Author: Srinivas_Murthy

ನ್ಯೂಜ್ ಡೆಸ್ಕ್:ಕರ್ನಾಟಕದ ಶಕ್ತಿ ಯೋಜನೆಯ ರೀತಿಯಲ್ಲೇ ಆಂಧ್ರಪ್ರದೇಶ ರಸ್ತೆ ಸಾರಿಗೆ ನಿಗಮ (APSRTC) ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು (Free Bus)ಚಂದ್ರಬಾಬು ನೇತೃತ್ವದ NDA ಸರ್ಕಾರ ಜಾರಿಗೆ ತಂದಿದೆ. ಆಗಸ್ಟ್ 15, 2025 ರಂದು ಆಂಧ್ರಪ್ರದೇಶದ ಅಮರಾವತಿಯಲ್ಲಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಐಟಿ ಸಚಿವ ನಾರಾ ಲೋಕೇಶ್ ಸೇರಿದಂತೆ ಹಿರಿಯ ಅಧಿಕಾರಿಗಳು ಮಹಿಳೆಯರೊಂದಿಗೆ ಬಸ್‌ನಲ್ಲಿ ಸಂಚಾರ ಆರಂಭಿಸುವ ಮೂಲಕ ಸ್ತ್ರೀ ಶಕ್ತಿ ಉಚಿತ ಬಸ್ ಪ್ರಯಾಣ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.ಆಂಧ್ರ ಪ್ರದೇಶದಲ್ಲಿ ನಿವಾಸ ಇರುವಂತ ಮಹಿಳೆಯರು ಮತ್ತು ಮಂಗಳಮುಖಿಯರು ಈ ಯೋಜನೆ ಪ್ರಯೋಜನವನ್ನು ಪಡೆಯಬಹುದು.ಯೋಜನೆ APSRTCಯ ಸಾಮಾನ್ಯ ಬಸ್‌ಗಳಿಗೆ ಮಾತ್ರ ಅನ್ವಯಿಸುತ್ತದೆ ಎನ್ನಲಾಗಿದೆ.2024 ರ ವಿಧಾನಸಭೆ ಚುನಾವಣೆಯ ಸಮಯದಲ್ಲಿ ರಾಜ್ಯದ ಜನರಿಗೆ ನೀಡಿದ್ದ ಸೂಪರ್ 6 ಭರವಸೆಯ ಪ್ರಮುಖ ಯೋಜನೆಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವೂ ಒಂದಾಗಿದೆ, 19 ರಿಂದ 59,ವರ್ಷ ವಯಸ್ಸಿನ ಪ್ರತಿ ಮಹಿಳೆಗೆ ಮಾಸಿಕ 1,500 ರೂ. ನೆರವು,…

Read More

ಶ್ರೀನಿವಾಸಪುರ:ತಾಲೂಕಿನ ಅರಕೇರಿಯ ಶ್ರೀ ಕೋದಂಡರಾಮ ದೇವಾಲಯದಲ್ಲಿ ಕೃಷ್ಣಾಷ್ಟಮಿ ಸಂಭ್ರಮ ಮನೆಮಾಡಿತ್ತು. ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದಂದು ಗೋಕುಲಾಷ್ಟಮಿ ಆಚರಿಸುವುದು ಸಂಪ್ರದಾಯ ಅದರಂತೆ ಇಂದು ಶ್ರಾವಣದ ಶನಿವಾರದ ಹಿನ್ನೆಲೆಯಲ್ಲಿ ಮೂಲ ವಿಗ್ರಹ ಶ್ರೀ ಕೋದಂಡರಾಮ ಮೂರ್ತಿಗೆ ಅಲಂಕಾರಪ್ರಿಯ ನಿಲಮೇಘ ಶ್ಯಾಮ (ನಿಲಿಬಣ್ಣದ)  ಕೃಷ್ಣಾವತಾರದ ಅಲಂಕಾರ ಮಾಡಲಾಗಿದ್ದು ಕೋದಂಡರಾಮನ ಕೊಳಲು ಇಟ್ಟು ದಾಳಿಂಬೆ ಅಲಂಕಾರ ಮಾಡಲಾಗಿ ಆಭರಣಗಳನ್ನ ತೊಡಿಸಲಾಗಿತ್ತು.ಕೋದಂಡರಾಮ ಕೃಷ್ಣಾತಾರದಲ್ಲಿ ದರ್ಶನ ನೀಡಿದ.ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ರಾಮನ ವಿಗ್ರಹದಲ್ಲಿ ಕೃಷ್ಣನನ್ನು ಕಂಡು ಪುಳಕಿತರಾದರು. ಈ ಸಂದರ್ಭದಲ್ಲಿ ಶ್ರೀಕೋದಂಡರಾಮ ದೇವಾಲಯದ ಅಧ್ಯಕ್ಷ  ಇಂದಿರಾಭವನ್ ರಾಜಣ್ಣ ಮಾತನಾಡಿ ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಕೃಷ್ಣನು ಹುಟ್ಟಿದ ದಿನ ಇಡೀ ದಿನ ಇರುವ ಸರ್ವಾರ್ಥ ಸಿದ್ಧಿ ಯೋಗವು ಭಕ್ತರ ಎಲ್ಲಾ ಆಸೆಗಳನ್ನು ಪೂರೈಸುವ ಶುಭ ದಿನವಾಗಿದೆ. ಎಲ್ಲೆಡೆ ಕೃಷ್ಣನನ್ನು ಆರಾಧನೆಯನ್ನು ಮಾಡಲಾಗುತ್ತದೆ.ಜನರನ್ನು ಕಷ್ಟ ಕಾರ್ಪಣ್ಯದಿಂದ ಕಾಪಾಡಿ ಸಂತಸ ನೀಡಲಿ ಎಂದು ಭಕ್ತರು ಕೃಷ್ಣನನ್ನು ಪೂಜಿಸಿ ಅರಾಧಿಸುತ್ತಾರೆ,ಈ ಹಿನ್ನಲೆ ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಶ್ರೀ ಕೋದಂಡರಾಮ…

Read More

ಶ್ರೀನಿವಾಸಪುರ:ತ್ಯಾಗ ಬಲಿದಾನದ ಪರಿಣಾಮ ನಮಗೆ ಸ್ವಾತಂತ್ರ್ಯ ಸಿಕ್ಕಿದೆ ಅದನ್ನು ನಾವೆಲ್ಲರೂ ಉಳಿಸಿ, ಬೆಳೆಸಿಕೊಂಡು ಹೋಗಬೇಕು ಇದಕ್ಕಾಗಿ ವಿದ್ಯಾರ್ಥಿಗಳು ದೇಶದ ಉತ್ತಮ ಪ್ರಜೆಗಳಾಗಿ ಮೌಲ್ಯಯುತವಾದ ಜೀವನ ಮಾಡುವ ಮೂಲಕ ದೇಶದ ಗೌರವ ಹೆಚ್ಚಿಸಬೇಕು ಎಂದು ರೋಣೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಶ್ರೀನಿವಾಸಗೌಡ ಹೇಳಿದರು, ಅವರು ಶಾಲೆಯಲ್ಲಿ ಹಮ್ಮಿಕೊಂಡಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದರು.ಕಾರ್ಯಕ್ರಮದದಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎಲ್.ವಿ.ಗೋವಿಂದಪ್ಪ,ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಮೇಶ್ ಶಿಕ್ಷಕ ಅಮರನಾಥ್ ಮುಂತಾದವರು ಇದ್ದರು.

Read More

ಶ್ರೀನಿವಾಸಪುರ:ಇಬ್ಬರು ಶಾಸಕರ ವೈಯುಕ್ತಿಕ ಕಿತ್ತಾಟದ ನಡುವೆ ಕೋಲಾರ ಹಾಲು ಒಕ್ಕೂಟವನ್ನು ಎಳೆದು ತರಬೇಡಿ ಇದು ಜಿಲ್ಲೆಯ ರೈತರ ಜೀವನಾಡಿ ಎಂದು ಕೋಮುಲ್‌ ನಿರ್ದೇಶಕ ಕೆ.ಕೆ.ಮಂಜುನಾಥ್ ಹೇಳಿದರು ಅವರು ಇಂದು ಹಾಲು ಒಕ್ಕೂಟದ ಕಚೇರಿಯಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದರು.ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಹಾಗು ಶಾಸಕ ಕೆ.ವೈ.ನಂಜೇಗೌಡರ ನಡುವಿನ ವೈಯುಕ್ತಿಕ ದ್ವೇಷಕ್ಕೆ ರೈತರ ಜೀವನಾಡಿ ಹಾಲು ಒಕ್ಕೂಟದ ಹೆಸರು ಮುಂದಿಟ್ಟುಕೊಂಡು ರಾದ್ದಾಂತ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರ ಕ್ಷೇತ್ರದಿಂದ ಕೋಲಾರ ಹಾಲು ಒಕ್ಕೂಟದ ನಿರ್ದೇಶಕರಾಗಿ ಚುನಾಯಿತರಾದ್ದಾರೆ ಅವರು ಕೋಮುಲ್‌ ಸಭೆಗಳಲ್ಲಿ ಭಾಗವಹಿಸಿ ಚರ್ಚಿಸಿ ಸಮಸ್ಯೆ ಗೊಂದಲ ಇದ್ದರೆ ಬಗೆ ಹರಿಸಿಕೊಳ್ಳುವುದು ಉತ್ತಮ.ಹಾಲು ಒಕ್ಕೂಟಕ್ಕೆ ಮಂಜೂರಾದ ಜಮೀನು ಕುರಿತಾಗಿ ಎಸ್‌.ಎನ್‌.ನಾರಾಯಣಸ್ವಾಮಿ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆಗೆ ತಂದಿದ್ದಾರೆ ಇದರಿಂದ ಹಾಲು ಒಕ್ಕೂಟದ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿ ಒಕ್ಕೂಟದ ಮೇಲಿನ ಗೌರವ ಕಡಿಮೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ವೇದಿಕೆ ಕಲ್ಪಿಸುತ್ತೇವೆ ಅಲ್ಲಿ ಕಿತ್ತಾಡಿಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಮೂರು ಬಾರಿ ಶಾಸಕರಾಗಿದ್ದಾರೆ ಹಿರಿಯರು ಇದ್ದಾರೆ…

Read More

ಶ್ರೀನಿವಾಸಪುರ:ಶ್ರೀನಿವಾಸಪುರ ಪಟ್ಟಣದಲ್ಲಿ ಅಕ್ರಮವಾಗಿ ವಾಸವಾವಿದ್ದ 10 ಮಂದಿ ಬಾಂಗ್ಲಾ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ವ್ಯಕ್ತಿಗಳು ಪಟ್ಟಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದು ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾಗ ಇವರೊಂದಿಗೆ ಇನ್ನೂ ಎಂಟು ಮಂದಿ ಇರುವುದಾಗಿ ಮಾಹಿತಿ ಬಾಯ್ಬಿಟ್ಟಿದ್ದಾರೆ.ಪಟ್ಟಣದ ಪಾಲಿಟೆಕ್ನಿಕ್ ಬಯಲು ಪ್ರದೇಶದಲ್ಲಿ ತಾತ್ಕಾಲಿಕ ಟೆಂಟ್ ಹಾಕಿಕೊಂಡು ಇದ್ದವರನ್ನು ಪೊಲೀಸರು ಬಂಧಿಸಿದ್ದಾರೆ.ಪೋಲಿಸರು ವಶಕ್ಕೆ ಪಡೆದವರಲ್ಲಿ ಮೂವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 10 ಮಂದಿ ಇದ್ದು ಅಕ್ರಮ ಬಾಂಗ್ಲಾ ವಲಸಿಗರು ಬಾಂಗ್ಲಾದ ಕುಲ್ನಾ ರಾಜ್ಯದ ಬಾಗೇರ್ ಹಠ್ ಜಿಲ್ಲೆಯ ತಪಲ್ಬರಿ ಗ್ರಾಮದವರು ಎಂದು ತಿಳಿದುಬಂದಿದೆ.ಈ ಸಂಬಂದ ಶ್ರೀನಿವಾಸಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನ್ಯೂಜ್ ಡೆಸ್ಕ್:ಕಲ್ಪತರು ನಾಡು ತುಮಕೂರಿನಿಂದ ಕೋಲಾರಕ್ಕೆ ಬರಲು ಈ ರಸ್ತೆ ಬಳಸಿದರೆ ಅಂದಾಜು ಒಂದು ಗಂಟೆ ಸಾಕು ಇನ್ನೂ ಚಿಕ್ಕಬಳ್ಳಾಪುರಕ್ಕೆ ಬಹುಶಃ ನಲವತೈದು ನಿಮಿಷ ಆದರೆ ಸಾಕು ಎನ್ನುತ್ತಾರೆ ವಾಹನ ಚಾಲಕರು.ಈ ರಸ್ತೆ ಬಳಸುವದರಿಂದ ಬೆಂಗಳೂರಿನ ಜನದಟ್ಟಣೆ ರಸ್ತೆಗಳಲ್ಲಿನ ಸಂಚಾರದ ದೀರ್ಘಕಾಲಿಕ ಕಿರಿಕಿರಿ Trafficಯಿಂದ ಸಾಕಪ್ಪ ಸಾಕು ಎಂದು ಬಳಲುವುದು ತಪ್ಪಿಸಲು ಮತ್ತು ಅಂತರ-ರಾಜ್ಯ ಪ್ರಯಾಣಿಕರಿಗೆ ಈ ಹೆದ್ದಾರಿ ನಿರ್ಣಾಯಕ ಬೈಪಾಸ್ ಆಗಿರುತ್ತದೆ ಪ್ರಯಾಣದ ಸಮಯವನ್ನು ಕಡಿಮೆಗೊಳಿಸುತ್ತದೆ ಎಂದು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಮಾತು. ಯಾವುದು ಈ ರಸ್ತೆಹಾಗಾದರೆ ಇದು ಯಾವ ರಸ್ತೆ ಎಂದರೆ ಇದು ಬೆಂಗಳೂರು ಉತ್ತರ ಜಿಲ್ಲೆ ಡಾಬಸ್ ಪೇಟೆಯಿಂದ ತಮಿಳುನಾಡಿನ ಹೊಸೂರಿನವರೆಗೆ ವಿಸ್ತರಿಸಿರುವ ನೂತನ ಸ್ಯಾಟಲೈಟ್ ಟೌನ್ ರಿಂಗ್ ರೋಡ್ (STRR) ರಸ್ತೆ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ NHAI ಭಾರತ್‌ಮಾಲಾ ಪರಿಯೋಜನಾ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ ಎನ್ನಲಾಗಿದೆ.NHAI ಅಧಿಕಾರಿಗಳು ಹೇಳುವಂತೆ STRR ನಾಲ್ಕರಿಂದ ಆರು ಪಥಗಳ ಪ್ರವೇಶ-ನಿಯಂತ್ರಿತ ಹೆದ್ದಾರಿಯಾಗಿದ್ದು, ಈ ಕೆಳಗಿನ ಪ್ರಮುಖ ನಗರಗಳಾದ ಡಾಬಸ್…

Read More

ಶ್ರೀನಿವಾಸಪುರ:ಪಟ್ಟಣದ ಸರೋಜಿನಿ ರಸ್ತೆಯಲ್ಲಿರುವ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮೂರು ದಿನಗಳ ಶ್ರೀರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಸಂಪನ್ನವಾಗಿದೆ.ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನೆ ಮೂರು ದಿನಗಳ ಕಾಲ ನಡೆಯಿತು ಭಾನುವಾರ ದಿಂದ ಪೂರ್ವಾರಾಧನೆ,ಸೋಮವಾರ ಮಧ್ಯಾರಾಧನೆ ಹಾಗೂ ಮಂಗಳವಾರ ಉತ್ತರಾರಾಧನೆ ನಡೆದು ಆರಾಧನಾ ಮಹೋತ್ಸವ ಸಂಪನ್ನಗೊಂಡಿತು.ಆರಾಧನೆ ಅಂಗವಾಗಿ ಶ್ರೀನಿವಾಸ ದೇವರು ಹಾಗು ಮುಖ್ಯಪ್ರಾಣ ದೇವರು ಸಮೇತ ಶ್ರೀ ರಾಘವೇಂದ್ರ ಬೃಂದಾವನವನ್ನು ವಿಶೇಷ ಅಲಂಕಾರ ಮಾಡಲಾಗಿದ್ದು ಪ್ರತಿದಿನ ಪೂಜೆ, ಅಭಿಷೇಕ, ಸೇರಿದಂತೆ ಸಂಜೆ ಹೊತ್ತು ಭಜನೆ ಪ್ರವಚನ ಹಾಗು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಜರುಗಿತು.ಭಕ್ತರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ರಾಘವೇಂದ್ರ ಸ್ವಾಮಿಗಳ ಕೃಪೆಗೆ ಪಾತ್ರರಾದರು.

Read More

ನ್ಯೂಜ್ ಡೆಸ್ಕ್:ಕೆ ಸಿ ವ್ಯಾಲಿ ನೀರಿನ 3ನೇ ಹಂತದ ಶುದ್ದಿಕರಣ ಮಾಡಿ ನೀರು ಹರಸಬೇಕೆಂದು ಒತ್ತಾಯಿಸಿ ಶಾಸಕ ವೆಂಕಟಶಿವಾರೆಡ್ದಿ ವಿಧಾನಸಭೆಯಲ್ಲಿ ಸರ್ಕಾರದ ಗಮನಸೆಳೆದಿದ್ದಾರೆ.ಅವರು ಸೋಮವಾರ ವಿಧಾನಸೌಧದಲ್ಲಿ ಪ್ರಶ್ನೋತ್ತರ ವೆಳೆ ಮಾತನಾಡಿ ಸಾರ್ವಜನಿಕ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಕೆ.ಸಿ ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಬೇಕು ಕೇವಲ ಎರಡು ಹಂತದ ಶುದ್ಧೀಕರಣ ಮಾಡಿದರೆ ಜನತೆ ಅರೋಗ್ಯ ಸಮಸ್ಯೆ ಅನುಭವಿಸುತ್ತಾರೆ ಎಂದರು.ಕೆ.ಸಿ.ವ್ಯಾಲಿ ಯೋಜನೆ ಉತ್ತಮವಾಗಿದೆ ಇದನ್ನು ನಾನು ಸ್ವಾಗತಿಸುತ್ತೇನೆ ಆದರೆ ಕೇವಲ ಎರಡು ಹಂತದ ಶುದ್ಧೀಕರಣ ಮಾಡಲಾಗುತ್ತಿದೆ ಅದು ಸಹ ಸಮರ್ಪಕವಾಗಿ ಆಗುತ್ತಿಲ್ಲ ಇದು ಒಳ್ಳೆಯದಲ್ಲ ಕೆ.ಸಿ.ವ್ಯಾಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡದಿದ್ದರೆ ನೀರು ನಮ್ಮ ತಾಲೂಕಿಗೆ ಹರಿಸಬೇಡಿ ಅಂತಹ ನೀರು ನಮಗೆ ಬೇಡವೇ ಬೇಡ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಪ್ರತಿಪಾದಿಸಿದ್ದಾರೆ.ಪೈಪುಗಳ ಅಳವಡಿಕೆಯಲ್ಲಿ ಅವ್ಯವಹಾರಕೆ.ಸಿ.ವ್ಯಾಲಿ ಯೋಜನೆಯಲ್ಲಿ ತಾಲೂಕಿನ ಉದ್ದಗಲಕ್ಕೂ ಸಾವಿರಾರು ಕೋಟಿ ವ್ಯಯಿಸಿ ಪೈಪ್ ಲೈನ್ ಅಳವಡಿಸಿಕೊಂಡು ಹೋಗಿದ್ದಾರೆ ಇದುವರಿಗೂ ಎಲ್ಲೂ ನೀರು ಹರಿಸಿಲ್ಲ ಪೈಪುಗಳನ್ನು ಅಳವಡಿಸಿರುವ ವ್ಯವಹಾರದಲ್ಲೂ ಕೊಟ್ಯಾಂತರ ರೂಪಾಯಿ ಅವ್ಯವಹಾರ ಆಗಿದೆ…

Read More

ಶ್ರೀನಿವಾಸಪುರ:ಚಲ್ದಿಗಾನಹಳ್ಳಿ ಪಂಚಾಯತಿ ವ್ಯಾಪ್ತಿಯ ಹೆಬ್ಬಟ ಗ್ರಾಮದಿಂದ ಒಬೇನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಗುಂಡಿ ಬಿದ್ದು ಹಾಳಾಗಿದೆ ಈ ರಸ್ತೆ ಮಾಡಲು ಯಾರು ಮುಂದಾಗದ ಹಿನ್ನಲೆಯಲ್ಲಿ ಪಂಚಾಯಿತಿ ಸದಸ್ಯ ಹೆಬ್ಬಟಆನಂದ್ ಮುಂದೆ ನಿಂತು ಗುಂಡಿಗಳಿಗೆ ಗೊರಜು ಮಣ್ಣು ತುಂಬಿಸುವ ಕೆಲಸ ಮಾಡಿದ್ದಾರೆ ಈ ಬಗ್ಗೆ ಮಾತನಾಡಿದ ಅವರು ಸುಮಾರು ಒಂದು ಕಿಲೋಮೀಟರ್ ಸಂಪೂರ್ಣವಾಗಿ ಹಾಳಾಗಿದೆ ರಸ್ತೆ ಗುಂಡಿಗಳಿಂದ ಕೂಡಿದ್ದು ಮಳೆಗಾಲ ಪ್ರಾರಂಭವಾಗಿರುವುದರಿಂದ ರಸ್ತೆ ಗುಂಡಿಗಳು ಪೂರ್ತಿ ಮಳೆ ನೀರು ಶೇಖರಣೆಯಾಗಿ ರಸ್ತೆ ಕಾಣದಂತಾಗಿ ವಾಹನಗಳು ಓಡಾಡಲು ಸಮಸ್ಯೆಯಾಗುತ್ತಿದೆ. ರಸ್ತೆ ಅಭಿವೃದ್ಧಿಗೆ ಅನುದಾನ ಯಾವ ಇಲಾಖೆಯಿಂದ ಬರುತ್ತದೆ ಮಾಹಿತಿ ಇಲ್ಲ ರೈತಾಪಿ ಜನರ ಅನಕೂಲಕ್ಕಾಗಿ ತಾತ್ಕಾಲಿಕ ಪರಿಹಾರವಾಗಿ ಗುಂಡಿಗಳಿಗೆ ಮಣ್ಣು ತುಂಬಿಸುವ ಮೂಲಕ ಓಡಾಟಕ್ಕೆ ಅನುವು ಮಾಡಿಕೊಡುತ್ತಿರುವುದಾಗಿ ಹೇಳಿದರು.

Read More

ಶ್ರೀನಿವಾಸಪುರ:ತಾಲೂಕಿನಲ್ಲಿ ಶ್ರೀನಿವಾಸಪುರ ಪಟ್ಟಣದ ಆರ್ಥಿಕ ವ್ಯವಹಾರಕ್ಕಿಂತ ಮುಂದಂಚಿನಲ್ಲಿರುವ ಗೌವನಪಲ್ಲಿ Gownipalli ಗ್ರಾಮಕ್ಕೆ ಕೊನೆಗೂ ಪಟ್ಟಣ ಪಂಚಾಯಿತಿ ಆಗುವ ಸೌಭಾಗ್ಯ ಇನ್ನೂ ಒದಗಿ ಬಂದಿಲ್ಲ ಜನಸಂಖ್ಯೆ ಆಧಾರವಾಗಿ ಗೌವನಪಲ್ಲಿ ಹಾಗು ಸುತ್ತಮುತ್ತಲಿನಲ್ಲಿ ಒಂದು ಕೀ.ಮಿ ಒಳಗಡೆ ಇರುವಂತ ರೆಡ್ಡಿವಾರಿಪಲ್ಲಿ, ಅದಿರಾಸಪಲ್ಲಿ,ಕೊರಕೋನಪಲ್ಲಿ ಪಾಪಿಶೆಟ್ಟಿಪಲ್ಲಿ ಗ್ರಾಮಗಳನ್ನು ಒಳಪಡಿಸಿಕೊಂಡರೆ ಪಟ್ಟಣ ಪಂಚಾಯಿತಿ ಆಗಲು ಎಲ್ಲಾ ರಿತಿಯಲ್ಲೂ ಅರ್ಹತೆ ಇದ್ದರು ಸರ್ಕಾರ ಆಸಕ್ತಿ ವಹಿಸದೆ ಇರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.ಅವಿಭಜಿತ ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ಕೈವಾರ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಘೊಷಿಸಿರುವ ಸರ್ಕಾರ ಗೌವನಪಲ್ಲಿ Gownipalli ವಿಚಾರದಲ್ಲಿ ನಿರ್ಲಕ್ಷ್ಯ ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ. ರಾಜ್ಯದಲ್ಲಿ 114 ಪಟ್ಟಣ ಪಂಚಾಯಿತಿಗಳು ಇದ್ದು ಅದಕ್ಕೆ ಈಗ ಹೊಸದಾಗಿ ಮತ್ತೆ ಎರಡು ಚಿಂತಾಮಣಿ ತಾಲೂಕಿನ ಕೈವಾರ ಹಾಗು ಮೈಸೂರು ಜಿಲ್ಲೆಯ ತಲಕಾಡು ಅನ್ನು ಪಟ್ಟಣ ಪಂಚಾಯಿತಿಳನ್ನಾಗಿ ಸರ್ಕಾರ ಘೋಷಿಸಿದೆ ಜನಗಣತಿ ಪ್ರಕಾರ 10 ಸಾವಿರಕ್ಕಿಂತಲೂ ಅಧಿಕವಿರುವ, 20 ಸಾವಿರ ಜನಸಂಖ್ಯೆಗೆ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿ ಪಟ್ಟಣ…

Read More