ಮುಳಬಾಗಿಲು: ರಸ್ತೆಯಲ್ಲಿ ಒಕ್ಕಣೆಗೆ ಹಾಕಿದ್ದ ಉರಳಿ ಫಸಲಿನ ಒಣಗಿದ ಸತ್ತೆ(ಹೊಟ್ಟು)ಕಾರಿನ ಚಕ್ರಕ್ಕೆ ಸಿಲುಕಿ ಕಾರು ಹೊತ್ತಿದಿರುವ ಘಟನೆ ಮುಳಬಾಗಿಲು ತಾಲೂಕು ನಂಗಲಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ನೊಂದಣಿಯ ಮಾರುತಿ ಡಿಝೈರ್ ಕಾರು ಮುಳಬಾಗಿಲು ತಾಲೂಕಿನ ನಂಗಲಿಯಿಂದ ಹೆಬ್ಬಣಿ ರಸ್ತೆಯಲ್ಲಿ ಹೋಗುವಾಗ ಸುನಪಕುಂಟೆ ಬಳಿ ರಸ್ತೆಯಲ್ಲಿ Farmers ಒಕ್ಕಣೆಗೆ ಹರಡಿದ್ದ ಹುರಳಿ ಬೆಳೆ ಮೇಲೆ ಕಾರು ಹೋಗುತ್ತಿದ್ದಾಗ ಕಾರಿನ ಚಕ್ರಕ್ಕೆ ಉರಳಿ ಹೊಟ್ಟು ಸುತ್ತಿಕೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದೆ ತಕ್ಷಣ ಕಾರಿನಲ್ಲಿದ್ದ ತಮ್ಮ ಲಗ್ಗೇಜು ಸಮೇತ ಕಾರಿನಿಂದ ಇಳಿದು ಪ್ರಣಾಪಯದಿಂದ ಪಾರಾಗಿದ್ದಾರೆ.ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಬೆಂಕಿಯನ್ನು ನಂದಿಸಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.
ರಸ್ತೆ ಒಕ್ಕಣೆಗೆ ಜಿಲ್ಲಾಡಿಳಿತ ಕಡಿವಾಣ ಹಾಕಲಿ
ಕೋಲಾರ ಜಿಲ್ಲೆಯಲ್ಲಿ ರಸ್ತೆ ಒಕ್ಕಣೆ ನಿಷೇದ ಇದ್ದರೂ ಕೆಲವರು ರಾಷ್ಟ್ರೀಯ ಹೆದ್ದಾರಿಯಲ್ಲೆ ಉದ್ದಟ ತನದಿಂದ ಒಕ್ಕಣೆ ಮಾಡುತ್ತಿದ್ದಾರೆ ಬೆಸಿಗೆ ಆರಂಭವಾಗಿದೆ ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲು ತೀವ್ರವಾಗಿದೆ.ರಸ್ತೆ ಒಕ್ಕಣೆ ದ್ವಿಚಕ್ರ ವಾಹನ ಸವಾರರಿಗೂ ಮಾರಕ ಇದಕ್ಕಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ರಸ್ತೆ ಮೇಲೆ ಒಕ್ಕಣೆಯನ್ನು ಕಟ್ಟುನಿಟ್ಟಾಗಿ ನಿಷೇದಕ್ಕೆ ಮುಂದಾಗುವಂತೆ ವಾಹನ ಸವಾರರು ಒತ್ತಾಯಿಸಿದ್ದಾರೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Wednesday, July 22



