ತಿರುಮಲ(ಆಂಧ್ರಪ್ರದೇಶ): ಕಲಿಯುಗದ ಪ್ರತ್ಯಕ್ಷ ದೇವ ವೈಕುಂಠದ ತಿರುಮಲ ಶ್ರೀ ವೆಂಕಟೇಶ್ವರನ ದರುಶನಕ್ಕೆ ಭಕ್ತರ ಸಂಖ್ಯೆ ಶನಿವಾರ ಸಾಧಾರಣವಾಗಿತ್ತು. ಕೋವಿಡ್ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಸೀಮಿತ ಸಂಖ್ಯೆಯ ಭಕ್ತರಿಗೆ ದೇವರ ದರುಶನಕ್ಕೆ ಅವಕಾಶ ನೀಡುತ್ತಿದೆ.
![](https://www.vcsnewz.com/wp-content/uploads/2020/12/790.jpg)
ಶನಿವಾರ 37,370 ಭಕ್ತರು ನಿನ್ನೆ ಶ್ರೀನಿವಾಸನ ದರುಶನ ಪಡೆದರು ಹುಂಡಿ ಆದಾಯ 2.23 ಕೋಟಿ ರೂ. ಶೇಖರಣೆಯಾಗಿದ್ದು, 14,858 ಭಕ್ತರು ಭಗವಂತನಿಗೆ ತಲೆ ಕೂದಲು ಅರ್ಪಿಸಿರುವುದಾಗಿ ದೇವಾಲಯ ಅಡಳಿತ ಮಂಡಳಿ ಹೇಳಿದೆ.