Author: Srinivas_Murthy

ನ್ಯೂಜ್ ಡೆಸ್ಕ್:ಕೆ ಸಿ ವ್ಯಾಲಿ ನೀರಿನ 3ನೇ ಹಂತದ ಶುದ್ದಿಕರಣ ಮಾಡಿ ನೀರು ಹರಸಬೇಕೆಂದು ಒತ್ತಾಯಿಸಿ ಶಾಸಕ ವೆಂಕಟಶಿವಾರೆಡ್ದಿ ವಿಧಾನಸಭೆಯಲ್ಲಿ ಸರ್ಕಾರದ ಗಮನಸೆಳೆದಿದ್ದಾರೆ.ಅವರು ಸೋಮವಾರ ವಿಧಾನಸೌಧದಲ್ಲಿ ಪ್ರಶ್ನೋತ್ತರ ವೆಳೆ ಮಾತನಾಡಿ ಸಾರ್ವಜನಿಕ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಕೆ.ಸಿ ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಮಾಡಬೇಕು ಕೇವಲ ಎರಡು ಹಂತದ ಶುದ್ಧೀಕರಣ ಮಾಡಿದರೆ ಜನತೆ ಅರೋಗ್ಯ ಸಮಸ್ಯೆ ಅನುಭವಿಸುತ್ತಾರೆ ಎಂದರು.ಕೆ.ಸಿ.ವ್ಯಾಲಿ ಯೋಜನೆ ಉತ್ತಮವಾಗಿದೆ ಇದನ್ನು ನಾನು ಸ್ವಾಗತಿಸುತ್ತೇನೆ ಆದರೆ ಕೇವಲ ಎರಡು ಹಂತದ ಶುದ್ಧೀಕರಣ ಮಾಡಲಾಗುತ್ತಿದೆ ಅದು ಸಹ ಸಮರ್ಪಕವಾಗಿ ಆಗುತ್ತಿಲ್ಲ ಇದು ಒಳ್ಳೆಯದಲ್ಲ ಕೆ.ಸಿ.ವ್ಯಾಲಿ ಮೂರನೇ ಹಂತದಲ್ಲಿ ಸಂಸ್ಕರಣೆ ಮಾಡದಿದ್ದರೆ ನೀರು ನಮ್ಮ ತಾಲೂಕಿಗೆ ಹರಿಸಬೇಡಿ ಅಂತಹ ನೀರು ನಮಗೆ ಬೇಡವೇ ಬೇಡ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಪ್ರತಿಪಾದಿಸಿದ್ದಾರೆ.ಪೈಪುಗಳ ಅಳವಡಿಕೆಯಲ್ಲಿ ಅವ್ಯವಹಾರಕೆ.ಸಿ.ವ್ಯಾಲಿ ಯೋಜನೆಯಲ್ಲಿ ತಾಲೂಕಿನ ಉದ್ದಗಲಕ್ಕೂ ಸಾವಿರಾರು ಕೋಟಿ ವ್ಯಯಿಸಿ ಪೈಪ್ ಲೈನ್ ಅಳವಡಿಸಿಕೊಂಡು ಹೋಗಿದ್ದಾರೆ ಇದುವರಿಗೂ ಎಲ್ಲೂ ನೀರು ಹರಿಸಿಲ್ಲ ಪೈಪುಗಳನ್ನು ಅಳವಡಿಸಿರುವ ವ್ಯವಹಾರದಲ್ಲೂ ಕೊಟ್ಯಾಂತರ ರೂಪಾಯಿ ಅವ್ಯವಹಾರ ಆಗಿದೆ…

Read More

ಶ್ರೀನಿವಾಸಪುರ:ಚಲ್ದಿಗಾನಹಳ್ಳಿ ಪಂಚಾಯತಿ ವ್ಯಾಪ್ತಿಯ ಹೆಬ್ಬಟ ಗ್ರಾಮದಿಂದ ಒಬೇನಹಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಗುಂಡಿ ಬಿದ್ದು ಹಾಳಾಗಿದೆ ಈ ರಸ್ತೆ ಮಾಡಲು ಯಾರು ಮುಂದಾಗದ ಹಿನ್ನಲೆಯಲ್ಲಿ ಪಂಚಾಯಿತಿ ಸದಸ್ಯ ಹೆಬ್ಬಟಆನಂದ್ ಮುಂದೆ ನಿಂತು ಗುಂಡಿಗಳಿಗೆ ಗೊರಜು ಮಣ್ಣು ತುಂಬಿಸುವ ಕೆಲಸ ಮಾಡಿದ್ದಾರೆ ಈ ಬಗ್ಗೆ ಮಾತನಾಡಿದ ಅವರು ಸುಮಾರು ಒಂದು ಕಿಲೋಮೀಟರ್ ಸಂಪೂರ್ಣವಾಗಿ ಹಾಳಾಗಿದೆ ರಸ್ತೆ ಗುಂಡಿಗಳಿಂದ ಕೂಡಿದ್ದು ಮಳೆಗಾಲ ಪ್ರಾರಂಭವಾಗಿರುವುದರಿಂದ ರಸ್ತೆ ಗುಂಡಿಗಳು ಪೂರ್ತಿ ಮಳೆ ನೀರು ಶೇಖರಣೆಯಾಗಿ ರಸ್ತೆ ಕಾಣದಂತಾಗಿ ವಾಹನಗಳು ಓಡಾಡಲು ಸಮಸ್ಯೆಯಾಗುತ್ತಿದೆ. ರಸ್ತೆ ಅಭಿವೃದ್ಧಿಗೆ ಅನುದಾನ ಯಾವ ಇಲಾಖೆಯಿಂದ ಬರುತ್ತದೆ ಮಾಹಿತಿ ಇಲ್ಲ ರೈತಾಪಿ ಜನರ ಅನಕೂಲಕ್ಕಾಗಿ ತಾತ್ಕಾಲಿಕ ಪರಿಹಾರವಾಗಿ ಗುಂಡಿಗಳಿಗೆ ಮಣ್ಣು ತುಂಬಿಸುವ ಮೂಲಕ ಓಡಾಟಕ್ಕೆ ಅನುವು ಮಾಡಿಕೊಡುತ್ತಿರುವುದಾಗಿ ಹೇಳಿದರು.

Read More

ಶ್ರೀನಿವಾಸಪುರ:ತಾಲೂಕಿನಲ್ಲಿ ಶ್ರೀನಿವಾಸಪುರ ಪಟ್ಟಣದ ಆರ್ಥಿಕ ವ್ಯವಹಾರಕ್ಕಿಂತ ಮುಂದಂಚಿನಲ್ಲಿರುವ ಗೌವನಪಲ್ಲಿ Gownipalli ಗ್ರಾಮಕ್ಕೆ ಕೊನೆಗೂ ಪಟ್ಟಣ ಪಂಚಾಯಿತಿ ಆಗುವ ಸೌಭಾಗ್ಯ ಇನ್ನೂ ಒದಗಿ ಬಂದಿಲ್ಲ ಜನಸಂಖ್ಯೆ ಆಧಾರವಾಗಿ ಗೌವನಪಲ್ಲಿ ಹಾಗು ಸುತ್ತಮುತ್ತಲಿನಲ್ಲಿ ಒಂದು ಕೀ.ಮಿ ಒಳಗಡೆ ಇರುವಂತ ರೆಡ್ಡಿವಾರಿಪಲ್ಲಿ, ಅದಿರಾಸಪಲ್ಲಿ,ಕೊರಕೋನಪಲ್ಲಿ ಪಾಪಿಶೆಟ್ಟಿಪಲ್ಲಿ ಗ್ರಾಮಗಳನ್ನು ಒಳಪಡಿಸಿಕೊಂಡರೆ ಪಟ್ಟಣ ಪಂಚಾಯಿತಿ ಆಗಲು ಎಲ್ಲಾ ರಿತಿಯಲ್ಲೂ ಅರ್ಹತೆ ಇದ್ದರು ಸರ್ಕಾರ ಆಸಕ್ತಿ ವಹಿಸದೆ ಇರುವ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.ಅವಿಭಜಿತ ಕೋಲಾರ ಜಿಲ್ಲೆಯ ವ್ಯಾಪ್ತಿಯಲ್ಲಿದ್ದ ಕೈವಾರ ಗ್ರಾಮವನ್ನು ಪಟ್ಟಣ ಪಂಚಾಯಿತಿಯಾಗಿ ಘೊಷಿಸಿರುವ ಸರ್ಕಾರ ಗೌವನಪಲ್ಲಿ Gownipalli ವಿಚಾರದಲ್ಲಿ ನಿರ್ಲಕ್ಷ್ಯ ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ. ರಾಜ್ಯದಲ್ಲಿ 114 ಪಟ್ಟಣ ಪಂಚಾಯಿತಿಗಳು ಇದ್ದು ಅದಕ್ಕೆ ಈಗ ಹೊಸದಾಗಿ ಮತ್ತೆ ಎರಡು ಚಿಂತಾಮಣಿ ತಾಲೂಕಿನ ಕೈವಾರ ಹಾಗು ಮೈಸೂರು ಜಿಲ್ಲೆಯ ತಲಕಾಡು ಅನ್ನು ಪಟ್ಟಣ ಪಂಚಾಯಿತಿಳನ್ನಾಗಿ ಸರ್ಕಾರ ಘೋಷಿಸಿದೆ ಜನಗಣತಿ ಪ್ರಕಾರ 10 ಸಾವಿರಕ್ಕಿಂತಲೂ ಅಧಿಕವಿರುವ, 20 ಸಾವಿರ ಜನಸಂಖ್ಯೆಗೆ ಕಡಿಮೆ ಇರುವ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿ ಪಟ್ಟಣ…

Read More

ಚಿಂತಾಮಣಿ:ಕರ್ನಾಟಕ ಪುರಸಭೆ ಕಾಯ್ದೆಯಂತೆ ಚಿಂತಾಮಣಿ ತಾಲ್ಲೂಕಿನ ಕೈವಾರ ಮತ್ತು ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಒಗ್ಗೂಡಿಸಿ ಮೇಲ್ದರ್ಜೆಗೇರಿಸಲಾಗಿದ್ದು ಮುಂದೆ ಅದನ್ನು ಕೈವಾರ ಪಟ್ಟಣ ಪಂಚಾಯತಿ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಿದೆ.ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟದಲ್ಲಿ ಚಿಂತಾಮಣಿ ತಾಲ್ಲೂಕಿನ ಕೈವಾರ ತಾತಯ್ಯನವರ ಪವಿತ್ರ ಯಾತ್ರಾಸ್ಥಳವಾದ ಕೈವಾರ ಪಂಚಾಯಿತಿ ಮತ್ತು ಕೈಗಾರಿಕಾ ಪ್ರದೇಶ ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಕರ್ನಾಟಕ ಪೌರಸಭೆಗಳ ಕಾಯ್ದೆ 1964ರ ಕಲಂ-3, 4, 9, 349, 350, 351 ಮತ್ತು 355 ರನ್ವಯ ಶೆಡ್ಯೂಲ್-ಎ ರಲ್ಲಿ ಒಳಗೊಂಡ ಪ್ರದೇಶ ಹಾಗೂ ಶೆಡ್ಯೂಲ್-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಮೇಲ್ದರ್ಜೆಗೆ ಏರಿಸಿ ಕೈವಾರ ಪಟ್ಟಣ ಪಂಚಾಯತಿ ಎಂದು ಘೋಷಿಸಲಾಗಿದೆ.ಗ್ರಾಮಸ್ಥರ ಸಂಭ್ರಮಾಚರಣೆಕೈವಾರ ಪಂಚಾಯಿತಿ ಮತ್ತು ಕೈಗಾರಿಕಾ ಪ್ರದೇಶ ಮಸ್ತೇನಹಳ್ಳಿ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಿ ಕೈವಾರ ಪಟ್ಟಣ ಪಂಚಾಯತಿ ಎಂದು ಘೋಷಣೆ ಮಾಡಿದ ಹಿನ್ನಲೆಯಲ್ಲಿ ಕೈವಾರ ಗ್ರಾಮಸ್ಥರು ಕಾಲಜ್ಞಾನಿ ಕೈವಾರ ತಾತಯ್ಯನವರ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ…

Read More

ಚಿಂತಾಮಣಿ:ಪ್ರಸಿದ್ದ ವೆಂಕಟರಮಣಸ್ವಾಮಿ ಪುಣ್ಯಕ್ಷೇತ್ರ ಆಲಂಬಗಿರಿಯ ಶ್ರೀಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಶ್ರೀವರಮಹಾಲಕ್ಷ್ಮೀ ವ್ರತವನ್ನು ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು. ದೇವಾಲಯದ ಆವರಣದಲ್ಲಿರುವ ಲಕ್ಷ್ಮೀ ದೇವಾಲಯದ ಮುಂಭಾಗದಲ್ಲಿ ಸಾಮೂಹಿಕವಾಗಿ ವರಮಹಾಲಕ್ಷೀ ಪೂಜಾವ್ರತದ ನಡೆಸಲಾಯಿತು. ಗ್ರಾಮಸ್ಥರು ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಸುಹಾಸಿನಿಯರು ವರಮಹಾಲಕ್ಷ್ಮೀ ವ್ರತಾಚರಣೆಯಲ್ಲಿ ಪಾಲ್ಗೊಂಡಿದ್ದರು. ವರಮಹಾಲಕ್ಷ್ಮೀ ವ್ರತಾಚರಣೆಗೆ ಬಂದಿದ್ದ ಸುಹಾಸಿನಿಯರಿಗೆ ಕೈವಾರದ ಶ್ರೀಯೋಗಿನಾರೇಯಣ ಮಠದ ವತಿಯಿಂದ ಪೂಜಾ ಸಾಮಾಗ್ರಿಗಳನ್ನು ನೀಡಲಾಗಿತ್ತು. ಸರ್ವಾಲಂಕೃತವಾದ ಪೀಠದಲ್ಲಿ ವರಮಾಹಲಕ್ಷ್ಮೀಯನ್ನು ಕೂರಿಸಿ ನೂತನ ವಸ್ತ್ರಾಭರಣ ಹಾಗೂ ವಿವಿಧ ಬಗೆಯ ಹೂಗಳಿಂದ, ಅಮ್ಮನವರನ್ನು ಸಿಂಗರಿಸಲಾಗಿತ್ತು. ಲಕ್ಷ್ಮೀ ದೇವಾಲಯದ ಅರ್ಚಕ ವೃಂದದವರು ಸುಹಾಸಿನಿತರ ಕೈಯಲ್ಲಿ ಕುಂಕುಮಾರ್ಚನೆ ಮಾಡಿಸಿ ಸಾಲಾಂಕೃತ ಪೂಜೆ ಮಾಡಿಸುವ ಮೂಲಕ ವ್ರತಾಚರಣೆ ಮಾಡಿಸಿದರು.ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ.ಎಂ.ಆರ್.ಜಯರಾಮ್ ದಂಪತಿ ವರಮಹಾಲಕ್ಷ್ಮೀ ಪೂಜೆಯಲ್ಲಿ ಭಾಗವಹಿಸಿದ್ದರು.

Read More

ಶ್ರೀನಿವಾಸಪುರ:ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಜಮೀನಿಗಳಿಗೆ ತಿರುಗಾಡಲು ಬಳಸುವ ಕಾಲುದಾರಿ, ಬಂಡಿ ದಾರಿಗಳು ದಾಖಲೆಗಳ ಪ್ರಕಾರ ಇದ್ದು ಅದನ್ನು ರೈತರಿಗಾಗಿ ತೆರವು ಮಾಡಿ ಓಡಾಡಲು ಅನುವು ಮಾಡಿಕೊಡಬೇಕು ಎಂದು ಕಂದಾಯ ಇಲಾಖೆ ಎಲ್ಲಾ ತಹಸೀಲ್ದಾರ್‌ಗಳಿಗೆ ಸೂಚಿಸಿದೆ ಎಂದು ಗ್ರಾಮಪಂಚಾಯಿತಿ ಸದಸ್ಯ ಹೆಬ್ಬಟ ಅನಂತಕುಮಾರ್ ತಿಳಿಸಿದರು.ಅವರು ತಾಲೂಕಿನ ಕಸಬಾ ಹೋಬಳಿ ಚಲ್ದಿಗಾನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಬಂಡಿದಾರಿ ತೆರವು ಮಾಡಿಸುವ ಸಲುವಾಗಿ ಜಮೀನು ಮಾಲಿಕರೊಂದಿಗೆ ಮಾತು ಕತೆ ನಡೆಸಿದ ಅವರು ರೈತರು ಕೃಷಿ ಉದ್ದೇಶಕ್ಕಾಗಿ ಕೃಷಿ ಸಲಕರಣೆಗಳನ್ನು ಮತ್ತು ಬೆಳೆ ಸಾಗಿಸಲು ಖಾಸಗಿ ಮಾಲೀಕರ ಜಮೀನುಗಳಲ್ಲಿ ತಿರುಗಾಡಲು ಸಮಸ್ಯೆ ಆಗುತ್ತದೆ ರೈತರು ಸಂಚರಿಸಲು ಯಾವುದೇ ಕಾರಣಕ್ಕೂ ಅಡ್ಡಿ ಮಾಡುವಂತಿಲ್ಲ. ಮುಳಬಾಗಿಲು-ಚಿಂತಾಮಣಿ ಹೆದ್ದಾರಿ ರಿಂಗ್ ರಸ್ತೆಯಿಂದ ಚಲ್ದಿಗಾನಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬಂಡಿ ರಸ್ತೆ ಸುಮಾರು ವರ್ಷಗಳಿಂದ ಇದ್ದು ನಿರ್ಲಕ್ಷ್ಯಕ್ಕೆ ಒಳಗಾಗಿ ಒತ್ತುವರಿಯಾಗಿತ್ತು ಈ ಬಗ್ಗೆ ಜಮೀನು ಮಾಲಿಕರು ಮತ್ತು ಗ್ರಾಮಸ್ಥರು ತಾಲ್ಲೂಕು ದಂಡಾಧಿಕಾರಿಗೆ ಮನವಿಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಕಂದಾಯ ಅಧಿಕಾರಿಗಳು ಪರಿಶೀಲಿಸಿ ತೆರವು ಮಾಡುವಂತೆ ಸೂಚನೆ…

Read More

ನ್ಯೂಜ್ ಡೆಸ್ಕ್:ಅಮ್ಮ ಓದು ನನಗೆ ತಲೆಗೆ ಹತ್ತುತ್ತಿಲ್ಲ ಪಾಠಗಳು ಅರ್ಥ ಆಗುತ್ತಿಲ್ಲ. ನನಗೆ ಟೆನ್ಷನ್ ಆಗುತ್ತಿದೆ. ನನ್ನ ಮನಸ್ಸು ನನಗೆ ಅರ್ಥ ಆಗುತ್ತಿಲ್ಲ ಹುಚ್ಚು ಹಿಡಿಯುತ್ತಿದೆ. ಏನು ಮಾಡಬೇಕೆಂದು ನನಗೂ ತಿಳಿಯುತ್ತಿಲ್ಲ. ಇವುಗಳನ್ನು ನಿನಗೆ ಹೇಳಲು ಸಾಧ್ಯವಾಗುತ್ತಿಲ್ಲ ಮೊದಲ ವರ್ಷದ ಶುಲ್ಕ ಪಾವತಿಸಲಾಗಿದೆ ಎಂದು ಕೇಳಿದೆ. ನಾನು ಕಡಿಮೆ ಅಂಕಗಳನ್ನು ಪಡೆದರೆ, ನೀನು ಅದನ್ನು ಸಹಿಸುವುದಿಲ್ಲ ಐಅಮ್ ಸಾರಿ. ನಾನು ಸಾಯುತ್ತಿದ್ದೇನೆ. ಸಹೋದರಿಯನ್ನು, ಚೆನ್ನಾಗಿ ಓದಿಸಿ ಅದಕ್ಕಾಗಿ ಒಳ್ಳೆಯ ಕಾಲೇಜು, ಒಳ್ಳೆಯ ವಿಷಯ ತೆಗೆದುಕೊಳ್ಳುವಂತೆ ತಿಳಿ ಹೇಳಿ ಎಲ್ಲರೂ ಜಾಗರೂಕರಾಗಿರಿ, ಒಳ್ಳೆಯದಾಗಲಿ ಎಂದು ತೆಲಂಗಾಣದ ಹನುಮಕೊಂಡ ಜಿಲ್ಲೆಯ ನಯೀಮ್‌ನಗರದ ಕಾಲೇಜಿನಲ್ಲಿ ಪ್ರಥಮ ವರ್ಷದ ಇಂಟರ್ ವಿದ್ಯಾರ್ಥಿನಿ ಮಿತ್ತಪಲ್ಲಿ ಶಿವಾನಿ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ತಾಯಿಗೆ ಪತ್ರ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.ಇಂದಿನ ಸಮಾಜದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಮಾನಸಿಕ ಒತ್ತಡ ಸಮಸ್ಯೆಗಳನ್ನು ಪ್ರತಿಬಿಂಬಿಸುತ್ತದೆ. ಹೆತ್ತವರು ತನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಅವರಿಂದ ಬರುವಂತ ಒತ್ತಡ,ಇಷ್ಟವಿಲ್ಲದ ವಿಷಯಗಳನ್ನು ಅಧ್ಯಯನ ಮಾಡಲು ಸಾಧ್ಯವಾಗದೆ ತಾನು ಹೇಗೆ ದಣಿದಿದ್ದೇನೆ ಒದು…

Read More

ಶ್ರೀನಿವಾಸಪುರ:ರಾಜ್ಯ ಸಾರಿಗೆ ಸಂಸ್ಥೆ ನೌಕರರ ಮುಷ್ಕರದ ಹಿನ್ನಲೆಯಲ್ಲಿ ಇಂದು ಶ್ರೀನಿವಾಸಪುರದಲ್ಲಿ ಸಾರಿಗೆ ಸಂಸ್ಥೆ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ, ಪ್ರಯಾಣಿಕರು ಇಲ್ಲದೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದವು ಬಸ್ಸುಗಳು ಡಿಪೊದಲ್ಲೆ ಉಳಿದುಕೊಂಡಿವೆ. ಮುಂಜಾನೆ ಒಂದೇರಡು ಬಸ್ಸುಗಳು ಸಂಚಾರ ಆರಂಭಿಸಿತಾದರೂ ನೌಕರರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬಸ್ಸುಗಳನ್ನು ವಾಪಸ್ ಡಿಪೊಗೆ ಬಿಟ್ಟು ನೌಕರರು ವಾಪಸ್ ಹೋದರೆಂದು ಹೇಳಲಾಗುತ್ತಿದೆ.ಡಿಮ್ಯಾಂಡ್ ಏನು?ವೇತನ ಹಿಂಬಾಕಿ(ಅರಿಯರ್ಸ್), ವೇತನ ಹೆಚ್ಚಳಕ್ಕೆ ಒತ್ತಾಯಿಸಿ ರಾಜ್ಯ ಸಾರಿಗೆ ಸಂಸ್ಥೆಗಳ ನೌಕರರು ಸರ್ಕಾರದ ಜೊತೆ ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು ಇಂದು ಮುಂಜಾನೆಯಿಂದಲೆ ಸಾರಿಗೆ ನೌಕರರು ಕೆಎಸ್‌ಆರ್‌ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಕರೆಯ ಮೆರೆಗೆ ಕೆಲಸಕ್ಕೆ ಹಾಜರಾಗದೆ ನೌಕರರು ಮುಷ್ಕರಕ್ಕಿಳಿದಿದ್ದಾರೆ.ಇದರಿಂದ ಶ್ರೀನಿವಾಸಪುರ ಅಥಾವ ಕೋಲಾರೆ ಅಲ್ಲ ರಾಜ್ಯದಾದ್ಯಂತ ಮುಷ್ಕರ ನಡೆಸಿದ್ದು ಬಸ್‌ಗಳ ಸೇವೆಯಲ್ಲಿ ವ್ಯತ್ಯುಯವಾಗಿ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಏರ್ಪಟ್ಟಿದೆ.ಸಿ.ಎಂ ಜೊತೆಗೆ ಆದ ಮಾತು ಕಥೆ ಏನು?ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎರಡು ಗಂಟೆಗಳ ಕಾಲ ನಡೆದಂತ ಸಭೆಯಲ್ಲಿ ವೇತನ ಹೆಚ್ಚಳ ಮತ್ತು…

Read More

ಬೆಂಗಳೂರು:ಬೆಂಗಳೂರು ನಗರದಲ್ಲಿ ಪೇಯಿಂಗ್​ ಗೆಸ್ಟ್​ (ಪಿಜಿ) ಮಾಲಿಕ ಎಸಗಿರುವ ಮೃಗಿಯ ಕೃತ್ಯ ಬೆಳಕಿಗೆ ಬಂದಿದೆ. ಸೋಲದೇವನಹಳ್ಳಿಯ ಖಾಸಗಿ ಕಾಲೇಜಿನ ಕೇರಳದ ಯುವತಿ 10 ದಿನಗಳ ಹಿಂದೆಯಷ್ಟೇ ಆರೋಪಿ ಅಶ್ರಫ್ ಒಡೆತನದ ಪಿ.ಜಿಗೆ ದಾಖಲಾಗಿದ್ದಳು.ಪಿಜಿ ಮಾಲಿಕ ಅಶ್ರಫ್ ಶುಕ್ರವಾರ ರಾತ್ರಿ ನನ್ನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯಿದು ದೌರ್ಜನ್ಯವೆಸಗಿದ್ದ. ನಂತರ ನನ್ನನ್ನು ಪೇಯಿಂಗ್​ ಗೆಸ್ಟ್​ಗೆ ವಾಪಸ್​ ಕರೆತಂದು ಬಿಟ್ಟಿದ್ದ ಎಂದು ಸಂತ್ರಸ್ತೆ ಪೋಲಿಸರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದಾಳೆ.ಕೃತ್ಯಕ್ಕೂ ಮೊದಲು ಹಲ್ಲೆ ಮಾಡಿದ್ದ ಅತ್ಯಾಚಾರ ಎಸಗಲು ಪ್ರಯತ್ನಿಸಿದಾಗ, ವಿರೋಧಿಸಿದ್ದಕ್ಕೆ ಮತ್ತೆ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಯುವತಿ ದೂರಿದ್ದಾಳೆ.ಯುವತಿ ನೀಡಿರುವ ದೂರಿನ ಪ್ರಕಾರ, ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಆರೋಪಿ, ಪಿಜಿ ಮಾಲೀಕ ಅಶ್ರಫ್​ ನನ್ನು ಇಂದು (ಭಾನುವಾರ) ಬಂಧಿಸಿದ್ದಾರೆ. ಪ್ರಕರಣದ ಕುರಿತು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಿಂದ ಆಘಾತಕ್ಕೊಳಗಾಗಿದ್ದ ಸಂತ್ರಸ್ತೆ ಸ್ನೇಹಿತರ ಸಹಾಯದಿಂದ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾಳೆ‌‌‌. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Read More

ನ್ಯೂಜ್ ಡೆಸ್ಕ್:ಮದುವೆಯ ಈ ಬಂಧ, ಅನುರಾಗದ ಅನುಬಂಧ, ಏಳೇಳು ಜನುಮದ ಸಂಬಂಧ ಎಂದು ಗಂಡ-ಹೆಂಡತಿ ನಡುವಿನ ವೈವಾಹಿಕ ಬಂಧನ ಪವಿತ್ರವಾದುದು ಅಜ್ಜ-ಅಜ್ಜಿಯರು ಅನ್ಯೋನ್ಯತೆ ಬಾಳು ಎಂದು ಭಾವಿಸಿ ದಾಂಪತ್ಯ ನೂರು ವರ್ಷದ ಬೆಳೆ ಎಂದೆಲ್ಲಾ ಹಾಡಿ ಹೋಗುಳುತ್ತಿದ್ದ ನೆಲದಲ್ಲಿ ಆಧುನಿಕತೆಯೆಯ ಅಮಲಿನಲ್ಲಿ ಗಂಡ-ಹೆಂಡತಿ ಇದ್ದಾರೆ ಬದುಕು commercial life ಮಾಡಿಕೊಂಡು ಸಣ್ಣ-ಪುಟ್ಟ ಕಾರಣಗಳಿಗಾಗಿ ಜಗಳವಾಡುತ್ತಾರೆ. ಕುಳಿತು ಮಾತನಾಡಿದರೆ ಪರಿಹಾರ ಆಗುವ ಸಮಸ್ಯೆಗಳಿಗೆ ಕೊಡಲಿ ಹಿಡಿದು ಬಡಿದಾಡುವಷ್ಟು ಮಟ್ಟಿಗೆ ಮದುವೆ ಬಂಧನವನ್ನು ಮುರಿದು ಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವು ಸಾಮಾನ್ಯ ಅನ್ನುವಷ್ಟು ಕಾಣಸಿಗುತ್ತಿದೆ. ಆಂಧ್ರದ ವಿಶಾಕಪಟ್ಟಣದ ನಂದಿಕ ಕೃಷ್ಣ ಮತ್ತು ಗೌತಮಿ ಇಬ್ಬರೂ ಪ್ರೀತಿಸಿ ಪರಸ್ಪರ ಇಷ್ಟಪಟ್ಟು ನಮ್ಮ ಪ್ರೀತಿಯ ಬದುಕು ನೂರು ವರ್ಷಗಳ ಕಾಲ ಸುಖವಾಗಿ ಇರಲಿ ಎಂದು 6 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಆರಂಭದಲ್ಲಿ ನಮ್ಮ ಸಂಸಾರ, ಆನಂದ ಸಾಗರ ಪ್ರೀತಿಯೆಂಬ ದೈವವೇ ನಮಗಾಧಾರ ಆ ದೈವ ತಂದ ವರದಿಂದ ಬಾಳೇ ಬಂಗಾರ ಎಂದಿದ್ದ ದಂಪತಿ ಮದ್ಯೆ…

Read More