ಮಾಜಿ ಸ್ಪೀಕರ್ ರಮೇಶಕುಮಾರ್ ಜಮೀನು ವಿವಾದ ಕಂದಾಯ ಹಾಗು ಅರಣ್ಯ ಇಲಾಖೆ ಜಂಟಿ ಸರ್ವೆಗೆ ಅಗ್ರಹಿಸಿ ರೈತ ಸಂಘದ ಪ್ರತಿಭಟನೆ ಕಾಂಗ್ರೆಸ್ ಕಾರ್ಯಕರ್ತರ ವಿರೋಧ ಇಬ್ಬರ ನಡುವೆ ತಳ್ಳಾಟ ನೂಕಾಟ ಪೋಲಿಸರ ಮದ್ಯಪ್ರವೇಶ. ಶ್ರೀನಿವಾಸಪುರ: ಮಾಜಿ ಸ್ಪೀಕರ್ ರಮೇಶಕುಮಾರ್ ಸೇರಿದಂತೆ ಬಲಾಢ್ಯರು ಸಾವಿರಾರು ಎಕರೆ ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಒತ್ತುವರಿ ಮಾಡಿಕೊಂಡಿರುವ ಜಮೀನುಗಳಿಗೆ ಸಂಬಂದಿಸಿದಂತೆ ಜಂಟಿ ಸರ್ವೆ ನಡೆಸಬೇಕು ಎಂದು ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ರೈತ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ರೈತ ಸಂಘದ ಕಾರ್ಯಕರ್ತರು ಇಂದು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗದಲ್ಲಿ ಬೆತ್ತಲೆ ಪ್ರತಿಭಟನೆ ನಡೆಸಲು ಕುಳತಿದ್ದರು ಇದನ್ನು ಕಾಂಗ್ರೆಸ್ ಕಾರ್ಯಕರ್ತರು ಪ್ರತಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತವರಣ ನಿರ್ಮಾಣವಾಗಿದ್ದು ಪೋಲಿಸರು ಮದ್ಯಪ್ರವೇಶಿಸಿ ಎರಡು ಕಡೆ ಕಾರ್ಯಕರ್ತರನ್ನು ಚದುರಿಸಿದರು ಜಂಟಿ ಸರ್ವೆಗೆ ಅಗ್ರಹಿಸಿ ಸಮಯ ನಿಗದಿ ಮಾಡಿದ್ದ ರೈತ ಸಂಘರೈತ ಮುಖಂಡ ನಾರಯಣಗೌಡ ಹೇಳುವಂತೆ…
Author: Srinivas_Murthy
ಶ್ರೀನಿವಾಸಪುರ:ತಾಲ್ಲೂಕಿನ ದಲಿತ ಸಂಘಟನೆ ಮುಖಂಡ ರೋಜರಪಲ್ಲಿ ಡಾ.ವೆಂಕಟರವಣಪ್ಪ(56) ನಿಧನರಾಗಿದ್ದಾರೆ.ವಿದ್ಯಾರ್ಥಿ ದಶೆಯಿಂದಲೆ ದಲಿತ ಚಳುವಳಿ ನೇತರನಾಗಿ ಚಿಂತಕರಾಗಿ ಹೋರಾಟಗಳ ಮುಂಚೂಣಿಯಲ್ಲಿರುತ್ತಿದ್ದ ವೆಂಕಟರವಣಪ್ಪ ಅನಾರೋಗ್ಯದಿಂದ ನಿಧನರಾಗಿದ್ದಾರೆ.ಹಸನ್ಮೂಖಿಯಾಗಿ ಸಮಾಜದ ಎಲ್ಲಾ ಸಮುದಾಯಗಳೊಂದಿಗೂ ಸಹ ಬಾಳ್ವೆಯಿಂದ ಬೆರೆಯುತ್ತಿದ್ದ ಅವರು ರೋಜರಪಲ್ಲಿ ವೆಂಕಟರವಣಪ್ಪ ಎಂದೆ ಖ್ಯಾತರಾಗಿದ್ದರು ಇತ್ತಿಚಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ ಪೊರೈಸಿ ಡಾಕ್ಟರೇಟ್ ಗಳಿಸಿದ್ದರು.ಕಂಬನಿ ಮೀಡಿದ ಗಣ್ಯರುರೋಜರಪಲ್ಲಿ ವೆಂಕಟರವಣಪ್ಪ ನಿಧನಕ್ಕೆ ತಾಲೂಕಿನ ದಲಿತ ಸಂಘಟನೆಗಳ ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ,ಬಂಡಾರಹಳ್ಲಿ ಮುನಿಯಪ್ಪ,ನಾಗದೇನಹಳ್ಳಿಶ್ರೀನಿವಾಸ್,ಗಾಂಡ್ಲಹಳ್ಲಿ ಚಲಪತಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೇಕಲ ನಾರಯಣಸ್ವಾಮಿ,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕೆ.ಕೆ.ಮಂಜು,ಮಾತ ಸಂಸ್ಥೆ ನಾರಯಣಸ್ವಾಮಿ,ಉಪ್ಪರಪಲ್ಲಿತಿಮ್ಮಯ್ಯ,ದೇವೆಂದ್ರ,ಕಲ್ಲೂರುವೆಂಕಟೇಶ್,ನರಸಿಂಹಯ್ಯ ಹೆಬ್ಬಟ ಆನಂದ್,ಸೇರಿದಂತೆ ಹಲವಾರು ಜನ ಕಂಬನಿ ಮೀಡಿದಿದ್ದಾರೆ.
ಸಿನಿಮಾ ಡೆಸ್ಕ್:ಅಲ್ಲು ಅರ್ಜುನ್ ವಿಲಕ್ಷಣ ಅಭಿನಯ ವಿಚಿತ್ರ ವೇಷ ಭೂಷಣದ ಪುಷ್ಪಾ-2 ಸಿನಿಮಾ ದಕ್ಷಿಣ ಭಾರತದಲ್ಲಿಯೇ ಅಲ್ಲ ಉತ್ತರ ಭಾರತದ ಬಾಲಿವುಡ್ ನಲ್ಲೂ ಬರ್ಜರಿಯಾಗಿ ಆರ್ಭಟಿಸಿದೆ 3 ದಿನಗಳಲ್ಲಿ ₹205 ಕೋಟಿ ಕಲೆಕ್ಷನ್ ಬಾಚಿಕೊಂಡಿದೆ. ಅಲ್ಲಿನ ಸಿನಿಮಾ ಪಂಡಿತರ ಲೆಕ್ಕಾಚಾರವನ್ನು ಬುಡಮೇಲು ಮಾಡಿದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬಾಲಿವುಡ್ ಹಳೆಯ ಎಲ್ಲಾ ಲೆಕ್ಕಾಚಾರಗಳನ್ನು ಹಿಂದಿಕ್ಕಿರುವ ಸಿನಿಮಾ ಎಂದು ಟ್ರೇಡ್ ಮೂಲಗಳು ಬಹಿರಂಗಪಡಿಸಿವೆ. ಜವಾನ್ (₹ 180 ಕೋಟಿ), ಅನಿಮಲ್ (₹ 176 ಕೋಟಿ) ಮತ್ತು ಪಠಾಣ್ (₹ 161 ಕೋಟಿ) ಚಿತ್ರಗಳನ್ನು ಹಿಂದಕ್ಕಿರುವ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ತನ್ನ ಮೊದಲ 3 ದಿನದ ಕಲೆಕ್ಷನ್ ಗಳಲ್ಲಿ ₹ 70 ಕೋಟಿ ಗಡಿ ದಾಟಿದ ಮೊದಲ ಹಿಂದಿ ಚಿತ್ರವಾಗಿದೆ ಗುರುವಾರ ₹ 72 ಕೋಟಿ, ಶುಕ್ರವಾರ ₹ 59 ಕೋಟಿ ಮತ್ತು ಶನಿವಾರ ₹ 74 ಕೋಟಿ ಕಲೆಕ್ಷನ್ ಮಾಡಿದ್ದು ಭಾನುವಾರದ ಕಲೆಕ್ಷನ್ ಲೆಕ್ಕ ಬಿಡುಗಡೆಯಾಗಬೇಕಿದೆ.
ಶ್ರೀನಿವಾಸಪುರ:ಡಾ.ಬಾಬಾಸಾಹೇಬ್ ಅಂಬೇಡ್ಕರ್ ದಮನಿತರ ಶೋಷಿತ ವರ್ಗಗಳಿಗೆ ಧ್ವನಿಯಾಗಿ ಸ್ವಾಭಿಮಾನ ಬದುಕಿಗೆ ದಾರಿ ತೋರಿಸಿದ ಧೀಮಂತ ನಾಯಕ ಎಂದು ಜೆಡಿಎಸ್ ಪಕ್ಷದ ಪ್ರಮುಖ ಮುಖಂಡರಾದ ಗಾಯಿತ್ರಿಮುತ್ತಪ್ಪ ಹೇಳಿದರು ಅವರು ಇಂದು ಅಂಬೇಡ್ಕರ್ ಮಹಾಪರಿನಿರ್ವಾಣ ದಿವಸದ ಅಂಗವಾಗಿ ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಬಾಗದ ಡಾ.ಅಂಬೇಡ್ಕರ್ ಪುತ್ಥಲಿಗೆ ಮಾಲಾರ್ಪಣೆ ಮಾಡಿ ಮಾತನಾಡಿರು,ಬಾಬಾ ಸಾಹೇಬರು ಪ್ರಪಂಚವೇ ಗೌರವಿಸಿ ಮೆಚ್ಚುವಂತಹ ಸಂವಿಧಾನವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದಾರೆ. ಸರ್ವರಿಗೂ ಸಮಬಾಳು ನೀಡುವ ಕಲ್ಪನೆಯೊಂದಿಗೆ ಸಂವಿಧಾನ ರಚಿಸಿದ ಅಂಬೇಡ್ಕರ್ ಆಶಯ ಈಡೇರಿಸಲು ಪ್ರತಿಯೊಬ್ಬರು ಸಂಕಲ್ಪ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಪೂಲುಶಿವಾರೆಡ್ದಿ, ಗೋರವಿಮಾಕಲಹಳ್ಳಿ ಶ್ರೀನಿವಾಸ್ ಹೋಳೂರುಸಂತೋಷ್,ನಾರಯಣಪುರ ವೆಂಕಟೇಶ್,ಕನಿಗಾನಹಳ್ಳಿ ವೆಂಕಟೇಶ್ ಮುಂತಾದವರು ಇದ್ದರು.
ಕೋಲಾರ:ಬಾಂಗ್ಲಾದೇಶದಲ್ಲಿ ಹಿಂದೂ ಧರ್ಮಗುರು ಚಿನ್ಮಯ ಕೃಷ್ಣ ಪ್ರಭುದಾಸ್ ಅವರ ಪರ ಕಾನೂನು ಪ್ರಕರಣದಲ್ಲಿ ವಾದ ಮಂಡಿಸಿದ್ದಕ್ಕಾಗಿ ವಕೀಲ ರಮೇನ್ ರಾಯ್ ವಿರುದ್ಧ ದಾಳಿ ನಡೆದಿರುವುದು ಖಂಡನೀಯ ಎಂದು ಕೋಲಾರದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ.ಸಂಘದ ಮುನೇಗೌಡ ನೇತೃತ್ವದಲ್ಲಿ ಸಭೆ ನಡೆಸಿದ ವಕೀಲರು ಬಾಂಗ್ಲಾದೇಶದಲ್ಲಿ ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಸಿ ಅಲ್ಪಸಂಖ್ಯಾತ ಹಿಂದುಗಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಕೃತ್ಯ ಖಂಡನೀಯ ಅವರಿಗೆ ರಕ್ಷಣೆ ನೀಡಬೇಕೆಂದು ಅಗ್ರಹಿಸಿ ವಕೀಲರು ಭಾರತ ರಾಷ್ಟ್ರಪತಿಗಳಿಗೆ ಜಿಲ್ಲಾಡಳಿತದ ಮೂಲಕ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಹಿರಿಯ ವಕೀಲ ಶಂಕರಪ್ಪ,ಮಾಗೇರಿನಾರಯಣಸ್ವಾಮಿ, ಕೆ.ನಟರಾಜಬಾಬು,ಶ್ರಧರ್,ಜಯರಾಮ್, ವಕೀಲರ ಸಂಘದದ ಪ್ರಧಾನ ಕಾರ್ಯದರ್ಶಿಬೈರಾರೆಡ್ದಿ, ಉಪಾಧ್ಯಕ್ಷ ರವೀಂದ್ರ ಮುಂತಾದವರು ಇದ್ದರು.
ನ್ಯೂಜ್ ಡೆಸ್ಕ್:ಕನ್ನಡದ ಡಿವೈನ್ ಸ್ಟಾರ್ ಕಾಂತಾರ ಸಿನಿಮಾ ಖ್ಯಾತಿಯ ರಿಷಬ್ ಶೆಟ್ಟಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿರುವ ‘ದಿ ಪ್ರೈಡ್ ಆಫ್ ಭಾರತ್. “ಛತ್ರಪತಿ ಶಿವಾಜಿ ಮಹಾರಾಜ್” ಚಿತ್ರದ ವಿಶೇಷ ಪೋಸ್ಟರ್ ಬಿಡುಗಡೆಯಾಗಿದೆ. ಸಂದೀಪ್ ಸಿಂಗ್ ನಿರ್ದೇಶನದ ಈ ಚಿತ್ರ ಶಿವಾಜಿ ಮಹಾರಾಜ್ ಜೀವನಾಧಾರಿತ ಚಿತ್ರವಾಗಲಿದೆ ಎಂದು ಚಿತ್ರ ನಿರ್ಮಾಪಕರು ಹೇಳಿದ್ದಾರೆ. ಈ ಚಿತ್ರವು 2027 ಜನವರಿ 21 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಈ ಮದ್ಯೆ ರಿಷಬ್ ಶೆಟ್ಟಿ ಸದ್ಯ ‘ಕಾಂತಾರ-2’ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಶ್ರೀನಿವಾಸಪುರ:ಇನೊವಾ ಕಾರು ಹಾಗೂ TVS ಮೊಪೈಡ್ ನಡುವೆ ಅಪಘಾತವಾಗಿ ಮೊಪೈಡ್ ಸವಾರ ಮೃತ ಪಟ್ಟಿರುವ ಘಟನೆ ಶ್ರೀನಿವಾಸಪುರ-ನಂಬಿಹಳ್ಳಿ ರಸ್ತೆಯಲ್ಲಿ ನಡೆದಿರುತ್ತದೆ.ಶ್ರೀನಿವಾಸಪುರ ತಾಲ್ಲೂಕಿನ ನಂಬಿಹಳ್ಳಿ ರಸ್ತೆಯಲ್ಲಿ ನಡೆದಿರುವ ರಸ್ತೆ ಅಪಘಾತದಲ್ಲಿ ಮೃತ ವ್ಯಕ್ತಿಯನ್ನು ಆರಮಾಕಲಹಳ್ಳಿ ಗ್ರಾಮದ ರೈತ ವೆಂಕಟೇಶಪ್ಪ(65) ಎಂದು ಗುರತಿಸಲಾಗಿದೆ.ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂತರ್ಜಾತಿ ವಿವಾಹವಾದ ಕಾರಣಕ್ಕೆ ಮಹಿಳಾ ಪೇದೆ ನಾಗಮಣಿಯನ್ನು ಆಕೆಯ ಸಹೋದರ ಪರಮೇಶ ಹತ್ಯೆ ಮಾಡಿರುವ ಧಾರುಣ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಇಬ್ರಾಹಿಂಪಟ್ಟಣಂನಲ್ಲಿ ನಡೆದಿದ್ದು ತೆಲಂಗಾಣದಲ್ಲಿ ಈ ಕೊಲೆ ಸಂಚಲನ ಮೂಡಿಸಿದೆ. ನ್ಯೂಜ್ ಡೆಸ್ಕ್:ತೆಲಂಗಾಣದ ಹಯಾತ್ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿರುವ ನಾಗಮಣಿ ಮರ್ಯಾದ ಹತ್ಯೆಗೆ ಬಲಿಯಾದ ಮಹಿಳಾ ಪೋಲಿಸ್ ಪೇದೆಯಾಗಿದ್ದು ಸೋಮವಾರ ಮುಂಜಾನೆ ತನ್ನ ಹುಟ್ಟೂರು ರಾಯಪೋಳು ಗ್ರಾಮದಿಂದ ಹಯತ್ನಗರದ ಉದ್ಯೋಗಕ್ಕೆ ಸ್ಕೂಟರನಲ್ಲಿ ತೆರಳುತ್ತಿದ್ದ ನಾಗಮಣಿಯನ್ನು ಹಿಂಬದಿಯಿಂದ ಕಾರಿನಲ್ಲಿ ಬಂದು ಡಿಕ್ಕಿ ಹೋಡೆದ ಸಹೋದರ ಪರಮೇಶ್ ಸ್ಕೂಟರ್ ನಿಂದ ಕೆಳಗೆ ಬಿದ್ದ ಆಕೆಯನ್ನು ಮಚ್ಚಿನಿಂದ ಹೊಡೆದು ಹತ್ಯೆ ಮಾಡಿದ್ದಾಗಿ ಹೇಳಲಾಗಿದೆ.ನಾಗಮಣಿ 2020 ರಲ್ಲಿ ಕಾನ್ಸ್ಟೇಬಲ್ ಆಗಿ ಆಯ್ಕೆಯಾಗಿ ಪ್ರಸ್ತುತ ಹಯಾತ್ ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಆದರೆ ನಾಗಮಣಿ ಅದೇ ಗ್ರಾಮದ ಶ್ರೀಕಾಂತ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಇಬ್ಬರದು ಜಾತಿ ಬೇರೆ ಆದ ಕಾರಣ ಇವರ ಮದುವೆಗೆ ನಾಗಮಣಿ ಮನೆಯವರು ಒಪ್ಪಿರಲಿಲ್ಲ ಒಂದು ತಿಂಗಳ ಹಿಂದೆ ಪ್ರೀತಿಸಿದ ವ್ಯಕ್ತಿಯ ತಂದೆ-ತಾಯಿ…
ಫೆಂಗಲ್ ಎಫೆಕ್ಟ್ ನಿಂದಾಗಿ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ಸಣ್ಣದಾಗಿ ಮಳೆಯಾಗುತ್ತಿದೆ.ಎಡೆಬಿಡದೆ ಮಳೆ ಜಿನಗುತ್ತಿದೆ ಜೊತೆಗೆ ಚಳಿ ಕೊಂಚ ಹೆಚ್ಚಾಗಿದ್ದು ಜನರನ್ನು ನಡುಗಿಸುತ್ತಿದೆ ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶ್ರೀನಿವಾಸಪುರ: ಫೆಂಗಲ್ ತೂಫಾನ್ ಪ್ರಭಾವದಿಂದ ತಾಲೂಕಿನಾದ್ಯಂತ ಶುಕ್ರವಾರ ರಾತ್ರಿಯಿಂದ ಸಣ್ಣದಾಗಿ ಪ್ರಾರಂಭವಾದ ಮಳೆ ಭಾನುವಾರ ಮಧ್ಯಾನದಃ ಹೊತ್ತಿಗೆ ಧಾರಕಾರವಾಗಿ ಸುರಿಯಲು ಶುರುವಾಗಿದೆ.ಸುರಿಯುತ್ತಿರುವ ಮಳೆ ಚಳಿಯಿಂದಾಗಿ ಕೃಷಿ ಕೆಲಸ ಕಾರ್ಯಗಳಿಗೆ ಹಾಗು ವ್ಯಾಪಾರ ವ್ಯವಹಾರಕ್ಕೆ ತೊಂದರೆಯಾಗಿದ್ದು ಜನ ಮನೆಗೆ ಸೀಮಿತವಾಗಿದ ಪರಿಣಾಮ ಯಾರು ರಸ್ತೆಗಿಳಿಯದೆ ರಸ್ತೆಗಳು ಬಿಕೋ ಎನ್ನುತ್ತಿವೆ ಮಳೆಯೊಂದಿಗೆ ಚಳಿಯೂ ಜೋರಾಗಿದ್ದು ವೃದ್ಧರು ಸೇರಿದಂತೆ ಸಾಮನ್ಯರ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಳೆಯ ಎಫೆಕ್ಟ್ ರಸ್ತೆಗಳು ಕೆಸರು ಗದ್ದೆಗಳಾಗಿವೆ ಸಣ್ಣ-ಪುಟ್ಟ ಹಳ್ಳ-ಕೊಳ್ಳಗಳಲ್ಲಿ ನೀರು ಹರಿಯುತ್ತಿದೆ ಭಾನುವಾರದ ನಂತರ ಮಳೆ ಇನ್ನಷ್ಟು ಹೆಚ್ಚಾಗಬಹುದು ದೊಡ್ಡ ಮಟ್ಟದಲ್ಲಿ ನೀರು ಹರಿಯುವಂತ ಮಳೆಯಾಗಬಹುದು ಎನ್ನುತ್ತಾರೆ ತಜ್ಞರು. ಕೋಲಾರ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ. ಫೆಂಗಲ್ ಚಂಡಮಾರುತ ಸೋಮವಾರ ತೀವ್ರವಾಗುವ ಹಿನ್ನೆಲೆಯಲ್ಲಿ ಹೆಚ್ಚಿನ ಮಳೆಯಾಗುವುವ ಕಾರಣ ವಿದ್ಯಾರ್ಥಿಗಳ ಆರೋಗ್ಯ ದೃಷ್ಟಿಯಿಂದ ಜಿಲ್ಲಾದ್ಯಂತ…
ನ್ಯೂಜ್ ಡೆಸ್ಕ್:ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಒಂದು ವಾರವಾಗುತ್ತಿದೆ ಮಹಾಯುತಿ ಕೂಟ ಭರ್ಜರಿ ಗೆಲುವು ಸಾಧಿಸಿದರು ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.ಮಹಾರಾಷ್ಟ್ರ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಮುಂದಾಗಿದ್ದರು ಮುಖ್ಯಮಂತ್ರಿ ಸ್ಥಾನ ಕಗ್ಗಾಂಟಾಗಿದೆ 288 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಮಹಾಯುತಿ ಕೂಟ 230 ಸ್ಥಾನಗಳನ್ನು ಗೆದ್ದ ನಂತರ ಅಧಿಕಾರ ಹಂಚಿಕೆ ಕುರಿತು ಚರ್ಚಿಸಲು ಶಿಂಧೆ, ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ದೆಹಲಿಯಲ್ಲಿ ಅಮಿ ಶಾ ಅವರನ್ನು ಭೇಟಿ ಮಾಡಿದ್ದರು ಶಾ ಅವರ ಸೂತ್ರಗಳು ಕೆಲಸ ಮಾಡಿತ್ತಿಲ್ಲ ಎನ್ನಲಾಗುತ್ತಿದೆ.ತಮ್ಮ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದರಿಂದ ಮಹಿಳಾ ಮತದಾರರು, ಮರಾಠರು ಮತ್ತು ಒಬಿಸಿಗಳು,ಲಾಡ್ಲಿ ಬಹೆನಾ ಯೋಜನೆ, ಮೀಸಲಾತಿ ನಿರ್ಧಾರ ಮತ್ತು ವಿವಿಧ ಸಮುದಾಯಗಳಿಗೆ ಸ್ಥಾಪಿಸಲಾದ ಸಹಕಾರ ಮಂಡಳಿಗಳಿಂದಾಗಿ ಮಹಾಯುತಿಗೆ ಮತ ಹಾಕಿದ್ದಾರೆ ಎಂದು ಶಿಂಧೆ ಅಮಿತ್ ಶಾ ಅವರಿಗೆ ವಿವರಣೆ ಕೊಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ನಾನೆ ಎಂಬ…