ಶ್ರೀನಿವಾಸಪುರ:ಇಕ್ಕಟಿನ ವಾಹನದಲ್ಲಿ ನಾಲ್ಕು ಹಸುಗಳನ್ನು ಸಾಗಿಸುತ್ತಿರುವ ಬಗ್ಗೆ ಸಾರ್ವಜನಿಕರು ಅನುಮಾನದಿಂದ ವಾಹನ ಸಮೇತ ಹಸುಗಳನ್ನು ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ಸೋಮವಾರ ಸಂಜೆ ಶ್ರೀನಿವಾಸಪುರ ಪಟ್ಟಣದಲ್ಲಿ ನಡೆದಿದೆ.
ಚಿಂತಾಮಣೆಯಿಂದ ಐಸ್ ಕ್ರಿಮ್ ಮಾರುವ ವಾಹನದಲ್ಲಿ ನಾಲ್ಕು ಹಸುಗಳನ್ನು ತುಂಬಿಕೊಂಡು ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ವೃತ್ತದ ಮೂಲಕ ಮುಳಬಾಗಿಲು ಕಡೆ ಹೋಗಲಾಗುತ್ತಿತ್ತು.ವಾಹನದಲ್ಲಿದ್ದ ಹಸುವೊಂದು ಅಬ್ಬರಿಸುತ್ತ ಇದ್ದ ಬಗ್ಗೆ ಗಮನಿಸಿದ ಸ್ಥಳೀಯರು ವಾಹನವನ್ನು ಹಿಂಬಾಲಿಸಿ ತಡೆದು ಪರಿಶೀಲನೆ ನಡೆಸಿದ್ದಾರೆ. ಸಣ್ಣ ಇಕ್ಕಾಟಾದ ಜಾಗದ ವಾಹನದಲ್ಲಿ ನಾಲ್ಕು ಹಸುಗಳಿದ್ದು, ಇದು ಅಕ್ರಮ ಸಾಗಾಟ ಇರಬಹುದು ಎಂದು ಸಾರ್ವಜನಿಕರು ಅನುಮಾನಗೊಂಡು ವಾಹನ ಸುತ್ತುವರೆದು ಪ್ರಶ್ನಿಸಿದ್ದಾರೆ.ಹಸುಗಳೊಂದಿಗೆ ವಾಹನದಲ್ಲಿದ್ದವರು ನೀಡುತ್ತಿದ್ದ ಹೇಳಿಕೆಗಳು ಅನುಮಾನ್ಪದ ರೀತಿಯಲ್ಲಿದ್ದು ಜನರು ಸಂಶಯಗೊಂಡು ವಾಹನ ಮತ್ತು ಹಸುಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ದಾವಿಸಿದ ಶ್ರೀನಿವಾಸಪುರ ಪಿಸ್ಸೈ ಜಯರಾಮ್ ವಾಹನದಲ್ಲಿದವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.ವಾಹನದಲ್ಲಿದ್ದ ಎಲ್ಲ ಹಸುಗಳು ನಾಟಿ ಹಸುಗಳಾಗಿದ್ದು ಅವುಗಳನ್ನು ಕೋಲಾರದ ಅರಾಬಿಕೊತ್ತನೂರು ಬಳಿ ಇರುವ ಗೋಶಾಲೆಗೆ ರವಾನಿಸಲಾಗಿದೆ.
Trending
- ಶ್ರೀನಿವಾಸಪುರ:ಅನುಮಾನಸ್ಪದ ಹಸು ಸಾಗಾಟ ಪೊಲೀಸರಿಗೆ ಒಪ್ಪಿಸಿದ ಜನತೆ!
- ಬೆಟ್ಟಿಂಗ್ ಹಣ ಹೊಂದಿಸಲು ಸರ್ಕಾರಿ ಕಚೇರಿಗಳಲ್ಲಿ ಲ್ಯಾಪ್ಟಾಪ್ ಕಳ್ಳತನ!
- ತಮಿಳುನಾಡು ವಿಜಯ್ ಸಂಪುಟದಲ್ಲಿ 4 ದಶಕಗಳ ನಂತರ ಬ್ರಾಹ್ಮಣ ಸಚಿವ!
- ತಮಿಳುನಾಡು ರಾಜಕೀಯ ದಿನಕ್ಕೊಂದು ಬದಲಾವಣೆ ಕ್ಷಣಕ್ಕೊಂದು ತಿರುವು!
- ಶ್ರೀನಿವಾಸಪುರ:SSLC ಪವನ ವಿದ್ಯಾ ಭವನ ವಿದ್ಯಾರ್ಥಿ ತಾಲೂಕಿಗೆ ಮೊದಲಿಗ!
- ತಮಿಳುನಾಡು:ವಿಜಯ್ ತಾತ ತೆಲಗು ಭಾಷಿಕ ತಂದೆ ಕನ್ನಡ ಸಿನಿಮಾ ನಿರ್ದೇಶಕ!
- ಮಾಲೂರು ರಾಜಕೀಯಕ್ಕಾಗಿ ಕೋಮುಲ್ ಮೇಲೆ ಆರೋಪ ಒಳ್ಳೆಯ ಬೆಳವಣಿಗೆಯಲ್ಲ!
- ಶ್ರೀನಿವಾಸಪುರ:ಶಿಕ್ಷಕರ ಸಂಘದ ಚುನಾವಣೆ ರೆಡ್ಡೆಪ್ಪ ಬಣಕ್ಕೆ ಗೆಲವು!
Tuesday, May 12



