ನ್ಯೂಜ್ ಡೆಸ್ಕ್:ವಿದ್ಯಾರ್ಥಿಗಳ ಕೈಯಲ್ಲಿದ್ದ ದಾರ ಜನಿವಾರ ತಗೆಸಿದ ಆರೋಪದಲ್ಲಿ ಮಿಯ್ಯಾರು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಅತಿಥಿ ಶಿಕ್ಷಕರೊಬ್ಬರನ್ನು ಇಲಾಖೆ ವಜಾಗೊಳಿಸಲಾಗಿದೆ.ಉಡುಪಿ ಜಿಲ್ಲೆಯ ಕಾರ್ಕಳದ ಮಿಯ್ಯಾರು ಮೊರಾರ್ಜಿ ದೇಸಾಯಿ ಇಂಗ್ಲಿಷ್ ಮಾಧ್ಯಮ ವಸತಿ ಶಾಲೆಯ ಪ್ರಾಂಶುಪಾಲರು ಅತಿಥಿ ಶಿಕ್ಷಕರಾಗಿರುವ ದೈಹಿಕ ಶಿಕ್ಷಕ,ಕಲಬುರ್ಗಿಯ ಮೂಲದ ಮದರಶಾ ಎಸ್ ಮಕಂದಾರ್ ಅವರನ್ನು ವಜಾಗೊಳಿಸಲಾಗಿದೆ.ವಿದ್ಯಾರ್ಥಿಗಳಿಗೆ ವಿನಾಕಾರಣ ಬಸ್ಕಿ ಹೊಡೆಸುವುದು,ಜನಿವಾರ ಮತ್ತು ಕೈಗೆ ಕಟ್ಟಿರುವ ದಾರ ತೆಗೆಯುವಂತೆ ಸೂಚಿಸುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ.ವಿದ್ಯಾರ್ಥಿಗಳು ಶಿಕ್ಷಕರ ವರ್ತನೆಯನ್ನು ವರದಿ ಮಾಡಿದ ನಂತರ ವಿವಾದ ಭುಗಿಲೆದ್ದಿತು. ಆಕ್ರೋಶಗೊಂಡ ಪೋಷಕರು ಮತ್ತು ಗ್ರಾಮಸ್ಥರು ಶಾಲೆಯಲ್ಲಿ ಜಮಾಯಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಮಕಂದಾರ್ ಕ್ಷಮೆಯಾಚಿಸಿದ್ದರೂ, ಶಾಲಾ ಆಡಳಿತವು ಅವರನ್ನು ವಜಾಗೊಳಿಸಿದೆ.
Author: Srinivas_Murthy
ನ್ಯೂಜ್ ಡೆಸ್ಕ್:ರಾಜ್ಯದಲ್ಲಿ ವಿಪರೀತ ಚಳಿಯ ಅನುಭವ ಆಗುತ್ತಿದ್ದು,ದೇಹ ಗಡ ಗಡ ನಡುಗುವಂತಹ ಸ್ಥಿತಿ ಬಂದಿದೆ. ಅರಂಭದ ಥಂಡಿಗೆ ಜನ ತತ್ತರಿಸಿದ್ದಾರೆ ಎತ್ತಿಟ್ಟಿದ್ದ ಕಂಬಳಿ ರಗ್ಗು ಮೊರೆ ಹೋಗಿದ್ದಾರೆ. ಹಗಲು ರಾತ್ರಿ ಎನ್ನದೇ ಶೀತಗಾಳಿಯ ಆರ್ಭಟ ಜನರನ್ನು ನಡುಗಿಸುತ್ತಿದೆ.ದಿನ ಕಳೆದಂತೆ ಚಳಿ ತೀವ್ರತೆ ಹೆಚ್ಚಾಗುತ್ತಿದ್ದು ಜನರು ಥಂಡಿಗೆ ಮುದುಡಿ ಹೋಗಿದ್ದಾರೆ. ಅದರಲ್ಲೂ ಕೋಲಾರ ಭಾಗದ ಬಯಲುಸೀಮೆ ಪ್ರದೇಶದಲ್ಲೂ ಚಳಿಯ ತೀವ್ರತೆ ಹೆಚ್ಚಾಗಿದೆ ಮುಂದಿನ ಎರಡು ದಿನಗಳ ಕಾಲ ಶೀತಗಾಳಿಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.ಮುಂದಿನ ಎರಡು ದಿನ ಥಂಡಿ ಹೆಚ್ಚಾಗಲಿದ್ದು.ಇನ್ನೂ ಒಂದು ವಾರಕಾಲ ಚಳಿಯ ವಾತಾವರಣ ಮುಂದುವರೆಯಲಿದೆ ಎನ್ನಲಾಗಿದ್ದು ಈ ವರ್ಷ ವಾಡಿಕೆಗಿಂತ ಮುಂಚಿತವಾಗಿ ಚಳಿಗಾಲ ಎಂಟ್ರಿಯಾಗಿದೆ ಎನ್ನುತ್ತಾರೆ.ಅರಂಭದಲ್ಲೆ ಜನರು ಹೈರಾಣಾಗಿದ್ದಾರೆ. ಚಳಿಗಾಲದ ಸಲಹೆಗಳುಚಳಿಗಾಲದಲ್ಲಿ ತಂಪಾದ ಗಾಳಿ, ಕಡಿಮೆ ತಾಪಮಾನ ಮತ್ತು ಶುಷ್ಕ ಗಾಳಿಯನ್ನು ತರುತ್ತದೆ, ಇದು ನಮ್ಮ ಆರೋಗ್ಯ ಮತ್ತು ದೈನಂದಿನ ದಿನಚರಿಯ ಮೇಲೆ ಪರಿಣಾಮ ಬೀರುತ್ತದೆ. ಕೆಲವು ಸರಳ ಸಲಹೆಗಳನ್ನು ಅನುಸರಿಸುವ ಮೂಲಕ, ನೀವು ಈ ಕಾಲದಲ್ಲಿ ಬೆಚ್ಚಗಿರಲು, ಆರೋಗ್ಯವಾಗಿರಲು…
ನ್ಯೂಜ್ ಡೆಸ್ಕ್:ರಾಜ್ಯದ ಎಲ್ಲಾ ಕೆಲಸಗಳಲ್ಲೂ ಹಿಂದಿಯವರದೆ ಮೆಲೂಗೈ ಆಗಿದೆ ಅದು ಮಾಲ್ ಇರಬಹುದು ಆಫಿಸ್ ಬಾಯ್ ಆಗಿರಬಹುದು ಸಾಫ್ಟವೇರ್, ಬಯೋಟೆಕ್ನಾಲಜಿ, ಫೈನಾನ್ಸ್, ಎಚ್ಆರ್ ಉದ್ಯೋಗ ಕ್ಷೇತ್ರಗಳಲ್ಲಿ ಹಿಂದಿಯವರ ಕಾರುಬಾರು ಜೋರಾಗಿದೆ, ಕಾರ್ಪೆಂಟರಿಂಗ್, ಪೈಟಿಂಗ್, ಬ್ಯಾಂಕಿಂಗ್, ಟ್ರಾನ್ಸಪೋರ್ಟ್ ಕ್ಷೇತ್ರಕ್ಕೂ ವಿಸ್ತರಿಸಲಾರಂಭಿಸಿದ್ದು ಗ್ರಾಮೀಣ ಭಾಗದಲ್ಲಿ ಇಟ್ಟಿಗೆ ಭಟ್ಟಿ, ಹಸು ಸಾಕಾಣಿಕೆ ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದಿ ವಾಲಗಳದೆ ಪಾರು ಪತ್ಯೆ.ಬೆಂಗಳೂರಿನ ಹೋಟೆಲ್ ಗಳಿಗೂ ಹಿಂದಿ ವಾಲಗಳು ಎಂಟ್ರಿ ಕೊಟ್ಟಿದ್ದು ಆರಂಭದಲ್ಲಿ ಸ್ವಚ್ಚತೆಯಲ್ಲಿ ಮಾತ್ರ ಇದ್ದ ಇವರ ಕಾರ್ಯ ಇತ್ತಿಚಿಗೆ ದರ್ಶಿನಿ ಹೋಟೆಲ್ ಉಡುಪಿ ಹೋಟೆಲ್ ಫಾಸ್ಟ್ ಫುಡ್ ಸೆಂಟರ್ ಗಳಲ್ಲಿ ಹಿಂದಿ ಭಾಷಿಕರು ಕೌಂಟರ್ ನಿಂದ ಹಿಡಿದು ಎಲ್ಲಾ ಕಡೆ ವಿಭಾಗಗಳಲ್ಲೂ ತುಂಬಿದ್ದಾರೆ.ನಮ್ಮ ರಾಜ್ಯದ ಹೆಮ್ಮೆಯ ತಿಂಡಿಗಳಾದ ಇಡ್ಲಿ ವಡೆ ದೋಸೆ ಸೇರಿದಂತೆ ಇನ್ನಿತರೆ ತಿಂಡಿ ತಿನಿಸುಗಳನ್ನು ಮಾಡುವಲ್ಲಿ ಹಿಂದಿವಾಲಗಳು ಸೈ ಎನಿಸಿಕೊಂಡಿದ್ದಾರಂತೆ ಹಿಗೆಂದು ಕೆಲ ಹೋಟೆಲ್ ಮಾಲಿಕರು ಹೇಳುತ್ತಾರೆ.ಹಿಂದೆಲ್ಲಾ ದರ್ಶಿನಿ ಹೋಟೆಲ್ ಗಳು ಕರಾವಳಿ ಭಾಗದವರದೆ ಹೆಚ್ಚಾಗಿತ್ತು ಅಲ್ಲಿ ಅಡುಗೆ ಭಟ್ಟರಿಂದ…
ಇದೊಂದು ಮಾನವೀಯತೆ ಎತ್ತಿಹಿಡಿಯುವ ಕಥೆ.ಝಣ ಝಣ ಕಾಂಚಾಣದ ಲೋಕದಲ್ಲಿ ದುಡ್ಡೆ ದೊಡ್ಡಪ್ಪ ದೌಲತ್ತು ಅವರಪ್ಪ ಎಂಬ ಭ್ರಮಾ ಲೋಕದಲ್ಲಿ ತೆಲುತ್ತಿರುವ ಕಾಲಘಟ್ಟದಲ್ಲಿ ಕಸದ ತೊಟ್ಟಿಯಲ್ಲಿದ್ದ ನವಜಾತ ಶಿಶುವಿಗೆ ಜೀವನೀಡಿದ ವೈದ್ಯೆಯರು ಮತ್ತೊಂದು ಪ್ರಕರಣದಲ್ಲಿ ಸಾಮಾನ್ಯ ಕುಟುಂಬದ 19 ದಿನದ ನವಜಾತಾ ಶಿಶು ಉಸಿರಾಟ ನಿಲ್ಲಿಸಿ ದೇಹದ ಸ್ವಾಧಿನ ಕಳೆದುಕೊಂಡಿದ್ದ ಶಿಶುವಿಗೆ ಪ್ರಾಣ ನೀಡುವ ಮೂಲಕ ದೊಡ್ಡಬಳ್ಳಾಪುರದ ಸರ್ಕಾರಿ ವೈದ್ಯೆಯರು ಮಹಾನ್ ಮಾನವೀಯತೆ ಮೆರೆದಿರುವ ಅಪರೂಪದ ಘಟನೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ತಾಯಿ-ಮಗು ಆಸ್ಪತ್ರೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ:ಇದೊಂದು ಅಪರೂಪದ ಸೇವೆ ಎನ್ನಬಹುದು, ದೊಡ್ಡಬಳ್ಳಾಪುರ ಭಾಗದಲ್ಲಿ ಕೂಲಿ-ನಾಲಿ ಮಾಡಿಕೊಂಡಿದ್ದ ಉತ್ತರ ಪ್ರದೇಶ ಮೂಲದ ಆದರ್ಶ ಮತ್ತು ಗುಡಿಯ ಕುಮಾರಿ ದಂಪತಿಗಳ 19 ದಿನಗಳ ನವಜಾತಾ ಶಿಶು ಉಸಿರಾಟ ನಿಂತು ದೇಹದ ಸಂಪೂರ್ಣ ಸ್ವಾದಿನ ಕಳೆದುಕೊಂಡ ಸ್ಥಿತಿಯಲ್ಲಿ ದೊಡ್ಡಬಳ್ಳಾಪುರ ತಾಯಿ-ಮಗು ಆಸ್ಪತ್ರೆಗೆ ತಂದಿದ್ದಾರೆ ಅಸಾಯಕರಾದ ಪೋಷಕರು ಮಗು ನಮ್ಮ ಪಾಲಿಗಿಲ್ಲ ಎಂದು ಕೈಚಲ್ಲಿ ಕೂತಿದ್ದರು ಆದರೆ ಮಕ್ಕಳ ತಜ್ಞರಾದ ಡಾ.ಸವಿತ ಹಾಗು ಡಾ. ಗಾಯತ್ರಿ.…
ಶ್ರೀನಿವಾಸಪುರ:ಅಯ್ಯಪ್ಪ ಮಾಲಧಾರಿ ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಸರ್ಕಾರಿ ಶಾಲೆ ಶಿಕ್ಷಕನನ್ನು ಗ್ರಾಮಸ್ಥರು ತರಾಟೆಗೆ ತಗೆದುಕೊಂಡು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಪುಲಗೂರಕೋಟೆ ಸರ್ಕಾರಿ ಉನ್ನತೀಕರಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.ತಾಲೂಕಿನ ಪುಲಗೂರಕೋಟೆ ಸರ್ಕಾರಿ ಉನ್ನತೀಕರಣ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ8 ನೇ ತರಗತಿ ವಿಧ್ಯಾರ್ಥಿಗಳು ಇದ್ದು, ಶಾಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಅಯ್ಯಪ್ಪ ಮಾಲೆ ಧರಿಸಿ ಶಾಲೆಗೆ ಬಂದಿದ್ದಾರೆ ಇದನ್ನು ವಿರೋಧಿಸಿದ ಶಾಲಾ ಮುಖ್ಯ ಶಿಕ್ಷಕ ರವಿಕುಮಾರ್ ಮಾಲಧಾರಿ ವಿದ್ಯಾರ್ಥಿಗಳನ್ನು ಕರೆದು ನನ್ನ ಅನುಮತಿ ಪಡೆಯದೇ ಅಯ್ಯಪ್ಪ ಮಾಲೆ ಧರಿಸಿದ್ದೀರಾ ಎಂದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರ ಬಳಿ ಹೇಳಿಕೊಂಡಿದ್ದಾರೆ.ಈ ಬಗ್ಗೆ ಪೋಷಕರಾದ ಮಧುಸೂದನ, ಆಂಜಪ್ಪ ಹಾಗು ಗ್ರಾಮಸ್ಥರು ಶಾಲೆ ಬಳಿ ತೆರಳಿ ಮುಖ್ಯ ಶಿಕ್ಷಕ ರವಿಕುಮಾರ್ ಅವರನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡಿದ್ದಾರೆಶಿಕ್ಷಕ ಉದ್ಧಟತನ ವರ್ತನೆ ದೂರುಪೋಷಕರು ಹೇಳುವಂತೆ ನಾವು ಪ್ರತಿ ವರ್ಷ ಅಯ್ಯಪ್ಪ ದರ್ಶನಕ್ಕೆ ಶಬರಿಮಲೆಗೆ ಹೋಗಲು ಅಯ್ಯಪ್ಪ ಮಾಲೆ ಧರಿಸುತ್ತೆವೆ ಮಕ್ಕಳಿಗೆ ಮಾಲೆ…
ಕೋಲಾರ:ರಾಜ್ಯ ಪ್ರವಾಸ ಮಾಡಿದ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿ ಕಾರ್ಯಕರ್ತರಲ್ಲಿ ಸೌಹಾರ್ದತೆಯ ವಾತಾವರಣ ಇದೆ ಎಂಬುದು ತಿಳಿಯಿತು. ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.ಅವರು ಕೋಲಾರದ ಸಂಸದ ಮಲ್ಲೇಶ್ ಬಾಬು ಅವರ ತಾಯಿ ಕೋಲಾರ ಜಿಲ್ಲಾಪಂಚಾಯತಿ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಅವರು 75 ನೇ ಜನುಮದಿನ ಸಂದರ್ಭದಲ್ಲಿ ಆಯೋಜಿಸಿದ್ದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಶ್ರೀನಿವಾಸಪುರದ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆರಿಕುಂಟೆ ಲಕ್ಷ್ಮಣರೆಡ್ಡಿ ಅವರು ಅಣ್ಣನ ಮಗಳ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ನಂತರ ಸುದ್ದಿ ಗಾರರೊಂದಿಗೆ ಮಾತನಾಡಿದ ನಿಖಿಲ್ ರಾಜ್ಯಕ್ಕೆ ಕುಮಾರಣ್ಣನ ನಾಯಕತ್ವ ಬೇಕು ಎಂದು ರಾಜ್ಯದ ಉದ್ದಗಲಕ್ಕೂ ಜನತೆ ಬಯಸುತ್ತಿದ್ದಾರೆ ಎಂದ ಅವರು ಶಾಸಕ ವೆಂಕಟಶಿವಾರೆಡ್ಡಿ ಅನುದಾನ ತಾರತಮ್ಯ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿರುವುದನ್ನು ಪ್ರಸ್ತಾಪಿಸಿ ಮಾತನಾಡಿ ಕುಮಾರಣ್ಣ ಅಧಿಕಾರವಧಿಯಲ್ಲಿ ಆಡಳಿತದಲ್ಲಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿರಲಿಲ್ಲ ರೈತರ ಸಾಲ ಮನ್ನಾ ಮಾಡಲಾಯಿತು ಆ ಪಕ್ಷ ಈ ಪಕ್ಷ ಅಂತ ತಾರತಮ್ಯ ಮಾಡದೆ ಎಲ್ಲಾ ರಾಜಕೀಯ…
ನ್ಯೂಜ್ ಡೆಸ್ಕ್:ಭಾರತೀಯ ರಿಸರ್ವ್ ಬ್ಯಾಂಕ್ (RBI) ಪ್ರಕಟನೆಯಂತೆ ಸಾರ್ವಜಜಿಕರು ತಮ್ಮ ಬೆಳ್ಳಿ ಆಭರಣಗಳು ಅಥವಾ ನಾಣ್ಯಗಳನ್ನು ಒತ್ತೆ ಇಟ್ಟು ಬ್ಯಾಂಕುಗಳಿಂದ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ, ಈ ಸೌಲಭ್ಯವು ಚಿನ್ನದ ಮೇಲೆ ಮಾತ್ರ ಲಭ್ಯವಿದ್ದು ಇದನ್ನು ಈಗ ಏಪ್ರಿಲ್ 1, 2026 ರಿಂದ ಬೆಳ್ಳಿಗೆ ವಿಸ್ತರಿಸಲಾಗುವುದು ಎಂದು RBI ಹೇಳಿದೆ. RBI ಹೊರಡಿಸಿದ ಹೊಸ ಸುತ್ತೋಲೆಯ ಪ್ರಕಾರ, ವಾಣಿಜ್ಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ನಿಯಂತ್ರಿತ NBFCಗಳು ಬೆಳ್ಳಿಯ ಮೇಲೆ ಸಾಲವನ್ನು ನೀಡಬಹುದು. ಇದು ಚಿನ್ನದ ಸಾಲ ಯೋಜನೆಯಂತೆ ಕಾರ್ಯನಿರ್ವಹಿಸುತ್ತದೆ. ಈ ಮಾರ್ಗಸೂಚಿಗಳ ಪ್ರಕಾರ, ಸಾಲಗಾರರು ತಮ್ಮ ಬೆಳ್ಳಿ ಆಭರಣಗಳು ಅಥವಾ ನಾಣ್ಯಗಳನ್ನು ಒತ್ತೆ ಇಡುವ ಮೂಲಕ ಸಾಲವನ್ನು ಪಡೆಯಬಹುದಾಗಿದೆ. ಆದರೆ ಬೆಳ್ಳಿ ಬಾರ್ಗಳು ಅಥವಾ ಬೆಳ್ಳಿ ಗಟ್ಟಿಗಳು ಸಾಲಕ್ಕೆ ಅರ್ಹವಾಗಿರುವುದಿಲ್ಲ ಎಂದು RBI ಸ್ಪಷ್ಟಪಡಿಸಿದೆ. ಅದೇ ರೀತಿ, ETFಗಳು ಅಥವಾ ಮ್ಯೂಚುವಲ್ ಫಂಡ್ಗಳಂತಹ ಬೆಳ್ಳಿ ಆಧಾರಿತ ಹೂಡಿಕೆಗಳು ಸಹ ಈ ಯೋಜನೆಯ ಭಾಗವಾಗಿರುವುದಿಲ್ಲ. ಹೊಸ ನಿಯಮಗಳ…
ಕರ್ನಾಟಕದ ಗಡಿಗೆ ಹೊಂದಿಕೊಂಡ ರಾಜ್ಯಗಳ ಜೊತೆ ಗಡಿ, ನೀರು, ಭಾಷೆ, ರಸ್ತೆ ಪ್ರದೇಶ ಇತ್ಯಾದಿ ಕಾರಣಗಳಿಗಾಗಿ ಗಡಿಗಳಲ್ಲಿ ನಾನಾ ರೀತಿಯಲ್ಲಿ ಸಮಸ್ಯೆ ಇದೆ ಆದರೆ ವಿಭಜಿತ ಕೋಲಾರ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಆಂಧ್ರದ ಮದನಪಲ್ಲಿ ನಗರ ಬಗ್ಗೆ ಗಡಿಯೊಳಗಿನ ಜನರ ನಡುವೆ ವ್ಯವಹಾರಿಕವಾಗಿ ಸಾಮಾಜಿಕವಾಗಿ ಬಂದುತ್ವ ಹಾಗು ಭಾಷ ಸೌಹಾರ್ದತೆಯಿಂದ ಕೂಡಿದೆ ಎನ್ನಬಹುದು ವಿಭಜಿತ ಕೋಲಾರ ಜಿಲ್ಲೆಯ ಜನರಿಗೆ ಗಡಿಯಾಚಗಿನ ಜನರೊಂದಿಗೆ ವಿಶೇಷ ಆಪ್ಯಾಯತೆ ಅಲ್ಲಿಂದ ಇಲ್ಲಿ ಬಂದು ಬದುಕುಕೊಂಡಿರುವರುವಂತವರು ಅಲ್ಲಿನ ಬೆಳವಣಿಗೆ ಬಗ್ಗೆ ತಿಳಿದುಕೊಳ್ಳುವ ಕೂತುಹಲ!ಹೀಗಾಗಿ ಮದನಪಲ್ಲಿ ಕುರಿತಾಗಿ ಅಲ್ಲಿನ ರಾಜಕೀಯ ಬೆಳವಣಿಗೆ ಕುರಿತು ವಿಶೇಷ ಗಮನಿಸುತ್ತಾರೆ ಅದಕ್ಕೆಂದೆ ಮೊನ್ನೆಯೊಬ್ಬರು www.vcsnewz.com ಬಳಿ ಮದನಪಲ್ಲಿ ಜಿಲ್ಲೆಯಾಗುವ ಕುರಿತು ವಿದ್ಯಮಾನ್ಯಗಳ ಕುರಿತಾಗಿ ಪ್ರಸ್ತಾಪಿಸಿ ಏನಾಯಿತು ಎಂದಿದ್ದರು,ಅದಕ್ಕಾಗಿ ಲೇಖನ ನ್ಯೂಜ್ ಡೆಸ್ಕ್:ಆಂಧ್ರದ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಚಂದ್ರಬಾಬುನಾಯ್ಡು ಮದನಪಲ್ಲಿಯನ್ನು ಜಿಲ್ಲೆ ಮಾಡುವ ಭರವಸೆ ನೀಡಿದ್ದರೂ,ಈಗ ಆಂಧ್ರದಲ್ಲಿ ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿ ಕೂಟ ಅಧಿಕಾರಕ್ಕೆ ಬಂದಿದೆ ಅಲ್ಲಿನ ಹಿಂದಿನ ವೈಸಿಪಿ ಸರ್ಕಾರ ಅವೈಜ್ಞಾನಿಕವಾಗಿ ಜಿಲ್ಲಾ ಕೇಂದ್ರಗಳನ್ನು…
ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ ವಿತರಣೆ ಶ್ರೀನಿವಾಸಪುರ:ಕಳೆದ ವಾರ ಸುರಿದಂತ ಧಾರಕಾರ ಮಳೆಯಿಂದ ಶ್ರೀನಿವಾಸಪುರ ಪಟ್ಟಣದ ಸಂತೆ ಮೈದಾನದಲ್ಲಿನ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದಂತಹ ಆಹಾರ ಪದಾರ್ಥಗಳು ಬಟ್ಟೆ ವಿದ್ಯಾರ್ಥಿಗಳ ಪುಸ್ತಕಗಳು ಸಹ ಸಂಪೂರ್ಣವಾಗಿ ನೀರು ಪಾಲಾಗಿತ್ತು.ಈ ಬಗ್ಗೆ ಸ್ಥಳೀಯರ ಸಮಸ್ಯೆಗಳನ್ನು ಕೇಳುವವರೆ ಇಲ್ಲದಂತಾಗಿದ್ದು ಈ ಸಂದರ್ಭದಲ್ಲಿ ಮಾಹಿತಿ ತಿಳಿದುಕೊಂಡ ಕೋಲಾರ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗಾಯತ್ರಿ ಮುತ್ತಪ್ಪ ಪಟ್ಟಣದ ಸಂತೆ ಮೈದಾನಕ್ಕೆ ಭೇಟಿ ಕೊಟ್ಟು ಸ್ಥಳೀಯರೊಂದಿಗೆ ಮಾತನಾಡಿ ಸಮಸ್ಯೆಗಳನ್ನು ಆಲಿಸಿದ ಅವರು ಆರಂಭಿಕವಾಗಿ ಮಕ್ಕಳ ಶಿಕ್ಷಣಕ್ಕೆ ಅಗತ್ಯವಿರುವ ನೋಟ್ ಪುಸ್ತಕಗಳು ಬ್ಯಾಗಗಳು ಲೇಖನಿ ಸಾಮಗ್ರಿಗಳನ್ನು ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಗಾಯತ್ರಿ ಮುತ್ತಪ್ಪ ಮಾತನಾಡಿ ಕಳೆದ ವಾರ ಸುರಿದ ಧಾರಕಾರ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು ಇಲ್ಲಿನ ಜನರ ಬದಕನ್ನು ಅಸ್ತವ್ಯಸ್ತ ಗೋಳಿಸಿದೆ ಶಾಲಾ ಮಕ್ಕಳ ಪುಸ್ತಕಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗುವುದು ಬೇಡ ಎಂದು…
ಶ್ರೀನಿವಾಸಪುರ:ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವದ ಭಕ್ತಿಭಾವದಿಂದ ನಡೆದಿದ್ದು, ಸಾವಿರಾರು ಭಕ್ತರು ಸಂಭ್ರಮದಿಂದ ಭಾಗವಹಿಸಿದರು.ಕಾರ್ತಿಕ ಮಾಸದ ಅಂಗವಾಗಿ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಲಕ್ಷದೀಪೋತ್ಸವ ಕಾರ್ಯಕ್ರಮ ಭಕ್ತಿಭಾವ,ಸಂಭ್ರಮ ಹಾಗೂ ವೈಭವದ ವಾತಾವರಣದಲ್ಲಿ ನೆರವೇರಿತು.ವಿಶೇಷವಾಗಿ ಮಹಿಳೆಯರು ಸೇರಿದಂತೆ ಸಾವಿರಾರು ಭಕ್ತರು ಈ ಪವಿತ್ರ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಗೋವಿಂದ ನಾಮಃ ಸ್ಮರಣೆಯೊಂದಿಗೆ ಮಹಿಳೆಯರು ಪುರುಷರು ದೀಪಗಳನ್ನು ಬೆಳಗಿದ್ದು ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಬೆಳಕಿನಿಂದ ಕಂಗೊಳಿಸಿತು.ರಸ್ತೆ ಉದ್ದಕ್ಕೂ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು ರಸ್ತೆಗಳು ವಿದ್ಯುತ್ ದೀಪಗಳಿಂದ ಜಗಮಗಿಸಿತು ಪಟಾಕಿ ಬಾಣ ಬೀರಸುಗಳು ಪ್ರದರ್ಶನ ದೀಪಾವಳಿ ಸಂಭ್ರಮ ಆಕಾಶದಲ್ಲಿ ಬೆಳಕಿನಾಟದಂತೆ ಮೆರುಗು ತಂದಿತು. ಒಂದು ತಾಸು ನಡೆದ ಪಟಾಕಿ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.ನೋಡುಗರನ್ನು ಮೈ ನವಿರೇಳಿಸುವಂತೆ ಇತ್ತು. ದೇವರ ಪಲ್ಲಕ್ಕಿ ಭವ್ಯವಾಗಿತ್ತುದೀಪೋತ್ಸವಕ್ಕೂ ಮುನ್ನಾ ದೇವರ ಪಲ್ಲಕ್ಕಿ ಉತ್ಸವ ಭವ್ಯವಾಗಿ ಜರುಗಿತು.ದಾರಿ ಉದ್ದಕ್ಕೂ ಭಕ್ತರು ದೇವರಿಗೆ ಹಣ್ಣು ಕಾಯಿ ನೀಡಿ ಪೂಜೆ ಮಾಡಿಸಿದರು.ಭಕ್ತಿ ಮತ್ತು ಉತ್ಸಾಹದಿಂದ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಕಲಾ ತಂಡಗಳು…


