ಶ್ರೀನಿವಾಸಪುರ:ಯಂತ್ರದಲ್ಲಿ ಮೇವು ಕತ್ತರಿಸುತ್ತಿದ್ದ ಸಂದರ್ಭದಲ್ಲಿ ಆದ ಅಜಾಗರೂಕತೆಯಿಂದ ಕೃಷಿ ಕಾರ್ಮಿಕ ಮಹಿಳೆ ಯಂತ್ರಕ್ಕೆ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಅಡ್ಡಗಲ್ ಗ್ರಾಮದ ಬಳಿ ನೆಡೆದಿದೆ.ಮೃತ ಮಹಿಳೆಯನ್ನು ತಾಲೂಕಿನ ಕೊಪ್ಪವಾರಪಲ್ಲಿ ಗ್ರಾಮದ ಮಂಗಮ್ಮ ಕೋಂ ವೀರನಾರಯಣಸ್ವಾಮಿ(40)ಎಂದು ಗುರುತಿಸಲಾಗಿದ್ದು ಈಕೆ ಮಾಜಿ ಸ್ಪಿಕರ್ ರಮೇಶ್ ಕುಮಾರ್ ಅವರ ತೋಟದಲ್ಲಿ ಕೃಷಿ ಕಾರ್ಮಿಕಳಾಗಿದ್ದು ಇಂದು ಜಾನುವಾರುಗಳಿಗೆ ಸೀಮೆ ಹುಲ್ಲು ಕತ್ತರಿಸುವ ಸಲುವಾಗಿ ಯಂತ್ರಕ್ಕೆ ಚಾಲನೆ ನೀಡಿದ್ದ ಮಹಿಳೆ ಸೀರೆ ಯಂತ್ರಕ್ಕೆ ಸಿಲುಕಿ ಆಕೆ ಮೃತ ಪಟ್ಟಿರುವುದಾಗಿ ಹೇಳಿರುತ್ತಾರೆ.ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಗೌವನಪಲ್ಲಿ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
Author: Srinivas_Murthy
ಶ್ರೀನಿವಾಸಪುರ:ದೂರದೃಷ್ಟಿಯಿಂದ ಆಡಳಿತ ನಡೆಸಿದ ಕೆಂಪೇಗೌಡರು ಬೆಂಗಳೂರು ನಗರವನ್ನು ಅಂದೆ ಅಭಿವೃದ್ಧಿ ಗೊಳಿಸಿದ್ದಾರೆ ಇವತ್ತು ಇಡೀ ವಿಶ್ವವೇ ಬೆಂಗಳೂರು ನಗರ ಕಡೆ ನೋಡುವಂತೆ ಮಾಡಿದೆ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಬ್ಯಾಟಪ್ಪ ಹೇಳಿದರು. ಪಟ್ಟಣದ ಪುರಸಭೆ ಕಚೇರಿಯಲ್ಲಿ ನಾಡ ಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿ ಬೆಂಗಳೂರು ನಗರವನು ನಿರ್ಮಿಸಿ, ಎಲ್ಲಾ ಸಮುದಾಯಗಳ ಬಂಧುಗಳು ಜೀವನ ಕಟ್ಟಿಕೊಳ್ಳಲು ಅನುವು ಮಾಡಿಕೊಟ್ಟಿದ ಕೀರ್ತಿ ದಕ್ಷ ಆಡಳಿತಗಾರ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.ಪುರಸಭೆ ಸದಸ್ಯ ಆನಂದಗೌಡ ಮಾತನಾಡಿ ಪಟ್ಟಣದ ಮುಳಬಾಗಿಲು ವೃತ್ತಕ್ಕೆ ಕೆಂಪೇಗೌಡ ವೃತ್ತ ಎಂದು ನಾಮಕರಣ ಮಾಡುವಂತೆ ಮಂಡಿಸಿದರು. ಅದಕ್ಕೆ ಸಮುದಾಯದ ಮುಖಂಡರು ಒಕ್ಕೊರಲಿನಿಂದ ಬೆಂಬಲ ವ್ಯಕ್ತಪಡಿಸಿದರು. ಮಾವುಬೆಳೆಗಾರರ ಸಂಘದ ಕ್ಷೇಮಾಭಿವೃದ್ಧಿಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಪುರಸಭಾ ಮುಖ್ಯಾಧಿಕಾರಿ ವಿ.ನಾಗರಾಜ್, ಉಪಾಧ್ಯಕ್ಷೆ ಸುನಿತಾ, ಸದಸ್ಯರಾದ ಬಿ.ವಿ.ವೆಂಕಟರೆಡ್ಡಿ, ಎನ್ಎನ್ಆರ್ .ನಾಗರಾಜ್, ಶಾಂತಮ್ಮ,ಫೈರೋಜ್ , ನಾಮನಿ ಸದಸ್ಯರದ, ನರಸಿಂಹಮೂರ್ತಿ, ಗಂಗಾಧರ್, ಹೇಮಂತ್ಕುಮಾರ್, ಶಿವರಾಜ್, ಎಪಿಎಂಸಿ ಮಾಜಿ…
ಶ್ರೀನಿವಾಸಪುರ:ಕೋಲಾರ ಜಿಲ್ಲೆ ಹಾಲು ಒಕ್ಕೂಟದ ನಿರ್ದೇಶಕರಾಗಿ ಶ್ರೀನಿವಾಸಪುರ ಕ್ಷೇತ್ರದಿಂದ ಅಯ್ಕೆಯಾದ ಇಬ್ಬರು ನಿರ್ದೇಶಕರಾದ ಕೆ.ಕೆ.ಮಂಜು ಹಾಗು ಹನುಮೇಶ ಅವರಿಗೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿ ಗೌರವಿಸಿದರು. ಪಟ್ಟಣದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಕಾರ್ಯಕರ್ತರು ಆವರಣದಲ್ಲಿ ಏರ್ಪಡಿಸಿದ್ದ ಸರಳ ಸಮಾರಂಭದಲ್ಲಿ ಇಬ್ಬರನ್ನು ಗೌರವಿಸಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.ಕೋಮುಲ್ ಜಿಲ್ಲೆಯ ಜೀವನಾಡಿಈ ಸಂದರ್ಭದಲ್ಲಿ ನೂತನ ನಿರ್ದೇಶಕ ಕಲ್ಲೂರುಮಂಜು ಮಾತನಾಡಿ ಒಕ್ಕೂಟದ ನಿರ್ದೇಶಕರಾಗಿ ಉತ್ತಮವಾಗಿ ಕೆಲಸ ಮಾಡುವುದಾಗಿ ಹೇಳಿದ ಅವರು ಕೋಮುಲ್ ನಮ್ಮ ಜಿಲ್ಲೆಯ ರೈತರ ಜೀವನಾಡಿಯಾಗಿದ್ದು ಹಾಲು ಒಕ್ಕೂಟಕ್ಕೆ ಹಾಲು ಹಾಕುತ್ತಿರುವ ರೈತರಿಗೆ ಹೆಚ್ಚಿನ ಅನುಕೂಲಗಳು ಸಿಗುವಂತೆಯೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದರು.ನಮ್ಮ ನಾಯಕ ರಮೇಶ್ ಕುಮಾರ್ ಅವರು ನಮ್ಮ ಮೇಲೆ ಇಟ್ಟ ಭರವಸೆ ಉಳಿಸಿಕೊಳ್ಳಲಾಗುವುದು ಎಂದರು.ಸಮಾರಂಭದಲ್ಲಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲಆಶೋಕ್,ಪುರಸಭೆ ಮಾಜಿ ಅಧ್ಯಕ್ಷ ಬಿ.ಎಲ್.ಪ್ರಕಾಶ್ ನಿವೃತ್ತ ಶಿಕ್ಷಕ ಗೋವಿಂದರೆಡ್ಡಿ,ವೇಣು,ಹರಿಷ್ ಯಾದವ್ ಅವಲಕುಪ್ಪಗೀರಿಷ್,ನಂದಿನಿಹೋಟೆಲ್ ರಂಜೀತ್, ಮುಂತಾದವರು ಇದ್ದರು.ಕೋಲಾರ ಜಿಲ್ಲಾ ಹಾಲು ಒಕ್ಕೂಟಕ್ಕೆ ಆಯ್ಕೆಯಾದ ನೂತನ ನಿದೇಶಕರು…
ನ್ಯೂಜ್ ಡೆಸ್ಕ್:ಯುವಕರು ತಮ್ಮ ಬರ್ತಡೇ ಸಂಭ್ರಮವನ್ನು ನಡುರಸ್ತೆಯಲ್ಲಿ ಆಚರಿಸುವುದು ಫ್ಯಾಷನ್ ಆಗಿ ಮಾಡಿಕೊಂಡಿದ್ದಾರೆ ನಡು ರಸ್ತೆಯಲ್ಲಿ ಟೆಬಲ್ ಹಾಕಿ ಅಥಾವ ಸ್ಕೂಟರ್ ನಿಲ್ಲಿಸಿ ಅದರ ಮೇಲೆ ಕೆಕ್ ಇಟ್ಟು ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಇತ್ತಿಚಿಗೆ ಕಾಮನ್ ಆಗುತ್ತಿದೆ ತಡ ಸಂಜೆ ನಡು ರಾತ್ರಿ ವೇಳೆ ಹುಟ್ಟುಹಬ್ಬದ ಪಾರ್ಟಿ ಹೆಸರಿನಲ್ಲಿ ಬರ್ತಡೇ ಬಾಯ್ ರಸ್ತೆಯಲ್ಲಿ ಕೇಕ್ ಕತ್ತರಿಸಿದ ನಂತರ,ಬರ್ತಡೇ ಬಾಯ್ ಸ್ನೇಹಿತರ ಗುಂಪು ರಸ್ತೆಯಲ್ಲಿ ಕೂಗಾಡುತ್ತ ದೊಡ್ಡ ಮಟ್ಟದಲ್ಲಿ ಪಟಾಕಿ ಸಿಡಿಸುತ್ತ ಹಂಗಾಮ ಸೃಷ್ಟಿಸುವುದು ಕೇಕ್ ಬಳಿದುಕೊಂಡು ಕೆಟ್ಟದಾಗಿ ಕೂಗಾಡಿ ಕುಣಿದು ಕುಪ್ಪಳಿಸುತ್ತ ಗಲಾಟೆ ಮಾಡುತ್ತಾರೆ ಸ್ಥಳದಲ್ಲಿ ಇಲ್ಲದ ರಾದ್ದಾಂತ ಮಾಡಿ ವಾಹನ ಸಂಚಾರಕ್ಕೂ ಅಡ್ಡಿ ಪಡಿಸುತ್ತ ಕುಕೃತ್ಯಗಳು ನಡೆಸುತ್ತ ಇರುತ್ತಾರೆ ದೊಡ್ಡ ನಗರಗಳಲ್ಲಿ ಹೆಣ್ಮಕ್ಕಳು ಸಹ ನಾವು ಯಾರಿಗೇನು ಕಡಿಮೆ ಇಲ್ಲ ಎಂಬಂತೆ ವರ್ತಿಸುತ್ತಾರೆ.ಇಂತಹದೊಂದು ಘಟನೆ ಎರಡು ದಿನಗಳ ಹಿಂದೆ ಆಂಧ್ರದ ತಿರುಪತಿ ನಗರದಲ್ಲಿ ಇಂದಿರಾ ಪ್ರಿಯದರ್ಶಿನಿ ಮಾರುಕಟ್ಟೆ, ಕಾಟನ್ ಮಿಲ್ ಪ್ರದೇಶದಲ್ಲಿ ನಡೆದಿದ್ದು ಗಸ್ತಿನಲ್ಲಿದ್ದ ಪೊಲೀಸ್ ಸಿಬ್ಬಂದಿ ಮ್ಯಾಟ್ರಿಕ್ಸ್ ಥರ್ಮಲ್ 4…
ಮುರುಗ ಭಕ್ತರ ಮಾನಾಡು ಎಂಬ ಕಾರ್ಯಕ್ರಮವನ್ನು ಹಿಂದೂ ಮುನ್ನಾನಿ, ವಿಶ್ವ ಹಿಂದೂ ಪರಿಷತ್, ಬಿಜೆಪಿ ಮತ್ತು ಇತರ ಹಿಂದೂ ಸಂಘಟನೆಗಳು ಜಂಟಿಯಾಗಿ ಆಯೋಜಿಸಿದ್ದ ಆಧ್ಯಾತ್ಮಿಕ ಸಭೆ ಮಧುರೈನಲ್ಲಿ ನಡೆದಿದ್ದು ತಮಿಳುನಾಡಿನಲ್ಲಿ ಅತ್ಯಂತ ಭಕ್ತಿಯಿಂದ ಪೂಜಿಸುವ ದೇವರು ಮುರುಗ( ಸುಬ್ರಹ್ಮಣ್ಯ ಸ್ವಾಮಿ)ಹೆಸರಿನಲ್ಲಿ ಭಕ್ತರನ್ನು ಒಗ್ಗೂಡಿಸುವ, ಸನಾತನ ಧರ್ಮವನ್ನು ರಕ್ಷಿಸುವ ಮತ್ತು ಹಿಂದೂ ಐಕ್ಯತೆಯನ್ನು ಉತ್ತೇಜಿಸುವ ಉದ್ದೇಶದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಅಂದಾಜು 5 ಲಕ್ಷ ಭಕ್ತರು ಭಾಗವಹಿಸಿದ್ದರು ಎನ್ನಲಾಗಿದೆ.ಪವನ್ ಕಲ್ಯಾಣ್ ಏಕೆ ಹೋಗಿದ್ದರು?ಸನಾತನ ಧರ್ಮ ಸಂರಕ್ಷಣೆ ಕುರಿತು visionary ಇಟ್ಟುಕೊಂಡು ಅದೆ ದಾರಿಯಲ್ಲಿ ಸಾಗುತ್ತಿರುವ ಪವನ್ ಕಲ್ಯಾಣ್ ರಾಜಕೀಯದ image ಅಷ್ಟೆ ಅಲ್ಲದೆ ತಮಿಳುನಾಡಿನೊಂದಿಗೆ ಆಧ್ಯಾತ್ಮಿಕ ಸಂಪರ್ಕವನ್ನು ಹೊಂದಿದ್ದಾರೆ ಸನಾತನ ಧರ್ಮದ ಕುರಿತಾಗಿ ತಮಿಳುನಾಡು ರಾಜಕೀಯ ತಳಹದಿಗೆ ಸಹಕಾರಿಯಾಗಲಿದೆ ಎಂಬ ಉದ್ದೇಶ ಇಟ್ಟುಕೊಂಡ ಬಿಜೆಪಿ ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್ ಅವರು ಆಂಧ್ರದಲ್ಲಿ ಪವನ್ ಅವರನ್ನು ಖುದ್ದು ಭೇಟಿ ಮಾಡಿ ಮುಖ್ಯ ಭಾಷಣಕಾರನ್ನಾಗಿ ಭಾಗವಹಿಸಲು ಆಹ್ವಾನಿಸಿದ್ದರು.ಈ ಹಿಂದೆ ಡಿಎಂಕೆ ನಾಯಕ ಉದಯನಿಧಿ…
ಸಮಾಜದಲ್ಲಿನ ಕೆಲವು ಘಟನೆಗಳು ಬೆಚ್ಚಿಬಿಳಿಸುತ್ತಿವೆ ಮಾನವೀಯತೆ ಇಲ್ಲದೆ ವರ್ತನೆಗಳು ಸಮಾಜವನ್ನು ಎತ್ತ ಕೊಂಡೊಯುತ್ತಿದೆ ಎಂಬ ಪ್ರಶ್ನೆ ಏಳುತ್ತದೆ,ಇದಕ್ಕಿಂತ ಕೆಟ್ಟದ್ದೇನಾದರೂ ಇದೆಯೇ ಎಂಬ ಆತಂಕ ಕಾಡುತ್ತದೆ!ಹೈದರಾಬಾದ್ ನಗರದಲ್ಲಿ ನಡೆದಿರುವಂತ ಘಟನೆಯೊಂದು ಹತ್ತಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ ಹತ್ತನೇ ತರಗತಿಯ ವಿದ್ಯಾರ್ಥಿನಿ ತನ್ನ ಗೆಳೆಯನಿಗಾಗಿ ತನ್ನ ತಾಯಿಯನ್ನು ಕೊಂದಿದ್ದಾಳೆ.ಸಂಬಂಧಗಳು ಏನಾದವೂ ಜೀವನಕ್ಕೆ ತಾಯಿ ಅಡ್ಡ ಬರುತ್ತಾಳ ಬದುಕು ಯಾರಿಗಾಗಿ ಎಂಬ ಉತ್ತರ ಸಿಗದ ಪ್ರಶ್ನೆಗಳು ಸಮಾಜವನ್ನು ಕಾಡುತ್ತಿದೆ. ನ್ಯೂಜ್ ಡೆಸ್ಕ್:ಹತ್ತನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ತಾಯಿಯನ್ನು ಕೊಲೆ ಮಾಡಿದ್ದಾಳೆ. ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾದ ಪಗಿಲ್ಲಾ ಶಿವ (19) ಎಂಬುವನ ಜೊತೆ ಸೇರಿಕೊಂಡು ಹೆತ್ತಮ್ಮನನ್ನು ಕೊಂದಿದ್ದಾಲೆ ಹತ್ತನೆ ತರಗತಿ ಒದುತ್ತಿರುವ ವಿಧ್ಯಾರ್ಥಿನಿ.ಹೈದರಾಬಾದ್ ನಗರದ ಜೀಡಿಮೆಟ್ಲಾ ಪ್ರದೇಶದ ಎನ್.ಎಲ್.ಬಿ ನಗರದಲ್ಲಿ ಕ್ರೂರ ಘಟನೆ ನಡೆದಿದ್ದು ಸ್ಥಳೀಯ ಘಟನೆ ದಾಖಲಿಸಿಕೊಂಡಿದ್ದಾರೆ.ಹತ್ತನೆ ತರಗತಿ ಒದುತ್ತಿರುವ ವಿಧ್ಯಾರ್ಥಿನಿ ಅತಿಯಾದ ಇನ್ಸ್ಟಾಗ್ರಾಮ್ Reels ಹುಚ್ಚಿಗೆ ಬಿದಿದ್ದು ಇದೆ ಸಂಪರ್ಕದಲ್ಲಿ ಶಿವ ಎಂಬ ಯುವಕನ ಪರಿಚಯವಾಗಿ ನಿರಂತರ ಚಾಟಿಂಗ್ ನಲ್ಲಿ…
ಶ್ರೀನಿವಾಸಪುರ:ಸಾಂಪ್ರದಾಯಿಕ ಪ್ಯಾಕೇಟ್ ಮತ್ತು ಪತ್ರಗಳನ್ನು ತಲುಪಿಸುವುದರಲ್ಲಿ ಪರಿಣತಿಯನ್ನು ಹೊಂದಿದ್ದ ದಿ ಪ್ರೊಫೆಷನಲ್ ಕೊರಿಯರ್ ಈಗ ಬದಲಾದ ಕಾಲಘಟ್ಟದಲ್ಲಿ ಪಾರ್ಸಲ್ ಹಾಗು ಕಾರ್ಗೊ ಸೇವೆಗಳನ್ನು ನೀಡುವಲ್ಲಿ ದಾಪುಗಾಲು ಹಾಕುತ್ತ ಸಾಗಿದೆ ಎಂದು ದಿ ಪ್ರೊಫೆಷನಲ್ ಕೊರಿಯರ್ The Professional Couriers ಪ್ರಾದೇಶಿಕ ವ್ಯವಸ್ಥಾಪಕ ಮನೋಜ್ ಕುಮಾರ್ ಹೇಳಿದರು.ಅವರು ಪಟ್ಟಣದ ಕಿಟ್ ಕಂಪ್ಯೂಟರ್ ಸಂಸ್ಥೆ ಸಭಾಂಗಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ವ್ಯಾಪಾರಾಭಿವೃದ್ಧಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಪ್ರೊಫೆಷನಲ್ ಕೊರಿಯರ್ ಭಾರತದ ಅತಿದೊಡ್ಡ ಕೊರಿಯರ್ ಹಾಗು ಕಾರ್ಗೊ ಸಂಸ್ಥೆಯಾಗಿದೆ,ರಾಷ್ಟ್ರೀಯ ಅಂತರಾಷ್ಟೀಯ ಮಟ್ಟದಲ್ಲೂ ದುಬಾರಿಯಲ್ಲದ ಸೇವೆಗಳನ್ನು ಜನಸಾಮಾನ್ಯರಿಂದ ಬಹುರಾಷ್ಟ್ರೀಯ ಸಂಸ್ಥೆಯ ಗ್ರಾಹಕರಿಗೆ ಅನಕೂಲವಾಗುವಂತೆ ನೀಡುತ್ತಿದೆ.ವಿತರಣಾ ವ್ಯವಸ್ಥೆಯಲ್ಲಿ ಮುಂದಂಚಿನಲ್ಲಿರುವ ದಿ ಪ್ರೊಫೆಷನಲ್ ಕೊರಿಯರ್ ದೊಡ್ಡ ಮಟ್ಟದಲ್ಲಿ ಅತ್ಯಾಧುನಿಕ ಹಬ್ ಕೇಂದ್ರಗಳನ್ನು ಹೊಂದಿದ್ದು,ಆಧುನಿಕ ಸಂವಹನ ಜಾಲ ಇರುತ್ತದೆ ಸರಕುಗಳ ಸುಗಮ ಸಾಗಣಿಕೆಗೆ ವ್ಯವಸ್ಥಿತವಾದ ಸಾರಿಗೆ ವಾಹನಗಳ ಜಾಲವನ್ನು ದೊಡ್ಡಮಟ್ಟದಲ್ಲಿ ಹೊಂದಿರುವ ಸಂಸ್ಥೆಯಲ್ಲಿ ಬೃಹತ್ ಶೇಖರಣಾ ಗೋದಾಮುಗಳು ಇದೆ, ವ್ಯಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ಗ್ರಾಹಕರಿಗೆ ಸರಕು ವಿತರಣೆ ಮಾಡುವುದನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ…
ನ್ಯೂಜ್ ಡೆಸ್ಕ್:ಪ್ರಪಂಚ ಪ್ರಖ್ಯಾತ IT ಹಬ್ ಸಿಲಿಕಾನ್ ವ್ಯಾಲಿ ಎಂದು ಖ್ಯಾತಿ ಪಡೆದ ಬೆಂಗಳೂರು ನಗರದಲ್ಲಿ ಸಾವಿರಾರು ದೇವಾಲಯಗಳು ಇದೆ ಸಾವಿರಾರು ವರ್ಷಗಳ ಐತಿಹಾಸಿಕ ದೇವಾಲಯಗಳ ಜೊತೆಗೆ ಇತ್ತೀಚೆಗೆ ನಿರ್ಮಾಣವಾದ ಹಲವಾರು ದೇವಸ್ಥಾನಗಳನ್ನು ಗರ್ಭದಲ್ಲಿ ಅಡಗಿಸಿಕೊಂಡು ಇರುವ ಬೆಂಗಳೂರು ನಗರದಲ್ಲಿ ಮತ್ತೊಂದು ಶ್ರೀ ವೆಂಕಟೇಶ್ವರನ ದೇವಾಲಯ ನಿರ್ಮಾಣಕ್ಕೆ ತಿರುಮಲ ತಿರುಪತಿ ದೇವಾಲಯಂ ಟ್ರಸ್ಟ್(ಟಿಟಿಡಿ)ನಿರ್ಧಾರ ಮಾಡಿದೆ.ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಅಧ್ಯಕ್ಷತೆಯಲ್ಲಿ ತಿರುಮಲದಲ್ಲಿ ನಡೆದ ಟಿಟಿಡಿ ಟ್ರಸ್ಟಿಗಳಾದ ಮಂಡಳಿಯ ಸದಸ್ಯರು, ಇಒ ಶ್ಯಾಮಲಾ ರಾವ್, ಎಇಒ ವೆಂಕಯ್ಯ ಚೌಧರಿ ಮತ್ತು ಇತರರು ಈ ಸಭೆಯಲ್ಲಿ ಭಾಗವಹಿಸಿ ನಡೆಸಿದ ಸಭೆಯಲ್ಲಿ ಹಲವಾರು ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗಿದ್ದು ಇದರಲ್ಲಿ ಟಿಟಿಡಿ ಟ್ರಸ್ಟಿಗಳ ಮಂಡಳಿ ಹಲವಾರು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ.ಕರ್ನಾಟಕ ಸರ್ಕಾರದ ಕೋರಿದಂತೆ ಬೆಂಗಳೂರು ನಗರದಲ್ಲಿ ದೇವಾಲಯ ನಿರ್ಮಾಣಕ್ಕೆ ಅಹ್ವಾನ ಬಂದಿದ್ದು ಬೆಂಗಳೂರಿನ ಮಲ್ಲೇಶ್ವರಂ ವಯ್ಯಾಲಿಕಾವಲ್ ನಲ್ಲಿರುವ ಶ್ರೀವಾರಿ ದೇವಾಲಯ ಚಿಕ್ಕದಾಗಿದ್ದು, ಬೃಹತ್ ದೇವಾಲಯ ನಿರ್ಮಿಸಬೇಕೆಂದು ಕರ್ನಾಟಕ ಸರ್ಕಾರದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿನಂತಿಸಿದ್ದು…
ಕೋಲಾರ:ಕೋಲಾರ ನಗರಸಭೆ ನೂತನ ಪೌರಾಯುಕ್ತರಾಗಿ ನವೀನ್ ಚಂದ್ರ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ, ಶ್ರೀನಿವಾಸಪುರ ಪುರಸಭೆಯಲ್ಲಿ ಮುಖ್ಯವ್ಯಸ್ಥಾಪಕರಾಗಿದ್ದ ನವೀನ್ ಚಂದ್ರ ಕೋಲಾರ ನಗರ ಸಭೆ ಆಯುಕ್ತರಾಗಿ ನಿಯಮಿತರಾಗಿದ್ದಾರೆ. ಶ್ರೀನಿವಾಸಪುರ ಮುಖ್ಯಾಧಿಕಾರಿ ವಿ. ನಾಗರಾಜು,ಶಂಕರ್,ಪರಿಸರ ಅಭಿಯಂತರ ಹಾಗು ಕೋಲಾರ ನಗರಸಭೆ ಸಿಬ್ಬಂದಿ ನೂತನ ಪೌರಾಯುಕ್ತರಿಗೆ ಶುಭ ಕೋರಿದರು.
ನ್ಯೂಜ್ ಡೆಸ್ಕ್:ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು ಕರ್ನಾಟಕದ ಮಾವು ಬೆಳೆಗಾರರು ಎದರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಪಡುತ್ತಿರುವ ತೊಂದರೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.ನಿಮ್ಮ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದಾಗಿ ನಮ್ಮ ರಾಜ್ಯದ ಮಾವಿನ ರೈತರು ಇನ್ನಿಲ್ಲದಂತೆ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿರುವ ಅವರು ಕರ್ನಾಟಕದಲ್ಲಿ ಬೆಳೆದ ತೋತಾಪುರಿ ಮಾವಿನ ಹಣ್ಣುಗಳನ್ನು ಚಿತ್ತೂರು ಜಿಲ್ಲೆಯ ತಿರಳು ಫ್ಯಾಕ್ಟರಿಗಳಿಗೆ ಮಾರಾಟ ಮಾಡುವುದು ಮೊದಲಿನಿಂದಲು ಬಂದಿರುವ ಸಂಪ್ರದಾಯ ಎಂದು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು ಚಿತ್ತೂರು ಜಿಲ್ಲಾಧಿಕಾರಿ ಕರ್ನಾಟಕದಿಂದಿಂದ ಬರುವ ಮಾವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ ಇದರೊಂದಿಗೆ ಆಂಧ್ರದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಮತ್ತು ಮಾರುಕಟ್ಟೆ ಇಲಾಖೆಗಳ ಅಧಿಕಾರಿಗಳ ಸಮೂಹ ಕರ್ನಾಟಕ-ಆಂಧ್ರದ ಗಡಿಯಲ್ಲಿ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿ ತಪಾಸಣೆ ಮಾಡುತ್ತಿದ್ದಾರೆ ಎಂದು ವಿವರಿಸಿರುವ ಸಿದ್ದರಾಮಯ್ಯನವರು ಇದರಿಂದ ಕರ್ನಾಟಕದ ಮಾವಿನ ರೈತರಿಗೆ ತೊಂದರೆಯಾಗಿದೆ, ನಮ್ಮ ಕರ್ನಾಟಕ ರಾಜ್ಯದ ರೈತರು ಬಹಳ ವರ್ಷಗಳಿಂದ ಸೌಹಾರ್ದತೆಯಿಂದ ಚಿತ್ತೂರು ಜಿಲ್ಲೆಯ ಸಂಸ್ಕರಣ ಘಟಕಗಳಿಗೆ ಮತ್ತು…


