ನ್ಯೂಜ್ ಡೆಸ್ಕ್:ಬೈಟೂ ಕಾಫಿ ನೀಡದ ಹೋಟೆಲ್ ಮೇಲೆ JCB ಮೂಲಕ ದಾಳಿ ಮಾಡಿಸಿದೆ ಮುನ್ಸಿಪಲ್ ಉದ್ಯೋಗಿಯನ್ನು ಅಲ್ಲಿನ ಜಿಲ್ಲಾಧಿಕಾರಿ ವಜಾ ಮಾಡಿರುವ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪ್ರೊದ್ದಟೂರ್ ನಗರದಲ್ಲಿ ನಡೆದಿರುತ್ತದೆ.
ಮುನ್ಸಿಪಲ್ ನಲ್ಲಿ ಹೊರಗುತ್ತಿಗೆ ಉದ್ಯೋಗಿಯೊಬ್ಬ ಸ್ಥಳೀಯ ಹೋಟೆಲ್ ನಲ್ಲಿ ಕಾಫಿ ಕುಡಿಯಲು ಹೋಗಿ ಬೈಟೂ ಕಾಫಿ ಕೇಳಿದ್ದಾನೆ ಅದಕ್ಕೆ ಹೋಟೆಲ್ ಮಾಲಿಕ ಬೈಟೂ ಪದ್ಧತಿ ಇಲ್ಲಾ ಎಂದಿರುತ್ತಾನೆ.ಅದಕ್ಕೆ ಕೊಪಗೊಂಡ ಮುನ್ಸಿಪಲ್ ಉದ್ಯೋಗಿ ಕಚೇರಿಗೆ ವಾಪಸ್ಸು ಹೋಗಿ ಇಲಾಖೆ ಜೆಸಿಬಿ ಕಳಿಸಿ, ಬೈಟೂ ಕಾಫಿ ಇಲ್ಲಾ ಎಂದ ಹೋಟೆಲ್ ಮುಂಭಾಗದ ಅತಿಕ್ರಮಣ ತೆರವು ಮಾಡಿಕೊಂಡು ಬನ್ನಿ ಎಂದು ಸೂಚಿಸಿದ್ದಾನೆ. ಅದರಂತೆ ಜೆಸಿಬಿ ತೆಗೆದುಕೊಂಡು ಹೋದ ಮುನ್ಸಿಪಲ್ ಸಿಬ್ಬಂದಿ ಹೋಟೆಲ್ ಮುಂಭಾಗದಲ್ಲಿ ಕಾರ್ಯಾಚರಣೆಗೆ ಮುಂದಾದಾಗ ಹೋಟೆಲ್ ಮಾಲಿಕ ರಸ್ತೆ ಮೇಲೆ ಮಲಗಿ ಬೇಡಿಕೊಂಡಿದ್ದಾನೆ ಇದನ್ನು ಸ್ಥಳೀಯ ಜನತೆ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ ಜೊತೆಗೆ ಜನರು ತೀವ್ರವಾಗಿ ವಿರೋಧಿಸಿದ್ದಾರೆ. ವಿಷಯ ಮುನ್ಸಿಪಲ್ ಆಯುಕ್ತರ ವರಿಗೂ ತಲುಪಿದೆ ನಂತರ ಜಿಲ್ಲಾಧಿಕಾರಿ ಗಮನಕ್ಕೆ ಹೋಗಿದೆ. ಇದು ದಬ್ಬಾಳಿಕೆ ವರ್ತಿನೆ ಎಂದು ಪರಿಗಣಿಸಿ, ಜಿಲ್ಲಾಧಿಕಾರಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಹೋಟೆಲ್ಗೆ ಜೆಸಿಬಿಯನ್ನು ಕಳುಹಿಸಲು ಹೊರಗುತ್ತಿಗೆ ನೌಕರರನಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪುರಸಭೆಯ ಎಸಿಪಿಗೆ ಚಾರ್ಜ್ ಮೆಮೊ ನೀಡಿ ವಿವರಣೆ ಕೇಳಿದ್ದಾರೆ. ಪುರಸಭೆಯ ಉದ್ಯೋಗಿಯೊಬ್ಬರು ಇಷ್ಟೊಂದು ಪ್ರಭಾವಿಯಂತೆ ವರ್ತಿಸಲು ಹೇಗೆಸಾಧ್ಯ? ಹೋಟೆಲ್ ಮಾಲೀಕರು ಜೆಸಿಬಿಗೆ ಅಡ್ಡಲಾಗಿ ಮಲಗಿದಾಗ ಆಘಾತವಾಗಿದ್ದರೆ ಯಾರು ಜವಾಬ್ದಾರರು ಎಂದು ಕೆಂಡಾಮಂಡಲರಾದ ಜಿಲ್ಲಾಧಿಕಾರಿ ಜೆಸಿಬಿ ಕಳಿಸಿದ ಔಟ್ ಸೋರ್ಸಿಂಗ್ ಉದ್ಯೋಗಿಯನ್ನು ವಜಾ ಗೊಳಿಸಿದ್ದಾರೆ ಎನ್ನಲಾಗಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



