ಶ್ರೀನಿವಾಸಪುರ: ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕರಾಗಿ (MANAGER) ಶ್ರೀನಿವಾಸಪುರ ಶಾಖೆಯಲ್ಲಿ ಕಾರ್ಯನಿರ್ವಹಿಸಿ, ವರ್ಗಾವಣೆಯಾಗಿರುವ ಪಿ. ಭರತ್ ಕುಮಾರ್ ರೆಡ್ಡಿ ಅವರಿಗೆ ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ಹಾಗೂ ಹಿತೈಷಿಗಳ ವತಿಯಿಂದ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು, ತಮ್ಮ ಕರ್ತವ್ಯನಿಷ್ಠೆ, ಸರಳ ನಡೆ, ಗ್ರಾಹಕರೊಂದಿಗೆ ಆತ್ಮೀಯವಾಗಿ ಬೆರೆಯುವ ಗುಣ ಹಾಗೂ ಸಮಾಜಮುಖಿ ಚಿಂತನೆಯ ಮೂಲಕ ಬ್ಯಾಂಕ್ನ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು. ಬ್ಯಾಂಕ್ಗೆ ಬರುವ ಗ್ರಾಹಕರ ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟು ಶೀಘ್ರವಾಗಿ ಪರಿಹರಿಸಲು ಅವರು ಪ್ರಯತ್ನಿಸುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶೇಷವಾಗಿ ಗ್ರಾಹಕರನ್ನು ಆಪ್ಯಾಯತೆಯಿಂದ ಮಾತಾನಾಡುತ್ತ ಬ್ಯಾಂಕಿಂಗ್ ಸೇವೆಗಳ ಕುರಿತು ಜನಸಾಮಾನ್ಯರಿಗೆ ಸರಳವಾಗಿ ತಲುಪಿಸುತ್ತಿದ್ದರು. ಅವರ ಸೇವಾ ಅವಧಿಯಲ್ಲಿ ಯೂನಿಯನ್ ಬ್ಯಾಂಕ್ ಶ್ರೀನಿವಾಸಪುರದ ಶಾಖೆ ಹಾಗು ಗ್ರಾಹಕರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ ಎಂದು ಮಟ್ಟಕನಸಂದ್ರನಾರಯಣಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ವರ್ಗಾವಣೆಯಾಗದ ಬ್ಯಾಂಕ್ ವ್ಯವಸ್ಥಾಪಕ ಪಿ. ಭರತ್ ಕುಮಾರ್ ರೆಡ್ಡಿ, ತಮ್ಮ ಸೇವಾ ಅವಧಿಯಲ್ಲಿ ಸಹಕಾರ ನೀಡಿದ ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ಹಾಗೂ ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು. ವರ್ಗಾವಣೆ ಸೇವೆಯ ಒಂದು ಭಾಗವಾಗಿದ್ದು, ಶ್ರೀನಿವಾಸಪುರದಲ್ಲಿ ದೊರೆತ ಪ್ರೀತಿ ಮತ್ತು ಆತ್ಮೀಯತೆಯನ್ನು ಎಂದಿಗೂ ಮರೆಯುವುದಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ಯಾಂಕ್ ಸಿಬ್ಬಂದಿ,ಹೇಮವಾಣಿ,ಹರಿ.ಮನೋಜ್,ಪಣಿಬಾಬು,ಬೈರಾರೆಡ್ಡಿ,ಗಂಗಾ,ಸುಮಾ ರಘುಪ್ರಕಾಶ್ ಹಾಗು ನೂತನ ವ್ಯವಸ್ಥಾಪಕ ಗಂಗಾಶೀರಿಷ ಜೋತೆಗೆ ಗ್ರಾಹಕರು, ಗಣ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ವರ್ಗಾವಣೆಯಾದ ವ್ಯವಸ್ಥಾಪಕರಿಗೆ ಶುಭ ಹಾರೈಸಿ, ಮುಂದಿನ ಸೇವಾ ಬದುಕು ಯಶಸ್ವಿಯಾಗಲಿ ಎಂದು ಹಾರೈಸಿದರು.ಇದೆ ಸಂದರ್ಭದಲ್ಲಿ ನೂತನ ಮೇನೆಜರ್ ಗಂಗಾಶಿರಿಷ ಅವರಿಗೆ ಸ್ವಾಗತ ಕೋರಿದರು.
Trending
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
- ಶ್ರೀನಿವಾಸಪುರ:ನಾರಮಾಕಲಹಳ್ಳಿ ನೀರಿನ ಸಮಸ್ಯೆ ಗ್ರಾಮಸ್ಥರ ಅಳಲು!
- ಜನಸಾಮನ್ಯರ ಕಣ್ಣೀರಿಗೆ ಕಾರಣವಾಗುತ್ತಿದೆ ಈರುಳ್ಳಿ ಸಕ್ಕರೆ ಬೆಲೆ!
- ಯಲ್ದೂರು ಆಸ್ಪತ್ರೆಗೆ ಆಂಬುಲೆನ್ಸ್: ಆರೋಗ್ಯ ಸಚಿವ ಖಾದರ್ ಭರವಸೆ
- ಗಂಗರೇಕಾಲುವೆ ಬಸವೇಶ್ವರ, ವೀರಾಂಜನೇಯ ದೇವಾಲಯ ಜೀರ್ಣೋದ್ಧಾರ
- ಪಾಕಿಸ್ತಾನ ಗ್ಯಾಂಗ್ ಸ್ಟರ್ ಗಳ ಸಂಪರ್ಕ ಹೊಂದಿದ್ದ AC ಮೆಕ್ಯಾನಿಕ್ ಬಂಧನ!
Tuesday, September 1



