ಶ್ರೀನಿವಾಸಪುರ:ಫಸಲ್ ಭೀಮಾ ಯೋಜನೆಯಲ್ಲಿ ಎಚ್ ಡಿ ಎಫ್ ಸಿ ಇರುಗೊ ಬೆಳೆ ವಿಮಾ ಸಂಸ್ಥೆ ಬೆಳೆ ನಷ್ಟದ ಪರಿಹಾರ ವಿತರಿಸದೆ ಮಾವು ಬೆಳೆಗಾರರಿಗೆ ವಂಚನೆ ಮಾಡಿದೆ ಎಂದು ಆರೋಪಿಸಿ ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಡಿಸೆಂಬರ್8 ರಂದು ಗುರುವಾರ ಶ್ರೀನಿವಾಸಪುರ ತಾಲೂಕು ಬಂದ್ ಮಾಡಲಾಗುವುದು ಎಂದು ಕೋಲಾರ ಜಿಲ್ಲಾ ಮಾವು ಬೆಳೆಗಾರ ಸಂಘದ ಅಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಹೇಳಿದರು ಅವರು ಕೋಲಾರ ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿಯ ಜಿಲ್ಲಾಮಟ್ಟದ ವಿಸ್ತೃತ ಸಭೆಯಲ್ಲಿ ಪಾಲ್ಗೋಂಡು ಮಾತನಾಡಿ ಶ್ರೀನಿವಾಸಪುರ ಬಂದ್ ಬೆಂಬಲಿಸಲು ಡಿಸೆಂಬರ್8 ರಂದು ಕೋಲಾರ ಜಿಲ್ಲೆಯ 5 ತಾಲೂಕು ಕೇಂದ್ರಗಳಲ್ಲಿ ಮಾವು ಬೆಳೆಗಾರರು ಮತ್ತು ರೈತರು ತಾಲೂಕು ಕಚೇರಿಗಳ ಮುಂದೆ ಪ್ರತಿಭಟನೆ ಮಾಡಿ ಬಂದಗೆ ಬೆಂಬಲ ವ್ಯಕ್ತಪಡಿಸುವ ಮನವಿ ಮಾಡಿದರು.ಮಾವು ಬೆಳೆಗಾರರಿಗೆ ಮೋಸವಾಗಿರುವುದು ಮತ್ತು ಬೆಲೆ ನಷ್ಟ ಪರಿಹಾರದಲ್ಲಿ ರಾಜ್ಯ ಸರ್ಕಾರದಿಂದ ಸಮರ್ಪಕವಾಗಿ ವಿತರಣೆ ಮಾಡದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದರು.ಮಾವು ಬೆಳೆಗಾರರು ರೈತರು ಹಾಗು…
Author: Srinivas_Murthy
ನ್ಯೂಜ್ ಡೆಸ್ಕ್:ಆರ್ಥಿಕವಾಗಿ ಸಾಮಾಜಿಕವಾಗಿ ಅನಕೂಲವಂತರಾಗಿದ್ದರು ಉತ್ತಮ ಕುಟುಂಬದ ಹಿನ್ನಲೆ ಇದ್ದು ಯುಕ್ತವಯಸ್ಸು ಎಲ್ಲವೂ ಸರಿಯಿದ್ದರೂ ಯುವಕರಿಗಾಗಲಿ ಯುವತಿಯರಿಗಾಗಲಿ ಮದುವೆ ವಿನಾ ಕಾರಣ ವಿಳಂಬವಾಗುತ್ತಿರುತ್ತದೆ ಇನ್ನೇನೂ ಮದುವೆ ಮಾತುಕತೆ ಎಲ್ಲ ಮುಗಿಯಿತು ಅನ್ನುವ ಸಮಯದಲ್ಲಿ ಎಷ್ಟೋ ಸಂಬಂಧಗಳು ಕ್ಯಾನ್ಸಲ್ ಆಗಿರುವ ಉದಾಹರಣೆಗಳು ಇವೆ ಇದರಿಂದ ಅಂತಹ ಕುಟುಂಬಗಳಲ್ಲಿ ಯುವಕ ಅಥಾವ ಯುವತಿಯೇ ಅಲ್ಲ ಅವರ ಪೋಷಕರು ಮಾನಸಿಕವಾಗಿ ಕ್ಷೋಭೆಗೆ ಒಳಗಾಗುವುದು ಸಾಮನ್ಯ ವಿಚಾರ ಇದಕ್ಕೆ ಒಂದಲ್ಲ ಎರಡಲ್ಲ ಹಲವಾರು ಕಾರಣಗಳು ದೋಷಗಳು ಕಾರಣ ಎನ್ನುತ್ತಾರೆ ಜ್ಯೋತಿಷ್ಯರು ಗ್ರಹ ದೋಷ,ತಾರಬಲ ಕೂಡಿಬಾರದ ದೋಷ, ಜನ್ಮನಕ್ಷತ್ರ ದೋಷ ಒಂದಲ್ಲ ಎರಡಲ್ಲ ಹಲವಾರು ದೋಷಗಳಿಗೂ ವರಾಹರೂಪದ”ನಿತ್ಯ ಕಲ್ಯಾಣ ಪೆರುಮಾಳ್ ದರ್ಶಿಸಿದರೆ ಪರಿಹಾರ ಸಿಗುತ್ತದೆ ಎಂಬುದು ಇಲ್ಲಿ ದರ್ಶನ ಪಡೆದವರ ಅನುಭವದ ಮಾತು.ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿರುವ ನಿತ್ಯ ಕಲ್ಯಾಣ ಪೆರುಮಾಳ್ ದೇವಸ್ಥಾನದಲ್ಲಿ ಪೆರುಮಾಳ್ ಅಂದರೆ ಶ್ರೀ ಮಹಾ ವಿಷ್ಣು. ಜತೆಗೆ ಲಕ್ಷ್ಮಿ ಇರುವಂತ ವರಾಹ ದೇವರ ಸನ್ನಿಧಿ. ಮದುವೆ ತಡವಾಗುತ್ತಿರುವ ಯುವಕ ಯುವತಿಯರು ಜೀವನ ಸಂಗಾತಿಯನ್ನು ಹುಡುಕುತ್ತಿರುವ ಜನರು…
ಶ್ರೀನಿವಾಸಪುರ:ತಾಲೂಕಿನ ಸೋಮಯಾಜಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಪೆಗಳಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಾಮಿಕ ಶಾಲೆಯಲ್ಲಿ ಹುಳ ಬಿದ್ದ ಅಕ್ಕಿಯಲ್ಲಿ ಅಡುಗೆ ಮಾಡಿದ್ದು ಅದನ್ನೇ ವಿದ್ಯಾರ್ಥಿಗಳು ತಿನ್ನುತ್ತಿದ್ದಾರೆಂಬ ಆರೋಪಕ್ಕೆ ಸಂಬಂದಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾರೆಡ್ಡಿ ಸ್ಪಂದಿಸಿದ್ದು ಅಕ್ಕಿಯಲ್ಲಿ ಉಳ ಬಿದ್ದಿಲ್ಲ ಸಾರಿಗೆ ಬಳಸುವ ಬೆಳೆಯಲ್ಲಿ ಮಾತ್ರ ಮೂಕುಳಗಳು ಬಂದಿದೆ ಅದು ಸಹ ಹೊಸದಾಗಿ ಬಂದಿರುವ ಸ್ಟಾಕ್ ನಲ್ಲಿ ಇಲ್ಲ ಹಳೆಯ ಸ್ಟಾಕ್ ನ ಬೆಳೆಯಲ್ಲಿ ಹುಳ ಇದ್ದು ಅದನ್ನು ಹಳೆಯ ಬೇಳೆಯ ಪೊಟ್ಟಣದ ಜೊತೆಯಲ್ಲಿ ಇಟ್ಟ ಪರಿಣಾಮ ಬೆಳೆ ಹಾಗು ಅಕ್ಕಿ ಮೂಟೆ ಮೇಲೂ ಹರಿದಾಡಿದೆ ಎಂದು ಶಾಲಾ ಸಿಬ್ಬಂದಿ ತಿಳಿಸಿದ್ದಾರೆ ಇದಕ್ಕೆ ಸಂಬಂದಿಸಿದಂತೆ ವರದಿ ನೀಡುವಂತೆ ಅಕ್ಷರದಾಸೋಹದ ಸಹಾಯಕ ನಿರ್ದೇಶಕರಾದ ಸೊಲೋಚನ ಅವರಿಗೆ ಸೂಚಿಸಲಾಗಿದೆ ಅವರು ಇಂದು ಶನಿವಾರ ಮುಂಜಾನೆಯೇ ಪೆಗಳಪಲ್ಲಿ ಶಾಲೆಗೆ ತೆರಳಿದ್ದಾರೆ ಅವರು ನೀಡುವ ವರದಿಯಂತೆ ಶಾಲಾ ಸಿಬ್ಬಂದಿಯ ವಿರುದ್ದ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಶ್ರೀನಿವಾಸಪುರ:ಯಾರು ಏನೆ ಅಪಪ್ರಚಾರ ಮಾಡಿದರು ಯಾವುದೇ ಕಾರಣಕ್ಕೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಹೋಗುವ ಪ್ರಶ್ನೆ ಇಲ್ಲ ನನ್ನನ್ನು ಬೆಂಬಲಿಸುವ ಮುಖಂಡರ ಅಭಿಪ್ರಾಯದಂತೆ 2023 ಚುನಾವಣೆಯಲ್ಲಿ ಸ್ಪರ್ದಿಸುವುದು ಗ್ಯಾರಂಟಿ ಎಂದು ಗುಂಜೂರುಶ್ರೀನಿವಾಸರೆಡ್ಡಿ ಹೇಳಿದರು ಅವರು ಇಂದು ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರನ್ನು ತಮ್ಮ ಬಣಕ್ಕೆ ಸೇರ್ಪಡೆಮಾಡಿಕೊಂಡು ಮಾತನಾಡಿದರು ಕ್ಷೇತ್ರವನ್ನು ಕಳೆದ ನಲವತ್ತು ವರ್ಷಗಳಿಂದ ನಿರ್ಲಕ್ಷ್ಯಸಿದ ಪರಿಣಾಮ ಅಭಿವೃದ್ದಿಯಲ್ಲಿ ಹಿಂದುಳಿದಿದೆ ಇಲ್ಲಿನ ಜೀವನಾಡಿ ಬೆಳೆಯಾದ ಮಾವಿಗೆ ಶಾಶ್ವತ ಮಾರುಕಟ್ಟೆ ಒದಗಿಸಲು ಸಾದ್ಯವಾಗಿಲ್ಲ ರೈತಾಪಿ ಜನರ ಬವಣೆ ತಿರಿಸಲು ಪ್ರಯತ್ನವೆ ನಡೆಸದ ಇಲ್ಲಿ ಆಡಳಿತ ನಡೆಸುವಂತವರು ನೀರು ತಂದಿದ್ದೇವೆ ಎಂದು ಕ್ಷೇತ್ರದ ಜನರನ್ನು ಯಾಮಾರಿಸಲು ಹೋರಟಿದ್ದಾರೆ ಇವರ ನಿಜಸ್ವರೂಪ ಏನೆಂಬುದು ಮತ್ತು ನೀರಿನ ಗುಣಮಟ್ಟದ ಎಂತಹದು ಎಂದು ಅರಿತಿರುವ ಜನತೆ ತೀವ್ರವಾಗಿ ಬೇಸರ ಗೊಂಡಿದ್ದಾರೆ ನಾಲ್ಕುದಶಕಗಳ ರಾಜಕಾರಣದ ವಿರುದ್ದ ಮತದಾರರು ಹೊಸಬದಲಾವಣೆ ತರಬೇಕು ಎಂದು ಮುಂದಾಗಿದ್ದಾರೆ ಚುನಾವಣೆ ಹೊತ್ತಿಗೆ ಮತ್ತಷ್ಟು ಬದಲಾವಣೆ ಕ್ಷೇತ್ರದಲ್ಲಿ ಕಾಣಬಹುದಾಗಿದೆ ಎಂದು ಹೇಳಿದರು.ಕ್ಷೇತ್ರದಲ್ಲಿ ನನ್ನ ಪರವಾಗಿ ದೊರೆಯುತ್ತಿರುವ ಜನಬೆಂಬಲ ಕಂಡು ಕೆಲ…
ಶ್ರೀನಿವಾಸಪುರ:ಕೆಸಿ ವ್ಯಾಲಿ ನೀರನ್ನು ಕೋಲಾರ ಜಿಲ್ಲೆಗೆ ಕೊಡಲೆ ಬೇಕು ಎಂದು ಇದ್ದರೆ ಪರಿಣಾಮಕಾರಿಯಾಗಿ ಮೂರನೆ ಹಂತದ ಶುದ್ಧೀಕರಣ ಮಾಡಿ ಹರಿಸುವ ಮೂಲಕ ಈ ಭಾಗದ ಜನರಿಗೆ ಅಗಿರುವಂತ ಅನ್ಯಾಯವನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರಿಪಡಿಲಾಗುವುದು ಸಾದ್ಯವಾಗದಿದ್ದರೆ ಕೆಸಿ ವ್ಯಾಲಿ ಯೋಜನೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು ಅವರು ತಾಲೂಕಿನ ನಕ್ಕಲಗಡ್ದ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದು ಗ್ರಾಮಕ್ಕೆ ಹೋದಾಗ ತಡರಾತ್ರಿ 2 ಗಂಟೆಯಾಗಿದ್ದು ಮತ್ತು ಮಳೆ ಹಿನ್ನಲೆಯಲ್ಲಿ ಮರುದಿನ ಬುಧವಾರ ಮುಂಜಾನೆ ಗ್ರಾಮಸ್ಥರೊಂದಿಗೆ ಸಂವಾದ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಸಿ ವ್ಯಾಸಿ ಯೋಜನೆಯ ಎರಡನೆ ಹಂತದ ನೀರು ಶುದ್ಧೀಕರಣದ ಯಂತ್ರಗಳು ಕೆಟ್ಟು ನಿಂತಿದ್ದು ಬೆಂಗಳೂರಿನಿಂದ ನೀರು ನೇರವಾಗಿ ಹರಿದು ಬರುತ್ತಿದೆ ಬಿಜೆಪಿ ವಿರುದ್ದ 40 ಪರ್ಸಂಟೆಜ್ ಆರೋಪ ಮಾಡುವವರು ಈ ಯೋಜನೆಯಲ್ಲಿ ಎನೆಲ್ಲಾ ಅಕ್ರಮಗಳು ಮಾಡಿದ್ದಾರೆ ಎಂಬುದು ಗೊತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.ಬಿಜೆಪಿ ಸರ್ಕಾರಗಳ ವಿರುದ್ದ ತೀವ್ರವಾಗಿ ವಾಗ್ದಾಳಿನೆಲ ಜಲ ಸಂರಕ್ಷಣೆಯಲ್ಲಿ ಡಬಲ್ ಇಂಜಿನ್ ಸರ್ಕಾರ…
ಶ್ರೀನಿವಾಸಪುರ:ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀನಿವಾಸಪುರದ ಶಾಸಕ ರಮೇಶ್ ಕುಮಾರ್ ತಂಡ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪಿಸಿದರು ಅವರು ಶ್ರೀನಿವಾಸಪುರ ಪಟ್ಟಣದ ರಾಜಾಜಿ ರಸ್ತೆಯ ಚಿಂತಾಮಣಿ ವೃತ್ತದಲ್ಲಿ ಏರ್ಪಡಿಸಿದ್ದ ಪಂಚರತ್ನ ಯೋಜನೆ ರಥಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ಮುಖಂಡ ಮುನಿಯಪ್ಪನವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಧಿಕ್ಕರಿಸಿ ಇಲ್ಲೂ ಬಿಜೆಪಿಯನ್ನು ಗೆಲ್ಲಿಸಿದರು.ಸಿದ್ದರಾಮಯ್ಯ ರಮೇಶ್ ಕುಮಾರ್ ಚಿತಾವಣೆಯಿಂದ ನಾನು ಆಡಳಿತ ಕಳೆದುಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿತು ಇದರ ಪರಿಣಾಮ ಅಲ್ಲೆಲ್ಲೋ ಕರಾವಳಿಯಲ್ಲಿದ್ದಂತ ಹಿಜಾಬ್ ಹೆಸರಿನ ವಸ್ತ್ರ ಸಂವಿತೆ ಕೋಮು ಅಶಾಂತಿ ವಾತವರಣ ಇಡಿ ಕಾರ್ನಾಟಕಕ್ಕೆ ಹಬ್ಬಿತು ಧರ್ಮ ಸಂಘರ್ಷಕ್ಕೆ ಕಾರಣವಾಯಿತು ಸರ್ವ ಧರ್ಮಗಳ ಜನರ ನಡುವೆ ಇದ್ದ ಸೌಹಾರ್ದತೆ ಹಲಾಲ್ ಕಟ್ ಜಟ್ಕಾ ಕಟ್ ಎಂದು ಅಹಾರದ ಹೆಸರಿನಲ್ಲಿ ಧರ್ಮಸಂಘರ್ಷಕ್ಕೆ ಕಾರಣವಾಯಿತು ಇದಕ್ಕೆಲ್ಲ ನಿಮ್ಮೂರಿನ ಮಹಾನುಭಾವನ ಕುತಂತ್ರವೂ ಕಾರಣವಾಗಿದೆ ಎಂದು ದೂರಿದರು.ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರು ನಮ್ಮ…
ನ್ಯೂಜ್ ಡೆಸ್ಕ್: ಕರ್ನಾಟಕ ಸರ್ಕಾರ 2023ನೇ ಸಾಲಿನ ರಜಾದಿನಗಳ ಪಟ್ಟಿ ಬಿಡುಗಡೆ ಮಾಡಿದ್ದು 19 ಸಾರ್ವತ್ರಿಕ ರಜೆ ಒಳಗೊಂಡಂತೆ ಸರ್ಕಾರಿ ನೌಕರರಿಗೆ 17 ಪರಿಮಿತ ರಜಾದಿನಗಳು ಸೇರಿ ಒಟ್ಟು 36 ರಜೆಗಳನ್ನು ಘೋಷಿಸಲಾಗಿದೆ. ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದ್ದು, ಅದರ ವಿವರ ಹೀಗಿರುತ್ತದೆ.15.01.2023 ಮಕರ ಸಂಕ್ರಾಂತಿ26.01.2023- ಗಣರಾಜ್ಯೋತ್ಸವ18.02.2023- ಮಹಾ ಶಿವರಾತ್ರಿ22.03.2023- ಯುಗಾದಿ ಹಬ್ಬ3.04.2023- ಮಹಾವೀರ ಜಯಂತಿ7.04.2023- ಗುಡ್ ಫ್ರೈಡೆ14.04.2023-ಡಾ.ಬಿಆರ್.ಅಂಬೇಡ್ಕರ್ ಜಯಂತಿ1.05.2023- ಕಾರ್ಮಿಕ ದಿನಾಚರಣೆ29.06.2023- ಬಕ್ರೀದ್29.07.2023- ಮೊಹರಂ ಕಡೆ ದಿನ15.08.2023- ಸ್ವಾತಂತ್ರ್ಯ ದಿನಾಚರಣೆ18.09.2023- ಗಣೇಶ ಚತುರ್ಥಿ28.09.2023- ಈದ್ ಮಿಲಾದ್2.10.2023- ಗಾಂಧಿಜಯಂತಿ23.10.2023- ಮಹಾನವಮಿ, ಆಯುಧಪೂಜೆ24.10.2023- ವಿಜಯದಶಮಿ1.11.2023- ಕನ್ನಡ ರಾಜ್ಯೋತ್ಸವ14.11.2023- ಬಲಿಪಾಡ್ಯಮಿ, ದೀಪಾವಳಿ30.11.2023- ಕನಕದಾಸ ಜಯಂತಿ25.12.2023- ಕ್ರಿಸ್ಮಸ್ ಪರಿಮಿತ ರಜಾದಿನಗಳ ಪಟ್ಟಿ30.01.2023- ಮಧ್ಯ ನವಮಿ7.03.2023- ಷಬ್- ಎ- ಬರಾತ್8.03.2023- ಹೋಳಿ ಹಬ್ಬ.30.03.2023- ಶ್ರೀ ರಾಮನವಮಿ18.04.2023- ಷಬ್-ಎ-ಖದರ್21.04.2023- ಜಮಾತ್- ಉಲ್-ವಿದಾ25.04.2023- ಶ್ರೀ ಶಂಕರಾಚಾರ್ಯ ಜಯಂತಿ, ಶ್ರೀ ರಾಮಾನುಜಾಚಾರ್ಯ ಜಯಂತಿ5.2023-ಬುದ್ಧ ಪೂರ್ಣಿಮಾ25.08.2023- ವರಮಹಾಲಕ್ಷ್ಮಿ ವ್ರತ29.08.2023- ಋಗ್ ಉಪಕರ್ಮ, ತಿರು ಓಣಂ30.08.2023- ಯಜುರ್ ಉಪಕರ್ಮ31.08.2023- ಬ್ರಹ್ಮಶ್ರೀ ನಾರಾಯಣಗುರು…
ಶ್ರೀನಿವಾಸಪುರ: ತಾಲೂಕಿನ ಪಾತ ನೆಲವಂಕಿ ಗ್ರಾಮದಲ್ಲಿ ಜಿಲ್ಲಾಡಿತದ ನಡೆ ಹಳ್ಳಿಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಬಹುತೇಕ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಗ್ರಾಮ ವಾಸ್ತವ್ಯದಿಂದ ಅಂತರ ಕಾಪಾಡಿಕೊಂಡಂತೆ ಇತ್ತೆ ಇತ್ತು .ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತ ಸಾರ್ವಜನಿಕರ ಮನೆ ಬಾಗಿಲಿಗೆ ಎನ್ನುತ್ತಾರೆ ಇಲ್ಲಿನೋಡಿದರೆ ಸರ್ಕಾರಿ ಕಾರ್ಯಕ್ರಮದಲ್ಲಿ ಇಲಾಖೆ ಅಧಿಕಾರಿಗಳೆ ಬಾಗವಹಿಸದೆ ಹೋದರೆ ಕಾರ್ಯಕ್ರಮ ನಡೆಯುವುದಾದರೂ ಯಾರಿಗಾಗಿ ಎನ್ನುತ್ತಾರೆ ಜನತೆ.ತಾಲ್ಲೂಕಿನ ನೆಲವಂಕಿ ಹೋಬಳಿಯ ಪಾತ ನೆಲವಂಕಿ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ತಹಶೀಲ್ದಾರ್ ಶೀರಿನ್ ತಾಜ್ ಉದ್ಘಾಟಿಸಿದರಾದರೂ ಕಾರ್ಯಕ್ರಮದಲ್ಲಿ ಅಧಿಕಾರಿಗಳೆ ಇರಲಿಲ್ಲ,ದೂರು ದುಮ್ಮಾನಗಳೊಂದಿಗೆ ಬಂದಿದ್ದ ಸಾರ್ವಜನಿಕರು ಯಾರಿಗೆ ಹೇಳಿಕೊಳ್ಳಬೇಕುಸಮಾಜಕಲ್ಯಾಣ ಇಲಾಖೆ, ಪೋಲಿಸ್ ಇಲಾಖೆ, ಬಿ.ಇ.ಒ. ಎ.ಪಿ.ಎಂ.ಸಿ. ಸಾಮಾಜಿಕ ಅರಣ್ಯ ಮತ್ತು ವಲಯ ಅರಣ್ಯ ಇಲಾಖೆ, ಕೆ.ಎಸ್.ಆರ್.ಟಿ.ಸಿ, ಬಿ.ಸಿ.ಎಂ. ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್, ಸ್ಥಳಿಯ ಸಹಕಾರ ಸಂಘ ,ತಾಲ್ಲೂಕು ಆರೋಗ್ಯಾಧಿಕಾರಿ,ಮೀನಿಗಾರಿಕೆಇಲಾಖೆ, ಭೂ ದಾಖಲೆಗಳ ಇಲಾಖೆ ಅಧಿಕಾರಿಗಳ ಸುಳಿವು ಇಲ್ಲದಾಗಿತ್ತು ರಾಜ್ಯ ಬಿಜೆಪಿ ಸರ್ಕಾರದ ಮಹತ್ತರ ಎನ್ನುವಂತ ಜಿಲ್ಲಾಧಿಕಾರಿಗಳ ಗ್ರಾಮ…
ಶ್ರೀನಿವಾಸಪುರ:ಗದ್ದಲ ಕೂಗಾಟ ಅರಚಾಟಗಳ ನಡುವೆಯೂ ಪುರಸಭೆಯ ವಿಶೇಷ ಸಭೆಯಲ್ಲಿ ಮೂರು ವಿಷಯಗಳಿಗೆ ಒಪ್ಪಿಗೆ ಪಡೆಯಲಾಯಿತು,ಮತ್ತು ಶಾಸಕರು ಶಿಫಾರಸ್ಸು ಮಾಡಿದ್ದ ಯೋಗಿನಾರಯಣ ಪ್ರತಿಮೆ ಸ್ಥಾಪಿಸಲು ಸಭೆ ನಿರ್ಣಯಿಸಿತು.ಸಾಮಾನ್ಯ ಸಭೆ ನಡಸದೆ ನಿಮ್ಮ ಅಗತ್ಯಗಳಿಗೆ ವಿಶೇಷಸಭೆ ಕರೆದು ನಿಮ್ಮ ಅನಕೂಲಗಳನ್ನು ನೋಡಿಕೊಳ್ಲುತ್ತಿದ್ದಿರಿ ಎಂದು ಸದಸ್ಯ ರಾಜು ಪುರಸಭೆ ಮುಖ್ಯಾಧಿಕಾರಿ ಜಯರಾಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದಾಗ ಸದಸ್ಯ ಅನಂದಗೌಡ ರಸೂಲು ಮುಂತಾದವರು ಸಾಥ್ ನೀಡಿದರು ಈ ಸಂದರ್ಭದಲ್ಲಿ ಸಭೆಯಲ್ಲಿ ಗದ್ದಲ ಶುರುವಾಯಿತು ಸದಸ್ಯರ ಕೂಗಾಟ ಎಲ್ಲೆ ಮೀರಿತು ಇದರ ನಡುವೆ ಅಡಳಿತ ಪಕ್ಷದ ಭಾಸ್ಕರ್ ಪುರಸಭೆಯಲ್ಲಿ ಜೆಸಿಬಿ ಇದ್ದರು ಹೊರಗಡೆಯಿಂದ ಜೆಸಿಬಿ ಕರೆಸಿ ಕೆಲಸ ಮಾಡಿಸಿ ಅಕ್ರಮವಾಗಿ ಬಿಲ್ಲುಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದಾಗ ತೊತ್ಲಾಶಬ್ಬಿರ್ ಮುಂತಾದವರು ಹೌದು ಅಕ್ರಮಗಳು ನಡೆಯುತ್ತಿದೆ ಎಂದು ಕೂಗಾಡಿದರು.ನಾಮಿನಿ ಸದಸ್ಯ ನಲ್ಲಪಲ್ಲಿರೆಡ್ದೆಪ್ಪ ಮಾತನಾಡಿ ಪುರಸಬೆಗೆ ನೂತನವಾಗಿ ಸೇರಿಸಿಕೊಂಡಿರುವಂತ ಹಳ್ಳಿಗಳ ನಿವೇಶನ ಮನೆಗಳನ್ನು ಪುರಸಬೆಗೆ ಸೇರಿಸುವ ಕುರಿತಾಗಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು ಇದಕ್ಕೆ ಪಕ್ಷ ಬೇದ ಮರೆತು ಸದಸ್ಯರು ಬೆಂಬಲಿಸಿದಾಗ ಮುಖ್ಯಾಧಿಕಾರಿ ಈ…
ಶ್ರೀನಿವಾಸಪುರ : KSRTC ಬಸ್ಸುಗಳನ್ನು ಮದುವೆ ರಾಜಕೀಯ ಸಮಾವವೇಶಗಳಿಗೆ ಒಪ್ಪಂದದ ಮೇರೆಗೆದೊಡ್ದ ಸಂಖ್ಯೆಯಲ್ಲಿ ಬಸ್ಸುಗಳನ್ನು ಕಳೆಸುತ್ತಿರುವುದರಿಂದ, ಮಾರ್ಗದಲ್ಲಿ ರೆಗ್ಯೂಲರ್ ಆಗಿ ಒಡಾಡುತ್ತಿದ್ದ ಬಸ್ಸುಗಳಿಲ್ಲದೆ ಹಳ್ಳಿಗಾಡಿನ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಲು ಹಾಗು ಸಾರ್ವಜನಿಕರು ಪಟ್ಟಣ ಪ್ರದೇಶಗಳಿಗೆ ಒಡಾಡಲು ಪ್ರಯಾಸ ಪಡುವಂತಾಗಿದೆ ಎಂದು ಆರೋಪಿಸಿ ಕೂರಿಗೇಪಲ್ಲಿ ಮುದಿಮಡಗು ಭಾಗದ ವಿದ್ಯಾರ್ಥಿಗಳು ಹಾಗು ಸಾರ್ವಜನಿಕರು ತಮ್ಮ ಗ್ರಾಮಕ್ಕೆ ಬಂದಂತ ಬಸ್ ಅನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.ಶ್ರೀನಿವಾಸಪುರ ತಾಲೂಕಿನ ಬಹುತೇಕ ಗಡಿಯಂಚಿನ ಗ್ರಾಮಗಳಿಗೆ ಶ್ರೀನಿವಾಸಪುರ ಹಾಗು ಚಿಂತಾಮಣಿಯಿಂದ ಶಾಲಾ ಕಾಲೇಜು ಸಮಯಕ್ಕೆ ಬಸ್ ಗಳನ್ನು ಕೆ ಎಸ್ ಆರ್ ಟಿ ಸಿ ಒದಗಿಸಿದೆ. ಇತ್ತಿಚಿಗೆ ರಾಜಕೀಯ ಸಮಾವೇಶಗಳು ಇತರೆ ಖಾಸಗಿ ಕಾರ್ಯಕ್ರಮಗಳು ಸಬೆ ಸಮಾರಂಬಗಳಿಗೆ ತೆರಳಲು KSRTC ಸಂಸ್ಥೆ ಬಸ್ಸುಗಳನ್ನು ಒಪ್ಪಂದದ ಮೇರೆಗೆ ಕಳಿಸುತ್ತಿರುವ ಹಿನ್ನಲೆಯಲ್ಲಿ ರೆಗ್ಯೂಲರ್ ಆಗಿ ಒಡಾಡುವ ಮಾರ್ಗದಲ್ಲಿ ಬಸ್ ಇಲ್ಲದಂತಾಗುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗುತ್ತದೆ ಜೊತೆಗೆ ಬಡ ವಿದ್ಯಾರ್ಥಿಗಳು ಪಾಸ್ ಇದ್ದರು ಇಂತಹ ಸಂದರ್ಬದಲ್ಲಿ ದುಬಾರಿ ಹಣ ತೆತ್ತು…


