಸಂಘದ ವತಿಯಿಂದ ಅರಣ್ಯ ಇಲಾಖೆ ಕಚೇರಿ ಮುಂದೆ ಧರಣಿ ಸತ್ಯಗ್ರಾಹ ನಡೆಸಿದರು. ರೈತರಿಗೆ ಯಾವುದೇ ಮುನ್ಸೂಚನೆ ನೀಡದೆ ಸಂಬಂಧಪಟ್ಟ ದಾಖಲೆಗಳನ್ನು ನೀಡದೆ ಏಕಾ ಏಕಿ ರೈತರ ಸಾಗುವಳಿ ಜಮೀನುಗಳಿಗೆ ನುಗ್ಗುವ ಅರಣ್ಯ ಇಲಾಖೆಯವರು ಉದ್ದಟತನದಿಂದ ವರ್ತಿಸುತ್ತಾರೆ ಎಂದು ರೈತರು ಆರೋಪಿಸಿದರು.ಇದನ್ನು ಪ್ರತಿಭಟಿಸಿದ ರೈತರ ವಿರುದ್ದ ಅರಣ್ಯ ಇಲಾಖೆ ಪೋಲಿಸರಿಗೆ ನೀಡಿರುವ ದೂರನ್ನು ವಾಪಸ್ಸು ಪಡೆಯಬೇಕು ಎಂದು ಅಗ್ರಹಿಸಿದರು.ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಯಾವುದೇ ರೈತರ ಭೂಮಿಗಳಲ್ಲಿ ಅರಣ್ಯ ಅಧಿಕಾರಿಗಳು ಅತಿಕ್ರಮ ಪ್ರವೇಶ ಮಾಡಬಾರದು ಅವರ ಬೆಳೆಗಳನ್ನು…
ಶ್ರೀನಿವಾಸಪುರ:ತಾಲೂಕಿನ ಕೋಟೆ ಕಲ್ಲೂರು ಗ್ರಾಮದಲ್ಲಿನ ಪುರಾತನ ಶ್ರೀ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ಮಂಗಳವಾರದ ವೈಕುಂಠ ಏಕಾದಶಿ ಪೂಜೆ ವಿಚಾರವಾಗಿ ಗ್ರಾಮದ ಎರಡು ಗುಂಪುಗಳ ನಡುವೆ ಪ್ರತಿಷ್ಠೆ ವಿಷಯವಾಗಿ ಸಂಘರ್ಷ ಏರ್ಪಟ್ಟಿದ್ದು, ಪರಿಸ್ಥಿತಿ ತಿಳಿಗೊಳಿಸಲು ತಾಲ್ಲೂಕು ಆಡಳಿತ ಮಧ್ಯಪ್ರವೇಶ ಮಾಡಿ ಡಿಸೆಂಬರ್ 30ರಂದು ನಡೆಯಲಿರುವ ವೈಕುಂಠ ಏಕಾದಶಿ ವಿಶೇಷ ಪೂಜೆ ಕಾರ್ಯಕ್ರಮ ನೆರವೇರಿಸಲು ತಾ.ಆಡಳಿತ ಸಿದ್ದತೆ ಮಾಡಿಕೊಂಡಿದೆ.ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿಚನ್ನಕೇಶವ ದೇವಾಲಯದಲ್ಲಿ ಪೂಜೆಗಾಗಿ ಏರ್ಪಟ್ಟಿರುವ ವಿಷಯ ಹಲವಾರು ದಿನಗಳಿಂದ ನಡೆಯುತ್ತಿದ್ದು ನಾಳಿನ ವೈಕುಂಠ ಏಕಾದಶಿ ಪೂಜೆ ಹಿನ್ನಲೆಯಲ್ಲಿ ಮತ್ತೆ ಮುನ್ನಲೆಗೆ ಬಂದಿದ್ದು ಕಾರ್ಯಕ್ರಮದ ಅನ್ವಯ ಪೈಪೋಟಿಗೆ ಬಿದ್ದವರಂತೆ ಪ್ರತ್ಯೇಕ ಪೂಜೆ ನಡೆಸಲು ಮುಂದಾಗಿದ್ದ ಗುಂಪುಗಳು ಪ್ರತ್ಯೇಕ ಅನ್ನ ಸಂತರ್ಪಣೆ ಮಾಡಲು ಮುಂದಾಗಿದ್ದರು ಇದು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾದ ಹಿನ್ನಲೆಯಲ್ಲಿ ತಾಲೂಕು ತಹಶೀಲ್ದಾರ್ ಸುಧೀಂದ್ರ ಪೊಲೀಸ್ ಸಹಕಾರದೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ದೇವಾಲಯದ ಬಳಿ ಪರಿಸ್ಥಿತಿ ಪರಿಶೀಲನೆ ನಡೆಸಿ ಅನ್ನ ಸಂತರ್ಪಣೆ ಮಾಡಲು ಹಾಕಲಾಗಿರುವ ಪ್ರತ್ಯಕ ಪೆಂಡಾಲ್ಗಳನ್ನು ತಕ್ಷಣ ತೆರವುಗೊಳಿಸುವಂತೆ ಸೂಚಿಸಿದ್ದಲ್ಲದೆ ಯಾವುದೇ…
ಹೋಸಕೋಟೆ ಮಾರ್ಗವಾಗಿ ಕೋಲಾರಕ್ಕೆ ಹಾಗು ಕೆಂಪೇಗೌಡ ವಿಮಾನ ನಿಲ್ದಾಣದಿಂದ ಚಿಕ್ಕಬಳ್ಳಾಪುರಕ್ಕೆ ಮೆಟ್ರೋ ರೈಲು ವ್ಯವಸ್ಥೆಗೆ ವಿಸ್ತೃತ ಯೋಜನಾ ವರದಿ ತಯಾರಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಮತ್ತು ಉಪ ಮುಖ್ಯಮಂತ್ರಿಡಿ.ಕೆ ಶಿವಕುಮಾರ್ ಡಿ.ಕೆ. ಶಿವಕುಮಾರ್ ಸೂಚನೆ ನೀಡಿರುವುದು ಕೋಲಾರ-ಚಿಕ್ಕಬಳ್ಳಾಪುರ ಜನರ ಬಹುನಿರೀಕ್ಷಿತ ಕನಸು ನನಸಾಗುವ ದಿನಗಳು ಬರಲಿವೆ. ನ್ಯೂಜ್ ಡೆಸ್ಕ್:ಬೆಂಗಳೂರಿನ ಮೆಟ್ರೋ ರೈಲು ಮಾರ್ಗ ಕೋಲಾರ ಹಾಗು ಚಿಕ್ಕಬಳ್ಳಾಪುರದವರಿಗೂ ವಿಸ್ತರಣೆ ಆಗಲಿದಿಯಂತೆ.ಈ ದಿಶೆಯಲ್ಲಿ ಸರ್ಕಾರ ಘೋಷಣೆ ಮಾಡಿದೆ.ಮೆಟ್ರೋ ರೈಲು ಯೋಜನೆಯಿಂದ ಮಹಾನಗರದ ಲಕ್ಷಾಂತರ ಮಂದಿ ಜನತೆಗೆ ಸಂಚಾರ ಮುಖ್ತ ವ್ಯವಸ್ಥೆ ಒಡಾಡಲು ನಿಡಿದಂತಾಗುತ್ತದೆ. ಉದ್ಯೋಗ, ಶೈಕ್ಷಣಿಕ, ಕೃಷಿ ಕಾರ್ಮಿಕ ವರ್ಗ ರೈತ ಮತ್ತು ಸಾಮಾನ್ಯ ಪ್ರಯಾಣಿಕನಿಗೂ ಮೆಟ್ರೋ ರೈಲು ಬಹುವಿಧವಾಗಿ ಉಪಯೋವಾಗುತ್ತದೆ.ಬೆಂಗಳೂರು ನಗರದಲ್ಲಿ ಓಡಾಡುತ್ತಿರುವ ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗದ ಮೆಟ್ರೋ ಮಾರ್ಗವೀಗ ಬೆಂಗಳೂರಿನ ಪೂರ್ವ- ಪಶ್ಚಿಮ ಮತ್ತು ಉತ್ತರ – ದಕ್ಷಿಣದ ದಿಕ್ಕಿನಲ್ಲಿ ಸುಮಾರು ಮೂವತ್ತು ಕಿಲೋ ಮೀಟರ್ ಉದ್ದನೆಯ ಮಾರ್ಗ ಹೊಂದಿದ್ದು ಇದು ಮತ್ತಷ್ಟು ವಿಸ್ತರಣೆಯಾಗುವತ್ತ ಸಾಗಿದೆ. ಬೆಂಗಳೂರು…
ನ್ಯೂಜ್ ಡೆಸ್ಕ್: ಭಾರತೀಯ ಜನತಾಪಕ್ಷದ ಎಂಎಲ್ಸಿ ಕೇಶವ ಪ್ರಸಾದ್ ಅವರ ವಾಹನವನ್ನು ಟೋಲ್ ಸಿಬ್ಬಂದಿ ತಡೆದು, ಅವರ ಪಾಸ್ ಮತ್ತು ಮೊಬೈಲ್ ಕಿತ್ತುಕೊಂಡು ಅನುಚಿತವಾಗಿ ವರ್ತಿಸಿ ದರ್ಪ ಮೆರೆದಿರುವ ಘಟನೆ ನಡೆದಿದ್ದು ಸ್ಥಳೀಯ ಪೋಲಿಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಗೊಂದಲ ಸೃಷ್ಟಿಸಿದ ಟೋಲ್ ಸಿಬ್ಬಂದಿ ವರ್ತನೆಗೆ ಎಂಎಲ್ಸಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಭಾನುವಾರ ಕರ್ನಾಟಕದ ವಿಜಯಪುರ ನಗರದ ಹೊರವಲಯದ ಬೆಂಗಳೂರು-ಸೋಲಾಪುರ ಹೆದ್ದಾರಿಯ ಟೋಲ್ ಗೇಟ್ನಲ್ಲಿ ನಡೆದಿದೆ ಎನ್ನಲಾಗಿದೆ.ಟೋಲ್ ಸಿಬ್ಬಂದಿ ಎಂಎಲ್ಸಿ ಅವರ ಪಾಸ್ ಮತ್ತು ಮೊಬೈಲ್ ಅನ್ನು ದರ್ಪದಿಂದ ಕಸಿದುಕೊಂಡು,ನೀವು ಎಂಎಲ್ಸಿ ಎಂದು ನಾವು ಹೇಗೆ ನಂಬಬೇಕು?ಎಂದು ಪ್ರಶ್ನಿಸಿ ಅನುಚಿತವಾಗಿ ವರ್ತಿಸಿದ್ದು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ಟೋಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಂಎಲ್ಸಿ ಕೇಶವ ಪ್ರಸಾದ್ ಅವರು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿಗೆ ಫೋನ್ ಮೂಲಕ ಮಾಹಿತಿ ನೀಡಿದ ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಟೋಲ್ ಸ್ಥಳೀಯ ಮುಖ್ಯಸ್ಥರು…


