ಶ್ರೀನಿವಾಸಪುರ:ಸೆಲ್ಫಿ ಹುಚ್ಚಾಟಕ್ಕೆ ಬಿದ್ದ ಯುವಕನೊರ್ವ ರೈಲ್ವೆ ವಿದ್ಯತ್ ತಗಲಿ ಸಾವನ್ನಪ್ಪಿರುವ ಮನ ಕಲುಕುವ ಘಟನೆ ಶ್ರೀನಿವಾಸಪುರದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವಕನನ್ನು ಪದವಿ ಪೂರ್ವ ವ್ಯಾಸಂಗ ಮಾಡುತ್ತಿದ್ದ ಶ್ರೀನಿವಾಸಪುರದ ನಿವಾಸಿ ಕಾರ್ತಿಕ್ ಎನ್ನಲಾಗಿದ್ದು, ಯುವಕ ತನ್ನ ಇಬ್ಬರು ಸ್ನೇಹಿತರೊಂದಿಗೆ ರೈಲು ನಿಲ್ದಾಣಕ್ಕೆ ಹೋಗಿದ್ದಾನೆ,ಅಲ್ಲಿ ನಿಲ್ಲಿಸಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಮೊಬೈಲ್ ಫೋನ್ನಿಂದ ಸೆಲ್ಫಿ ತೆಗೆದುಕೊಳ್ಳುವ ಸಾಹಸ ಮಾಡುವ ವೇಳೆ ಅವನ ಕೈ ಹೈ ಟೆನ್ಷನ್ ವಿದ್ಯುತ್ ತಂತಿಗೆ ತಗುಲಿದೆ ವಿದ್ಯುತ್ ಹರಿದು ಯುವಕ ಪಕ್ಕದ ಮಾವಿನ ತೋಟಕ್ಕೆ ಎಸೆಯಲ್ಪಟ್ಟಿದ್ದಾನೆ.ಅವನೊಂದಿಗೆ ಹೋಗಿದ್ದ ಇನ್ನಿಬ್ಬರು ಕೆಳಗಿಂದ ಆಘಾತವನ್ನು ನೋಡುತ್ತಿದ್ದು ತಕ್ಷಣ ಕುಟುಂಬದವರಿಗೆ ಮಾಹಿತಿ ನೀಡಿದ್ದು ಪೋಷಕರು ವಿದ್ಯತ್ ಅಪಘಾತಕ್ಕೆ ಒಳಗಾದ ಯುವಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಘಾತ ನಡೆದ ಮೂರು ದಿನಕ್ಕೆ ಯುವಕ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.
Author: Srinivas_Murthy
ಶ್ರೀನಿವಾಸಪುರ:ಆಂಧ್ರದಿಂದ ಬೆಂಗಳೂರಿಗೆ ಹೋರಟಿದ್ದ ಸ್ಲೀಪರ್ ಕೋಚ್ ಬಸ್ ರಸ್ತೆ ವಿಭಜಕ್ಕೆ ಡಿಕ್ಕಿ ಹೋಡೆದು ರಸ್ತೆ ಬದಿಯಲ್ಲಿ ಮಗುಚಿ ಬಿದ್ದು ಬಸ್ಸಿನಲ್ಲಿದ್ದ ಮಹಿಳೆ ಮೃತ ಪಟ್ಟಿದ್ದು ಬಸ್ಸಿನಲ್ಲಿದ್ದ ಬಹುತೇಕರು ಗಾಯಗೊಂಡಿರುವ ಘಟನೆ ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ಮಂಗಳವಾರ ಮುಂಜಾನೆ ನಸುಕಿನಲ್ಲಿ ನಡೆದಿದೆ.ಮೃತ ಮಹಿಳೆಯನ್ನು ಬೆಂಗಳೂರಿನ ನಿವಾಸಿ ಅನಿತಾ(58) ಎಂದು ಗುರುತಿಸಲಾಗಿದ್ದು ಈಕೆ ಆಂಧ್ರದ ಪ್ರೊದ್ದಟೂರಿಗೆ ಪತಿಯ ಜೊತೆಗೆ ಮದುವೆ ಕಾರ್ಯಕ್ರಮಕ್ಕೆ ಹೋಗಿ ರಾತ್ರಿ ವಾಪಸ್ಸು ಬರುತ್ತಿರುವಾಗ ದುರ್ಘಟನೆ ನಡೆದು ಮೃತಪಟ್ಟಿರುತ್ತಾರೆ.ಪ್ರೊದ್ದಟೂರು ಮೂಲದ ಹರಿತಾ ಟ್ರಾವಲ್ಸ್ ಬಸ್ಸು ಪ್ರೊದ್ದಟೂರಿನಿಂದ ಬೆಂಗಳೂರಿಗೆ ಹೋರಟಿದ್ದು ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ಮುಂಜಾನೆ ನಸುಕಿನಲ್ಲಿ ಮಂಚಿನಿಳ್ಲಕೋಟೆ ಬಳಿ ಡಿವೈಡರ್ ಗೆ ಡಿಕ್ಕಿ ಹೋಡೆದಿದೆ ಡಿಕ್ಕಿ ಹೋಡೆದ ರಭಸಕ್ಕೆ ಬಸ್ಸಿನ ಮುಂಬಾಗದ ಆಕ್ಸಿಲ್ ಸಮೇತ ಎರಡು ಚಕ್ರಗಳು ಕಳಚಿ ಬಿದಿದೆ,ಬಸ್ ರಸ್ತೆಯ ಮತ್ತೊಂದು ಬದಿಯಲ್ಲಿ ಬಸ್ ಮಗಚಿ ಬಿದ್ದಿದೆ. ಬಸ್ ಬಿದ್ದ ರಭಸಕ್ಕೆ ಮೃತ ಮಹಿಳೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೆ ಸಾವನಪ್ಪಿದ್ದಾಳೆ ಎನ್ನುತ್ತಾರೆ. ಹೆದ್ದಾರಿ ನಿರ್ಮಾಣ ವಿಳಂಬ ನಿರ್ಲಕ್ಷ್ಯ ಆರೋಪಕರ್ನಾಟಕದ ಗಡಿಯಿಂದ ಚಿಂತಾಮಣಿಯ…
ಶ್ರೀನಿವಾಸಪುರ:ಡಿಸೆಂಬರ್ 1 ರಿಂದ ದ್ವಿಚಕ್ರ ವಾಹನ ಸವಾರರು ಖಡ್ಡಾಯವಾಗಿ ಹೆಲ್ಮೆಟ್ ಧರಿಸಿ ಪ್ರಯಾಣಿಸಬೇಕು ಎಂಬ ನಿಯಮವನ್ನು ಕೋಲಾರ ಜಿಲ್ಲಾದ್ಯಂತ ಜಾರಿಮಾಡಿ ಕಳೆದ ಎಂಟೆತ್ತು ದಿನಗಳಿಂದ ಸಾರ್ವಜನಿಕವಾಗಿ ಜಾರಿಯಾಗುವಂತೆ ಆದೇಶಿಸಿ ಇದಕ್ಕಾಗಿ ಕೋಲಾರ ಜಿಲ್ಲಾ ಪೋಲಿಸರು ಸಾಮಾಜಿಕ ಜಾಲತಾಣಗಳಲ್ಲಿ ಹಾಗು ಮಾಧ್ಯಮಗಳ ಮೂಲಕ ಪ್ರಚಾರ ಮಾಡಿದ್ದರು.ಅದರಂತೆ ಇಂದು ಶ್ರೀನಿವಾಸಪುರದಲ್ಲಿ ರಸ್ತೆಗಿಳಿದ ಪೋಲಿಸರು ಹೆಲ್ಮೆಟ್ ಧರಿಸದೆ ಪ್ರಯಾಣಿಸುತ್ತಿದ್ದ ಜನರನ್ನು ತಡೆದು ಹೆಲ್ಮೆಟ್ ರಹಿತ ವಾಹನ ಚಾಲನೆ ಅಪಾಯಕಾರಿ. ಅದರಲ್ಲೂ ಅಪಘಾತ ಸಂದರ್ಭಗಳಲ್ಲಿ ಶಿರಸ್ತ್ರಾಣ ಧರಿಸದ ಪರಿಣಾಮ ಮಾರಣಾಂತಿಕವಾಗಿ ಗಾಯಗೊಂಡು ಮೃತಪಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಫುಲ್ ಕ್ಲಾಸ್ ನೀಡಿದರು. ತಾಲೂಕು ಆಫಿಸ್ ಮುಂಬಾಗದಲ್ಲಿ ವೃತ್ತ ನಿರೀಕ್ಷಕ ಮೊಹಮ್ಮದ್ ಕೊಳ್ಳ ಸಬ್ ಇನ್ಸಪೇಕ್ಟರ್ ಚಂದ್ರಪ್ಪ ನೇತೃತ್ವದಲ್ಲಿ ಪೋಲಿಸರು ಕಾರ್ಯಚರಣೆ ನಡೆಸಿ ಹೆಲ್ಮೆಟ್ ಧರಿಸದೆ ಬರು ವಾಹನ ಸವಾರರಿಗೆ ಅರಿವು ಮೂಡಿಸಿ ಎಚ್ಚರಿಕೆ ಕೊಟ್ಟು ಕಳಿಸಿದರೆ ಹೆಲ್ಮೆಟ್ ಧರಿಸಿ ಬಂದವರನ್ನು ಅಭಿನಂದಿಸಿದರು.ಹೆಲ್ಮೆಟ್ ಖಡ್ಡಾಯ ಇಂದು ಆರಂಭವಾಗಿದೆ ಇವತ್ತು ವಿನಾಯಿತಿ ಕೊಡಲಾಗುತ್ತಿದೆ ಆದರೆ ನಾಳೆಯಿಂದ ಹೆಲ್ಮೆಟ್ ಧರಿಸದೆ ಬಂದರೆ…
ಶ್ರೀನಿವಾಸಪುರ ಪಟ್ಟಣದ ಎಂ.ಜಿ.ರಸ್ತೆಯಲ್ಲಿ ತರಕಾರಿ ಅಂಗಡಿಗಳಿಗೆ ತನ್ನದೆ ಆದ ಇತಿಹಾಸ ಇದೆ ಇದು ಇಂದು ನಿನ್ನೆಯದಲ್ಲಿ ಐದು ದಶಕಕ್ಕೂ ಹೆಚ್ಚು ಹಳೆಯ ತರಕಾರಿ ಮಾರುಕಟ್ಟೆ ಎನ್ನಬಹುದು. ಇಲ್ಲಿ ತರಕಾರಿ ಮಾರುಕಟ್ಟೆ ಪ್ರಾಂರಭಿಸಿದ್ದು ತರಕಾರಿ ವ್ಯಾಪರಸ್ಥರಲ್ಲ ಬದಲಾಗಿ ತರಕಾರಿ ಬೆಳೆದ ರೈತರೆ ತಾವು ಬೆಳೆದ ತರಕಾರಿ ಮತ್ತು ಹಣ್ಣುಗಳನ್ನು ಮಂಕರಿಯಲ್ಲಿ ತಂದು ರೈತರು ಇಲ್ಲಿ ಮಾರಾಟ ಶುರುಮಾಡಿದರು. ಶ್ರೀನಿವಾಸಪುರ:ಪಟ್ಟಣ ಆಗೆಲ್ಲ ದೊಡ್ಡದಾಗಿ ಬೆಳೆದಿರಲಿಲ್ಲ ಊರು ಅಂದರೆ ಎಂ.ಜಿ.ರಸ್ತೆ ದಕ್ಷಿಣಕ್ಕೆ ಹೋದರೆ ಸಿಗುವ ಮುಳಬಾಗಿಲು ವೃತ್ತ, ಅಲ್ಲಿ ಎಡಕ್ಕೆ ತಿರುಗಿ ಹೋದರೆ ಅಲ್ಲೊಂದು ಇಲ್ಲೊಂದು ಮನೆಗಳು ಕಾಣುತ್ತಿದ್ದ ಹಳೇಪೇಟೆ,ಸುತ್ತಾಕಿ ಬಂದರೆ ವಲ್ಲಭಾಯ್ ರಸ್ತೆ,ಈಗಿನ ನೆಹರು ರಸ್ತೆ,ದಾಟಿ ಎಂ.ಜಿ.ರಸ್ತೆಯಲ್ಲಿ ಉತ್ತರಕ್ಕೆ ಹೋದರೆ ಬಸ್ ನಿಲ್ದಾಣವೃತ್ತ ಮುಂದೆ ಹೋದರೆ ತಾಲೂಕು ಆಫಿಸ್ ಇನ್ನಂದಷ್ಟು ಮುಂದೆ ಸಾಗಿದರೆ ಮಿಡ್ಲಸ್ಕೂಲ್,ಇನ್ನೊಂದೆರಡು ಹೆಜ್ಜೆ ಹಾಕಿದರೆ ಎಲೆಕ್ಟ್ರಿಕ್ ಆಫಿಸ್ ಅದಾದ ಮೆಲೆ ಕೊನೆ ಅಂದರೆ ಹೈಸ್ಕೂಲ್,ಬಸ್ಟಾಂಡ್ ನಿಂದ ಚಿಂತಾಮಣಿ ಕಡೆ ಹೋದರೆ ಅರಣ್ಯ ಇಲಾಖೆ ಕಚೇರಿ ಎನ್.ಇ.ಎಸ್ ಕ್ವಾಟ್ರಸ್ ಚಿಂತಾಮಣಿ ಸರ್ಕಲ್ ಇಷ್ಟೆ…
ಮದನಪಲ್ಲಿ:ಮದನಪಲ್ಲಿ ತಂಬಳ್ಳಪಲ್ಲೆ, ಪುಂಗನೂರು ಮತ್ತು ಪೀಲೇರು ವಿಧಾನಸಭಾ ಕ್ಷೇತ್ರಗಳಗೊಂಡ ಮದನಪಲ್ಲಿ ಜಿಲ್ಲೆಯಾಗಿ ಆಂಧ್ರ ಸರ್ಕಾರ ಘೋಷಿಸಿದೆ.ಆಂಧ್ರಪ್ರದೇಶದ ಜಿಲ್ಲಾ ಪುನರ್ ವಿಭಜನೆ ವಿಧಾನಸಭಾ ಉಪಸಮಿತಿ ನೀಡಿದ ವರದಿ ಆಧಾರದಂತೆ ಅಲ್ಲಿನ ಚಂದ್ರಬಾಬು ನಾಯ್ಡು ನೇತೃತ್ವದ ಎನ್ಡಿಎ ಸರ್ಕಾರ ನೂತನ ಜಿಲ್ಲೆಯಾಗಿ ಮದನಪಲ್ಲಿಯನ್ನು 27 ಜಿಲ್ಲೆಯಾಗಿ ಪ್ರಕಟಿಸಿದೆ. ಮದನಪಲ್ಲಿ ಜಿಲ್ಲೆಯಲ್ಲಿ.ಮದನಪಲ್ಲಿ, ನಿಮ್ಮನಪಲ್ಲಿ, ರಾಮಸಮುದ್ರ, ತಂಬಳ್ಳಪಲ್ಲೆ, ಮುಲಕಲ ಚೆರುವು, ಪೆದ್ಯಮಂಡ್ಯಂ, ಕುರಬಲಕೋಟ, ಪೆದ್ದತಿಪ್ಪಸಮುದ್ರಂ, ಬಿ.ಕೊತಕೋಟ, ಚೌಡೆಪಲ್ಲಿ, ಪುಂಗನೂರು, ಸೋಮಲ, ಪೀಲೇರು, ಗುರ್ರಮಕೊಂಡ, ಕಲಕಡ,ಸದುಂ,ಕೆವಿಪಲ್ಲಿ, ವಾಲ್ಮೀಕಿ ಪುರಂ,ಕಿರಿಕಿರಿ,ಪುಲಿಚರ್ಲ;ರೊಂಪಿಚರ್ಲ, ಕಂಭಂವಾರಿಪಲ್ಲಿ, ಸೇರಿದಂತೆ ಒಟ್ಟು 21 ಮಂಡಲ ಕೇಂದ್ರಗಳನ್ನು ಹೊಂದಿದೆ.ಒಟ್ಟು 11.05 ಲಕ್ಷ ಜನಸಂಖ್ಯೆ ಇರುತ್ತದೆ. ನೂತನ ಮದನಪಲ್ಲಿ ಜಿಲ್ಲೆಗೆ ಡಿ.ಕೊತ್ತಕೋಟ ಭಾಗದಲ್ಲಿ ಶ್ರೀನಿವಾಸಪುರ ಹಾಗೂ ಚಿಂತಾಮಣಿ ಎರಡು ತಾಲೂಕಗಳು ಗಡಿ ಹಂಚಿಕೊಂಡಿದ್ದರೆ ಮದನಪಲ್ಲಿ ಜಿಲ್ಲಾ ಕೇಂದ್ರಕ್ಕೆ ಶ್ರೀನಿವಾಸಪುರ ತಾಲ್ಲೂಕು ಗಡಿ ಬರುತ್ತದೆ.ರಾಮಸಮುದ್ರಂ ಮಂಡಲ ಕೇಂದ್ರಕ್ಕೆ ಒಂದೆಡೆ ಶ್ರೀನಿವಾಸಪುರ ಹಾಗೂ ಮುಳಬಾಗಿಲು ತಾಲೂಕು ಗಡಿ ಇದೆ,ಪುಂಗನೂರು ಮಂಡಲ ಭಾಗದಲ್ಲಿ ಮುಳಬಾಗಲು ತಾಲೂಕು ಗಡಿ ಹಂಚಿಕೊಂಡಿದೆ.
ನ್ಯೂಜ್ ಡೆಸ್ಕ್:ನನ್ನದು ಕಾಂಗ್ರೆಸ್ ಸಮುದಾಯ ಸಮಾಜದ ಎಲ್ಲಾ ವರ್ಗಗಳನ್ನು ನಾನು ಪ್ರೀತಿಸುತ್ತೇನೆ ಸಿಎಂ ಹುದ್ದೆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಚ್ಚರಿಯಾಗಿ ಹೇಳಿದ್ದಾರೆ.ಅಧಿಕಾರಕ್ಕಾಗಿ ಬಣ ಬಡಿದಾಟದ ನಡುವೆ ಒಕ್ಕಲಿಗ ಸಮುದಾಯದ ನಂಜಾವದೂತ ಸ್ವಾಮೀಜಿ ಅವರೊಂದಿಗೆ ಭೇಟಿಯಾದ ಡಿಕೆ ಶಿವಕುಮಾರ್ ಅವರನ್ನು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಕಾಂಗ್ರೆಸ್ ನನ್ನ ಸಮುದಾಯವಾಗಿದ್ದು, ರಾಜ್ಯದ ಎಲ್ಲಾ ಸಮುದಾಯಗಳನ್ನು ಸಮಾನವಾಗಿ ನೋಡುವುದಾಗಿ ಹೇಳಿದರು.ಯಾವುದಕ್ಕೂ ನಾನು ಆತುರಪಡುತ್ತಿಲ್ಲ ನನಗೆ ಏನೂ ಬೇಡ ನನ್ನ ಪಕ್ಷ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತದೆ. ನಾನು ಯಾವುದೇ ಒಂದು ಸಮುದಾಯಕ್ಕೆ ಸೇರಿದವನಲ್ಲ ಎಂದರು.ರಾಜ್ಯದಲ್ಲಿ ಕಾಂಗ್ರೆಸ್ ನಾಯಕತ್ವದ ಬಗ್ಗೆ ಜೋರಾದ ಚರ್ಚೆ ನಡೆಯುತ್ತಿರುವಂತೆಯೇ ನನಗೇನೂ ಬೇಡ, ಆತುರಪಡಲು ಬಯಸುವುದಿಲ್ಲ ಮತ್ತು ಪಕ್ಷದ ಹೈಕಮಾಂಡ್ ಕಡೆ ತೋರಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.ಖಂಡಿತವಾಗಿ ದೆಹಲಿಗೆ ಹೋಗ್ತೀನಿ: ಮುಖ್ಯಮಂತ್ರಿ ಹುದ್ದೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಜೊತೆ ಸಭೆ ನಡೆಯಲಿದೆ ಎಂಬ ವದಂತಿಗಳಿದ್ದರೂ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ…
ಚಿಂತಾಮಣಿ:ವಿಚ್ಛೇದಿತ ಮಹಿಳೆಯರನ್ನು ಮದುವೆ ಆಗುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಗಿರೀಶ್ ನೇಣಿಗೆ ಶರಣಾಗಿದ್ದಾನೆ. ಚಿಂತಾಮಣಿ ನಗರದ ಕನ್ನಂಪಲ್ಲಿಯಲ್ಲಿದ್ದ ಆರೋಪಿ ಮನೆಯಲ್ಲಿ ನೇಣು ಬಿಗಿದು ಗಿರೀಶ್ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ಆರೋಪಿ ವಂಚನೆಗೆ ಒಳಗಾಗಿದ್ದ ನಾಲ್ವರು ಸಂತ್ರಸ್ತೆಯರು ಈತನ ವಿರುದ್ಧ ಚಿಕ್ಕಬಳ್ಳಾಪುರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.ದೂರು ದಾಖಲಾಗುತ್ತಿದ್ದಂತೆ ಗಿರೀಶ್ ನೇಣಿಗೆ ಶರಣಾಗಿರುವ ಕುರಿತು ಶಂಕೆ ವ್ಯಕ್ತಪಡಿಸಲಾಗಿದೆ.ತಿಂಗಳ ಹಿಂದೆಯೂ ಈತ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆದಿದ್ದ ಎನ್ನಲಾಗಿದೆ.ಸಿ.ಎಂ.ಗಿರೀಶ್ ಅಲಿಯಾಸ್ ಸಾಯಿಸುದೀಪ್ ಎನ್ನುವ ಈತ ಒಬ್ಬಂಟಿ ವಿವಾಹಿತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದು ಫೇಸ್ಬುಕ್ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಂಡು,ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ Fraud promising marriage ಅವರನ್ನು ಪುಸಲಾಯಿಸಿ ಅದರಲ್ಲೂ ಕೆಲವರನ್ನು ದೈಹಿಕವಾಗಿ ದುರ್ಬಳಕೆ ಮಾಡಿಕೊಂಡು,ಅಂತಹ ವಿಡಿಯೋಗಳನ್ನು ತೊರಿಸಿ ಹೆದರಿಸುತ್ತ ಒಡವೆ ಹಾಗು ಹಣಕ್ಕಾಗಿ ಪೀಡಿಸುತ್ತ ಇದ್ದನೆಂದು ಹೇಳಲಾಗಿದೆನಂದಗುಡಿ, ಬೆಂಗಳೂರು, ಚಿಕ್ಕಬಳ್ಳಾಪುರ, ಬಂಗಾರಪೇಟೆ ಸೇರಿದಂತೆ 5ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿ, ಅವರಿಂದ ಲಕ್ಷಾಂತರ ರೂ. ಹಣ ಪಡೆದುಕೊಂಡಿದ್ದ ಎಂದು ಆರೋಪಿಸಲಾಗಿದ್ದು…
ಶ್ರೀನಿವಾಸಪುರ:ಉದ್ದೇಶಿತ ಯದರೂರು ಕೈಗಾರಿಕೆ ವಲಯ ನಿರ್ಮಾಣ ಸಂಬಂದ ಜಮೀನು ಸರ್ವೆ ಮಾಡಲು ಬಂದಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)Karnataka Industrial Areas Development Board ಅಧಿಕಾರಿಗಳ ವಾಹನ ತಡೆದ ರೈತರ ಗುಂಪು ಸರ್ವೆ ಮಾಡಲು ಅವಕಾಶ ನೀಡದೆ ವಾಪಸ್ಸು ಕಳುಹಿಸಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದ ಬಳಿ ಮಂಗಳವಾರ ನಡೆದಿದೆ.ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಾದ ಶ್ರೀನಾಥ್ ಮತ್ತು ಮಂಜುನಾಥ್ ಆಗಮಿಸಿದ ವೇಳೆ ಅವರನ್ನು ಸ್ಥದಲ್ಲಿದ್ದ ಕೆಲ ರೈತರು ಬೈದು ಗಲಾಟೆ ಮಾಡಿ ಒಂದಿಂಚು ಜಮೀನು ಕೊಡಲ್ಲ ಎಂದು ಆಕ್ರೋಶ ಭರಿತರಾಗಿ ಮಾತನಾಡಿ ಬೆದರಿಸಿದ್ದಾರೆ ಎನ್ನಲಾಗಿದ್ದು.ರೈತರಿಗೆ ಯಾವುದೇ ಮಾಹಿತಿ ನೀಡದೆ ಸರ್ವೇ ಮಾಡಲು ಬಂದಿರುವುದು ತಪ್ಪು ಎಂದು ಅಧಿಕಾರಿಗಳನ್ನ ವಾಪಸ್ ಕಳಿಸಿದರು.ಕೆಐಎಡಿಬಿ ಅಧಿಕಾರಿಗಳನ್ನು ಕಾರಿನಿಂದ ಇಳಿಯಲು ಬಿಡದೆ ವಾಗ್ವಾದಕ್ಕೆ ಇಳಿದ ರೈತರು ಮಾತಿನ ಚಕಮಕಿ ನಡೆಸಿದಲ್ಲದೆ ಪ್ರಾಣ ಬಿಟ್ಟೆವು ಜಮೀನು ಕೊಡುವುದಿಲ್ಲ.ನಿಮ್ಮ ವಾಹನಗಳನ್ನು ಸುಟ್ಟುಹಾಕುತ್ತೇವೆ ಎಂದು ತೀವ್ರವಾಗಿ ಎಚ್ಚರಿಕೆನೀಡಿದ್ದಾರೆ.ಯದರೂರು ಕಂದಾಯ ವೃತ್ತದಲ್ಲಿ ಕೈಗಾರಿಕ ವಲಯಯದರೂರು ಕಂದಾಯ…
ಚಿಂತಾಮಣಿ:ತೆಲಗು ಚಿತ್ರರಂಗದ ಪ್ರಖ್ಯಾತ ನಟ ನಂದಮೂರಿ ನಟಸಿಂಹ ಬಾಲಕೃಷ್ಣ ಇಂದು ಶುಕ್ರವಾರ ಚಿಂತಾಮಣಿ ನಗರಕ್ಕೆ ಆಗಮಿಸುತ್ತಿದ್ದಾರೆ ಇವರೊಂದಿಗೆ ಕರುನಾಡ ಚಕ್ರವರ್ತಿ ಡಾ.ಶಿವರಾಜ್ ಕುಮಾರ್ ವೇದಿಕೆ ಹಂಚಿಕೊಳ್ಳೊತ್ತಿದ್ದು ಇವರೊಂದಿಗೆ ನಿರ್ದೇಶಕ ಬೋಯಪಾಟಿ ಶ್ರೀನು ಇರಲಿದ್ದಾರೆ.ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಅಖಂಡ-2’ ಟ್ರೈಲರ್ ಇಂದು (ನವೆಂಬರ್ 21) ಕರ್ನಾಟಕದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದ್ದು ಈ ಸಿನಿಮಾದ ಟ್ರೈಲರ್ ಲಾಂಚ್ ಕಾರ್ಯಕ್ರಮ ಚಿಂತಾಮಣಿಯಲ್ಲಿ ನಡೆಯುತ್ತಿದೆ.ತೆಲುಗು ಚಿತ್ರರಂಗದ ಮೆಗಾ ಹಿಟ್ ‘ಅಖಂಡ’ ಚಿತ್ರದ ಮುಂದುವರಿದ ಭಾಗವಾಗಿರುವ ‘ಅಖಂಡ-2’ ಸಿನಿಮಾಡಿಸೆಂಬರ್ 5, 2025ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದ್ದು ಚಿತ್ರದ ಪ್ರಚಾರ ಕಾರ್ಯಕ್ರಮಗಳು ಭರದಿಂದ ಸಾಗಿದ್ದು, ಇಂದು ಕರ್ನಾಟಕದ ಚಿಂತಾಮಣಿ ಬೈಪಾಸ್ ಬಳಿ ಟ್ರೈಲರ್ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದೆ. ಸಂಜೆ 6 ಗಂಟೆಗೆ ವರ್ಣರಂಜಿತ ಕಾರ್ಯಕ್ರಮ ಆರಂಭವಾಗಲಿದೆ.ನಂದಮೂರಿ ಮತ್ತು ರಾಜ್ಕುಮಾರ್ ಕುಟುಂಬಗಳ ನಡುವಿನ ಆತ್ಮೀಯ ಬಾಂಧವ್ಯ ಎಲ್ಲರಿಗೂ ತಿಳಿದಿದೆ. ಅದೇ ಸ್ನೇಹ ಮತ್ತು ಗೌರವದ ಹಿನ್ನೆಲೆಯಲ್ಲಿ, ನಟ ಶಿವರಾಜ್ಕುಮಾರ್ ಅವರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ, ಟ್ರೈಲರ್…
ನ್ಯೂಜ್ ಡೆಸ್ಕ್:ಬಾರ್ ಮಾಡಲು ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ರಾತ್ರೋ ರಾತ್ರಿ ಜೆಸಿಬಿ ತಂದು ಕಿಡಿಗೇಡಿಗಳು ಆಂಜನೇಯ ಸ್ವಾಮಿಯ ದೇವಸ್ಥಾನವನ್ನೇ ಧ್ವಂಸ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಗ್ರಾಮದಲ್ಲಿ ನಡೆದಿದೆ.ಕೆಲ ಸ್ಥಳೀಯರು ಕಳೆದ ಕೆಲ ದಿನಗಳ ಹಿಂದೆ ದೇವಸ್ಥಾನದ ಸಮೀಪದಲ್ಲೇ ಬಾರ್ ನಿರ್ಮಾಣ ಮಾಡಲು ಮುಂದಾಗಿ ಅಬಕಾರಿ ಇಲಾಖೆಗೆ ಅರ್ಜಿ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು ಈ ವಿಷಯ ತಿಳಿದ ದೇವಸ್ಥಾನದ ಆಡಳಿತ ಮಂಡಳಿಯವರು ಅನುಮತಿ ನೀಡದಂತೆ ಅಬಕಾರಿ ಇಲಾಖೆಗೆ ಪತ್ರ ಬರೆದಿದ್ದಾರಂತೆ.ಉದ್ದೇಶಿತ ಬಾರ್ ಮಾಡುವ ಸಮೀಪ ಆಂಜನೇಯನ ದೇಗುಲವಿದೆ. ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಭಕ್ತರು ದೇಗುಲಕ್ಕೆ ಬರುತ್ತಾರೆ ಬಾರ್ ನಿರ್ಮಾಣ ಮಾಡಿದ್ರೆ ತೊಂದರೆಯಾಗುತ್ತೆ ಎಂಬ ಕಾರಣಕ್ಕೆ ದೇವಸ್ಥಾನ ಆಡಳಿತ ಮಂಡಳಿ ಪತ್ರ ಬರೆದಿತ್ತು. ಇದರಿಂದ ಕಿಡಿಗೇಡಿಗಳು ರಾತ್ರೋ ರಾತ್ರಿ ದೇಗುಲವನ್ನೇ ಕೆಡವಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ನಸುಕಿನಲ್ಲಿ ವಾಕಿಂಗ್ ಬಂದಿದ್ದವರು ದೇಗುಲ ನೆಲಸಮ ಆಗಿದ್ದನ್ನು ಗಮನಿಸಿ ನಂದಗುಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸರು…


