ನ್ಯೂಜ್ ಡೆಸ್ಕ್:ಮದುವೆಯ ಈ ಬಂಧ, ಅನುರಾಗದ ಅನುಬಂಧ, ಏಳೇಳು ಜನುಮದ ಸಂಬಂಧ ಎಂದು ಗಂಡ-ಹೆಂಡತಿ ನಡುವಿನ ವೈವಾಹಿಕ ಬಂಧನ ಪವಿತ್ರವಾದುದು ಅಜ್ಜ-ಅಜ್ಜಿಯರು ಅನ್ಯೋನ್ಯತೆ ಬಾಳು ಎಂದು ಭಾವಿಸಿ ದಾಂಪತ್ಯ ನೂರು ವರ್ಷದ ಬೆಳೆ ಎಂದೆಲ್ಲಾ ಹಾಡಿ ಹೋಗುಳುತ್ತಿದ್ದ ನೆಲದಲ್ಲಿ ಆಧುನಿಕತೆಯೆಯ ಅಮಲಿನಲ್ಲಿ ಗಂಡ-ಹೆಂಡತಿ ಇದ್ದಾರೆ ಬದುಕು commercial life ಮಾಡಿಕೊಂಡು ಸಣ್ಣ-ಪುಟ್ಟ ಕಾರಣಗಳಿಗಾಗಿ ಜಗಳವಾಡುತ್ತಾರೆ. ಕುಳಿತು ಮಾತನಾಡಿದರೆ ಪರಿಹಾರ ಆಗುವ ಸಮಸ್ಯೆಗಳಿಗೆ ಕೊಡಲಿ ಹಿಡಿದು ಬಡಿದಾಡುವಷ್ಟು ಮಟ್ಟಿಗೆ ಮದುವೆ ಬಂಧನವನ್ನು ಮುರಿದು ಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇವು ಸಾಮಾನ್ಯ ಅನ್ನುವಷ್ಟು ಕಾಣಸಿಗುತ್ತಿದೆ. ಆಂಧ್ರದ ವಿಶಾಕಪಟ್ಟಣದ ನಂದಿಕ ಕೃಷ್ಣ ಮತ್ತು ಗೌತಮಿ ಇಬ್ಬರೂ ಪ್ರೀತಿಸಿ ಪರಸ್ಪರ ಇಷ್ಟಪಟ್ಟು ನಮ್ಮ ಪ್ರೀತಿಯ ಬದುಕು ನೂರು ವರ್ಷಗಳ ಕಾಲ ಸುಖವಾಗಿ ಇರಲಿ ಎಂದು 6 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು ಆರಂಭದಲ್ಲಿ ನಮ್ಮ ಸಂಸಾರ, ಆನಂದ ಸಾಗರ ಪ್ರೀತಿಯೆಂಬ ದೈವವೇ ನಮಗಾಧಾರ ಆ ದೈವ ತಂದ ವರದಿಂದ ಬಾಳೇ ಬಂಗಾರ ಎಂದಿದ್ದ ದಂಪತಿ ಮದ್ಯೆ ಅಸಮಾಧಾನ ಭುಗೆಲೆದ್ದಿದೆ ಆಗಾಗ್ಗೆ ಜಗಳವಾಡುತ್ತಿದ್ದರು.ಇಬ್ಬರ ನಡುವಿನ ಭಾಂದವ್ಯ ತೀವ್ರವಾಗಿ ಹಳಸಿದೆ ಗಂಡನಿಂದ ಬೇಸತ್ತ ಪತ್ನಿ ಯಾರು ಊಹಿಸದ ನಿರ್ಧಾರ ಮಾಡಿಯೇ ಬಿಟ್ಟಿದ್ದಾಳೆ ಬುಧವಾರ ಬೆಳಗಿನ ಜಾವ ಸುಮಾರು 2 ಗಂಟೆ ಹೊತ್ತಿಗೆ,ಗೌತಮಿ ಪತಿ ಮಲಗಿದ್ದಾಗ ಅವನ ಮೇಲೆ ಕುದಿಯುತ್ತಿದ್ದ ಬಿಸಿನೀರು ತಂದು ಸುರಿದಿದ್ದಾಳೆ ಇದರಿಂದ ಗಂಡ ತೀವ್ರವಾಗಿ ಸುಟ್ಟ ಗಾಯಗಳಿಂದ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಈ ಘಟನೆ ಆಂಧ್ರದ ವಿಶಾಖಪಟ್ಟಣಂ ನಗರದಲ್ಲಿ ನಡೆದಿದ್ದು ಗಂಡ ಸ್ಥಳೀಯ ಕೆಜಿಎಚ್ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಘಟನೆಯ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



