ಶ್ರೀನಿವಾಸಪುರ:ದ್ವಿಚಕ್ರವಾಹನಕ್ಕೆ ಇಂಡಿಕಾ ಕಾರು ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸೇರಿದಂತೆ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ತಾಲೂಕಿನ ಪುಂಗನೂರು ಕ್ರಾಸ್ ಸಮೀಪ ಎನ್.ಮರೇಪಲ್ಲಿ ಗೇಟ್ ಬಳಿ ಶನಿವಾರ ರಾತ್ರಿ ನಡೆದಿದೆ.ಮೃತರನ್ನು ಎನ್.ಮರೇಪಲ್ಲಿ ಗ್ರಾಮದ ಮುನಿರಾಜು(43)ಹಾಗು ಪನಸಮಾಕನಹಳ್ಳಿ ಗ್ರಾಮದ ಸತೀಶ್(38) ಎಂದು ಗುರುತಿಸಲಾಗಿದೆ.
ಮುನಿರಾಜು ಹಾಗು ಸತೀಶ್ ಅವರು ವೃತ್ತಿಯಲ್ಲಿ ಕಾರ್ಪೇಂಟರ್ ಗಳಾಗಿದ್ದು ಶನಿವಾರ ವಾರದ ಬಟವಾಡೆ ಮುಗಿಸಿ ಮುನಿರಾಜುನನ್ನು ಎನ್.ಮರೇಪಲ್ಲಿಯಲ್ಲಿ ಬಿಟ್ಟುಬರಲು ಶ್ರೀನಿವಾಸಪುರದಿಂದ ಎನ್.ಮರೇಪಲ್ಲಿ ಗ್ರಾಮಕ್ಕೆ ಹೋಗುತ್ತಿರುವಾಗ ಎನ್.ಮರೇಪಲ್ಲಿ ಗೇಟ್ ಬಳಿ ಎದುರಿನಿಂದ ಬಂದಂತ ಟಾಟಾ ಇಂಡಿಕಾ ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದು ದ್ವಿಚಕ್ರ ವಾಹನ ಸವಾರರಿಬ್ಬರು ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡು ಒರ್ವ ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟಿದ್ದಾರೆ ಸ್ಥಳಕ್ಕೆ ಪೊಲೀಸ್ ಇನ್ಸೆಪೇಕ್ಟರ್ ಶಂಕರಾಚಾರಿ ಪಿಎಸ್ಐ ಜಯರಾಮ್ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Trending
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
- ಕೇರಳ ರಾಜ್ಯದ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅಯ್ಕೆ
- ನರಸಿಂಹಸ್ವಾಮಿ ದೇವಾಲಯ ರಾಜಗೋಪುರಕ್ಕೆ ವೆಂಕಟಶಿವಾರೆಡ್ದಿ ಭೂಮಿಪೂಜೆ.
- ಶ್ರೀನಿವಾಸಪುರ ಜೆಡಿಎಸ್ ಟಿಕೆಟ್ ಹೊರಗಿನವರಿಗೆ ಇಲ್ಲ,ಭುಗಿಲೆದ್ದ ಅಸಮಾಧಾನ!
Monday, May 18



