Author: Srinivas_Murthy

ಶ್ರೀನಿವಾಸಪುರ:ಶ್ರೀನಿವಾಸಪುರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (PLDಬ್ಯಾಂಕ್) ಸದಸ್ಯರು ಹಾಗು ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್ ನಡುವಿನ ಭಿನ್ನಮತ ತಾರಕಕ್ಕೆ ತಲುಪಿತ್ತು ನನ್ನ ವಿರುದ್ದ ಚಿತಾವಣಿ ನಡೆಸಿರುವ ಸದಸ್ಯರು ನನ್ನ ಗಮನಕ್ಕೆ ಬಾರದೆ ನಡೆಸಿದ ಸಭೆ ನಡಾವಳಿಗಳು ಉರ್ಜಿತವಾಗುವುದಿಲ್ಲ ಎಂದು PLD ಬ್ಯಾಂಕ್ ಅಧ್ಯಕ್ಷ ಆಶೋಕ್ ತೀವ್ರ ಸ್ಥಾಯಿಯಲ್ಲಿ ತಮ್ಮ ಅಸಮಧಾನ ಹೋರಹಾಕಿದ್ದರು.ಡೆಲಿಗೇಟ್ ಪಡೆದರ ಉಪಾಧ್ಯಕ್ಷಡೆಲಿಗೇಟ್(ಮತದಾನದ ಹಕ್ಕು) ಪಡೆದುಕೊಳ್ಳುವ ವಿಚಾರದಲ್ಲಿ ಸದಸ್ಯರು ಒಗ್ಗೂಡಿ PLD ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್ ಅವರನ್ನು ದೂರ ಇಟ್ಟು ಸಭೆ ನಡೆಸಿದ ಉಪಾಧ್ಯಕ್ಷ ಕೋಡಿಪಲ್ಲಿಸುಬ್ಬರೆಡ್ಡಿ ಅಪೇಕ್ಸ್ ಬ್ಯಾಂಕ್ ಮತದಾನದ ಹಕ್ಕು ಪಡೆಯುವ(ಡಿಲಿಗೇಟ್)ಬಗ್ಗೆ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು,ಈ ಬಗ್ಗೆ ಪ್ರತಿಷ್ಟೆಗೆ ಧಕ್ಕೆಯಾಗಿ ತಮ್ಮ ವಿರುದ್ದದ ಚಿತಾವಣೆ ನಡೆದಿದೆ ಎನ್ನುತ್ತಿದ್ದ ಬ್ಯಾಂಕ್ ಅಧ್ಯಕ್ಷ ದಿಂಬಾಲ ಆಶೋಕ್ಆಕ್ರೋಶ ಈಗ ತಣ್ಣಗಾಗಿದಿಯಂತೆ ಎನ್ನುವ ಮಾತು ಕೇಳಿಬರುತ್ತಿದೆ. ಸಹಕಾರಿ ಚುನಾವಣೆಗಳಲ್ಲಿ ಕೈ ಸನ್ನೆ ಆಯ್ಕೆಗಳು!ಶ್ರೀನಿವಾಸಪುರದ ಐದು ದಶಕಗಳ ರಾಜಕಾರಣದಲ್ಲಿ ತಾಲೂಕಿನ ಯಾವುದೆ ಸಹಕಾರ ಸಂಘಗಳ ಚುನಾವಣಾ ಚಟುವಟಿಕೆಗಳಲ್ಲಿ ವಿರೋಧ…

Read More

ಶ್ರೀನಿವಾಸಪುರ:ಗುರುವಾರ ಹಾಗು ಶುಕ್ರವಾರ ರಾತ್ರಿ ಸಮಯದಲ್ಲಿ ಅರ್ಭಟಿಸುತ್ತ ಸುರಿದ ಧಾರಾಕಾರ ಮಳೆಗೆ ಶ್ರೀನಿವಾಸಪುರ ಪಟ್ಟಣದ ಜನತೆ ತತ್ತರಿಸಿ ಹೋಗಿದ್ದಾರೆ. ಗುಡುಗು ಸಹಿತ ಆರ್ಭಟದ ಭಾರೀ ಮಳೆಗೆ ಈಚಲಕುಂಟೆ ಸ್ಲಂ ಮನೆಗಳು,ಕೋರ್ಟ್ ಅವರಣ ಎ.ಪಿ.ಎಂ.ಸಿ ಆವರಣ ಜಲಾವೃತವಾದರೆ ಕೋಲಾರ ನ್ಯೂಸರ್ಕಲ್, ಡಿಗ್ರಿ ಕಾಲೇಜ್ ಹಿಂಬದಿಯ ಭಾಗದಲ್ಲಿ ಒತ್ತುವರಿಯಾಗಿ ಅನಧಿಕೃತವಾಗಿ ನಿರ್ಮಾಣವಾಗಿರುವ ಮನೆಗಳಿಗೆ ಕೊಳ್ಳೂರು ಭಾಗದಿಂದ ರಾಜಕಾಲುವೆಯಲ್ಲಿ ಬರುವ ಮಳೆ ನೀರು ಮನೆಗಳಿಗೆ ನುಗ್ಗಿದೆ, ತಾಲೂಕಿನ ಕೆಲವೊಂದು ಕೆರೆಗಳು ಕೊಡಿ ಬಿದ್ದಿವೆ.ತಾಲೂಕಿನಾದ್ಯಂತ ಬಹುತೇಕ ಕಡೆ ಧಾರಾಕಾರ ಮಳೆಯಾಗಿದೆ. ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆಗಳು ಇದ್ದು ಸಣ್ಣ-ಪುಟ್ಟ ಕೆರೆಗಳು ತುಂಬಿ ಹರಿಯುತ್ತಿವೆ ಹೊಸ ಬಸ್ ನಿಲ್ದಾಣ ಇದಕ್ಕೂ ಮುಂಚೆ ಈಚಲಕುಂಟೆ ಕೆರೆಯಂಗಳವಾಗಿದ್ದರೆ ಕೋರ್ಟ್ ಆವರಣ ಈಚಲಕುಂಟೆ ಕೆರೆ ಅಚ್ಚುಕಟ್ಟು ಆಗಿತ್ತು ರಾತ್ರಿ ಸುರಿದ ಧಾರಕಾರ ಮಳೆಯಿಂದಾಗಿ ದೊಡ್ಡಮಟ್ಟದಲ್ಲಿ ನೀರು ಹರಿಯುತ್ತಿರುವ ಹಿನ್ನಲೆಯಲ್ಲಿ ಚಿಕ್ಕದಾಗಿ ನಿರ್ಮಿಸಿರುವ ರಾಜಕಾಲುವೆಗಳು ನೀರು ಹರಿವಿಗೆ ಸಾಕಾಗದೆ ಸಾಯಿ ಬಾಬಾ ದೇವಾಲಯದ ಮುಂಬಾಗ ರಸ್ತೆ ಮೆಲೆ ನೀರು ಹರಿದಿದೆ.ಕೊಳ್ಳೂರಿಗೆ ಹೊಂದಿಕೊಂಡಿರುವ ದೊಡಮಲದೊಡ್ಡಿ…

Read More

ಚಿಂತಾಮಣಿ:ಕೋಲಾರ-ಚಿಕ್ಕಬಳ್ಳಾಪುರ ಬೆಂಗಳೂರಿಗೆ ಅಹಾರ ತರಕಾರಿ ನೀಡುವ ಭೂಮಿಯಾಗಿದ್ದು ಇಲ್ಲಿನ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಒರ್ವ ಸಹೋದರನಾಗಿ ಸಹಕಾರ ನೀಡುವ ಪ್ರಯತ್ನ ಮಾಡುವೆ ಆಂಧ್ರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಪರಸ್ಪರ ಗೌರವ ಸೌಹಾರ್ದತೆಯಿಂದ ಕೂಡಿದೆ ನಾವೆಲ್ಲ ಭಾರತ ಮಾತೆಯ ಮಕ್ಕಳು ಎಂದು ಆಂಧ್ರ ಪ್ರದೇಶ ಡಿಸಿಎಂ ಪವನ್​ ಕಲ್ಯಾಣ್ ಹೇಳಿದರು. ಅವರು ಇಂದು ಚಿಂತಾಮಣಿಯಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗೋಪಾಲಗೌಡ ಅವರ ಹುಟ್ಟುಹಬ್ಬದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕರ್ನಾಟಕದ ಪ್ರಜೆಗಳಿಗೆ ನನ್ನ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣ ಆರಂಭಿಸಿ ಕರ್ನಾಟಕ ಅದ್ಭುತ ಪರಂಪರೆ, ಸಂಸ್ಕೃತಿಯ ನಾಡು ಕಲೆ ಮತ್ತು ಸಂಸ್ಕೃತಿ ನಮ್ಮನ್ನು ಒಂದೂಗಿಡಿಸಿದೆ,ಪ್ರಪಂಚ ಮೆಚ್ಚುವಂತ ವ್ಯಕ್ತಿಗಳಿಗೆ ಜನ್ಮ ನೀಡಿರುವ ಪುಣ್ಯಭೂಮಿ ಇಲ್ಲಿ ಜನಿಸಿದ ಮೊಕ್ಷಗುಂಡಮ್ ವಿಶ್ವೇಶ್ವರಯ್ಯ,ತಮ್ಮ ರಚನೆಗಳಿಂದ ಪ್ರಖ್ಯಾತರಾದ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರಿಗೂ ನಮನಗಳು ಎಂದ ಅವರು ನ್ಯಾಯಮೂರ್ತಿ ವಿ.ಗೋಪಾಲಗೌಡರ ಕಾರ್ಯವೈಖರಿ ಸಮಾಜ ಮುಖಿ ಚಿಂತನೆಗಳಿಂದ ಕೂಡಿರುತ್ತದೆ ಜನಸೇನಾ ಪಕ್ಷಕ್ಕೆ ಬಲ ನೀಡಿದವರಲ್ಲಿ ನ್ಯಾ.ಗೋಪಾಲಗೌಡ…

Read More

ನ್ಯೂಜ್ ಡೆಸ್ಕ್:ತೆಲಗು ಚಿತ್ರರಂಗದ ಅತ್ಯಂತ romantic ಜೋಡಿ ಎಂದೆ ಖ್ಯಾತರಾಗಿ ಸುದ್ದಿಯಲ್ಲಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ. ಇಬ್ಬರ ನಡುವಿನ ಪ್ರೇಮ ಪ್ರಿತಿ ಬಗ್ಗೆ ಗುಸು ಗುಸು ಸದಾ ಸುದ್ಧಿಯಲ್ಲಿರುತಿತ್ತು,ಅದಕ್ಕೆ ಅವರ ಆಪ್ತರು ಸ್ಪಷ್ಟನೆ ನೀಡಿದ್ದು ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಮತ್ತು ಮುಂದಿನ ವರ್ಷ 2026 ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ ಎಂಬ ಪ್ರಕಟಣೆ ಹೊರಬಿದ್ದಿದೆ.ಈ ಸುದ್ದಿಯಿಂದ ಅಭಿಮಾನಿಗಳು ಹೆಚ್ಚಿನ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ, ಈ ಇಬ್ಬರ ನಡುವಿನ ವಯಸ್ಸಿನ ವ್ಯತ್ಯಾಸವನ್ನು ಕಂಡುಹಿಡಿಯಲು ಮುಂದಾಗಿ ಗೂಗಲ್‌ನ searchನಲ್ಲಿ ಸಿನಿರಸಿಕರಿಗೆ ಸಿಕ್ಕಿದ್ದು ಮೂಲತಃ ಕರುನಾಡಿನ ಕೊಡಗಿನವರಾದ ರಶ್ಮಿಕಾ ಮಂದಣ್ಣ 1996ರ ಏಪ್ರಿಲ್ 5ರಂದು ಕರ್ನಾಟಕದ ಕೊಡಗಿನಲ್ಲಿ ಜನಿಸಿದರು. ಸದ್ಯ ಅವರಿಗೆ 29 ವರ್ಷ. ಟಾಲಿವುಡ್​ನಲ್ಲಿ ಗುರುತಿಸಿಕೊಂಡಿರುವ ವಿಜಯ್ ದೇವರಕೊಂಡ 1989ರ ಮೇ 9ರಂದು ಹೈದರಾಬಾದ್‌ನಲ್ಲಿ ಜನಿಸಿದರು. ಪ್ರಸ್ತುತ ಅವರ ವಯಸ್ಸು 36 ವರ್ಷ. ಈ ಪ್ರೇಮಪಕ್ಷಿಗಳ ನಡುವಿನ ವಯಸ್ಸಿನ ಅಂತರ 7 ವರ್ಷಗಳು.ಪ್ರೇಮಕಥೆ ಹೇಗೆ ಪ್ರಾರಂಭವಾಗಿದ್ದು ಹೇಗೆ?2018…

Read More

ಹೊಸಕೋಟೆ-ಚಿಂತಾಮಣಿ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಅಕ್ಕ-ತಂಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಸ್ತೆ ಕಾಮಗಾರಿಯ ನಿರ್ಲಕ್ಷ್ಯದಿಂದ ಬಿದ್ದಿದ್ದ ಜಲ್ಲಿಕಲ್ಲುಗಳ ಮೇಲೆ ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ, ಹಿಂಬದಿಯಿಂದ ಬಂದ ಕ್ಯಾಂಟರ್ ಅವರ ಮೇಲೆ ಹರಿದು ದುರ್ಘಟನೆ ಸಂಭವಿಸಿದೆ. ನ್ಯೂಜ್ ಡೆಸ್ಕ್:ರಸ್ತೆ ಹಳ್ಳ ಮುಚ್ಚಲು ಕಾಮಗಾರಿ ಮಾಡುವ ಸಂದರ್ಭದಲ್ಲಿ ಬೆಂಗಳೂರಿನ ಬೂದಿಗೆರೆ ಕ್ರಾಸ್ ಬಳಿ ರಸ್ತೆ ಗುಂಡಿ ತಪ್ಪಿಸಲು ಹೋದ ಟಿಪ್ಪರ್ ಲಾರಿ 22 ವರ್ಷದ ವಿದ್ಯಾರ್ಥಿನಿ ಧನುಶ್ರೀ ಚಲಾಯಿಸುತ್ತಿದ್ದ ಸ್ಕೂಟರ್ ಗೆ ಡಿಕ್ಕಿಯಾಗಿ ಆಕೆ ಕೆಳಗೆ ಬಿದಿದ್ದು ಆಕೆ ಮೇಲೆ ಟಿಪ್ಪರ್ ಲಾರಿ ಹರಿದು ವಿದ್ಯಾರ್ಥಿನಿ ಸಾವನ್ನಪ್ಪಿದ ಬೆನ್ನಲ್ಲೇ ಹೊಸಕೋಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹದೆ ಮತ್ತೊಂದು ಘಟನೆಯಾಗಿದೆ.ರಸ್ತೆ ಕಾಮಗಾರಿ ನಡೆಯುತ್ತಿದ್ದ ರಸ್ತೆಯ ಮೇಲೆ ಜಲ್ಲಿಕಲ್ಲುಗಳು ಬಿದ್ದಿದ್ದು ಇಬ್ಬರು ಸಹೋದರಿಯರು ದ್ವಿಚಕ್ರ ವಾಹನ ಚಲಾಯಿಸಿಕೊಂಡು ಬಂದಿದ್ದು ಅಲ್ಲಿ ಜಲ್ಲಿಕಲ್ಲುಗಳನ್ನು ಹರಡಿದ್ದು ಅದರ ಮೇಲೆ ವಾಹನ ಚಲಾಯಿಸಿದಾಗ ದ್ವೀಚಕ್ರ ವಾಹನ ನಿಯಂತ್ರಣ ಕಳೆದುಕೊಂಡು ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದಾರೆ ಅದೇ…

Read More

ನ್ಯೂಜ್ ಡೆಸ್ಕ್:ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (FKCCI) ಅಧ್ಯಕ್ಷರಾಗಿ ಉಮಾ ರೆಡ್ಡಿ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಸಂಸ್ಥೆಯ 108 ವರ್ಷಗಳ ಇತಿಹಾಸದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.1916 ರಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ್ದ ಎಫ್‌ಕೆಸಿಸಿಐ ಯಲ್ಲಿ ಸಾಂಪ್ರದಾಯಿಕವಾಗಿ ಪುರುಷರು ಮುನ್ನಡೆಸಿಕೊಂಡು ಬರುತ್ತಿರುವುದು ವಾಡಿಕೆ ಆದರೆ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಅಧ್ಯಕ್ಷತೆ ವಹಿಸಿಕೊಂಡಿದ್ದು ಸಂಸ್ಥೆಗೆ ಇದೊಂದು ಹೆಗ್ಗುರುತು ಎಂದು ಚೇಂಬರ್ ಹೇಳಿಕೆಯಲ್ಲಿ ತಿಳಿಸಿದೆ.ಉಮಾ ರೆಡ್ಡಿಯವರು ಸೆಪ್ಟೆಂಬರ್ 28, 2024 ರಂದು 2024-25ನೇ ಸಾಲಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ (FKCCI) ಹಿರಿಯ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.ಉಮಾ ರೆಡ್ಡಿಯವರು ಮೆಸರ್ಸ್ ಹೈಟೆಕ್ ಮ್ಯಾಗ್ನೆಟಿಕ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ಟ್ರಾನ್ಸ್‌ಫಾರ್ಮರ್ ಕಾಯಿಲ್‌ಗಳ ತಯಾರಿಕೆ ಇತ್ಯಾದಿಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಮೊದಲ ತಲೆಮಾರಿನ ಉದ್ಯಮಿಯಾಗಿದ್ದಾರೆ.ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ (ಎಫ್‌ಕೆಸಿಸಿಐ) 2024-25ನೇ ಸಾಲಿನಲ್ಲಿ ಅಧ್ಯಕ್ಷರಾಗಿದ್ದ ಎಂ ಜಿ ಬಾಲಕೃಷ್ಣ ಅವರು 2024-25ನೇ ಸಾಲಿಗೆ ಕರ್ನಾಟಕ…

Read More

ಶ್ರೀನಿವಾಸಪುರ: ತಾಲೂಕಿನ ಅರಿಕೇರೆ ಗ್ರಾಮದಲ್ಲಿ ಪ್ರತಿ ವರ್ಷದಂತೆ ನಾಡ ಹಬ್ಬ ನವರಾತ್ರಿ ದಸರಾ ಉತ್ಸವ ಹಾಗೂ ಸಂಭ್ರಮದಿಂದ ವಿಜಯದಶಮಿ ಆಚರಿಸಲಾಯಿತು.ಗ್ರಾಮದ ಶ್ರೀ ಕೋದಂಡರಾಮ ದೇವರ ಪಲ್ಲಕ್ಕಿ ಉತ್ಸವವಕ್ಕೆ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ನೇತೃತ್ವದಲ್ಲಿ ಗ್ರಾಮದ ಹಿರಿಯರು ಯುವಕರು ಸೇರಿ ಪೂಜೆ ಸಲ್ಲಿಸುವುದರ ಮೂಲಕ ವಿಜಯದಶಮಿ ಆಚರಣೆಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜಣ್ಣ ಶ್ರೀ ದುರ್ಗಾದೇವಿ ಅಸುರರನ್ನು ಸಂಹರಿಸಿ ಮಾನವ ಜನಾಂಗಕ್ಕೆ ಒಳಿತನ್ನು ಕರುಣಿಸಿದ ದಿನ ಈ ನಿಟ್ಟಿನಲ್ಲಿ ಮನುಷ್ಯ ತನ್ನಲ್ಲಿರುವ ಕೆಡುಕಗಳನ್ನು ಮನಸ್ಸಿನಿಂದ ಶಾಶ್ವತವಾಗಿ ದೂರಸರಿಸಿ, ಒಳಿತನ್ನು ಎಲ್ಲೆಡೆ ಪಸರಿಸುವ ಜೊತೆಗೆ ನವರಾತ್ರಿ ಸಂದೇಶವನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರುಗ್ರಾಮಸ್ಥರು ತಾಳ ಮೇಳಗಳೋಂದಿಗೆ ಶ್ರೀ ಕೋದಂಡರಾಮ ದೇವರ ಪಲ್ಲಕ್ಕಿ ಉತ್ಸವವನ್ನು ಹೊತ್ತು ಊರಿನಲ್ಲಿ ಮೆರವಣಿಗೆ ನಡೆಸಿ ಅಂಬು ಒಡೆಯುವ ಸ್ಥಳಕ್ಕೆ ಸಾಗಿದರು. ಗ್ರಾಮಸ್ಥರು ಹಾಗೂ ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಮತ್ತು ಶ್ಯಾನುಭೋಗರ ಕುಟುಂಬದವರು ಗಿರಿರಾಜ್ ಸೇರಿದಂತೆ ಗ್ರಾಮದ ಪ್ರಮುಖರ ಸಮ್ಮುಖದಲ್ಲಿ ಪದ್ದತಿಯಿಂತೆ ಗ್ರಾಮದ…

Read More

ನ್ಯೂಜ್ ಡೆಸ್ಕ್:ಬಯಲು ಸೀಮೆ ಮಲೆನಾಡಿನಂತೆ ಆಗಲಿದ್ದು ಮಲೆನಾಡು ಬಯಲು ಸೀಮೆಯಂತಾಗುತ್ತೆ ಮುಂದಿನ ಸಂಕ್ರಾಂತಿ ತನಕ ಸಿದ್ಧರಾಮಯ್ಯ ಸರ್ಕಾರಕ್ಕೆ ಯಾವುದೆ ತೊಂದರೆ ಇರುವುದಿಲ್ಲ ಎಂದು ಕೋಡಿಮಠದ ಮಹಾಸ್ವಾಮೀಜಿ ಭವಿಷ್ಯ ಹೇಳಿದ್ದಾರೆ.ಅವರು ಧಾರವಾಡದಲ್ಲಿ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದಸರಾದ ನಿಜವಾದ ಅರ್ಥ ದುಷ್ಟ ಶಕ್ತಿಗಳನ್ನು ದೂರ ಮಾಡುವುದು. ಮನುಷ್ಯನ ಕೋಪ, ತಾಪ, ಆಸೆಗಳನ್ನು ಗೆಲ್ಲುವಂತೆ ಮಾಡುವುದಾಗಿದೆ. ಅಲ್ಲದೇ ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿಗಾಗಿ ದಸರಾವನ್ನು ಆಚರಿಸಲಾಗುತ್ತದೆ ಎಂದು ಹೇಳಿದರು.ಎರಡೂವರೆ ವರ್ಷಕ್ಕೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ ಎನ್ನಲಾಗುತ್ತಿದ್ದು ಇದಕ್ಕೆ ಭಿನ್ನವಾಗಿ ಕೋಡಿಮಠ ಮಹಾಸಂಸ್ಥಾನದ ಪೀಠಾಧ್ಯಕ್ಷ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಭವಿಷ್ಯ ನುಡಿದಿದ್ದು ಸಿಎಂ ಸಿದ್ಧರಾಮಯ್ಯ ಅವರಿಗೆ, ಸಂಕ್ರಾಂತಿ ತನಕ ಯಾವುದೇ ತೊಂದರೆ ಹಾಗು ಭಯವೂ ಇಲ್ಲ. ಸಂಕ್ರಾಂತಿ ಬಳಿಕ ಆ ಬಗ್ಗೆ ಭವಿಷ್ಯ ನುಡಿಯುವುದಾಗಿ ಹೇಳಿದ್ದಾರೆ.ಈ ಹಿಂದೆಯೇ ಹೇಳಿದಂತೆ ಬಯಲು ಸೀಮೆ ಮಲೆನಾಡು ಆಗಲಿದೆ. ಮಲೆನಾಡು ಬಯಲು ಸೀಮೆ ಆಗುತ್ತದೆ ಎಂದ ಅವರು ಬಯಲು ಸೀಮೆ…

Read More

ಶ್ರೀನಿವಾಸಪುರ:ಗ್ರಾಮಗಳ ಅಭಿವೃದ್ಧಿಗೆ ಸರ್ಕಾರದಿಂದ ಬಿಡುಗಡೆಯಾಗುವಂತ ಅನುದಾನಗಳನ್ನು ದುರುಪಯೋಗ ಆಗಲು ಅವಕಾಶ ನೀಡಬಾರದು, ಒಂದು ವೇಳೆ ದುರುಪಯೋಗ ಆಗಿರುವುದು ಸಾಬಿತಾದರೆ ಅಂತಹ ಅಧಿಕಾರಿಗಳ ವಿರುದ್ದ ನಿರ್ಧಾಕ್ಷಿಣ್ಯವಾಗಿ ಕಾನೂನಾತ್ಮಕವಾದ ಕ್ರಮ ಜರುಗಿಸಲಾಗುವುದು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ Justice B.Veerappa Upalokayukta ಹೆಚ್ಚರಿಸಿದರು.ಅವರು ಮಂಗಳವಾರ ಒಂದೇ ದಿನ ತಾಲೂಕಿನ ಸುಮಾರು 13 ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ, ಪಂಚಾಯಿತಿ ಅಧಿಕಾರಿಗಳ ಕಾರ್ಯನಿರ್ವಹಣೆ ಹಾಗು ಅಲ್ಲಿನ ಅಡಳಿತ ಕಾರ್ಯವೈಕರಿ ಕುರಿತಾಗಿ ಖುದ್ದು ಪರಶೀಲನೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದರು. ಗ್ರಾಮಗಳಲ್ಲಿ ಸ್ವಚ್ಚತೆ ಹಾಗು ನೈರ್ಮಲ್ಯ ಕಾಪಾಡಲು ಪಂಚಾಯಿತಿ ಅಧಿಕಾರಿಗಳು ಆದ್ಯತೆ ನೀಡಬೇಕಿದೆ ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಗ್ರಾಮದ ಅಭಿವೃದ್ದಿಗೆ ಸರ್ವತಾ ಸಹಕಾರ ನೀಡುವಂತೆ ತಿಳಿಸಿದರು.ಲಕ್ಷ್ಮೀಸಾಗರ,ಯಲ್ದೂರು ಸೋಮಯಾಜಲಪಲ್ಲಿ, ಕೊಳತೂರು ಮತ್ತು ಮುತ್ತಕಪಲ್ಲಿ ಗ್ರಾ.ಪಂ ಕಚೇರಿಯಲ್ಲಿನ ದಾಖಲೆಗಳ ನಿರ್ವಹಣೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂಬ ದೂರುಗಳು ಬಂದ ಹಿನ್ನಲೆಯಲ್ಲಿ ಉಪಲೋಕಾಯುಕ್ತ ನ್ಯಾಯಮೂರ್ತಿ Justice B Veerappa, ಪಂಚಾಯಿತಿಗಳ ಭೇಟಿ ವೇಳೆ ವಿಶೇಷ ಪರಶೀಲನೆ ಮಾಡಿದರು.ಗ್ರಾಮ ಪಂಚಾಯಿತಿ ಅಧಿಕಾರಿಗಳು…

Read More

ನ್ಯೂಜ್ ಡೆಸ್ಕ್: ಸೃಷ್ಟಿಯಲ್ಲಿ ತಾಯಿಗೆ ಸಮನಾದ ಪ್ರೀತಿ ಮತ್ತೆಲ್ಲೂ ಸಿಗದು,ತಾಯಿಯಷ್ಟು ಪ್ರೀತಿಸುವವರು ಈ ಲೋಕದಲ್ಲಿ ಇನ್ನೊಬ್ಬರಿಲ್ಲ. ಮಗು ತಿನ್ನಲು ನಿರಾಕರಿಸಿದಾಗ ತಾಯಿ ಆಪ್ಯಾಯಿತೆಯಿಂದ ಹಾಲುಣಿಸುತ್ತಾಳೆ. ಪ್ರತಿಯೊಬ್ಬ ತಾಯಿಯೂ ತನ್ನ ಮಗು ಹೊಟ್ಟೆ ತುಂಬಿಸಬೇಕೆಂದು ಬಯಸುತ್ತಾಳೆ. ಮಗು ತಿನ್ನಲು ನೀರಾಕರಿಸಿ ಹಠ ಹಿಡಿದರೆ ಮಗುವನ್ನು ಎತ್ತಿಕೊಂಡು ಓಡಾಡುತ್ತ ಮುದ್ದಿಸುತ್ತ ಆಕಾಶದ ಚಂದಮಾನನ್ನು ತೋರಿಸುತ್ತ ಉಣಿಸುತ್ತಾಳೆ.ಇಂತಹ ತಾಯಿ ಪ್ರಿತಿಯನ್ನು ವರ್ಣಿಸಲು ಪದಗಳೆ ಸಿಗುವುದಿಲ್ಲ ಆದರೆ ಇದಕ್ಕೆ ಭಿನ್ನ ಎನ್ನುವಂತೆ ಇಲ್ಲೊಬ್ಬ ತಾಯಿ ತನ್ನ ಮಗ ಚಿಕನ್ ಕರ್ರಿ ಕೇಳಿದ ಎಂದು ಕೋಪಗೊಂಡು ಮಗನನ್ನು ಬಡಿದು ಕೊಂದಿರುವ ಅಮಾನವೀಯ ಘಟನೆ ಮಹಾರಾಷ್ಟ್ರದ ಪಲ್ಹಾರ್ ಜಿಲ್ಲೆಯಲ್ಲಿ ನಡೆದಿದೆ.ಮಹಾರಾಷ್ಟ್ರದ ಪಾಲ್ಘರ್‌ನ ಕಾಶಿಪಡ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಚಿಕನ್ ಕರ್ರಿ ಬೇಕೆಂದು ಹಠ ಮಾಡಿದ ತಾನೆ ಹೆತ್ತು ಹೊತ್ತ 7 ವರ್ಷದ ಮಗನನ್ನು ಮನೆಯಲ್ಲಿದ್ದ ಒನಕೆಯಿಂದ ಹಿಗ್ಗಾಮುಗ್ಗಾ ಹೊಡೆದಿದ್ದು ಇದರಿಂದ ಮಗ ಚಿನ್ಮಯ್ ಗಣೇಶ್ ಧುಮ್ಡೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.ಆರೋಪಿ ತಾಯಿ 40 ವರ್ಷದ ಪಲ್ಲವಿ ಧುಮ್ಡೆ, ತನ್ನ 10…

Read More