ನೂಜ್ ಡೆಸ್ಕ್:ಎಣ್ಣೆ ಹೊಡೆದವರು ಯಾವುದೆ ಸಾಹಸ ಮಾಡಲು ಹಿಂಜರಿಯುವುದಿಲ್ಲ ತಮಗೆ ತಾವೆ ಮಹಾರಾಜರಂತೆ ವರ್ತಿಸುತ್ತಾರೆ ತೆಲಗು ಸಿನಿಮಾ ಗಬ್ಬರ್ ಸಿಂಗ್ ನ ಹಾಡು “ಮಂದು ಬಾಬುಲಮ್ ಮೆಮು ಮಂದು ಬಾಬುಲಯ್ ಮಂದು ಕೊಡಿತೆ ಮಾಕು ಮೇಮೆ ಮಹಾರಾಜುಲಮ್” ಎನ್ನುವಂತೆ ಮದ್ಯ ಕುಡಿದವರ ವರ್ತನೆಗಳನ್ನು ಡೈಲಾಗ್ ಬಗ್ಗೆ ಹೇಳುತ್ತ ಹೋದರೆ ದಿನ ಸಾಲದು ತಮಗೆ ಇಷ್ಟ ಬಂದಂತೆ ವರ್ತಿಸುತ್ತಾರೆ ಇವರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಲೆಕ್ಕವಿಲ್ಲದಷ್ಟು ವೀಡಿಯೊಗಳಿವೆ. ಇಷ್ಟೆಲ್ಲ ಯಾಕೆ ಪ್ರಸ್ತಾವನೆ ಅಂದರೆ ಇತ್ತೀಚೆಗೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯಲ್ಲಿ ಕುಡುಕನೊಬ್ಬ ಘೋರ ಪ್ರಮಾದ ಮಾಡಿದ್ದಾನೆ ಸದ್ಯ ಯಾವುದೆ ಸಾವು ನೋವು ಆಗಿಲ್ಲ.
ಎಣ್ಣೆ ಹೊಡೆದ ವ್ಯಕ್ತಿಯೊಬ್ಬ ಒಬ್ಬಂಟಿಯಾಗಿ ಬಸ್ ನಿಲ್ದಾಣಕ್ಕೆ ಹೋಗಿ ಕೊತ್ತಚರವು-ಹಿಂದೂಪುರ ಬಸ್ ಹತ್ತಲು ಬಂದಿದ್ದಾನೆ ನಂತರ ಬಸ್ ಕೆಳಗೆ ಹೋಗಿ ಸ್ಟಪನಿ ಟೈರ್ ಹಿಡಿದುಕೊಂಡು ಜೋತಾಡುತ್ತ ಇದ್ದಾನೆ ಬಸ್ ಚಲಿಸಿದೆ ಅದೂ ಕೂಡ ಒಂದು ಎರಡು ಕಿಲೋಮೀಟರ್ ಅಲ್ಲ.ಸುಮಾರು 15 ಕಿಲೋಮೀಟರ್ ಬಸ್ ಚಲಿಸಿದೆ ಬಸ್ ಚಲಿಸುತ್ತಿದ್ದರೆ ಬಸ್ ಹಿಂದೆ ಹೋಗುವರು ಟೈರ್ ಕೆಳಗೆ ಜೋತಾಡುತ್ತ ಇರುವುದನ್ನು ಗಮನಿಸಿ ಅಥವಾ ಕೆಲವು ವಾಹನ ಚಾಲಕರು ಬಸ್ ನಿಲ್ಲಿಸಿ ಚಾಲಕನ ಗಮನಕ್ಕೆ ತಂದಿದ್ದಾರೆ ವಿಷಯ ತಿಳಿದ ಚಾಲಕ ಬಸ್ ನಿಲ್ಲಿಸಿ ಬಸ್ಸಿನ ಕೆಳಗೆ ನೇತಾಡುತ್ತಿದ್ದ ವ್ಯಕ್ತಿ ಬಸ್ಸಿನ ಕೆಳಗಿರುವ ಬಿಡಿ ಟೈರ್ ಹಿಡಿದಿದ್ದು ಬಸ್ ಚಾಲಕ ಅವನನ್ನು ಎಳೆದು ಹಾಕಿದ್ದಾನೆ.ಕುಡುಕನ ಮೋಜೋ ಮಸ್ತಿನೋ ಅದೃಷ್ಟವಶಾತ್,ಬದುಕುಳಿದಿರುವುದೆ ಪವಾಡ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



