ಶ್ರೀನಿವಾಸಪುರ:ಉದ್ದೇಶಿತ ಯದರೂರು ಕೈಗಾರಿಕೆ ವಲಯ ನಿರ್ಮಾಣ ಸಂಬಂದ ಜಮೀನು ಸರ್ವೆ ಮಾಡಲು ಬಂದಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ)Karnataka Industrial Areas Development Board ಅಧಿಕಾರಿಗಳ ವಾಹನ ತಡೆದ ರೈತರ ಗುಂಪು ಸರ್ವೆ ಮಾಡಲು ಅವಕಾಶ ನೀಡದೆ ವಾಪಸ್ಸು ಕಳುಹಿಸಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಯದರೂರು ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳಾದ ಶ್ರೀನಾಥ್ ಮತ್ತು ಮಂಜುನಾಥ್ ಆಗಮಿಸಿದ ವೇಳೆ ಅವರನ್ನು ಸ್ಥದಲ್ಲಿದ್ದ ಕೆಲ ರೈತರು ಬೈದು ಗಲಾಟೆ ಮಾಡಿ ಒಂದಿಂಚು ಜಮೀನು ಕೊಡಲ್ಲ ಎಂದು ಆಕ್ರೋಶ ಭರಿತರಾಗಿ ಮಾತನಾಡಿ ಬೆದರಿಸಿದ್ದಾರೆ ಎನ್ನಲಾಗಿದ್ದು.ರೈತರಿಗೆ ಯಾವುದೇ ಮಾಹಿತಿ ನೀಡದೆ ಸರ್ವೇ ಮಾಡಲು ಬಂದಿರುವುದು ತಪ್ಪು ಎಂದು ಅಧಿಕಾರಿಗಳನ್ನ ವಾಪಸ್ ಕಳಿಸಿದರು.
ಕೆಐಎಡಿಬಿ ಅಧಿಕಾರಿಗಳನ್ನು ಕಾರಿನಿಂದ ಇಳಿಯಲು ಬಿಡದೆ ವಾಗ್ವಾದಕ್ಕೆ ಇಳಿದ ರೈತರು ಮಾತಿನ ಚಕಮಕಿ ನಡೆಸಿದಲ್ಲದೆ ಪ್ರಾಣ ಬಿಟ್ಟೆವು ಜಮೀನು ಕೊಡುವುದಿಲ್ಲ.ನಿಮ್ಮ ವಾಹನಗಳನ್ನು ಸುಟ್ಟುಹಾಕುತ್ತೇವೆ ಎಂದು ತೀವ್ರವಾಗಿ ಎಚ್ಚರಿಕೆನೀಡಿದ್ದಾರೆ.
ಯದರೂರು ಕಂದಾಯ ವೃತ್ತದಲ್ಲಿ ಕೈಗಾರಿಕ ವಲಯ
ಯದರೂರು ಕಂದಾಯ ವ್ಯಾಪ್ತಿಯಲ್ಲಿ ಕೈಗಾರಿಕಾ ವಲಯ ನಿರ್ಮಿಸಲು ಕೆಐಎಡಿಬಿKIADB Industrial Areas ಯದರೂರು ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರ ಭೂಮಿ ವಶಪಡಿಸಿಕೊಂಡು ಹಾಗೂ ಅಭಿವೃದ್ಧಿ ಮಾಡುವ ಸಂಬಂಧ ನೋಟಿಫಿಕೇಶನ್ ಜಾರಿ ಮಾಡಿದ್ದು ಶ್ರೀನಿವಾಸಪುರದ ಉಪನೋಂಣಾಧಿಕಾರಿಗಳ ಕಚೇರಿಯಲ್ಲಿ ಜಮೀನುಗಳ ಪರಭಾರೆಯನ್ನು ಸ್ಥಗಿತಗೊಳಿಸಿ ಆದೇಶಿಸಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



