ನ್ಯೂಜ್ ಡೆಸ್ಕ್:ಭಾರತೀಯ ರೈಲ್ವೆ ಇತಿಹಾಸದಲ್ಲಿ ಇದು ಅಪರೂಪದ ಘಟನೆ, ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನಲ್ಲಿ ಯಶಸ್ವಿಯಾಗಿ ಜೀವಂತ ಹೃದಯ ಸಾಗಾಟ ಮಾಡಲಾಗಿದೆ.ಇತಿಹಾಸ ಸೃಷ್ಟಿಸಿದ ಕಥೆ. ಇದಕ್ಕೆ ಗುಜರಾತ್ ಸಿಎಂ ಸಹ ಸಂತಸ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ
ಭಾರತೀಯ ರೈಲ್ವೆ ದೇಶದಲ್ಲೇ ಮೊದಲ ಬಾರಿಗೆ ರೈಲಿನ ಮೂಲಕ ಜೀವಂತ ಹೃದಯವನ್ನು ಸಾಗಿಸುವ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಸೂರತ್ನಿಂದ ಅಹಮದಾಬಾದ್ಗೆ ಹೃದಯವನ್ನು ಮುಂಬೈ ಸೆಂಟ್ರಲ್-ಗಾಂಧಿನಗರ ಕ್ಯಾಪಿಟಲ್ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮೂಲಕ ಕೊಂಡೊಯ್ಯಲಾಯಿತು. ಇದನ್ನು ಅಹಮದಾಬದ್ ಯು.ಎನ್. ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್ನಲ್ಲಿ ಕಸಿ ಮಾಡಲು ಕಳುಹಿಸಲಾಗಿತ್ತು. 20901 ಸಂಖ್ಯೆಯ ರೈಲಿನ ಮೂಲಕ ಕಳುಹಿಸಲಾದ ಈ ಹೃದಯ ನಿಗದಿತ ಸಮಯದೊಳಗೆ ಅಹಮದಾಬಾದ್ಗೆ ತಲುಪಿತು. ಈ ಸಂಪೂರ್ಣ ಕಾರ್ಯಾಚರಣೆಗಾಗಿ ಭಾರತೀಯ ರೈಲ್ವೆ, ಗುಜರಾತ್ ಪೊಲೀಸ್, ರೈಲ್ವೆ ಭದ್ರತಾ ಪಡೆ (RPF) ಮತ್ತು ವೈದ್ಯಕೀಯ ತಂಡಗಳ ನಡುವೆ ಸಮನ್ವಯ ಸಾಧಿಸಿ ಹೃದಯವನ್ನು ಯಾವುದೇ ವಿಳಂಬವಿಲ್ಲದೆ ತಲುಪಿಸಲಾಯಿತು.
ಅಹಮದಾಬಾದ್ ರೈಲ್ವೆ ನಿಲ್ದಾಣಕ್ಕೆ ರೈಲು ತಲುಪಿದ ನಂತರ RPF ಮತ್ತು ಗುಜರಾತ್ ಪೊಲೀಸ್ ಪ್ಲಾಟ್ಫಾರ್ಮ್ ಸಂಖ್ಯೆ 1 ರಿಂದ ಯು.ಎನ್. ಮೆಹ್ತಾ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಅಂಡ್ ರಿಸರ್ಚ್ ಸೆಂಟರ್ವರೆಗೆ ಗ್ರೀನ್ ಕಾರಿಡಾರ್ ನಿರ್ಮಿಸಿದ್ದರು. ಇದರಿಂದ ನಿಗದಿತ ಸಮಯದಲ್ಲಿ ಕಸಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಾಧ್ಯವಾಯಿತು.
ಸಮಯದ ದೃಷ್ಟಿಯಿಂದ ಸಮಯ ಅತ್ಯಂತ ನಿರ್ಣಾಯಕವಾಗಿತ್ತ್ತು ಅದಕ್ಕಾಗಿ 3 ಗಂಟೆ 45 ನಿಮಿಷಗಳಲ್ಲಿ ಹೃದಯ ತಲುಪಿದೆ. ಈ ಪ್ರಯಾಣಕ್ಕೆ ಸುಮಾರು 217 ನಿಮಿಷಗಳು (3 ಗಂಟೆ 45 ನಿಮಿಷಗಳು) ಬೇಕಾಯಿತು. ಇದರಿಂದಾಗಿ ಹೃದಯವನ್ನು ಯಶಸ್ವಿ ಕಸಿ ಮಾಡಲು ಅಗತ್ಯವಿರುವ ನಿಗದಿತ ಸಮಯದೊಳಗೆ ತಲುಪಿಸಲು ಸಾಧ್ಯವಾಯಿತು. ಈ ಹೃದಯದ ಜೊತೆ ಎರಡು ಮೂತ್ರಪಿಂಡಗಳು (ಕಿಡ್ನಿ) ಮತ್ತು ಒಂದು ಯಕೃತ್ತನ್ನು (ಲಿವರ್) ಸೂರತ್ ಜಿಲ್ಲೆಯ ಕಿಮ್ನಲ್ಲಿ ವಾಸಿಸುತ್ತಿದ್ದ ಒಡಿಶಾ ಮೂಲದ 36 ವರ್ಷದ ಜವಳಿ ಕಾರ್ಮಿಕರಿಂದ (ಟೆಕ್ಸ್ಟೈಲ್ ವರ್ಕರ್) ಸೂರತ್ನ ನ್ಯೂ ಸಿವಿಲ್ ಆಸ್ಪತ್ರೆಯಲ್ಲಿ (NCH) ಹೊರತೆಗೆಯಲಾಗಿತ್ತು. ಈ ಅಂಗಾಂಗ ದಾನದಿಂದ ನಾಲ್ಕು ರೋಗಿಗಳಿಗೆ ಹೊಸ ಜೀವನ ಸಿಕ್ಕಂತಾಗಿದೆ ಮತ್ತು ಇದು NCH ಸೂರತ್ ನಡೆಸಿದ 96ನೇ ಅಂಗಾಂಗ ದಾನವಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿಸಿದ್ದಾರೆ.
Trending
- history created:ವಂದೇ ಭಾರತ್ ರೈಲಿನಲ್ಲಿ ಜೀವಂತ ಹೃದಯ ರವಾನೆ!
- ತಿರುಮಲ ನಡಿಗೆ ಮಾರ್ಗದಲ್ಲಿ ಅಂಜನೇಯ ವಿಗ್ರಹ ಕದ್ದು ಸಿಕ್ಕಿಬಿದ್ದ ಖದೀಮ!
- ಪ್ರೇರಣಾತ್ಮಕ ಕಥೆ:ದಿನಗೂಲಿ ನೌಕರಿ ಮಾಡುತ್ತ PHD ಪದವಿ ಪಡೆದ ಮಹಿಳೆ!
- viral video ಬೆಟ್ಟದ ತುದಿಯಲ್ಲಿ ಬೈಕ್ ಸಾಹಸ ಕೂದಲೆಳೆ ಅಂತರದಲ್ಲಿ ಯುವಕ ಬಚಾವ್!
- ಚಿಂತಾಮಣಿಯಲ್ಲಿ ಪಾಂಡುರಂಗ ವಿಠಲ ಮಂದಿರ ಲೋಕಾರ್ಪಣೆ
- ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಘೋಷಣೆ!
- ಶ್ರೀನಿವಾಸಪುರ:ಅಭಿವೃದ್ಧಿ ವಂಚಿತ ಇತಿಹಾಸ ಪ್ರಸಿದ್ಧ ಯಲ್ದೂರು!
- ಖಾಸಗಿ ಫೈನಾನ್ಸ್ ಕಿರುಕುಳ,ತಾಯಿ ಮಗ ಮಗಳು ಆತ್ಮಹತ್ಯೆ!
Saturday, August 1



