Author: Srinivas_Murthy

ಶ್ರೀನಿವಾಸಪುರ:ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ 2024ರ ಜನವರಿ 22ರಲ್ಲಿ ರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ ಒಂದು ವರ್ಷ ಪೂರೈಸಿದೆ ಇದರ ಅಂಗವಾಗಿ ಶ್ರೀನಿವಾಸಪುರದ ಕಸಬಾ ಹೋಬಳಿ ನಲ್ಲಪಲ್ಲಿ ಗ್ರಾಮದಲ್ಲಿ ರಾಮರ ಗುಡಿ ಆವರಣದಲ್ಲಿ ವಿಶೇಷ ಪೂಜೆ ಹೋಮ ಹವನ ಆಯೋಜಿಸಲಾಗಿತ್ತು.ಶ್ಯಾನುಭೋಗ ಸೂರ್ಯನಾರಯಣರಾವ್ ಕುಟುಂಬದ ಖ್ಯಾತ ಹೈಕೋರ್ಟ್ ವಕೀಲ ನಟರಾಜಶರ್ಮ,ವಾಣಿಜ್ಯೋದ್ಯಮಿ ಅನಂತನಾರಯಣಶರ್ಮ,ರೇಷ್ಮೆ ಇಲಾಖೆ ಹೀರಿಯ ಅಧಿಕಾರಿ ಶ್ರೀನಿವಾಸಶರ್ಮ ಕುಟುಂಬದವರು ಪಾಲ್ಗೋಂಡಿದ್ದ ಪೂಜಾ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಬಿ.ವಿ.ರೆಡ್ಡಿ,ಆನಂದಗೌಡ,ಮುಖ್ಯಾಧಿಕಾರಿ ನಾಗರಾಜ್,ಮಾಜಿ ಸದಸ್ಯೆ ಚೈತನ್ಯಬಾಬು,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹಳೇಪೇಟೆ ಮಂಜು,ಬಿಜೆಪಿ ಲಕ್ಷ್ಮಣಗೌಡ ಪೂಲುಶಿವಾರೆಡ್ಡಿ,ಬಿಜೆಪಿರೆಡ್ಡಪ್ಪ ವಕೀಲಸೊಣ್ಣೆಗೌಡ ಗೋಪಾಲರೆಡ್ಡಿ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಕೀಲ ನಟರಾಜಶರ್ಮ ಮಾತನಾಡಿ ಅಯೋಧ್ಯೆ ಪ್ರಭು ಶ್ರೀರಾಮನ ಜನ್ಮಸ್ಥಳವೆಂದು ನಮ್ಮ ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಅದರಂತೆ 2024ರಲ್ಲಿ ಅಯೋಧ್ಯೆಯಲ್ಲಿ ರಾಮ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಂಡು ರಾಮಲಲ್ಲಾ ಪ್ರಾಣ ಪ್ರತಿಷ್ಟಾಪನೆ ಮಾಡಲಾಗಿದ್ದು ರಾಮ ಮಂದಿರ ಹಿಂದೂ ಧರ್ಮೀಯರ ಜೀವಾಳವಾಗಿದೆ.ಇದೀಗ ಅಯೋಧ್ಯೆಯ ಬಾಲ ರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ…

Read More

ತಿರುಮಲದ ಸಪ್ತಗಿರಿಗಳಲ್ಲಿ ಒಂದಾದ ಶೇಷಾಚಲಂ ಬೆಟ್ಟದ ತಪ್ಪಲು ಆಂಧ್ರದ ಅನ್ನಮಯ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ ಇಲ್ಲಿನ ಗುಂಡಲಕೋಣ ಕಾಡಿನ ಮೂಲಕ ತಲಕೋನದಲ್ಲಿರುವ ಶ್ರೀಸಿದ್ದೇಶ್ವರಸ್ವಾಮಿಗೆ ಹರಕೆ ಮಾಡಿಕೊಂತ ಶಿವ ಭಕ್ತರ ದಂಡು ನಡೆದುಕೊಂಡು ಹೋಗುತ್ತಿದ್ದರು ಈ ಸಂದರ್ಬದಲ್ಲಿ ಅವರ ಮೇಲೆ ಆನೆಗಳು ದಾಳಿ ಮಾಡಿದ್ದು ಸ್ಥಳದಲ್ಲೆ ನಾಲ್ವರು ಸಾವನಪ್ಪಿದ್ದು ಇತರೆ ಮೂವರು ಗಾಯಗೊಂಡಿದ್ದಾರೆ. ನ್ಯೂಜ್ ಡೆಸ್ಕ್:ಅರಣ್ಯ ಪ್ರದೇಶದ ಮೂಲಕ ಶಿವನ ದೇವಾಸ್ಥಾನಕ್ಕೆ ಹೋಗುತ್ತಿದ್ದ ಭಕ್ತರ ಮೇಲೆ ಆನೆಗಳು ದಾಳಿ ಮಾಡಿಡ್ಡೂ ದಾಳಿಯಲ್ಲಿ ನಾಲ್ವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡರೆ,ಇತರೆ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.ಈ ಘಟನೆ ಮಂಗಳವಾರ ಮುಂಜಾನೆ ಸುಮಾರು ಐದು ಸಮಯದಲ್ಲಿ ನಡೆದಿದೆ. ಮಹಾಶಿವರಾತ್ರಿ ಹಬ್ಬದ ಹಿನ್ನಲೆಯಲ್ಲಿ ಆಂಧ್ರದ ಅನ್ನಮಯ್ಯ ಜಿಲ್ಲೆಯ ಬಾಕರಪೇಟ ಬಳಿಯ ತಲಕೋನ ಭಾಗದಲ್ಲಿನ ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯಕ್ಕೆ ಹೋಗಲು ಭಕ್ತರ ದಂಡು ಶೇಷಾಚಲಂ ಕಾಡಿನ ಮೂಲಕ ತಲಕೋನಾಗೆ ನಡೆದುಕೊಂಡು ಹೋಗುತ್ತಿದ್ದಾಗ ಎದುರಿಗೆ ಆನೆಗಳ ಗುಂಪು ಬಂದಿದೆ ದೊಡ್ದಸಂಖ್ಯೆಯಲ್ಲಿದ್ದ ಜನರನ್ನು ನೋಡಿದ ಆನೆಗಳು…

Read More

ಮುಳಬಾಗಿಲು:ಈಶ್ವರ ನಿರ್ವಿಕಾರ,ನಿರಾಭರಣ,ನಿರಹಂಕಾರ,ನಿರಾಡಂಬರಪ್ರಿಯ ನಿರ್ಮಲ-ನಿರ್ವಾಜ್ಯ ಭಕ್ತಿಗೆ ಅತ್ಯಂತ ವೇಗವಾಗಿ ಒಲಿಯುವ ದೇವರು ಎಂದರೆ ಪರಮೇಶ್ವರ ಮಹಾಶಿವನನ್ನು ಪೂಜಿಸುವುದರಿಂದ ಭಕ್ತರ ಸಂಕಷ್ಟಗಳು ಬೇಗನೆ ನೀವಾರಣೆಯಾಗುತ್ತವೆ ಎಂಬ ನಂಬಿಕೆ ಶಿವಭಕ್ತರಲ್ಲಿದೆ, ಇದಕ್ಕಾಗಿ ಭಕ್ತರು ಶಿವನ ದೇವಾಲಯಗಳನ್ನು ಹುಡುಕಿ ದರ್ಶನ ಪಡೆಯುತ್ತಾರೆ.ಇಂತ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವಂತ ದೇವಾಲಯಗಳು ಭಾರತದಲ್ಲಿ ಹಲವಾರು ಇವೆ ಇದು ಅಚ್ಚರಿಗೆ ಕಾರಣವಾಗುತ್ತದೆ ಕಲ್ಲಿನಲ್ಲಿ ಕೆತ್ತಿರುವ ಶಿವನ ಲಿಂಗ ಬಣ್ಣ ಬದಲಾಯಿಸುತ್ತದ ಎಂಬ ವಿಸ್ಮಯ ಕಾಡುತ್ತದೆ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುವ ಶಿವಲಿಂಗದ ದೇವಾಲಯಗಳಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಹೊರವಲಯದಲ್ಲಿ ಇರುವ ವಿರೂಪಾಕ್ಷಿಯಲ್ಲಿನ ಶ್ರೀ ವಿರೂಪಾಕ್ಷ ದೇವಾಲಯ ಎನ್ನುವುದು ವಿಶೇಷ.ಈ ದೇವಾಲಯದ ಮಹಿಮೆಯನ್ನು ನೋಡಲು ದೇಶಾದ್ಯಂತ ಹಾಗು ಹೊರ ದೇಶದ ಭಕ್ತರು ಬರುತ್ತಾರೆ. ಇಲ್ಲಿನ ಶಿವಲಿಂಗ ದಿನಕ್ಕೆ ಮೂರು ಬಾರಿ ಬಣ್ಣ ಬದಲಾಯಿಸುತ್ತದೆ ಈ ದೇವರನ್ನು ಪೂಜಿಸುವುದರಿಂದ ಸರ್ವ ದೋಷಗಳು ನೀವಾರಣೆಯಾಗುತ್ತದೆ ಎಂದು ಹೇಳುತ್ತಾರೆ.ಇಲ್ಲಿರುವ ಶ್ರೀ ವಿರೂಪಾಕ್ಷ ಮಹಾದೇವ ದೇವಾಲಯವು ಅತ್ಯಂತ ಪ್ರಸಿದ್ಧಿ ಮತ್ತು ಪುರಾತನ…

Read More

ಹಾಸನ :ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ವಿನೂತನ ಹಾಗು ಅಪಾಯಕಾರಿ ರೀಲ್ಸ್Reels ಮಾಡುವ ಹುಚ್ಚಿನಲ್ಲಿ ಬಿದ್ದಿರುವ ಕೆಲ ಯುವಕರು ಹುಚ್ಚಾಟದಿಂದ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ.ಇಂತಹುದೆ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದ್ದು ರೀಲ್ಸ್ ಮಾಡಲು ಹೋಗಿ ಬೆಟ್ಟದ ಪ್ರಪಾತಕ್ಕೆ ಬಿದ್ದು ಯುವಕನೊಬ್ಬ ತೀವ್ರವಾಗಿ ಗಾಯಗೊಂಡಿರುವ ಘಟನೆ ಸಕಲೇಶಪುರ ತಾಲೂಕಿನ ಗವಿಬೆಟ್ಟದಲ್ಲಿ ನಡೆದಿದೆ.ರಾಕಿದ್ (18) ಯುವಕ ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡುವಾಗ ಆಯತಪ್ಪಿ ಪ್ರಪಾತಕ್ಕೆ ಬಿದ್ದು ಗಾಯಗೊಂಡ ಘಟನೆ ನಡೆದಿದ್ದು, ಶನಿವಾರಸಂತೆಯಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಸಕಲೇಶಪುರದ ಗವಿಬೆಟ್ಟಕ್ಕೆ ಬಂದಿದ್ದ ರಾಕಿದ್, ಬೆಟ್ಟದ ತುದಿಯಲ್ಲಿ ನಿಂತು ರೀಲ್ಸ್ ಮಾಡುವಾಗ ಜಾರಿ ಬಿದ್ದಿರುತ್ತಾನೆ. ಪರಿಣಾಮ ಆತನ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ಸ್ಥಳೀಯರು ಮತ್ತು ಯಸಳೂರು ಠಾಣೆ ಪೊಲೀಸರ ಸಹಾಯದಿಂದ ರಾಕಿದ್ ನನ್ನು ಮೇಲೆತ್ತಿ ತಕ್ಷಣವೇ ಶನಿವಾರಸಂತೆ ಅಸ್ಪತ್ರೆಗೆ ಕರೆದೊಯ್ಯಲಾಯಿತು ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹಾಸನದ ಹಿಮ್ಸ್​​ಗೆ ಕರೆತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ.ಯಸಳೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,…

Read More

ನ್ಯೂಜ್ ಡೆಸ್ಕ್:ದುಬೈನಲ್ಲಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ  ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಮತ್ವದ ಪಂದ್ಯದಲ್ಲಿ ಇಂಡಿಯಾ-ಪಾಕಿಸ್ತಾನ್ ಕ್ರಿಕೆಟ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ 6 ವಿಕೆಟ್‌ಗಳ ಭಾರಿ ಅಂತರದಿಂದ ಗೆಲವನ್ನು ತನ್ನದಾಗಿದಿಕೊಂಡಿದೆ.ಹಲವು ದಿನಗಳ ನಂತರ ರನ್‌ ಮಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ Virat Kohli  ಉತ್ತಮ ಪ್ರದರ್ಶನ ನೀಡಿ ಶತಕ ಬಾರಿಸಿದ್ದು ಟೀಮ್ ಇಂಡಿಯಾ ಗೆಲುವಿಗೆ ಸಹಕಾರಿಯಾಗಿದೆ. ಕಿಂಗ್ ಕೊಹ್ಲಿ ಶತಕ ತಮ್ಮ ವೃತ್ತಿಜೀವನದ 51 ನೇ ಸೆಂಚುರಿ ಗಳಿಸಿ “ಪಂದ್ಯದ ಆಟಗಾರ”plyer of match ಎಂದು ಗುರುತಿಸಲಾಗಿದೆ ಕೊಹ್ಲಿಯೊಂದಿಗೆ ಶ್ರೇಯಸ್ ಅಯ್ಯರ್ (56) ಮತ್ತು ಶುಭಮನ್ ಗಿಲ್ (46) ಉತ್ತಮವಾಗಿ ಆಟವಾಡಿ ನೆರವು ನೀಡಿದ್ದಾರೆ ರೋಹಿತ್ ಶರ್ಮಾ (20) ಮತ್ತು ಹಾರ್ದಿಕ್ (8) ಬೇಗನೆ ಔಟಾಗಿದ್ದು ಪ್ರೇಕ್ಷಕರನ್ನು ಆತಂಕಕ್ಕೆ ಈಡು ಮಾಡಿತ್ತಾದರು ಗಿಲ್ ಮತ್ತು ಶ್ರೇಯಸ್ ಪಿಚ್ ಅನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ರನ್ ಗಳಿಸಿದರು.ಕೊಹ್ಲಿ ಮತ್ತು ಶ್ರೇಯಸ್ ಉತ್ತಮ ಸಮನ್ವಯದಿಂದ ಆಡಿದರು, ಪಾಕಿಸ್ತಾನಿ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ. ಅದರಲ್ಲೂ…

Read More

ನ್ಯೂಜ್ ಡೆಸ್ಕ್:ಎಲ್ಲವೂ ಸರಿ ಹೋಗಿದ್ದರೆ ಮುಂದಿನ ತಿಂಗಳು ನಡೆಯುವ ಎಸ್ಸೆಸ್ಸೆಲ್ಸಿ ಪರಿಕ್ಷೆ ಬರೆಯಬೇಕಾಗಿತ್ತು ಆದರೆ ವಿಧಿ ಬರವೆ ಬೆರೆಯಾಗಿದ್ದು ವಿದ್ಯಾರ್ಥಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ.ಹೃದಯಾಘಾತದಿಂದ ಮೃತಪಟ್ಟ ದುರ್ದೈವಿ ವಿದ್ಯಾರ್ಥಿಯನ್ನು ರಾಹುಲ್ ಬಿ.ಜೆ. (16) ಎಂದು ಗುರುತಿಸಲಾಗಿದೆ. ಈತ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಭೈರಾಪುರ ಗ್ರಾಮದ ಜಯರಾಂ ಎಂಬುವರ ಪುತ್ರನಾಗಿದ್ದು ಜಿ.ಎಚ್‌.ಎಸ್. ಶಾಲೆಯಲ್ಲಿ ಹತ್ತನೇ ತರಗತಿ ಓದುತ್ತಿದ್ದ.ಮೃತ ರಾಹುಲ್ ಶುಕ್ರವಾರ ಶಾಲೆಗೆ ಹೋಗಿ ಸಂಜೆ ಮನೆಗೆ ಬಂದಿದ್ದು ರಾತ್ರಿ 9.30 ಸಮಯದಲ್ಲಿ ಓದುತ್ತಿರುವಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಪೋಷಕರು ಹುಳಿಯಾರಿನ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶ್ ಬಾಬು ವಿದ್ಯಾರ್ಥಿ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.ಮತ್ತೊಬ್ಬ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ10ನೇ ಕ್ಲಾಸಿನ ಬಾಲಕಿ. ಎಂದಿನಂತೆ ಶಾಲೆಯ ಸಮವಸ್ತ್ರ ಧರಿಸಿಕೊಂಡು ಶಾಲೆಗೆ ಹೊರಟಿದ್ದಳು. ಗುರುವಾರ ಮುಂಜಾನೆ ಶಾಲಾ ಅಂಗಳದಲ್ಲಿ ಏಕಾಏಕಿ ಕುಸಿದು ಬಿದ್ದಿದ್ದಾಳೆ ಏನಾಯ್ತು ಎಂದು ನೋಡುವಷ್ಟರಲ್ಲಿ 16ರ ಬಾಲೆಗೆ ಹೃದಯಾಘಾತವಾಗಿತ್ತು. ಕೂಡಲೇ…

Read More

ಶ್ರೀನಿವಾಸಪುರ:ತಾಲೂಕಿನ ಕೋಡಿಪಲ್ಲಿ ಗ್ರಾಮ ಪಂಚಾಯಿತಿಗೆ 4ನೇ ಅವಧಿಯ ಅಧ್ಯಕ್ಷರಾಗಿ ಶಿಲ್ಪಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಕೋಡಿಪಲ್ಲಿ ಪಂಚಾಯಿತಿಯಲ್ಲಿ ತೆರವಾಗಿ ಸಾಮಾನ್ಯ ಮಹಿಳಾ ಮೀಸಲು ನಿಗದಿಯಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.ಕೋಡಿಪಲ್ಲಿ ಪಂಚಾಯಿತಿ ಮೊದಲಿನಿಂದಲೂ ಕಾಂಗ್ರೆಸ್ ಭದ್ರಕೋಟೆ ಹಾಗಾಗಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಶಿಲ್ಪ ಹೊರತು ಪಡಿಸಿ ಇತರೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಶಿಲ್ಪ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ್ದಾರೆ ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿಯಾಗಿದ್ದ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಘೋಷಣೆ ಮಾಡಿದರು.ಕೋಡಿಪಲ್ಲಿ ಪಂಚಾಯಿತಿ ಪ್ರಭಾವಿ ಮುಖಂಡ ಪಿ.ಎಲ್.ಡಿ ಬ್ಯಾಂಕ್ ಉಪಾಧ್ಯಕ್ಷ ಸುಬ್ಬಾರೆಡ್ಡಿ ಮಾತನಾಡಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ನಡೆದಂತ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದ್ದು ಇಲ್ಲಿ ಭಿನ್ನಾಭಿಪ್ರಾಯಗಳನ್ನು ಪಕ್ಕಕ್ಕಿಟ್ಟು ಪಕ್ಷಾತೀತವಾಗಿ ಪಂಚಾಯಿತಿ ಅಭಿವೃದ್ಧಿ ಮಾಡಬೇಕು ಎಂದು ಹೇಳಿದರು.ನೂತನ ಅಧ್ಯಕ್ಷೆ ಶಿಲ್ಪ ಮಾತನಾಡಿ, ನಾಲ್ಕನೇ ಅವಧಿಗೆ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿದಕ್ಕೆ ಮುಖಂಡರಿಗೆ ಧನ್ಯವಾದ ತಿಳಿಸಿದ ಅವರು ಎಲ್ಲಾ ಸದಸ್ಯರ ವಿಶ್ವಾಸ ಪಡೆದು ಆಡಳಿತ ನಡೆಸುವುದಾಗಿ…

Read More

ಕೋಲಾರ:ಆತಂಕಕ್ಕೆ ಗೊಳಗಾಗದೆ SSLC ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಅಂಕಗಳೊಂದಿಗೆ ಗುಣಮಟ್ಟದ ಫಲಿತಾಂಶ ಪಡೆಯುವಂತೆ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಕರೆ ಇತ್ತರು.ಅವರು ಕೋಲಾರ ಜಿಲ್ಲೆಯ SSLC ಪರೀಕ್ಷೆಯ ಕೋಲಾರ ತಾಲ್ಲೂಕಿನ ನೋಡಲ್ ಅಧಿಕಾರಿಯಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಕೋಲಾರ ತಾಲೂಕಿನ ಮುದುವಾಡಿ,ಸರ್ಕಾರಿ ನ್ಯೂ ಗವರ್ನಮೆಂಟ್ ಹೈಸ್ಕೂಲ್ ಕೆಂಬೋಡಿ ಸರ್ಕಾರಿ ಜನತಾ ಫ್ರೌಡ ಶಾಲೆ ಸೇರಿದಂತೆ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ಸದರಿ 2024-25 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಎದರಿಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಮಾತನಾಡಿದರು.ಪ್ರಶ್ನೆಪತ್ರಿಕೆ ಯಾವುದೇ ರೀತಿ ಕೊಟ್ಟರೂ ಉತ್ತರಿಸಲು ಸಿದ್ದರಾಗಿರಬೇಕು, ಅದಕ್ಕೆ ಪರಿಶ್ರಮ ಅಗತ್ಯವಿದೆ, ಕ್ರೀಡೆ, ಆಟ,ಸಿನಿಮಾ ಎಲ್ಲವನ್ನು ಪರೀಕ್ಷೆ ಮುಗಿಯುವವರೆಗೂ ಮರೆತುಬಿಡಿ ಓದಿನ ಕಡೆ ಹೆಚ್ಚು ಗಮನ ಇರಲಿ ಉತ್ತಮ ನಿದ್ದೆಯೂ ಅಗತ್ಯವಿದ್ದು ಮೊಬೈಲ್ ನೋಡದಿರಿ ಆರೋಗ್ಯದ ಕಡೆ ಗಮನ ಹರಿಸಿ ಮುರುಕುಲು ತಿಂಡಿ,ಎಣ್ಣೆ ಪದಾರ್ಥಗಳಿಂದ ದೂರ ಇದ್ದು ಆರೋಗ್ಯ…

Read More

ಶ್ರೀನಿವಾಸಪುರ:ಆರ್ಯವೈಶ್ಯ ಸಮಾಜಕ್ಕೆ ಸೇರಿದ ದೆಹಲಿ ಮುಖ್ಯ ಮಂತ್ರಿ ರೇಖಾ ಗುಪ್ತ ಅವರು ದೇಶದ ಹೆಮ್ಮೆಯ ಪುತ್ರಿಯಾಗಿದ್ದಾರೆ. ಅವರ ದಕ್ಷತೆ ಸೇವಾಪರತೆ ಹಾಗು ರಾಜಕೀಯ ಚತುರತೆ ಗುರುತಿಸಿ ಪ್ರಧಾನಿ ನರೇಂದ್ರ ಮೋದಿ ಹಾಗು ಬಿಜೆಪಿ ಹಿರಿಯ ಮುಖಂಡರು ರೇಖಾಗುಪ್ತ ಅವರಿಗೆ ಮುಖ್ಯಮಂತ್ರಿ ಅವಕಾಶ ಕಲ್ಪಿಸಿದ್ದಾರೆ ಎಂದು ತಾಲ್ಲೂಕು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್ ಹೇಳಿದರು.ಅವರು ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಆರ್ಯವೈಶ್ಯ ಮಂಡಳಿ Arya Vysya Mandali ವತಿಯಿಂದ ದೆಹಲಿ ನೂತನ ಮುಖ್ಯ ಮಂತ್ರಿ ರೇಖಾಗುಪ್ತ ಅವರಿಗೆ ಶುಕ್ರವಾರ ಸಂಜೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬಿಜೆಪಿ ಮುಖಂಡ ಚಿರುವನಹಳ್ಳಿಲಕ್ಷ್ಮಣಗೌಡ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷವಾಗಿದ್ದು ರೇಖಾಗುಪ್ತ ಸಹ ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಪಕ್ಷದ ಚಟುವಟಿಕೆಗಳಲ್ಲಿ ನಿರಂತರವಾಗಿ ಶ್ರಮಿಸಿದ ಅವರ ಕಾರ್ಯಕ್ಷಮತೆ ಸೇವಾಪರತೆ ಪಕ್ಷ ನಿಷ್ಟೆಯನ್ನು ಗುರುತಿಸಿ ಅವರು ಮೊದಲಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದರು ಅವರನ್ನು ಮುಖ್ಯಮಂತ್ರಿ ಮಾಡಲಾಗಿದೆ ಇದಕ್ಕೆ ಕೊಟ್ಯಾಂತರ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ ಅವರ ಆಧಿಕಾರಾವಧಿಯಲ್ಲಿ ದೆಹಲಿ ಸರ್ವತೋಮುಖವಾಗಿ…

Read More

ಕೋಲಾರ ತಾಲೂಕು ವಕ್ಕಲೇರಿ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇದ್ದರು ಇಲ್ಲಿಗೆ ಸರಿಯಾಗಿ ವೈದ್ಯರು ಬರುತ್ತಿಲ್ಲ, ಇಲ್ಲಿರುವ ಆಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತಿಲ್ಲ ಹೀಗಾಗಿ ಈ ಭಾಗದ ಜನತೆ ಆರೋಗ್ಯ ಸೇವೆ ಪಡೆಯಲು ಖಾಸಗಿ ಆಸ್ಪತ್ರೆ ವೈದ್ಯರ ಪಡೆಯುತ್ತಾರೆ ಹಾಗೆ ಪಡೆದ ಯುವಕ ಇಂಜೆಕ್ಷನ್ ಪಡೆದ ಕೆಲ ಹೊತ್ತಿಗೆ ಜೀವ ಬಿಟ್ಟ ಘಟನೆ ನಡೆದಿರುತ್ತದೆ. ಕೋಲಾರ:ಕೋಲಾರ:ವೈದ್ಯರು ಇಂಜೆಕ್ಷನ್ ನೀಡಿದ ಕೇಲ ಹೊತ್ತಿಗೆ ಯುವಕನೊಬ್ಬ ಮೃತ ಪಟ್ಟಿರುವ ಘಟನೆ ಕೋಲಾರ ತಾಲೂಕು ವಕ್ಕಲೇರಿಯಲ್ಲಿ ನಡೆದಿದೆ ಮೃತ ಯುವಕನನ್ನು ನಾಗೇಂದ್ರ (23) ಎನ್ನಲಾಗಿದ್ದು ಇಂಜೆಕ್ಷನ್ ನೀಡಿದ ವೈದ್ಯರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ನಾಗೇಂದ್ರಗೆ ಕಳೆದ ರಾತ್ರಿ ತೀವ್ರ ಜ್ವರ ಕಾಣಿಸಿಕೊಂಡಿದೆ ಕೂಡಲೇ ಆತನನ್ನು ವಕ್ಕಲೇರಿಯಲ್ಲಿರುವ ಸನ್ ರೈಸ್ ಖಾಸಗಿ ಕ್ಲಿನಿಕ್ ಗೆ ಕರೆದೊಯಿದಿದ್ದು ಅಲ್ಲಿನ ವೈದ್ಯರು ಆತನಿಗೆ ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ಪಡೆದ ಒಂದೇ ನಿಮಿಷಕ್ಕೆ ನಾಗೇಂದ್ರ ಮೃತಪಟ್ಟಿದ್ದಾನೆ.ವೈದ್ಯರ ನಿರ್ಲಕ್ಷ್ಯದಿಂದ ಯುವಕ ಸಾವನಪ್ಪಿದ್ದಾನೆ ಎಂದು ಇಂಜೆಕ್ಷನ್ ನೀಡಿದ ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಮೃತ ನಾಗೇಂದ್ರ…

Read More