ನ್ಯೂಜ್ ಡೆಸ್ಕ್:ಬೈಟೂ ಕಾಫಿ ನೀಡದ ಹೋಟೆಲ್ ಮೇಲೆ JCB ಮೂಲಕ ದಾಳಿ ಮಾಡಿಸಿದೆ ಮುನ್ಸಿಪಲ್ ಉದ್ಯೋಗಿಯನ್ನು ಅಲ್ಲಿನ ಜಿಲ್ಲಾಧಿಕಾರಿ ವಜಾ ಮಾಡಿರುವ ಘಟನೆ ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪ್ರೊದ್ದಟೂರ್ ನಗರದಲ್ಲಿ ನಡೆದಿರುತ್ತದೆ.
ಮುನ್ಸಿಪಲ್ ನಲ್ಲಿ ಹೊರಗುತ್ತಿಗೆ ಉದ್ಯೋಗಿಯೊಬ್ಬ ಸ್ಥಳೀಯ ಹೋಟೆಲ್ ನಲ್ಲಿ ಕಾಫಿ ಕುಡಿಯಲು ಹೋಗಿ ಬೈಟೂ ಕಾಫಿ ಕೇಳಿದ್ದಾನೆ ಅದಕ್ಕೆ ಹೋಟೆಲ್ ಮಾಲಿಕ ಬೈಟೂ ಪದ್ಧತಿ ಇಲ್ಲಾ ಎಂದಿರುತ್ತಾನೆ.ಅದಕ್ಕೆ ಕೊಪಗೊಂಡ ಮುನ್ಸಿಪಲ್ ಉದ್ಯೋಗಿ ಕಚೇರಿಗೆ ವಾಪಸ್ಸು ಹೋಗಿ ಇಲಾಖೆ ಜೆಸಿಬಿ ಕಳಿಸಿ, ಬೈಟೂ ಕಾಫಿ ಇಲ್ಲಾ ಎಂದ ಹೋಟೆಲ್ ಮುಂಭಾಗದ ಅತಿಕ್ರಮಣ ತೆರವು ಮಾಡಿಕೊಂಡು ಬನ್ನಿ ಎಂದು ಸೂಚಿಸಿದ್ದಾನೆ. ಅದರಂತೆ ಜೆಸಿಬಿ ತೆಗೆದುಕೊಂಡು ಹೋದ ಮುನ್ಸಿಪಲ್ ಸಿಬ್ಬಂದಿ ಹೋಟೆಲ್ ಮುಂಭಾಗದಲ್ಲಿ ಕಾರ್ಯಾಚರಣೆಗೆ ಮುಂದಾದಾಗ ಹೋಟೆಲ್ ಮಾಲಿಕ ರಸ್ತೆ ಮೇಲೆ ಮಲಗಿ ಬೇಡಿಕೊಂಡಿದ್ದಾನೆ ಇದನ್ನು ಸ್ಥಳೀಯ ಜನತೆ ಮೊಬೈಲಿನಲ್ಲಿ ಸೆರೆ ಹಿಡಿದಿದ್ದಾರೆ ಜೊತೆಗೆ ಜನರು ತೀವ್ರವಾಗಿ ವಿರೋಧಿಸಿದ್ದಾರೆ. ವಿಷಯ ಮುನ್ಸಿಪಲ್ ಆಯುಕ್ತರ ವರಿಗೂ ತಲುಪಿದೆ ನಂತರ ಜಿಲ್ಲಾಧಿಕಾರಿ ಗಮನಕ್ಕೆ ಹೋಗಿದೆ. ಇದು ದಬ್ಬಾಳಿಕೆ ವರ್ತಿನೆ ಎಂದು ಪರಿಗಣಿಸಿ, ಜಿಲ್ಲಾಧಿಕಾರಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಹೋಟೆಲ್ಗೆ ಜೆಸಿಬಿಯನ್ನು ಕಳುಹಿಸಲು ಹೊರಗುತ್ತಿಗೆ ನೌಕರರನಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪುರಸಭೆಯ ಎಸಿಪಿಗೆ ಚಾರ್ಜ್ ಮೆಮೊ ನೀಡಿ ವಿವರಣೆ ಕೇಳಿದ್ದಾರೆ. ಪುರಸಭೆಯ ಉದ್ಯೋಗಿಯೊಬ್ಬರು ಇಷ್ಟೊಂದು ಪ್ರಭಾವಿಯಂತೆ ವರ್ತಿಸಲು ಹೇಗೆಸಾಧ್ಯ? ಹೋಟೆಲ್ ಮಾಲೀಕರು ಜೆಸಿಬಿಗೆ ಅಡ್ಡಲಾಗಿ ಮಲಗಿದಾಗ ಆಘಾತವಾಗಿದ್ದರೆ ಯಾರು ಜವಾಬ್ದಾರರು ಎಂದು ಕೆಂಡಾಮಂಡಲರಾದ ಜಿಲ್ಲಾಧಿಕಾರಿ ಜೆಸಿಬಿ ಕಳಿಸಿದ ಔಟ್ ಸೋರ್ಸಿಂಗ್ ಉದ್ಯೋಗಿಯನ್ನು ವಜಾ ಗೊಳಿಸಿದ್ದಾರೆ ಎನ್ನಲಾಗಿದೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



