ಶ್ರೀನಿವಾಸಪುರ:ಚಾಲಕನ ನಿಯಂತ್ರಣ ತಪ್ಪಿದ ಸ್ಲೀಪರ್ ಕೋಚ್ ಖಾಸಗಿ ಬಸ್ ಪಕ್ಕದ ಹಳ್ಳಕ್ಕೆ ಉರಳಿ ಬಿದ್ದು ಒಬ್ಬರು ಮೃತ ಪಟ್ಟಿರುವ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಬಳಿ ನಡೆದಿದೆ.ಮೃತ ವ್ಯಕ್ತಿಯನ್ನು ಆಂಧ್ರದ ಪ್ರಕಾಶಂ ಜಿಲ್ಲೆಯ ಪುನಗೋಡು ಗ್ರಾಮದ ಅನಿಲ್ (22) ಎಂದು ಗುರತಿಸಲಾಗಿದೆ. ಖಾಸಗಿ ಬಸ್ ಶ್ರೀ ಶ್ರೀನಿವಾಸ ಬಸ್ ಟ್ರಾವಲ್ಸ್ ಬೆಂಗಳೂರಿನಿಂದ ಆಂಧ್ರದ ಒಂಗೋಲ್ ನಗರಕ್ಕೆ ಮದನಪಲ್ಲಿ ಮಾರ್ಗವಾಗಿ ಹೋಗಲು ರಾಯಲ್ಪಾಡು ಬಳಿ ಚಲಿಸುತ್ತಿದ್ದಾಗ ಭಾನುವಾರ ಮದ್ಯರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಾಯಲ್ಪಾಡು ತಿರುವಿನಲ್ಲಿ ಹಳ್ಳಕ್ಕೆ ಉರಳಿ ಬಿದ್ದಿದೆ ಬಸ್ಸಿನಲ್ಲಿದ್ದ ಸುಮಾರು 17 ಮಂದಿ ಪ್ರಯಾಣಿಕರಲ್ಲಿ ಮೃತ ಯುವಕನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೆ ಮೃತ ಪಟ್ಟಿರುವುದಾಗಿ ಹೇಳಲಾಗಿದೆ.ಅಪರಿಚಿತ ವಾಹನ ಡಿಕ್ಕಿ ವ್ಯಕ್ತಿ ದೇಹ ಚಿದ್ರಚಿದ್ರಬೆಂಗಳೂರು-ಮದನಪಲ್ಲಿ ಹೆದ್ದಾರಿಯಲ್ಲಿ ಬೆಳಗಿನ ಸಮಯದಲ್ಲಿ ವಾಕಿಂಗ್ ಮಾಡಿಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಅಪರಿಚಿತ ವಾಹನ ಗುದ್ದಿಕೊಂಡು ಹೋಗಿದೆ ವಾಹನ ಡಿಕ್ಕಿಯಾದ ರಭಸಕ್ಕೆ ವ್ಯಕ್ತಿ ದೇಹ ಚಿದ್ರಚಿದ್ರವಾಗಿದ್ದು ಇದೊಂದು ಭಿಕರ ಅಂಪಘಾತ ಎನ್ನುತ್ತಾರೆ ಸ್ಥಳೀಯರು ಈ ಅಪಘಾತ…
Author: Srinivas_Murthy
ಸಿಎಂ ಸಿದ್ದರಾಮಯ್ಯರೊಂದಿಗೆ ಮಾತನಾಡಿದ್ದು ಸಂಕ್ರಾಂತಿ ಹಬ್ಬದ ನಂತರ ಸಮಸ್ಯೆ ಬಗೆಹರಿಯಲಿದೆ ಎಂದ ಸಚಿವ ರಾಮಲಿಂಗಾರೆಡ್ಡಿ. ಬೆಂಗಳೂರು:ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಸಿದ್ದರಾಮಯ್ಯರೊಂದಿಗೆ ಮಾತುಕತೆ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್ 31 ರಂದು ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆಯಲು ನಿರ್ಧರಿಸಿವೆ. ಸಭೆಯಲ್ಲಿ ಸಾರಿಗೆ ಇಲಾಖೆ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿದ್ದು ಈ ಸಂದರ್ಭದಲ್ಲಿ ಸಾರಿಗೆ ಸಿಬ್ಬಂದಿ ಬೇಡಿಕೆ ಕುರಿತಾಗಿ ಸಿಎಂ ಅವರಿಗೆ ಮನವರಿಕೆ ಮಾಡಲಾಗಿವುದಾಗಿ ತಿಳಿಸಿದ್ದು ಸಂಕ್ರಾಂತಿ ನಂತರ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಖುದ್ಧು ಸಭೆ ನಡೆಸಲಿದ್ದಾರಂತೆ ಈ ಕಾರಣಕ್ಕಾಗಿ ರಾಜ್ಯ ರಸ್ತೆ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರ ವಾಪಸ್ ಪಡೆದು ಡಿಸೆಂಬರ್ 31 ರಂದು ಸಾರಿಗೆ ಸಂಸ್ಥೆ ಬಸ್ ಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ ಎಂದಿರುತ್ತಾರೆ.
ಮದನಪಲ್ಲಿ:ಅಯ್ಯಪ್ಪ ಮಾಲಾಧಾರಿ ಭಕ್ತನ ಮೇಲೆ ಕುಲ್ಲಕ್ಷಕಾರಣಕ್ಕೆ ಹಲ್ಲೆ ನಡೆಸಿರುವ ಘಟನೆ ದೊಡ್ಡ ರಾದ್ದಾಂತಕ್ಕೆ ಕಾರಣವಾಗಿರುವುದು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆ ಮದನಪಲ್ಲಿ ನಗರದಲ್ಲಿ ಬುಧವಾರ ಸಂಜೆ ನಡೆದಿರುತ್ತದೆ.ವೆಂಕಟೇಶ್ ಎಂಬ ಅಯ್ಯಪ್ಪ ಮಾಲಾಧಾರಿ ಯುವಕ ಬೈಕನಲ್ಲಿ ತನ್ನ ತಾಯಿಯನ್ನು ಕರೆದುಕೊಂಡು ಆರ್ಟಿಸಿ ಬಸ್ ನಿಲ್ದಾಣದ ಮಾರ್ಗವಾಗಿ ಹೋಗುತ್ತಿರುವಾಗ ಮತ್ತೊಬ್ಬ ಬೈಕ ಸವಾರ ಜೋರಾಗಿ ಬಂದಿದ್ದು ಬೈಕ್ ಗೆ ಟಚ್ ಆಗಿದೆ ಇದಕ್ಕೆ ಅಯಪ್ಪ ಮಾಲಾಧಾರಿ ವೆಂಕಟೇಶ್ ವಿರೋಧಿಸಿದಾಗ ಇಬ್ಬರು ಬೈಕ್ ಸವಾರರ ನಡುವೆ ಮಾತಿನ ಚಕಮಕಿಗೆ ನಡೆದಿದೆ ಜೋರಾಗಿ ಬಂದ ಬೈಕ್ ಸವಾರ ಜಿಯಾವುಲ್ ಹಕ್ ಎಂಬ ವ್ಯಕ್ತಿ ಅಯ್ಯಪ್ಪ ಮಾಲಾಧಾರಿಯ ಅಂಗಿ ಹರಿದು ದುರ್ಬಾಷೆಗಳಿಂದ ಬೈದು ಹಲ್ಲೆ ನಡೆಸಿರುವುದಾಗಿ ವೆಂಕಟೇಶ್ ತಾಯಿ ಕಲಾವತಿ ಆರೋಪಿಸಿದ್ದಾರೆ. ಅಯ್ಯಪ್ಪ ಮಾಲಾಧಾರಿ ವೆಂಕಟೇಶ್ ಮೇಲಿನ ಹಲ್ಲೆ ವಿಚಾರ ಮದನಪಲ್ಲಿ ನಗರದಾದ್ಯಂತ ಕಾಡ್ಗಿಚ್ಚಿನಂತೆ ಹರಡಿದೆ ಕ್ಷಣಾರ್ಧಾದಲ್ಲಿ ಅಯ್ಯಪ್ಪ ಮಾಲಾಧಾರಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾವಣೆ ಗೊಂಡು ದಾಳಿ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಮದನಪಲ್ಲಿ ಪೋಲಿಸ್ ಠಾಣೆ ಮುಂದೆ ಪ್ರತಿಭಟಿಸಿದ್ದಾರೆ.ಇದಕ್ಕೆ…
ಚಿಂತಾಮಣಿ ನಗರದ ವಾಣಿಜ್ಯೋದ್ಯಮಿ ನಾಗಹರ್ಷ ಅವರ ಪತ್ನಿ ರಶ್ಮಿಹರ್ಷ ಅವರು ರಾಷ್ಟ್ರಮಟ್ಟದ ಅತ್ಯಂತ ಜನಪ್ರಿಯ ವೈಶ್ಯ ಲೈಮ್ಲೈಟ್ ಪ್ರಶಸ್ತಿ(Most Popular Vysya Women (MPVW) – 2024)ಯನ್ನು ಪಡೆದಿರುತ್ತಾರೆ. ಚಿಂತಾಮಣಿ:ರಾಷ್ಟ್ರಮಟ್ಟದ ಮೋಸ್ಟ್ ಪಾಪ್ಯೂಲರ್ ವೈಶ್ಯ ಲೈಮ್ಲೈಟ್ ಪ್ರಶಸ್ತಿಯನ್ನು ಚಿಂತಾಮಣಿ ನಗರದ ರಶ್ಮಿಹರ್ಷ ಅವರು ಪಡೆದಿರುತ್ತಾರೆ.ಹೈದರಾಬಾದ್ ಮೂಲದ ಪ್ರಖ್ಯಾತ ಮಾನೆಪಲ್ಲಿ ಆಭರಣ ಮಳಿಗೆ ಹಾಗು ವಾರಹಿ ಸಿಲ್ಕ್ ಸಂಸ್ಥೆ ಪ್ರಸ್ತುತ ಪಡಿಸುವ ಪ್ರಶಸ್ತಿಯಾಗಿದ್ದು ಆರ್ಯ ವೈಶ್ಯ ಸಮಾಜದ ಮಹಿಳಾ ಸಾಧಕರಿಗೆ ಪ್ರತಿ ವರ್ಷ ಪ್ರಶಸ್ತಿಯನ್ನು ಪ್ರಧಾನ ಮಾಡುತ್ತಾರೆ. ಅದರಂತೆ 2024 ರಲ್ಲಿ ನಡೆದ ಸ್ಪರ್ಧೆಯಲ್ಲಿ ಚಿಂತಾಮಣಿಯ ರಶ್ಮಿಹರ್ಷರವರು ಅತ್ಯಂತ ಜನಪ್ರಿಯ ವೈಶ್ಯ ಮಹಿಳೆ ಎಂದು ಆಯ್ಕೆಯಾಗಿದ್ದು ಅವರು ಮೊಸ್ಟ್ ಪಾಪ್ಯೂಲರ್ ವೈಶ್ಯ ಸ್ಪರ್ದೆಯಲ್ಲಿ ಭಾಗವಹಿಸಿ ಹತ್ತು ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಎರಡನೆ ರನ್ನರ್ ಅಪ್ ಪ್ರಶಸ್ತಿಯ ಗರಿ ದಕ್ಕಿಸಿಕೊಂಡಿದ್ದಾರೆ. ಸೋಮವಾರ ಸಂಜೆ ಹೈದರಾಬಾದ್ ಮಹಾನಗರದ ನೊವಾಟೆಲ್ ಹೋಟೆಲ್ ನಲ್ಲಿ ನಡೆದ ವರ್ಣ ರಂಜಿತ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಕೀರಿಟ ತೋಡಿಸಿದ್ದು ನಂತರ…
ನ್ಯೂಜ್ ಡೆಸ್ಕ್: ಜಮ್ಮು ಕಾಶ್ಮೀರದಲ್ಲಿ ಮಂಗಳವಾರ ಸಂಜೆ ಕಣಿವೆ ಪ್ರದೇಶವಾದ ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ವಾಹನ ಪ್ರಪಾತದ ಕಂದಕಕ್ಕೆ ಉರುಳಿಬಿದ್ದು ಐವರು ಯೋಧರು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿತ್ತು.ಈ ಅಪಘಾತದಲ್ಲಿ ಐವರು ಯೋಧರು ಹುತಾತ್ಮರಾಗಿದ್ದು 12 ಜನ ಸೈನಿಕರಿಗೆ ಗಂಭೀರ ಗಾಯಗಳಾಗಿವೆ. ಇದರಲ್ಲಿ ಕೆಲ ಯೋಧರ ಸ್ಥಿತಿ ಚಿಂತಾಜನಕವಾಗಿದ್ದು,ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಹುತಾತ್ಮರಾದ ಐದು ಜನ ಯೋಧರಲ್ಲಿ ಮೂರು ಜನ ಯೋಧರು ಕರ್ನಾಟಕದವರಾಗಿದ್ದು ಬೆಳಗಾವಿಯ ಸಾಂಬ್ರಾ ಗ್ರಾಮದ ಯೋಧ ಸುಬೇದಾರ್ ದಯಾನಂದ ತಿರಕಣ್ಣವರ (45), ಕುಂದಾಪುರ ಬಳಿಯ ಕೋಟೇಶ್ವರದ ಬಿಜಾಡಿಯ ಅನೂಪ್ (33), ಬಾಗಲಕೋಟೆ ಮಹಾಲಿಂಗಪುರದ(25) ವರ್ಷದ ಮಹೇಶ್ ಮಾರಿಗೊಂಡ ಮೃತಪಟ್ಟಿದ್ದಾರೆ ಎಂದು ಗುರುತಿಸಲಾಗಿದೆ.ಮೂರು ವರ್ಷದ ಹಿಂದೆ ಮದುವೆಯಾಗಿದ್ದ ಯೋಧಬಾಗಲಕೋಟೆ ಜಿಲ್ಲೆ ಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿ ಮಹೇಶ್ ನಾಗಪ್ಪ ಮಾರಿಗೊಂಡ ಅವರಿಗೆ 25 ವರ್ಷ ವಯಸ್ಸಾಗಿದ್ದು 6 ವರ್ಷಗಳಿಂದ 11ನೇ ಮರಾಠಾ ರೆಜಿಮೆಂಟ್ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮದುವೆಯಾಗಿ ಮೂರು ವರ್ಷ ಆಗಿದ್ದು ಲಕ್ಷ್ಮಿ ಎಂಬ ಯುವತಿಯನ್ನ ಕೈಹಿಡಿದ್ದರು. ಗುರುವಾರ ಮೃತ…
ನ್ಯೂಜ್ ಡೆಸ್ಕ್:ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನ 350 ಅಡಿ ಆಳದ ಕಂದಕಕ್ಕೆ ಬಿದ್ದು ಐವರು ಯೋಧರು ಹುತಾತ್ಮರಾಗಿದ್ದಾರೆ. 18 ಯೋಧರನ್ನು ಹೊತ್ತೊಯ್ಯುತ್ತಿದ್ದ ಸೇನಾ ವಾಹನ ಮೆಂಧರ್ನ ಬಲ್ನೋಯಿ ಕಣಿವೆ ಪ್ರದೇಶದಲ್ಲಿ ಹೋಗುತ್ತಿದ್ದಾಗ ಘಟನೆ ನಡೆದಿದ್ದು ಹಲವು ಯೋಧರು ಗಾಯಗೊಂಡಿರುವುದಾಗಿ ಹೇಳಲಾಗಿದೆ. 11 ಮದ್ರಾಸ್ ಲೈಟ್ ಇನ್ಫೆಂಟ್ರಿ (11 MLI) ಗೆ ಸೇರಿದ ಸೇನಾ ವಾಹನ ಎಂದು ಗುರುತಿಸಲಾಗಿದೆ ವಾಹನವು ನೀಲಂ ಪ್ರಧಾನ ಕಛೇರಿಯಿಂದ ಬಲ್ನೋಯಿ ಘೋರಾ ಪೋಸ್ಟ್ಗೆ ಹೊರಡುತ್ತಿದ್ದಾಗ ಮಾರ್ಗಮಧ್ಯದಲ್ಲಿ ಈ ಘಟನೆ ನಡೆದಿದೆ. 11 MLI ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು ವೈಟ್ ನೈಟ್ ಕಾರ್ಪ್ಸ್ ಸೈನಿಕರ ಸಾವಿಗೆ ಸಂತಾಪ ಸೂಚಿಸಿದೆ.
ಶ್ರೀನಿವಾಸಪುರ:ಪಟ್ಟಣದ ಹೊರವಲಯದಲ್ಲಿನ ಕಾಲೇಜು ಹಾಸ್ಟೆಲ್ನಲ್ಲಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿರುತ್ತದೆ, ಮೃತ ವಿದ್ಯಾರ್ಥಿನಿಯನ್ನು ದ್ವಿತೀಯ ಪಿಯುಸಿ ಒದುತ್ತಿದ್ದ ಬಿಂದುಶ್ರೀ(17)ಎಂದು ಗುರುತಿಸಲಾಗಿದೆ.ಮೃತ ವಿದ್ಯಾರ್ಥಿನಿ ಶ್ರೀನಿವಾಸಪುರ ಪಟ್ಟಣದ ಹೊರವಲಯದಲ್ಲಿರುವ ಭೈರವೇಶ್ವರ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ಬಿಂದುಶ್ರೀ ಚಿಕ್ಕಬಳ್ಳಾಪುರದ ಗಂಗರಕಾಲುವೆ ಗ್ರಾಮದ ಶಂಕರಪ್ಪ ಅವರ ಮಗಳಾಗಿದ್ದು ಕಾಲೇಜು ಹಾಸ್ಟೆಲ್ನಲ್ಲೆ ವಾಸವಾಗಿದ್ದು ಬೆಳಿಗ್ಗೆ ಕಾಲೇಜಿಗೆ ಹೋಗಿದ್ದು ಎಲ್ಲರಿಗೂ ಮುಂಚಿತವಾಗಿ ವಾಪಸ್ಸು ಬಂದಿರುವ ಅಕೆ ಹಾಸ್ಟೆಲ್ ನಲ್ಲಿನ ಕಬ್ಬಿಣದ ಮಂಚದ ಚೌಕಟ್ಟಿಗೆ ವೇಲ್ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ ಎಂದು ಹೇಳಲಾಗಿದೆ.ಪ್ರಕರಣ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ. ಚಿಕ್ಕಬಳ್ಳಾಪುರ ತಾಲೂಕು ಗಂಗರೆಕಾಲುವೆ ಗ್ರಾಮದ ನಿವಾಸಿ ಶಂಕರಪ್ಪ ದಂಪತಿಗೆ ಮೃತ ವಿದ್ಯಾರ್ಥಿನಿ ಬಿಂದುಶ್ರೀ ಸೇರಿದಂತೆ ಮೂರು ಜನ ಮಕ್ಕಳು ಇಬ್ಬರು ಗಂಡು ಮಕ್ಕಳು ಒಬ್ಬ ಮಗಳು ಸಭ್ಯ ಕುಟುಂಬದವರು ಎಂದು ಹೆಸರು ಪಡೆದಿರುವ ಬಗ್ಗೆ ಸ್ಥಳಿಯರು ಹೇಳುತ್ತಾರೆ.
ಶ್ರೀನಿವಾಸಪುರ:ಪ್ರೀತಿಸಿ ಅಂತರ್ಜಾತಿ ವಿವಾಹವಾದ ಪ್ರೆಮಿಗಳನ್ನು ತಡೆಯಲು ಯುವತಿಯ ಪೋಷಕರು ಮದುವೆಯನ್ನು ವಿರೋಧಿಸಿ ಅಕೆಯನ್ನು ಸಾರ್ವಜನಿಕವಾಗಿ ದರದರನೆ ಎಳೆದೊಯಿದ ಘಟನೆ ಶ್ರೀನಿವಾಸಪುರ ಪಟ್ಟಣದ ಜನಜಂಗುಳಿ ಪ್ರದೇಶವಾದ ತಾಲೂಕು ಕಚೇರಿ ಆವರಣದಲ್ಲಿ ನಡೆದಿರುತ್ತದೆ.ಅಪ್ಪಟ ಸಿನಿಮಾ ಶೈಲಿಯಲ್ಲಿ ನಡೆದಂತ ಹೈಡ್ರಾಮಾ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಬೆರಗುಗಣ್ಣಿನಿಂದ ನೊಡುತ್ತ ನಿಂತಿದ್ದಾರೆ.ಕೋಲಾರ ತಾಲ್ಲೂಕು ಸಿಂಗೊಂಡಹಳ್ಳಿ ಗ್ರಾಮದ ಅಲೈಕ್ಯ ಹಾಗು ಶ್ರೀನಿವಾಸಪುರ ತಾಲ್ಲೂಕು ಕನಮಪಲ್ಲಿ ಗ್ರಾಮದ ಮಲ್ಲಿಕಾರ್ಜುನನು ಪ್ರೀತಿಸುತಿದ್ದು ಮೂರ್ನಾಲ್ಕು ದಿನಗಳ ಹಿಂದೆ ದೇವಸ್ಥಾನದವೊಂದರಲ್ಲಿ ಮದುವೆಯಾಗಿದ್ದಾರೆ ಮದುವೆಯನ್ನು ಕಾನೂನು ಬದ್ದವಾಗಿ ನೊಂದಣೆ ಮಾಡಿಸಲು ಶ್ರೀನಿವಾಸಪುರದ ಸಬ್ ರಿಜಿಸ್ಟಾರ್ ಕಚೇರಿಗೆ ಬಂದಿರುತ್ತಾರೆ. ಅಲ್ಲಿ ಯುವತಿಯ ಪೋಷಕರು ಕಾದು ಕುಳತಿದ್ದು ಪ್ರೇಮಿಗಳು ಬರುತ್ತಲೆ ಅವರಿದ್ದ ಕಾರಿನಿಂದ ಯುವತಿ ಅಲಖ್ಯಾಳನ್ನು ದರದರನೆ ಎಳೆದುಕೊಂಡು ಹೋಗಿದ್ದಾರೆ ಈ ಸಂದರ್ಭದಲ್ಲಿ ಯುವತಿ ರೋಧನೆ ಮುಗಿಲು ಮುಟ್ಟಿತ್ತು ನಂತರ ಯುವಕನೊಂದಿಗೆ ಬಂದಿದ್ದ ಕೆಲವರು ಯುವತಿ ಪೊಷಕರ ನಡೆಯನ್ನು ವಿರೋಧಿಸಿ ದಬಾಸಿದಾಗ ಪೊಷಕರಿಗೂ ಅಲ್ಲಿದ್ದವರಿಗೂ ವಾಗ್ವಾದ ನಡೆಯಿತು ಯುವಕ ಮಲ್ಲಿಕಾರ್ಜುನ್ ನಿಸ್ಸಹಾಯಕನಾಗಿ ಘಟನೆ ನೊಡುತ್ತ ನಿಂತಿದ್ದು ಪೋಲಿಸರ ಮದ್ಯಪ್ರಶದಿಂದ ಹೈಡ್ರಾಮಾ…
ಶ್ರೀನಿವಾಸಪುರ:ಅಖಿಲ ಭಾರತ ನಾಗರಿಕರ ಸೇವಾ ಕಬ್ಬಡಿ ಪಂದ್ಯಾವಳಿಗಳು ಜನವರಿ 3 ರಿಂದ ದೆಹಲಿಯಲ್ಲಿ ನಡೆಯಲಿದ್ದು ಇದರಲ್ಲಿ 14 ಜನ ಮಹಿಳಾ ಕ್ರೀಡಾ ಪಟುಗಳು ಆಯ್ಕೆಯಾಗಿದ್ದು ಇವರಲ್ಲಿ ಶ್ರೀನಿವಾಸಪುರ ತಾಲೂಕು ಗೌವನಪಲ್ಲಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಮಾಧವಿ ರಾಜ್ಯ ತಂಡದ ಆಟಗಾರ್ತಿಯಾಗಿ ಪ್ರತಿನಿಧಿಸುತ್ತಿದ್ದಾರೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2024-25ನೇ ಸಾಲಿನ ರಾಜ್ಯ ಮಟ್ಟದ ಕಬಡಿ ಪಂದ್ಯಾವಳಿಯನ್ನು ಕಳೆದ ಆಗಸ್ಟ ತಿಂಗಳಲ್ಲಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು ಈ ಸಂದರ್ಭದಲ್ಲಿ ಶಿಕ್ಷಕಿ ಮಾಧವಿ ಜಿಲ್ಲಾ ಪ್ರತಿನಿಧಿಯಾಗಿ ಭಾಗವಸಿ ಉತ್ತಮ ಪ್ರದರ್ಶನ ನೀಡಿದ್ದ ಹಿನ್ನಲೆಯಲ್ಲಿ ಅವರನ್ನು ಅಖಿಲ ಭಾರತ ನಾಗರಿಕರ ಸೇವಾ ರಾಷ್ಟ್ರೀಯ ಕಬಡಿ ಪಂದ್ಯಾವಳಿಯಲ್ಲೂ ಆಡಲು ಅವಕಾಶ ಕಲ್ಪಿಸಿದ್ದಾರೆ,ಜನವರಿ 3ರಿಂದ 8ನೇ ದಿನಾಂಕದ ವರಿಗೂ ದೆಹಲಿಯ ತ್ಯಾಗರಾಜ ಸ್ಟೇಡಿಯಂನಲ್ಲಿ ಕಬಡಿ ಪಂದ್ಯಾವಳಿಗಳು ನಡೆಲಿದೆ.
ಶ್ರೀನಿವಾಸಪುರ: ಊರು ಬೆಳೆದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂಬ ಕನಿಷ್ಟ ಆಲೋಚನೆ ತಾಲೂಕು ಆಡಳಿತಕ್ಕೆ ಇಲ್ಲದಿರುವುದು ದುರಂತ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆ ದೊಡ್ಡ ಸಮಸ್ಯೆಯಾಗಿದ್ದು ಇದನ್ನು ಬಗೆ ಹರಿಸುವ ಗೊಜಿಗೆ ಹೊಗದೆ ತಾಲೂಕು ಆಡಳಿತ ನಿರ್ಲಕ್ಷ್ಯ ಮಾಡಿರುವ ಬಗ್ಗೆ ಸಾರ್ವಜನಿಕರು ಅಧಿಕಾರಿ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದಾರೆ.ಇಲ್ಲಿನ ಸರ್ಕಾರಿ ಕಚೇರಿಗಳ ಆವರಣ ವಾಹನ ನಿಲುಗಡೆಯ ತಾಣಗಳಾಗಿದೆ ತಾಲೂಕು ಕಚೇರಿ ಅವರಣದಲ್ಲಿ ದಿನ ನಿತ್ಯ ಕಚೇರಿಗಳಿಗೆ ಬರುವ ಸಾರ್ವಜನಿಕರು ಮನಸೋ ಇಚ್ಛೆಯಂತೆ ಎಡ್ದಾ ದಿಡ್ದಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸುತ್ತಾರೆ ಮಿನಿ ವಿದಾನ ಸೌಧ ಸೇರಿದಂತೆ ಇನ್ನು ಕೆಲ ಸರ್ಕಾರಿ ಕಚೇರಿಗಳು ಇರುವ ಜಾಗವಾಗಿದ್ದು ಕೆಲವೊಮ್ಮೆ ಇಲ್ಲಿ ಸಂತೆ ಮಾರುಕಟ್ಟೆಯಂತಾಗಿ ಪಾದಚಾರಿ ಒಡಾಟಕ್ಕೂ ತೊಂದರೆ ಯಾಗುತ್ತದೆ ಈ ಸಮಸ್ಯೆ ಬಗೆಹರಿಸದ ತಾಲೂಕು ಅಡಳಿತ ನಿರ್ಲಕ್ಷಿಸಿದೆ ಎಂದು ಜನ ನೇರ ಆರೋಪ ಮಾಡುತ್ತಾರೆ ಇನ್ನು ಪಶು ಆಸ್ಪತ್ರೆಗೆ ಜಾನುವಾರುಗಳನ್ನು ಕರೆದುಕೊಂಡು ಹೋಗಲು ನೂತನವಾಗಿ ಚಿಕ್ಕದಾದ ದಾರಿ ವಿಂಗಡಿಸಲಾಗಿದ್ದು ಇಲ್ಲಿ ಸಹ ಕಾರುಗಳನ್ನು ಪಾರ್ಕಿಂಗ್…