ಶ್ರೀನಿವಾಸಪುರ:ಕಸಬಾ ಹೋಬಳಿ ದಳಸನೂರು ಗ್ರಾಮ ಪಂಚಾಯತಿ ಹೂವಳ್ಳಿ ಗ್ರಾಮದ ದಲಿತ ಮುಖಂಡಕೃಷ್ಣಪ್ಪ ಕುಟುಂಬದಿಂದ ನೂರಕ್ಕೂ ಹೆಚ್ಚು ಮಣ್ಣಿನ ಗಣೇಶನಮೂರ್ತಿಗಳನ್ನು ವಿತರಿಸಿದ್ದಾರೆ .
ಹೂವಳ್ಳಿಕೃಷ್ಣಪ್ಪ ಅವರ ಮಗ ಬೆಂಗಳೂರಿನ ಉದ್ಯಮಿ ಅಂಬರೀಶ್ ಸಮಾಜ ಸೇವೆ ಹೆಸರಿನಲ್ಲಿ ಕಸಬಾ ಹೋಬಳಿ ಮತ್ತು ತಾಲ್ಲೂಕಿನ ಹಲವು ಗ್ರಾಮಗಳ ಗಣೇಶೋತ್ಸವ ಸಮಿತಿಗಳಿಗೆ ಗಣೇಶನಮೂರ್ತಿಗಳನ್ನು ವಿತರಣೆ ಮಾಡಿದ್ದಾರೆ ಇದು ತಾಲೂಕಿನ ರಾಜಕೀಯದಲ್ಲಿ ಒಂದಷ್ಟು ಸಂಚಲನ ಮೂಡಿಸಿದೆ.
ಮುಖಂಡ ಕೃಷ್ಣಪ್ಪ ಮಾತನಾಡಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ವಿಘ್ನ ನೀವಾರಕ ವಿನಾಯಕನನ್ನು ಸಮಸ್ತ ಜನತೆ ಪೂಜಿಸುವ ಮೂಲಕ ನಾಡು ಸುಭಿಕ್ಷವಾಗಿರಲು ಗಣೇಶನ ಕೃಪೆ ಬೇಕು ಇದಕ್ಕಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲು ಗಣೇಶ ಮೂರ್ತಿಗಳನ್ನು ವಿತರಿಸಿರುವುದಾಗಿ ಹೇಳಿದರು.
ಶ್ರೀನಿವಾಸ ಕಲ್ಯಾಣೋತ್ಸವ ಆಯೋಜನೆ
ಕೆಲ ತಿಂಗಳ ಹಿಂದೆ ಹೂವಳ್ಳಿಕೃಷ್ಣಪ್ಪ ತಮ್ಮ ಗ್ರಾಮಕ್ಕೆ ತಿರುಮಲದಿಂದ ಶ್ರೀವೆಂಕಟರಮಣಸ್ವಾಮಿ ವಿಗ್ರಹಗಳನ್ನು ತರಿಸಿ ಲೋಕಕಲ್ಯಾಣಾರ್ಥ ಶ್ರೀನಿವಾಸ ಕಲ್ಯಾಣೋತ್ಸವ ಆಯೋಜಿಸಿ ಜನ ಮೆಚ್ಚುಗೆ ಗಳಿಸಿದ್ದರು.
ರಾಜಕೀಯ ರಂಗ ಪ್ರವೇಶಕ್ಕೆ ವೇದಿಕೆ
ಸಮಾಜಸೇವಕ ಹೂವಳ್ಳಿಅಂಬರೀಶ್ ರಾಜಕೀಯ ರಂಗ ಪ್ರವೇಶಕ್ಕೆ ಎಲ್ಲಾ ವರ್ಗದ ಜನರನ್ನು ತಲುಪಲು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಮದುವೆ ಶುಭಕಾರ್ಯಗಳಿಗೆ ಇತರೆ ಸಂದರ್ಭಗಳಲ್ಲಿ ಕೈಲಾದ ನೆರವು ನೀಡುವ ಮೂಲಕ ಪ್ರವರ್ಧಮಾನಕ್ಕೆ ಬರುತ್ತ ಜನ ಮನ್ನಣೆ ಗಳಿಸುತ್ತಿದ್ದಾರೆ.
ಗಣೇಶಮೂರ್ತಿ ವಿತರಣಾ ಕಾರ್ಯಕ್ರಮದಲ್ಲಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಮುನಿಯಪ್ಪ,ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್,ನಂಬಿಹಳ್ಳಿನರಸಿಂಹ, ಶಿಕ್ಷಕ ತಿಪ್ಪಣ್ಣ,ದಳಸನೂರು ಶ್ರೀನಿವಾಸಗೌಡ, ತೆರ್ನಹಳ್ಳಿ ವೆಂಕಟೇಶಪ್ಪ, ಹೂವಳ್ಳಿ ಮಂಜುನಾಥ್, ಚಲ್ದಿಗಾನಹಳ್ಳಿ ಈರಪ್ಪ,ಡಿ ಪಿ ಎಸ್ ವೆಂಕಟೇಶ್,ಗಾಂಡ್ಲಹಳ್ಳಿ ರಮೇಶ್,ವಾನರಾಶಿ ನಾಗೇಶ್, ನಾಗನಾಯಕನಹಳ್ಳಿ ವೆಂಕಟೇಶ್, ಮೊಗಲಹಳ್ಳಿ ಶಿವಪ್ಪ, ಗೌಡಳ್ಳಿ ಯಲ್ಲಪ್ಪ,ವೆಂಕಟೇಶ್ (ಸೋನಿ ), ನವೀನ್, ಶ್ರೀನಿವಾಸ್ ಮುಂತಾದವರು ಇದ್ದರು.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



