ನ್ಯೂಜ್ ಡೆಸ್ಕ್:ರಿಲ್ಸ್ ಮಾಡಿ ಅದನ್ನು Instagram ನಲ್ಲಿ ಪೋಸ್ಟ್ ಮಾಡಲು ಹುಚ್ಚಿಗೆ ಬಿದ್ದ ಯುವಕನೊಬ್ಬ ಜಲಪಾತದಲ್ಲಿ ನೈಜತೆ ತೋರಿಸುವ ಆತುರುದಲ್ಲಿ ಧುಮ್ಮಿಕ್ಕಿ ಹರಿಯುವ ಜಲಪಾತದಲ್ಲಿ ಬಿದ್ದು ಸಾವನಪ್ಪಿರುವ ಘಟನೆ ಆಂಧ್ರದ ಪಲಮನೇರು ಸಮೀಪ ಇರುವಂತ ಕಲ್ಯಾಣರೆವು ಜಲಪಾತದಲ್ಲಿ ನಡೆದಿದೆ.
ಮೃತ ಯುವಕನನ್ನು ಪಲಮನೇರು ಚಿಕನ್ ಅಂಗಡಿಯ ನೌಕರ ಯೂನಸ್ (24) ಎಂದು ಗುರುತಿಸಲಾಗಿದೆ.ಕಳೆದ ಐದಾರು ದಿನಗಳ ಹಿಂದೆ ತನ್ನ ಸ್ನೇಹಿತರೊಂದಿಗೆ ಕಲ್ಯಾಣರೆವು ಜಲಪಾತಕ್ಕೆ ಹೋಗಿದ್ದ ಅಲ್ಲಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ನೀರು ದುಮ್ಮಿಕ್ಕುವುದನ್ನು ನೈಜವಾಗಿ ತೋರಿಸಲು ರೀಲ್ಸ್ ಮಾಡಲು ಮಾಡಲು ಹೋಗಿ ಆಯಾ ತಪ್ಪಿ ಜಲಪಾತದಲ್ಲಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ,ಅವನ ಕಿರುಚಾಟ ಕೇಳಿ ಅವನ ಸ್ನೇಹಿತರು ಅವನಿಗೆ ಸಹಾಯ ಮಾಡಲು ಪ್ರಯತ್ನಿಸಿದ್ದಾರೆ ಸ್ನೇಹಿತರ ಮುಂದೆಯೆ ಯುವಕ ನೀರಿನ ರಭಸದಲ್ಲಿ ಕೊಚ್ಚಿಹೋಗಿದ್ದಾನೆ ಇದನ್ನು ನೊಡುತ್ತಿದ್ದ ಸ್ನೇಹಿತರು ಹಿಂದೆ ಸರಿದಿದ್ದಾರೆ.
ಇತ್ತಿಚಿಗೆ ಬಿಡದೆ ಸುರಿಯುತ್ತಿರುವ ಮಳೆಯಿಂದ ಮುಳಬಾಗಿಲಿನ ನಂಗಲಿ ಸುತ್ತಮುತ್ತಲಿನಿಂದ ಹರಿಯುವ ಕೌಂಡಿನ್ಯ ನದಿ ನೀರಿನ ಹರಿವು ಹೆಚ್ಚಾಗಿರುವ ಹಿನ್ನಲೆಯಲ್ಲಿ ಕಲ್ಯಾಣರೆವು ಜಲಪಾತದಲ್ಲಿ ಪ್ರಸ್ತುತ ನೀರಿನ ಹರಿವು ಜೋರಾಗಿದೆ.
ಮೃತ ಯೂನಸ್ ತುಂಬಾ ಉತ್ಸುಕನಾಗಿ ನೀರಿಗೆ ಹಾರುವ ಮೊದಲು ತನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿರುವುದು ಕಂಡುಬರುತ್ತದೆ. ಆದರೆ ಹಾರಿದ ಕೆಲವೇ ಕ್ಷಣಗಳಲ್ಲಿ, ಹರಿಯುವ ನೀರು ಆಪೋಷನ ತಗೆದುಕೊಂಡಿದೆ ಮೇಲಕ್ಕೆ ಏರಲು ಪ್ರಯತ್ನಿಸಿದನಾದರು ನೀರಿನ ಹರಿವು ಜೋರಾಗಿದ್ದ ಕಾರಣ ಕೊಚ್ಚಿ ಹೋಗಿದ್ದಾನೆ.ಘಟನೆ ನಡೆದು ಸುಮಾರು ಐದಾರು ದಿನ ಕಳೆದರು ಮೃತ ಯುವಕನ ಶವ ಸಿಕ್ಕಿಲ್ಲ ಎನ್ನಲಾಗುತ್ತಿದೆ
ಎಲ್ಲಿದೆ ಕಲ್ಯಾಣರೆವು ಜಲಪಾತ?
ಕಲ್ಯಾಣರೆವು ಜಲಪಾತ ಆಂಧ್ರದ ಗಡಿಯಾಚಗಿನ ಪಲಮನೇರು ಪಟ್ಟಣಕ್ಕೆ 15 km ದೂರದಲ್ಲಿ ಇದ್ದರೆ ಮುಳಬಾಗಿಲಿಗೆ ಸುಮಾರು 50 km ದೂರದಲ್ಲಿದೆ ಇದಕ್ಕೆ ಕರ್ನಾಟಕದ ಕುರುಡುಮಲೆ ಬಳಿ ಹುಟ್ಟುವ ಕೌಂಡಿನ್ಯ ನದಿ (ಪಾಲಾರ್ ನದಿಯ ಉಪನದಿ) ಮಳೆಯಾದರೆ ಹರಿಯುವ ಕೌಂಡಿನ್ಯ ನದಿ ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಹರಿಯುತ್ತದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



