ನ್ಯೂಜ್ ಡೆಸ್ಕ್:ಜಗತ್ತನ್ನೇ ನಡುಗಿಸಿದ ಕೊರೊನಾ ವೈರಸ್ Covid-19,ಮತ್ತೆ ಬರುತ್ತಿದೆ ಈಗಾಗಲೆ ಕೆಲ ಭಾಗಗಳಲ್ಲಿ ಪ್ರಕರಣಗಳು ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. 2019ರಿಂದ 2022ರ ಸಂದರ್ಭದಲ್ಲಿ ಕೊರೊನಾಗೆ ಜನ ಭೀತಿಗೆ ಒಳಗಾಗಿ ದೊಡ್ಡಸಂಖ್ಯೆಯಲ್ಲಿ ಜನ ಮೃತಪಟ್ಟಿದ್ದರು. ಸಿಂಗಾಪುರ ಮತ್ತು ಹಾಂಗ್ ಕಾಂಗ್ ನಲ್ಲಿ ಇತ್ತೀಚೆಗೆ ಕೋವಿಡ್ ವೈರಸ್ ಹರಡುತ್ತಿದ್ದು ಭಾರತದಲ್ಲಿ ಪತ್ತೆಯಾಗಿರುವ ವರದಿಗಳು ಹೊರಬರುತ್ತಿದೆ ಮುಂಬೈನಲ್ಲಿ ಕಳೆದ ವಾರ ಎರಡು ಕೋವಿಡ್ ಸಂಬಂಧಿತ ಸಾವಾಗಿರುವ ಬಗ್ಗೆ ಇಬ್ಬರೂ ವೃದ್ಧರು ಸಾವನಪ್ಪಿರುವ ಬಗ್ಗೆ ಹೇಳಲಾಗಿದೆ.ಜ್ವರ, ಗಂಟಲು ನೋವು, ತೀವ್ರ ತಲೆನೋವು ಸೇರಿ ಹಲವು ಲಕ್ಷಣಗಳು ಇದ್ದರೆ ಸಾಂಕ್ರಾಮಿಕ ರೋಗದ ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎನ್ನುವುದು ತಜ್ಞರ ಸಲಹೆ.ಕರ್ನಾಟಕದಲ್ಲಿ 35 ಪ್ರಕರಣಗಳು!ಭಾರತದಲ್ಲಿ ಇದೀಗ ಅಂದಾಜು 260 ಸಕ್ರಿಯ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಇದು ಕಳೆದ ಕೆಲವು ತಿಂಗಳತ್ತ ಹೋಲಿಸಿದರೆ ಸಣ್ಣ ಏರಿಕೆಯಾದರೂ, ಗಮನಾರ್ಹ ಎನ್ನುವಂತಹದು ಇದರಲ್ಲಿ ಹೆಚ್ಚಿನ ಪ್ರಕರಣಗಳು ಕೇರಳ 95 , ತಮಿಳುನಾಡು 66 , ಮಹಾರಾಷ್ಟ್ರ 56 ಕರ್ನಾಟಕ 35, ದೆಹಲಿಯಲ್ಲಿ 23…
Author: Srinivas_Murthy
ಶ್ರೀನಿವಾಸಪುರ:Srinivaspur ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ವಿಐಪಿ ಶಾಲೆಯ ವಿದ್ಯಾರ್ಥಿಗಳು ಸಿಬಿಎಸ್ಇ 10ನೇ ತರಗತಿ ಪರಿಕ್ಷೆಯಲ್ಲಿ ಶೇ100 ಫಲಿತಾಂಶ ಸಾಧಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.ಈ ಕುರಿತು ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ವಿಐಪಿ ಶಾಲೆ ಆಡಳಿತ ಮಂಡಳಿ ಅಧ್ಯಕ್ಷ ಹಾಗು ಖ್ಯಾತ ವೈದ್ಯ ಡಾ.ವೇಣುಗೋಪಾಲ್ ಶಾಲೆಯ ಬೋದಕ ಸಿಬ್ಬಂದಿ ಹಾಗು ಪೋಷಕರ ಸಹಕಾರದಿಂದ ನಮ್ಮ ಶಾಲೆಯ 10 ನೇ ತರಗತಿ ಸಿ.ಬಿ.ಎಸ್.ಇ ವಿದ್ಯಾರ್ಥಿಗಳು ಸತತ ಐದನೆ ಬಾರಿಗೆ ಶೇ 100 ಫಲಿತಾಂಶ ಸಾಧಿಸಿ ಕೋಲಾರ ಜಿಲ್ಲೆಯಲ್ಲೆ ಪ್ರಥಮ ಸ್ಥಾನ ಗಳಿಸಿದೆ ಎಂದರು.ದಶಕದ ಸಂಭ್ರಮದಲ್ಲಿರುವ ವಿಐಪಿ ಶಾಲೆ VISION INDIA PUBLIC SCHOOL ಸಿಬಿಎಸ್ಇ 10ನೇ ತರಗತಿಯ ಐದನೇಯ ಬ್ಯಾಚ್ ವಿದ್ಯಾರ್ಥಿಗಳು ನೂರರಷ್ಟು ಫಲಿತಾಂಶ ಸಾಧಿಸಿದ್ದಾರೆ. ಈ ಬಾರಿ 5ನೇ ಬ್ಯಾಚ್ ನಲ್ಲಿ 58 ವಿದ್ಯಾರ್ಥಿಗಳು ಸಿಬಿಎಸ್ಇ 10ನೇ ತರಗತಿ ಪರಿಕ್ಷೆ ತಗೆದುಕೊಂಡಿದ್ದು ಅದರಲ್ಲಿ 12 ಅತ್ಯುನ್ನತ ಶ್ರೇಣಿ,16 ಉನ್ನತ ಶ್ರೇಣಿ, 19 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ 11 ವಿದ್ಯಾರ್ಥಿಗಳು ದ್ವಿತೀಯಶ್ರೇಣಿಯಲ್ಲಿ ಉತ್ತೀರ್ಣರಾಗಿ…
ಶ್ರೀನಿವಾಸಪುರ:ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ತಾಲೂಕಿನ ನಂಬಿಹಳ್ಳಿ ಪಂಚಾಯಿತಿ ಭೇಟಿ ಸಂದರ್ಭದಲ್ಲಿ ಮೊಬೈಲ್ ಸ್ವೀಚ್ ಆಫ್ ಮಾಡಿ ಬೇಜವಬ್ದಾರಿಯಿಂದ ನಾಪತ್ತೆಯಾಗಿದ್ದ ನಂಬಿಹಳ್ಳಿ ಪಿಡಿಓ ಮಂಜುನಾಥರೆಡ್ಡಿಯನ್ನು ಜಿಲ್ಲಾಪಂಚಾಯಿತಿ ಸಿಇಒ ಸಸ್ಪೆಂಡ್ ಮಾಡಿರುತ್ತಾರೆ.ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಶ್ರೀನಿವಾಸಪುರ ಭೇಟಿ ಸಂದರ್ಭದಲ್ಲಿ ಅಧಿಕಾರಿಗಳ ಸಭೆ ನಡೆಸಿ ವಿಶೇಷವಾಗಿ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡುವುದಾಗಿ ತಿಳಿಸಿದ್ದರು ಅದರಂತೆ ನಂಬಿಹಳ್ಳಿ ಪಂಚಾಯಿತಿಗೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಭೇಟಿ ನೀಡಿದಾಗ, ನಂಬಿಹಳ್ಳಿ ಪಿಡಿಓ ಮಂಜುನಾಥರೆಡ್ಡಿ ಪಂಚಾಯಿತಿ ಕಚೇರಿಯಲ್ಲಿ ಇಲ್ಲದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು,ಇದಕ್ಕೆ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪನವರು ಕೆಂಡಾಮಂಡಲರಾಗಿ ಸಭೆಯಲ್ಲಿ ಭಾಗವಹಿಸಿದ್ದ ಪಿಡಿಒ ಮಂಜುನಾಥರೆಡ್ಡಿ ನಂತರ ಕಚೇರಿಗೆ ಆಗಮಿಸದೆ ನಾಪತ್ತೆಯಾಗಿದ್ದು ಇದನ್ನು ತೀವ್ರವಾಗಿ ಪರಿಗಣಿಸಿದ ಉಪಲೋಕಾಯುಕ್ತ ನ್ಯಾಯಮೂರ್ತಿಗಳು ಪಿಡಿಒ ಮಂಜುನಾಥರೆಡ್ಡಿ ಯನ್ನು ತಕ್ಷಣವೇ ಸಸ್ಪೆಂಡ್ ಮಾಡುವಂತೆ ಸ್ಥಳದಲ್ಲಿದ್ದ ತಾಲೂಕು ಪಂಚಾಯಿತಿ ಇಒ ಶಿವಕುಮಾರಿ ಅವರಿಗೆ ಸೂಚಿಸಿದರು.ಈ ಹಿನ್ನಲೆಯಲ್ಲಿ ತಾಲೂಕು ಪಂಚಾಯಿತಿ ಇಒ ಶಿವಕುಮಾರಿ ಅವರು ಕೋಲಾರ ಜಿಲ್ಲಾಪಂಚಾಯಿತಿ ಸಿಇಒ ಅವರಿಗೆ ಪಿಡಿಒ ಮೇಲಿನ ಆರೋಪ ವಿವರಿಸಿ ಕರ್ತವ್ಯ ಲೋಪದ…
ನ್ಯೂಜ್ ಡೆಸ್ಕ್:ಪಾಕಿಸ್ತಾನ ಭಾರತದ ನಾಗರೀಕರನ್ನು ಗುರಿಯಾಗಿಸಿ ದಾಳಿ ಮಾಡುತ್ತಿರುವ ಕಾರಣ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಭಾರತೀಯ ಸೇನೆ ಸನ್ನದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರದ ಹಲವು ಭಾಗಗಳಿಂದ ಗ್ರಾಮಸ್ಥರನ್ನು ತಕ್ಷಣವೇ ಬೇರೆಡೆಗೆ ಸ್ಥಳಾಂತರಕ್ಕೆ ಹೇಳಲಾಗಿದೆ ಇಂದು ರಾತ್ರಿ ಪಾಕಿಸ್ತಾನಕ್ಕೆ ಮತ್ತೊಂದು ಶಾಸ್ತಿ ಮಾಡಲು ಎಲ್ಲಾ ಸಿದ್ಧತೆ ಮಾಡಲಾಗಿದೆ. ಇದರಿಂದ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು ಸತತವಾಗಿ ನಡೆಸಿದಂತ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಪಾಕಿಸ್ತಾನದ 2 ಫೈಟರ್ ಜೆಟನ್ನು ಭಾರತ ಹೊಡೆದುರುಳಿಸಿದ್ದು ಈ ಪೈಕಿ ಪಾಕಿಸ್ತಾನದ ಪೈಲೆಟನ್ನು ಜೀವಂತವಾಗಿ ಸೆರೆ ಹಿಡಿದುಕೊಂಡ ಬಗ್ಗೆ ಮಾಹಿತಿ ಸಿಕ್ಕಿದೆಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆ ತೀವ್ರ ಪ್ರತೀಕಾರಕ್ಕಾಗಿ , ಭಾರತೀಯ ನೌಕಾ ಪಡೆಯನ್ನು ಈಗ ಐಎನ್ಎಸ್ ವಿಕ್ರಾಂತ್ ಕರಾಚಿ ಬಂದರಿನ ಮೇಲೆ ದಾಳಿ ಮಾಡಿದೆ. ಅರೇಬಿಯನ್ ಸಮುದ್ರದಲ್ಲಿ ನೆಲೆಗೊಂಡಿರುವ ಐಎನ್ಎಸ್ ವಿಕ್ರಾಂತ್ ಕರಾಚಿಯನ್ನು ಗುರಿಯಾಗಿಸಿಕೊಂಡು ಭಾರಿ ವಿನಾಶವನ್ನು ಉಂಟುಮಾಡಲು ಪ್ರಾರಂಭಿಸಿದೆ. ನೌಕಾ ದಾಳಿಯು ಕರಾಚಿ ಬಂದರು ಸೇರಿದಂತೆ ಕರಾಚಿ ನಗರದ ದೊಡ್ಡ ಬೆಂಕಿಗೆ ಕಾರಣವಾಗಿದೆ…
ಶ್ರೀನಿವಾಸಪುರ:ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಗ್ರಾಮ ಪಂಚಾಯಿತಿ ಕಚೇರಿಗೆ ಬರುವುದು ಗೊತ್ತಿದ್ದರು ಗ್ರಾಮ ಪಂಚಾಯಿತಿ ಪಿಡಿಒ ಮೊಬೈಲ್ ಸ್ವೀಚ್ ಆಪ್ ಮಾಡಿ ಓಡಿ ಹೋದ ಸ್ವಾರಸ್ಯಕರ ಘಟನೆ ತಾಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ನಡೆದಿದೆ.ಉಪಲೋಕಾಯುಕ್ತ ಬಿ.ವೀರಪ್ಪ ತಾಲೂಕಿನಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡು ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಕಡತಗಳನ್ನು ಪರಶೀಲನೆ ನಡೆಸಿ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಪಂಚಾಯಿತಿ ಅಧಿಕಾರಿಗಳ ಸಭೆ ನಡೆಸಿದರು.ಸಭೆಯಲ್ಲಿ ಮಾತನಾಡಿದ ಅವರು ಕರ್ನಾಟಕ ಲೋಕಾಯುಕ್ತ ಸಂಸ್ಥೆ ಸ್ವಾಯತ್ತ ಸಂಸ್ಥೆಯಾಗಿದ್ದು ಮುಖ್ಯಮಂತ್ರಿಯನ್ನೆ ಜೈಲುಗಟ್ಟಿದ ಖ್ಯಾತಿ ಇದೆ.ಭ್ರಷ್ಟರ ಸಂಹಾರಕ್ಕಾಗಿ ಲೋಕಾಯಕ್ತ ಸಂಸ್ಥೆ ಶ್ರಮಿಸುತ್ತಿದೆ ಯಾವುದೆ ಮುಲಾಜಿಗೂ ಒಳಪಡದೆ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸದೆ ಅವರ ಕೆಲಸ ಮಾಡಿಕೊಡಿ ತಾಲ್ಲೂಕಿನಾದ್ಯಂತ ಸುಮಾರು 360 ಕೋಟಿ ರೂಗಳ ವೆಚ್ಚದಲ್ಲಿ ತಾಲೂಕಿನ ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೂ ನಲ್ಲಿ ಮೂಲಕ ನೀರು ಹರಿಸುವ ಕಾಮಗಾರಿ ಚಾಲ್ತಿಯಲ್ಲಿದ್ದು ಕಾಮಗಾರಿ ಗುಣಮಟ್ಟ ಕಾಪಾಡುವ ಜವಾಬ್ದಾರಿ ಕುಡಿಯುವ ನೀರಿನ ಇಲಾಖೆ ಇಂಜಿನಿಯರ್ ಮೇಲಿದೆ, ಇದಕ್ಕೆ ಪೂರಕವಾಗಿ ಪಿ.ಡಿ.ಒ.…
ನ್ಯೂಜ್ ಡೆಸ್ಕ್: ದೇಶಕ್ಕೆ ಸ್ವಾತಂತ್ರ್ಯ ಬಂದು 77ವರ್ಷ ಕಳೆದರೂ ಈ ಗ್ರಾಮದಲ್ಲಿ ಹತ್ತನೇ ತರಗತಿ ಪಾಸಾದವರು ಇರಲಿಲ್ಲ ಇದೆ ಮೊದಲ ಬಾರಿಗೆ ಗ್ರಾಮದ ಬಾಲಕನೊರ್ವ ಹತ್ತನೇ ತರಗತಿ ಪಾಸಾಗುವ ಮೂಲಕ ಗ್ರಾಮದಲ್ಲಿ ದಾಖಲೆಯನ್ನು ನಿರ್ಮಿಸಿದ್ದಾನೆ. ಇತ್ತೀಚೆಗೆ ಬಂದಂತ ಹತ್ತನೇ ತರಗತಿಯ ಫಲಿತಾಂಶಗಳಲ್ಲಿ, ರಾಮ್ ಕೆ ವಾಲ್ ಎಂಬ ಹುಡುಗ 600 ಅಂಕಗಳಿಗೆ 322 ಅಂಕ ಗಳಿಸಿ ಹತ್ತನೇ ತರಗತಿ ಪಾಸಾಗಿದ್ದಾನೆ.|ಇದು ನಡೆದಿರುವುದು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಗರಕ್ಕೆ ಸುಮಾರು 50 ಕಿ.ಮೀ ದೂರದಲ್ಲಿರುವ ನಿಜಾಂಪುರ್ ಗ್ರಾಮದಲ್ಲಿ. ಸುಮಾರು 200 ಮನೆಗಳುಳ್ಳ ಗ್ರಾಮದಲ್ಲಿ ಕೃಷಿ ಕಾರ್ಮಿಕನಾದ ಜಗದೀಶ್ ಹಾಗು ಅದೇ ಗ್ರಾಮದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಪುಷ್ಪಾ ದೇವಿ ದಂಪತಿ ಮಗನಾದ ರಾಮ್ ಕೆ ವಾಲ್ ಗ್ರಾಮದಲ್ಲಿ ಯಾರು ಪಾಸಾಗದ ಹತ್ತನೇ ತರಗತಿಯನ್ನು ಉತ್ತೀರ್ಣನಾಗಿ ಸಾಧನೆ ಮಾಡಿದ್ದಾನೆ.ಇವನ ಸಾಧನೆಯನ್ನು ಗಮನಿಸಿ ಸ್ಥಳೀಯ ಸರ್ಕಾರಿ ಆಡಳಿತದ ಅಧಿಕಾರಿಗಳು ಗೌರವಿಸಿದ್ದಾರೆ.
ಬೆಂಗಳೂರು:ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಗೊಂದಲದ ಹಿನ್ನೆಲೆಯಲ್ಲಿ ಸಮಗ್ರ ದತ್ತಾಂಶ ಸಂಗ್ರಹ ಮಾಡುವ ನಿಟ್ಟಿನಲ್ಲಿ ಸೋಮವಾರದಿಂದ 3 ಹಂತದಲ್ಲಿ ಸಮೀಕ್ಷೆ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಬಗ್ಗೆ ಸದಾಶಿವ ಆಯೋಗ ವರದಿ ಕೊಟ್ಟಿತ್ತು. 2011ರ ಜನಸಂಖ್ಯೆ ಆಧರಿಸಿ ವರದಿಯನ್ನು ಕೊಟ್ಟಿದ್ದರು. ಇದೀಗ ಇಂದಿನಿಂದ ಮೇ.17 ರವರೆಗೆ ಒಳಮೀಸಲಾತಿ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.ಪರಿಶಿಷ್ಟ ಜಾತಿ ಒಳ ಮೀಸಲು ಕಲ್ಪಿಸುವ ಕುರಿತು ಶಿಫಾರಸು ಮಾಡಲು ಸರ್ಕಾರ ರಚಿಸಿರುವ ನ್ಯಾ| ನಾಗಮೋಹನ್ ದಾಸ್ ಆಯೋಗ ಇಂದಿನಿಂದ ಸಮೀಕ್ಷೆ ನಡೆಯಲಿದ್ದು, ಗಣತಿದಾರರು ಪ್ರತಿ ಮನೆ ಮನೆಗೂ ಆಗಮಿಸಿ ಸಮೀಕ್ಷೆ ನಡೆಸಲಿದ್ದಾರೆ. ಇನ್ನು 3 ನೇ ಹಂತ ಆನ್ ಲೈನ್ ಮೂಲಕ ನಡೆಯಲಿದೆ. ಅಲ್ಲೂ ಜನರಿಗೆ ಮಾಹಿತಿಯನ್ನು ನೀಡಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಎಸ್ಸಿ ಸಮುದಾಯ ಗಣತಿದಾರರು ಮನೆ ಮನೆಗೆ ಬಂದಾಗ ಮಾಹಿತಿಯನ್ನು ನೀಡಬೇಕು. ಗಣತಿದಾರರು ಮನೆಗೆ ಭೇಟಿ ಕೊಟ್ಟಾಗ ಜನರು ಇಲ್ಲದೇ ಹೋದರೆ ಶಿಬಿರದಲ್ಲಾದರೂ…
ಶ್ರೀನಿವಾಸಪುರ:ಇದೊಂದು ಸುಸಜ್ಜಿತ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ದಶಕದ ಹಿಂದೆ ನಿರ್ಮಾಣ ಮಾಡಲಾಗಿದೆ ಆದರೆ ಇದು ಬಳಕೆ ಆಗದೆ ಹಳೆಯದಾಗುತ್ತಿದೆ ಎನ್ನುವುದು ಜನರ ಮಾತು!ಶ್ರೀನಿವಾಸಪುರ ಪಟ್ಟಣದಿಂದ ಕೋಲಾರಕ್ಕೆ ಹೋಗುವ ದಾರಿಯಲ್ಲಿ ಸಾರಿಗೆ ಸಂಸ್ಥೆ ಘಟಕದ ಪಕ್ಕದಲ್ಲೆ,ನ್ಯಾಯಲಯದ ಮುಂಬಾಗದಲ್ಲಿ ನಿರ್ಮಾಣ ಮಾಡಿರುವ ಬಸ್ ನಿಲ್ದಾಣದಲ್ಲಿ ಏಕಕಾಲಕ್ಕೆ ಒಂಬತ್ತು ಬಸ್ಸುಗಳನ್ನು ನಿಲ್ಲಿಸಬಹುದಾದ ಬೃಹತ್ ಬಸ್ ಬೇ ಇರುವ ನಿಲ್ದಾಣವನ್ನು ನಿರ್ಮಿಸಿದ್ದಾರೆ.ಹಿಂದೆ ಸಿದ್ದರಾಮಯ್ಯ ಸರ್ಕಾರ ಇದ್ದ ಸಂದರ್ಭದಲ್ಲಿ ಸಾರಿಗೆ ಮಂತ್ರಿಗಳಾಗಿದ್ದ ರಾಮಲಿಂಗಾರೆಡ್ಡಿ ಅವರಿಂದ ಅಂದಿನ ಆರೋಗ್ಯ ಸಚಿವ ರಮೇಶ್ ಕುಮಾರ ಮಂಜೂರು ಮಾಡಿಸಿದ್ದ ಬಸ್ ನಿಲ್ದಾಣಕ್ಕೆ ಅವರೆ ಗುದ್ದಲಿ ಪೂಜೆ ಅವರ ಅವಧಿಯಲ್ಲೆ ಲೋಕಾರ್ಪಾಣೆ ಮಾಡಲಾಯಿತು.ಲೋಕಾರ್ಪಣೆಯಾದಗಿನಿಂದಲೂ ನೂತನ ಬಸ್ ನಿಲ್ದಾಣ ಸಾರ್ವಜನಿಕವಾಗಿ ಬಳಕೆ ಆಗುತ್ತಿಲ್ಲ ಅಧಿಕಾರಿಗಳ ಹಾಗು ವ್ಯವಸ್ಥೆಯ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.ಬಸ್ಟಾಂಡ್ ಇತ್ತು ಆದರೂ ನಿರ್ಮಿಸಿದರುಶ್ರೀನಿವಾಸಪುರದಲ್ಲಿ ತಹಶೀಲ್ದಾರ್ ಕಚೇರಿಗೆ ಹೊಂದಿಕೊಂಡಂತೆ ಇದ್ದ ಬಯಲು ರಂಗ ಮಂದಿರ ನೆಲಸಮ ಮಾಡಿ ಎರಡುವರೆ ದಶಗಳ ಹಿಂದೆ ರಾಜ್ಯ ಸಾರಿಗೆ ಸಂಸ್ಥೆ ಬಸ್…
ಶ್ರೀನಿವಾಸಪುರ:ಸಮಾಜದಲ್ಲಿನ ಜಾತಿ ಅನಿಷ್ಟತೆ ತೊಲಗಿಸಿ ಸಾಮಾಜಿಕ ಸೌಹಾರ್ದತೆ ಮೂಡಿಸಿದ ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಸಂತರಾಗಿದ್ದರು ಬಸವಣ್ಣನವರು ಸಮಾನತೆಯ ತಳಹದಿಯ ಮೇಲೆ ನವ ಸಮಾಜದ ನಿರ್ಮಾಣ ಮಾಡಿದರು ಎಂದು ತಾಲೂಕು ತಹಶೀಲ್ದಾರ್ ಸುಧೀಂದ್ರ ಹೇಳಿದರು.ಅವರು ಶ್ರೀನಿವಾಸಪುರ ತಾಲೂಕು ಆಡಳಿತದ ಸಹಯೋಗದೊಂದಿಗೆ ಶ್ರೀ ನಗರೇಶ್ವರ ಸ್ವಾಮಿ ಸೇವಾ ಸಮಿತಿ, ನಗರ್ತ ಮಹಿಳಾ ಮಂಡಳಿ ಹಾಗು ತಾಲೂಕು ವಿರಶೈವ ಒಕ್ಕೂಟ ಸಂಯುಕ್ತವಾಗಿ ಆಯೋಜಿಸಿದ್ದ ಬಸವಣ್ಣನವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪರಿಶುದ್ಧ ಮನಸ್ಸಿನ ಶರಣರ ವಚನಗಳು ಸರ್ವಕಾಲಕ್ಕೂ ಅನ್ವಯವಾಗುತ್ತವೆ ಎಂದು ಬಣ್ಣಿಸಿದರು.ತಾಲೂಕು ವಿರಶೈವ ಒಕ್ಕೂಟದ ಅಧ್ಯಕ್ಷ ಹಾಗು ರೈತ ಮುಖಂಡ ದಳಸನೂರು ವೀರಭದ್ರಸ್ವಾಮಿ ಮಾತನಾಡಿ 12ನೇ ಶತಮಾನದಲ್ಲಿ ಜಾತಿಗಳ ನಡುವಿನ ಅಸಮಾನತೆಯನ್ನು ತೊಲಗಿಸಿ ಶಕ್ತಿಶಾಲಿ ಸಮಾಜವನ್ನು ನಿರ್ಮಾಣ ಮಾಡಲು ಬಸವಣ್ಣ ಮುಂದಾದವರು ಎಂದರು.ಕುಲದ ಮಹತ್ವ ಕಳೆಯಲು ತಾನೂ ಕೂಡ ಎಲ್ಲರಲ್ಲಿ ಒಬ್ಬನು ಎಂದು ಬಿಂಬಿಸಿಕೊಂಡ ಮಹಾನ್ ಸಂತ, ಅವರು ನುಡಿದಂತೆ ನಡೆದವರಾಗಿದ್ದು ಅವರ ಬದುಕೆ ನಮಗೆ ಆದರ್ಶ ಎಂದು ತಿಳಿಸಿದರು.ಶಿವಚಾರ್ಯ ನಗರ್ತ ಮಂಡಳಿ ರಾಜ್ಯ ನಿರ್ದೇಶಕ…
ಶ್ರೀನಿವಾಸಪುರ:ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಶ್ರೀನಿವಾಸಪುರ ತಾಲ್ಲೂಕು ನೂತನ ಅಧ್ಯಕ್ಷರಾಗಿ ಆರ್.ಎಸ್.ರೆಡ್ಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ರಘುನಾಥ್ರೆಡ್ಡಿ ಹಾಗೂ ಜಿಲ್ಲಾ ಖಜಾಂಚಿಯಾಗಿ ಸಿ.ಬಿ. ಶಿವಣ್ಣ ಆಯ್ಕೆಯಾಗಿದ್ದಾರೆ.ನೂತನ ಪಧಾದಿಕಾರಿಗಳು ಪಟ್ಟಣದ ನೌಕರರ ಭವನದಲ್ಲಿ ಪದಗ್ರಹಣ ಮಾಡಿದರು ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ರೆಡ್ಡಪ್ಪ ಮಾತನಾಡಿ ವೇತನ,ವೈದ್ಯಕೀಯ ಬಿಲ್ಲುಗಳ ಮಂಜೂರಾತಿ ಸೇರಿದಂತೆ,ಶಿಕ್ಷಕರ ಸಮಸ್ಯೆಗಳಿಗೆ ಸದಾಕಾಲ ಸ್ಪಂದಿಸುವುದಾಗಿ ಹೇಳಿದರು.ಶಿಕ್ಷಕರು ನೀಡಿರುವ ಅಧಿಕಾರಿವನ್ನು ಜವಾಬ್ದಾರಿ ಎಂದು ಭಾವಿಸಿ ಕೆಲಸ ಮಾಡುವುದಾಗಿ ಶಿಕ್ಷಕರ ಸೇವೆಯೇ ನನ್ನ ಪರಮೋಚ್ಚ ಗುರಿ ಎಂಬಂತೆ ಶಿಕ್ಷಕರಿಗೆ ಗೌರವ ತರುವ ರಿತಿಯಲ್ಲಿ ಸಂಘದ ಘನತೆ ಎತ್ತಿಹಿಡಿಯುವ ರೀತಿಯಲ್ಲಿ ಸಂಘವನ್ನು ಮುನ್ನೆಡಿಸಿಕೊಂಡು ಹೋಗುವುದಾಗಿ ತಿಳಿಸಿದರು.ಹಿಂದಿನ ಅಧ್ಯಕ್ಷರು,ಪದಾಧಿಕಾರಿಗಳು, ಹಾಲಿ ಪದಾಧಿಕಾರಿಗಳೊಂದಿಗೆ ಸಮನ್ವಯತೆ ಕಾಯ್ದುಕೊಂಡು ಶಿಕ್ಷಕರೊಂದಿಗೆ ಸೌಹಾರ್ದತೆಯಿಂದ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.ಸರ್ವ ಸದಸ್ಯರು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಈ ಆಯ್ಕೆ ನಡೆದಿದ್ದು, ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರುಗಳಾದ ವಿ ಬಯ್ಯಾರೆಡ್ಡಿ ಸಂಘಟನಾ ಕಾರ್ಯದರ್ಶಿ ಡಿವಿ ವೆಂಕಟರಮರೆಡ್ಡಿ ಸಹ ಕಾರ್ಯದರ್ಶಿ ಶ್ರೀರಾಮ್.ಎಲ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಕಾಳಾಚಾರಿ…