ಶ್ರೀನಿವಾಸಪುರ:ಜೆಡಿಎಸ್ ಪಕ್ಷದ ನಾಯಕತ್ವ ನಂಬಿ ಬರುವಂತ ಅಲ್ಪಸಂಖ್ಯಾತರನ್ನು ಅವರ ಗೌರವಕ್ಕೆ ಧಕ್ಕೆ ಬಾರದಂತೆ ಪಕ್ಷದಲ್ಲಿ ನಡೆಸಿಕೊಳ್ಳಲಾಗುತ್ತದೆ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ಇಂದು ಶ್ರೀನಿವಾಸಪುರ ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ ತಾಲೂಕು ಜೆಡಿಎಸ್ ಪಕ್ಷ ಆಯೋಜಿಸಿದ್ದ ಕೆಲ ಅಲ್ಪಸಂಖ್ಯಾತ ಕಾಂಗ್ರೆಸ್ ಪಕ್ಷದ ಮುಖಂಡರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆ ಸಂದರ್ಭದಲ್ಲಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು.ಅಲ್ಪಸಂಖ್ಯಾತರ ರಕ್ಷಣೆ ವಿಚಾರದಲ್ಲಿ ಜೆಡಿಎಸ್ ಬದ್ದವಾಗಿದೆ ಸ್ಥಳೀಯವಾಗಿ ಅಲ್ಪಸಂಖ್ಯಾತರ ರಕ್ಷ್ಣಣೆ ಪ್ರಾದೇಶಿಕ ಪಕ್ಷಗಳಿಂದ ಮಾತ್ರ ಸಾದ್ಯ ಎಂದರು ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಅಭಿವೃದ್ಧಿ ವಿಚಾರವಾಗಿ ಯಾವುದೆ ರೀತಿಯ ತಾರತಮ್ಯ ಮಾಡಿಲ್ಲ ಎಲ್ಲಾ ಸಮುದಾಯಗಳವರನ್ನು ಧರ್ಮಗಳವರನ್ನು ಸಮಾನ ಗೌರವದಿಂದ ಕಾಣುವುದೊಂದಿಗೆ ಸರ್ಕಾರದ ಕಾರ್ಯಕ್ರಮಗಳು ಅವರಿಗೆ ತಲಪುವ ರೀತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವುದಾಗಿ ಹೇಳಿದರು.ಸ್ಥಳೀಯವಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವಾಗಿ ಈ ವಾರ್ಡನಲ್ಲಿ ಬೊರ್ ವೆಲ್ ಕೊರೆಸುವುದಾಗಿ ಭರವಸೆ ನೀಡಿದರು.ಕೋಲಾರದ ಅಂಜುಮನ್ ಸಂಸ್ಥೆ ಮುಖಂಡ ಜಮೀರ್ ಅಹ್ಮದ್ ಮಾತನಾಡಿ ರಾಜ್ಯದಲ್ಲಿ ವಿವಾದತ್ಮಕ ವಿಚಾರಗಳಲ್ಲಿ ಅಸಯಕರಾದ…
Author: Srinivas_Murthy
ಶ್ರೀನಿವಾಸಪುರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಜನರ ಶ್ರೇಯಸ್ಸು ಕೋರಿ ಸಕಾಲದಲ್ಲಿ ಮಳೆ-ಬೆಳೆಯಾಗಿ ಜನತೆ ಸುಭಿಕ್ಷತೆಯಿಂದ ಇರಬೇಕು ಎಂಬ ಸದುದ್ದೇಶದಿಂದ ಪಟ್ಟಣದ ಹೊರವಲಯದ ಕನಕ ಮಂದಿರದ ಪಕ್ಕದಲ್ಲಿ ಲೋಕಕಲ್ಯಾಣಾರ್ಥ ಶ್ರೀ ಶ್ರೀನಿವಾಸ ತಿರು ಕಲ್ಯಾಣ ಮಹೋತ್ಸವದ ಆಯೋಜಿಸಲಾಗಿದೆ ಎಂದು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುಂಜೂರುಶ್ರೀನಿವಾಸರೆಡ್ಡಿ ಹೇಳಿದರು ಅವರು ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಇಂದು ಎರಡನೆಯ ದಿನ ಭಾನುವಾರ ಸಂಜೆ ಆಯೋಜಿಸಿರುವ ಶ್ರೀ ಶ್ರೀನಿವಾಸ ತಿರು ಕಲ್ಯಾಣ ಅಂಗವಾಗಿ ಮುಂಜಾನೆಯಿಂದ ಪ್ರಾರಂಬವಾಗಿರುವ ದೇವಾತಾ ಆರಾಧನ ಕಾರ್ಯಕ್ರಮಗಳಲ್ಲಿ ಭಾಗವಿಸಿ ಮಾತನಾಡಿದರು.ಬೆಳೆಗ್ಗೆ 6 ಗಂಟೆಯಿಂದ ಗಣಪತಿ ಪೂಜೆ ನವಗ್ರಹ ಆರಾಧನೆ ಮಧ್ಯಾನಃ ದಶ ಸಹಸ್ರ ಧನ್ವಂತ್ರಿ ಮಹಾಯಾಗ ಮತ್ತು ಶತ ಸಹಸ್ರ ಸುದರ್ಶನ ಮಹಾಯಾಗ ಕಾರ್ಯಕ್ರಮದಲ್ಲಿ ಭಾಗವಿಸಿದ್ದ ಅವರು ಸುಮಾರು 1 ಗಂಟೆಗೆ ನಡೆದ ಪೂರ್ಣಾವಧಿಯಲ್ಲಿ ಪಾಲ್ಗೋಂಡಿದ್ದರು.ಸಂಜೆ ಸುಮಾರು 4.30 ಗಂಟೆಗೆ ಪ್ರಾರಂಭವಾಗುವ ಶ್ರೀ ಶ್ರೀನಿವಾಸ ತಿರು ಕಲ್ಯಾಣ ಮಹೋತ್ಸವ 7.00 ಗಂಟೆಯವರಿಗೆ ನಡೆಯಲಿದೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಲ್ಯಾಣ ಮಹೋತ್ಸವದಲ್ಲಿ…
ಮಾಲೂರು: ದಿ ಪ್ರೊಫೇಷನಲ್ ಕೊರಿಯರ್ ಸಂಸ್ಥೆ ಕೊರಿಯರ್ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚುಕಾಲದಿಂದ ತನ್ನದೆ ಆದ ಸ್ವಂತ ನೆಟ್ ವರ್ಕ್ ಮೂಲಕ ವೈಶಿಷ್ಠ ಪೂರ್ಣವಾಗಿ ಸೇವೆ ಸಲ್ಲಿಸುತ್ತ ಇಡಿ ವಿಶ್ವದ ಮೂಲೆ ಮೂಲೆಯನ್ನು ತಲುಪಿದೆ ಎಂದು ಪ್ರೊಫೇಷನಲ್ ಕೊರಿಯರ್ ಸಂಸ್ಥೆಯ ಮಾಹಿತಿ ತಂತ್ರಙ್ಞಾನದ ನಿರ್ದೇಶಕ ವಿ.ಶ್ರೀನಾಥ್ ಹೇಳಿದರು ಅವರು ಕೋಲಾರ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ದಿ ಪ್ರೊಫೇಷನಲ್ ಕೊರಿಯರ್ ನೂತನ ಕಚೇರಿ ಪ್ರಾರಂಭಿಸಿ ಮಾತನಾಡಿದರು.ಪ್ರೊಫೇಷನಲ್ ಕೊರಿಯರ್ ಸಂಸ್ಥೆ ಕಾಲದ ಅಣತಿಯಂತೆ ಇನ್ನು ಹೆಚ್ಚು ಸೇವೆಗಳನ್ನು ಸರಳ ರಿತಿಯಲ್ಲಿ ಗ್ರಾಹಕರಿಗೆ ನೀಡಲು ಅಗತ್ಯ ತಂತ್ರಙ್ಞಾನ ಬಳಸಿಕೊಂಡು ಮನುಷ್ಯ ತಗೆದುಕೊಂಡು ಹೋಗಿ ವಿತರಣೆ ಮಾಡುವಂತ ಸಾಂಪ್ರದಾಯಿಕ ಕೊರಿಯರ್ ವ್ಯವಸ್ಥೆಗೆ ಅಂತರ್ಜಾಲದ ತಾಂತ್ರಿಕತೆ ಜೊಡಿಸಲಾಗಿದ್ದು ಇದು ವಿದ್ಯುನ್ಮಾನ ಸಂಪರ್ಕ ವ್ಯವಸ್ಥೆಯಾಗಿ ಗ್ರಾಹಕ ಮತ್ತು ಪ್ರೊಫೇಷನಲ್ ಕೊರಿಯರ್ ಸಂಸ್ಥೆ ನಡುವಿನ ಸಂಪರ್ಕ ಕೊಂಡಿಯಾಗಿ ಕೆಲಸ ಮಾಡುತ್ತಿದೆ.ಗ್ರಾಹಕ ಪ್ರೊಫೇಷನಲ್ ಕೊರಿಯರ್ ಸಂಸ್ಥೆಯಲ್ಲಿ ಕೊರಿಯರ್ ಬುಕ್ ಮಾಡಿದರೆ ಅದು ಎಲ್ಲಿ ಹೊಗುತ್ತದೆ ಸೇರಬೇಕಾದಂತ ಸ್ಥಳಕ್ಕೆ ಯಾವತ್ತು ತಲಪುತ್ತದೆ ಎಂಬುದನ್ನು ಪ್ರೊಫೇಷನಲ್…
ಶ್ರೀನಿವಾಸಪುರ:ಸ್ತ್ರೀಯರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಸಾಧನೆಗಳನ್ನು ಹಾಗು ಸಮಾಜಕ್ಕೆ ಅವರು ನೀಡಿರುವ ಇತರೆ ಸಾಧಕ ಕೊಡುಗೆಗಳನ್ನು ಸಂಭ್ರಮಿಸುವ ದಿನವೆ ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೋಲಾರ ಜಿಲ್ಲಾ ಸಂಯೋಜಕರಾದ ಮಂಜುಳಾ ಭೀಮರಾವ್ ಹೇಳಿದರು ಅವರು ಶ್ರೀನಿವಾಸಪುರ ಪಟ್ಟಣದ ತ್ಯಾಗರಾಜ ಬಡಾವಣೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.ಹೆಣ್ಣುಮಕ್ಕಳಲ್ಲಿ ಅಗಾಧವಾದ ಶಕ್ತಿ ಸಾಧಿಸಬೇಕು ಎಂಬ ಚಲ ಇದೆ ಹಾಗೆ ಮಾತೃವಾತ್ಸಲ್ಯ ಸಮರ್ಪಣಾ ಮನೋಭಾವ ಇರುವ ಮಹಿಳೆ ಬಹುಮುಖಿಯಾಗಿ ಸಾಧಿಸಲು ನಿಂತರೆ ಯಾವುದೆ ತಾರತಮ್ಯ ಅಡ್ಡಿಯಾಗದು ಎಂದರು.ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞ ವೈದ್ಯೆ ಗೌಸಿಯಾಭಾನು ಮಾತನಾಡಿ ವಿದ್ಯಾರ್ಥಿನಿಯರು ವಿದ್ಯಾರ್ಥಿ ದೆಸೆಯಲ್ಲಿ ವೈಙ್ಞಾನಿಕವಾಗಿ ಸಮಾಜದ ವ್ಯವಸ್ಥೆಯ ಬಗ್ಗೆ ಅರಿಬೇಕಿದೆ ದಿನವು ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರನ್ನು ಅಸಮಾನ್ಯ ಸಾಧನೆ ಮಾಡುತ್ತಿದ್ದು ತಮ್ಮ ತಮ್ಮ ಕ್ಷೇತ್ರಗಳಲ್ಲಿ ದೊಡ್ಡ ಸಾಧನೆ ಮಾಡಲು ಶ್ರಮಿಸುತ್ತಿದ್ದಾಳೆ ಎಂದರು.ಮಹಿಳಾ ಸಾಧಕಿಯರ ಆದರ್ಶವನ್ನು ತಗೆದುಕೊಂಡು ವಿದ್ಯಾರ್ಥಿನಿಯರು…
ನ್ಯೂಜ್ ಡೆಸ್ಕ್(ಕ್ರೈಂ ಟೀಂ):ಶ್ರೀನಿವಾಸಪುರ ಪಟ್ಟಣದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆ ಶ್ರೀನಿವಾಸಪುರ-ಕೋಲಾರ ರಸ್ತೆಯಲ್ಲಿನ ಮುದುವಾಡಿ ಬಳಿಯ ನಾಯಕರಹಳ್ಳಿ-ತೊಂಡಾಲದ ಖಾಸಗಿ ಜಮೀನಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವವಾಗಿ ಇಂದು ಪತ್ತೆಯಾಗಿದೆ.ಸುಟ್ಟು ಕರಕಲರಾಗಿರುವ ಮಹಿಳೆಯನ್ನು ಶೊಭಾ(30)ಎಂದು ಗುರುತಿಸಲಾಗಿ ಆಕೆ ಮುಳಬಾಗಿಲು ತಾಲೂಕಿನವರಾಗಿದ್ದು ಆಂಧ್ರದ ವ್ಯಕ್ತಿಗೆ ಮದುವೆ ಮಾಡಿಕೊಟ್ಟಿದ್ದು ನಂತರದಲ್ಲಿ ವಿವಾದವಾಗಿ ಆಕೆ ಮಕ್ಕಳೊಂದಿಗೆ ಶ್ರೀನಿವಾಸಪುರದ ವೆಂಕಟೇಶ್ವರ ಬಡಾವಣೆಯಲ್ಲಿ ವಾಸಿಸುತ್ತಿದ್ದರು ಜೀವನ ಪೋಷಣೆಗೆ ಪಟ್ಟಣದ ಪೊಸ್ಟ್ ಆಫಿಸ್ ಬಳಿ ಲಕ್ಷ್ಮೀ ಹರ್ಬಲ್ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು ಎನ್ನುತ್ತಾರೆ,ಈಕೆಯ ಸಾವಿನ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗಿದ್ದು ಮೃತ ಮಹಿಳೆ ಬಳಸುತ್ತಿದ್ದರು ಎನ್ನಲಾದ ಮೊಬೈಲ್ ಹಾಗು ದ್ವಿಚಕ್ರವಾಹನ ಶ್ರೀನಿವಾಸಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಅವಲಕುಪ್ಪ ಗ್ರಾಮದ ಹೊಲದಲ್ಲಿ ಪತ್ತೆಯಾಗಿರುವ ಹಿನ್ನಲೆಯಲ್ಲಿ ಮಹಿಳೆಯನ್ನು ಅವಲಕುಪ್ಪದ ಬಳಿ ಹತ್ಯೆ ಮಾಡಿ ತೊಂಡಾಲದ ಬಳಿಯ ಜಮೀನಿಗೆ ಸಾಗಿಸಿ ಸುಟ್ಟುಹಾಕಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿದೆ, ಇದರ ಅದಾರದಂತೆ ಪ್ರಕರಣವನ್ನು ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ದಾಖಲು ಮಾಡಲಾಗಿದ್ದು ಈ ಸಂಬಂದ ಅನುಮಾನಸ್ಪದ ಮೇಲೆ ಶ್ರೀನಿವಾಸಪುರ ತಾಲೂಕಿನ ಚಿರುವನಹಳ್ಳಿಯ ರಮೇಶ್…
ನ್ಯೂಜ್ ಡೆಸ್ಕ್: ಕನ್ನಡದ ಡಾ.ರಾಜ್ ಅಣ್ಣಾವ್ರ ಮೊಮ್ಮಗ,ರಾಘವೇಂದ್ರ ರಾಜ್ಕುಮಾರ್ ಅವರ ಕಿರಿಯ ಪುತ್ರ ಯುವ ರಾಜ್ಕುಮಾರ್ ನಟನೆಯ ಮೊದಲ ಸಿನಿಮಾ ‘ಯುವ’ ಬಗ್ಗೆ ಸಿನಿಪ್ರೇಮಿಗಳಿಗೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಯುವ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆಯಾಗಿ ಸಿಕ್ಕಾಪಟ್ತೆ ವೈರಲ್ ಆಗಿದೆ,ಇದರಲ್ಲಿ ಯುವ ರಾಜ್ಕುಮಾರ್ ಅವರ ಮಾಸ್ ಲುಕ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೊದಲು ‘ಯುವ’ ಚಿತ್ರಕ್ಕೆ ತಮಿಳು, ಮಲಯಾಳಂನ ಖ್ಯಾತ ನಟಿಯರು ನಾಯಕಿಯಾಗಲಿದ್ದಾರೆ ಎನ್ನಲಾಗುತ್ತಿತ್ತು. ಮಾತುಗಳು ಕೇಳಿಬರುತಿತ್ತು ಈ ಎಲ್ಲಾ ಸುದ್ದಿಗಳಿಗೆ ಬ್ರೇಕ್ ಹಾಕಲಾಗಿದೆ ಚಿತ್ರಕ್ಕೆ ಅಚ್ಚ ಕನ್ನಡತಿ, ‘ಕಾಂತಾರ’ ಚಲುವೆ ಸಪ್ತಮಿ ಗೌಡ, ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನ ಸಿನಿಮಾಕಾಂತಾರ ಸಿನಿಮಾದಲ್ಲಿ…..ಮುದ್ದಾದ ಮಾಯಾಂಗಿಮೌನದ ಸಾರಂಗಿಮೋಹಕ ಮದರಂಗಿಕನ್ನ ಹಾಕಿದೆ ಮುಂಗುರುಳ ಸೋಕಿ…. ಎಂದು ಯುವಕರ ಹೃದಯ ಗೆದ್ದಿದ ಸಿಂಗಾರ ಸಿರಿ ಅಂಗಾಲಿನಲೆ ಬಂಗಾರ ಅಗೆದ ಮಾಯೆಸಪ್ತಮಿ ಗೌಡ,ನಾಯಕಿಯಾಗಿರುವ ಬಗ್ಗೆ ಅಧಿಕೃತ ಆಯ್ಕೆಯನ್ನು ಚಿತ್ರತಂಡ ಸೋಮವಾರ ಅನೌನ್ಸ್ ಮಾಡಿದೆ. ‘ಪಾಪ್ ಕಾರ್ನ್ ಮಂಕಿ ಟೈಗರ್’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿರುವ ನಟಿ…
ನ್ಯೂಜ್ ಡೆಸ್ಕ್: ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಹೊಸ ಸೋಂಕಿನ ಆರ್ಭಟ ಆರಂಬವಾಗಿದೆ. ಕೋವಿಡ್ ಯುಗ ಮುಕ್ತಾಯವಾಯ್ತು ಎಂದು ನಿಟ್ಟುಸಿರುಬಿಡುವ ಹೊತ್ತಿನಲ್ಲಿ H3N2 ಇನ್ಫ್ಲುಯೆಂಜಾ ಹಾವಳಿ ಶುರುವಾಗಿದೆ. ಕಳೆದ ಒಂದು ತಿಂಗಳಿಂದ ದೇಶಾದ್ಯಂತ ಸಾವಿರಾರು H3N2 ಪ್ರಕರಣಗಳು ವರದಿಯಾಗಿವೆ. ಕರ್ನಾಟಕದಲ್ಲೂ ಸುಮಾರು 26 ಪ್ರಕರಣಗಳು ದಾಖಲಾಗಿವೆ. ಹಾಗಾದ್ರೆ ಏನಿದು H3N2? ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ ಈ ಹಿಂದೆ ದೇಶಾದ್ಯಂತ ಕಾಡಿದ್ದ H1N1 ವೈರಾಣುವಿನ ರೀತಿಯಲ್ಲೇ ರೂಪಾಂತರಿ ಸೋಂಕು ಆಗಿರಬಹುದಾ? ಈ ಕುರಿತ ಸಮಗ್ರ ವಿವರ ಇಲ್ಲಿದೆ.ಏನಿದು H3N2 ಸೋಂಕು?ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಹೇಳುವಂತೆ ಜ್ವರಕ್ಕೆ ಕಾರಣವಾಗುವಂತ ವೈರಾಣು.ಈ ವೈರಾಣುವಿನ ಒಂದು ಉಪ ರೂಪಾಂತರಿ ಅಪಾಯಕಾರಿಯಾಗಿದ್ದು, ರೋಗಿಯು ಆಸ್ಪತ್ರೆಗೆ ದಾಖಲಾಗಬೇಕಾದ ಪರಿಸ್ಥಿತಿ ನಿರ್ಮಾಣ ಆಗುತ್ತೆ.ಐಸಿಎಂಆರ್ ಪ್ರಕಾರ ಆಸ್ಪತ್ರೆಗೆ ದಾಖಲಾಗುವ ಪ್ರತಿ ನೂರು H3N2 ರೋಗಿಗಳ ಪೈಕಿ ಶೇ. 92 ಮಂದಿಗೆ ಜ್ವರ ಇರುತ್ತೆ. ಶೇ. 86ರಷ್ಟು ಮಂದಿಗೆ ಕಫದ ಸಮಸ್ಯೆ ಬರುತತದೆ ಶೇ. 27ರಷ್ಟು ಮಂದಿಗೆ ಉಸಿರಾಟದ ಸಮಸ್ಯೆ…
ನ್ಯೂಜ್ ಡೆಸ್ಕ್: ಬೆಂಗಳುರು ನಗರದ ಕೆಆರ್ಪುರಂ ನಿಂದ ವೈಟ್ಫೀಲ್ಡ್ ಮಧ್ಯೆ ಸಂಚರಿಸಲಿರುವ ನಮ್ಮ ಮೆಟ್ರೋ ಸುರಕ್ಷಿತವಾಗಿ ಸಂಚರಿಸಲು ಯೋಗ್ಯವಾಗಿದೆ ಎಂದು ಸಿಎಂಆರ್ಎಸ್ ಧೃಡಿಕರಿಸಿದೆ ಎಂದು ಬಿಎಂಆರ್ಸಿಎಲ್ ಹೇಳಿಕೆ ನೀಡಿದೆ.ಕೆಆರ್ಪುರಂ ಮತ್ತು ವೈಟ್ಫೀಲ್ಡ್ ನಡುವಿನ ರಸ್ತೆ ಮಾರ್ಗದ ಓಡಾಟ ಸದಾ ಟ್ರಾಫಿಕ್ ಬಿಝಿಯಾಗಿರುತ್ತದೆ. ಒಮ್ಮೆ ಈ ಮಾರ್ಗದಲ್ಲಿ ಹೋದವರು ಮತ್ತೆ ಆ ಮಾರ್ಗದಲ್ಲಿ ವಾಪಸ್ಸು ಬರಲು ಸಾಕಪ್ಪ ಸಾಕು ಎನ್ನುತ್ತಾರೆ ವಿಶೇಷವಾಗಿ ಕೋಲಾರ-ಚಿಂತಾಮಣಿ ಭಾಗದ ಜನರು ಕೊಂಚ ಹೆಚ್ಚು ಒಡಾಡುವ ಈ ಮಾರ್ಗದಲ್ಲಿ ಮೆಟ್ರೋ ರೈಲು ಒಡಾಡಲು ಎಲ್ಲವೂ ಸಿದ್ದಮಾಡಿಕೊಳ್ಳಲಾಗಿದೆ ಜನರ ಒಡಾಟ ಪ್ರಾರಂಭವಾಗ ಬೇಕು ಅಷ್ಟೆ.ಈ ಮೆಟ್ರೋ ಲೈನ್ ಸುರಕ್ಷಿತವಾಗಿ ಸಂಚರಿಸಲು ಯೋಗ್ಯವಾಗಿದೆ ಎಂದು ಮೆಟ್ರೋ ರೈಲ್ ಸೇಫ್ಟಿ ಸಂಸ್ಥೆ (CMRS) ಧೃಡಪಡಿಸಿದೆ ಎಂದು ಬೆಂಗಳೂರು ಮೆಟ್ರೋ ರೇಲ್ ಕಾರ್ಪೋರೇಶನ್ (BMRCL) ಹೇಳಿದೆ. ರೈಲು ಸಂಚಾರಕ್ಕೆ ಚಾಲನೆ ನೀಡಲು ದಿನಾಂಕ ನಿಗದಿಯಾಗಬೇಕು ಅಷ್ಟೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.ಈ ಬಗ್ಗೆ ಸಿಎಂಆರ್ಎಸ್ ಅಭಯ ಕುಮಾರ್ ರೈ ಅವರು ಮಾಹಿತಿ ನೀಡಿ ಕೆಆರ್ ಪುರಂ-ವೈಟ್ಫೀಲ್ಡ್…
ನ್ಯೂಜ್ ಡೆಸ್ಕ್:ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಘಟ್ಟವಾಗಿರುತ್ತದೆ, ಅಂತಹ ಅದ್ಭುತಕ್ಕೆ ಸಾಕ್ಷಿಕರಿಸಲು ಮದುವೆ ಸಮಾರಂಭಕ್ಕೆ ಬಂಧುಗಳನ್ನು,ಆತ್ಮೀಯರನ್ನು,ಸ್ನೇಹಿತರು ಹೀಗೆ ಯಾರೆನೆಲ್ಲ ಕರೆಯಲು ಅವಕಾಶ ಇರುತ್ತದೋ ಅವರನ್ನು ಕರೆಯುವುದು ಸಾಮನ್ಯಇನ್ನು ಮದುವೆಯ ಆಮಂತ್ರಣ ನೀಡಲು ಬೈಕ್ ಕಾರ್ ಬಸ್ಸು ಊರಲ್ಲಾದರೆ ನಡೆದಾಡಿಕೊಂಡು ಹೋಗುವುದು ಸಾಮನ್ಯ ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಸಹೋದರನ ಮದುವೆ ಆಮಂತ್ರಣ ನೀಡಲು ಹೆಲಿಕಾಪ್ಟರ್ ಬಳಸಿಕೊಂಡ ಕಥೆಯಿದು.ಮೊದಲೆಲ್ಲ ಕಾಲ್ನಡಿಗೆ ಬಂಡಿ, ಅಥಾವ ಸೈಕಲ್ ನಲ್ಲಿ ಹೋಗುತ್ತಿದ್ದರು ಬದಲಾದ ಕಾಲಘಟ್ಟದಲ್ಲಿ,ಸಂಬಂಧಿಕರಿಗೆ ಪತ್ರಿಕೆಗಳನ್ನು ತಲುಪಿಸಲು ಬಸ್ಸು, ಸ್ವಂತ ದ್ವಿಚಕ್ರ ವಾಹನ ಕಾರು,ಬಾಡಿಗೆ ಕಾರು, ವಿವಿಧ ಸಾರಿಗೆ ಬಳಸಿಕೊಂಡು ಇನ್ನೂ ದೂರ ಇರುವಂತವರಿಗೆ ವಾಟ್ಸಾಪ್ ಮೂಲಕ ಕೊರಿಯರ್,ಅಂಚೆ ಮೂಲಕ ಮದುವೆ ಕಾರ್ಡ್ ಗಳನ್ನು ಕಳುಹಿಸುವುದು ಸಾಮನ್ಯ ಸಂಗತಿಯಾಗಿದೆ. ಆದರೆ ಹೈದರಾಬಾದ್ ಉದ್ಯಮಿಯೊಬ್ಬ ವಿನೂತನವಾಗಿ ಆಲೋಚಿಸುವ ಮೂಲಕ ಹೀಗೂ ಮದುವೆ ಆಮಂತ್ರಣದ ಪತ್ರಿಕೆ ನೀಡಬಹುದು ಎಂದು ಹೊಸ ಟ್ರೆಂಡ್ ಹುಟ್ಟುಹಾಕಿದ್ದಾನೆ. ತನ್ನ ಸಹೋದರನ ಮದುವೆ ಪತ್ರಿಕೆಗಳನ್ನು ಹಂಚಲು ಹೆಲಿಕಾಪ್ಟರ್ ಬುಕ್ ಮಾಡಿ ಅದರಲ್ಲಿ ತೆರಳಿ ಬಂಧು ಮಿತ್ರರಿಗೆ…
ಶ್ರೀನಿವಾಸಪುರ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತಮಟೆ ಕಲಾವಿದ ನಾಡೋಜ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರನ್ನು ಸೋಮವಾರ ಪಟ್ಟಣದಲ್ಲಿ ಅದ್ದೂರಿಯಾಗಿ ಸನ್ಮಾನಿಸಲು ಸಮಾನ ಮನಸ್ಕರ ಸಾಂಸ್ಕೃತಿಕ ವೇದಿಕೆ ಸಜ್ಜಾಗಿದೆ ಸೋಮವಾರ ತಾಲೂಕು ಕಛೇರಿಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿರುವುದಾಗಿ ದಲಿತ ಮುಖಂಡರು ತಿಳಿಸಿದರು.ಪಿಎಲ್ಡಿ ಬ್ಯಾಂಕ್ ಸಭಾಂಗಣದಲ್ಲಿ ಸಮಾನ ಮನಸ್ಕರ ಸಾಂಸ್ಕೃತಿಕ ವೇದಿಕೆ ವತಿಯಿಂದ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಶ್ರೀನಿವಾಸನ್ ಮಾತನಾಡಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಅವರನ್ನು ಕೇಂದ್ರ ಸರ್ಕಾರ ಗುರುತಿಸಿ ಪ್ರಶಸ್ತಿ ನೀಡಿರುವುದಕ್ಕೆ ಹೆಮ್ಮೆಯ ವಿಚಾರವಾಗಿದ್ದು ತಮ್ಮ ಬಾಲ್ಯದಿಂದಲೇ ತಮಟೆ ವಾದ್ಯ ಅಭ್ಯಾಸ ಮಾಡುತ್ತ ವಿಶೇಷ ಕೌಶಲ್ಯವನ್ನು ಪಡೆದು ನಮ್ಮ ರಾಜ್ಯ ದೇಶ ಅಲ್ಲದೆ ವಿದೇಶಗಳಿಗೆ ತೆರಳಿ ತಮಟೆ ವಾದ್ಯದ ಸದ್ದನ್ನು ಕೇಳಿಸಿದ್ದಾರೆ ಇಂತಹ ಮಹಾನ್ ಕಲಾವಿದ ತಾಲೂಕಿನ ಅಳಿಯರಾಗಿದ್ದು ಅವರನ್ನು ತಾಲ್ಲೂಕಿಗೆ ಕರೆತಂದು ಅಭಿನಂದನೆ ಸಲ್ಲಿಸಿ ಅದ್ದೂರಿಯಾಗಿ ಗೌರವಿಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ತಾಲೂಕಿನ ಕಲಾವಿದರು,ಕವಿಗಳು,ಪ್ರಗತಿಪರ ಚಿಂತಕರು,ಸಾಹಿತಿಗಳು,ವಿದ್ಯಾರ್ಥಿಗಳು,ಶಿಕ್ಷಕರು, ಕಲಾಭಿಮಾನಿಗಳು, ಕನ್ನಡಪರ , ರೈತಪರ ಸಂಘಟನೆಗಳು, ಅಲ್ಪಸಂಖ್ಯಾತ ಹಾಗೂ ದಲಿತ…


