ತಿರುಪತಿ:ದಕ್ಷಿಣ ಭಾರತದ ಪ್ರಖ್ಯಾತ ರಾಹು-ಕೇತು ಪೂಜೆ ನಡೆಯುವ ಆಂಧ್ರದ ಶ್ರೀಕಾಳಹಸ್ತೀಶ್ವರ ದೇವಾಲಯದಲ್ಲಿ ಭಾನುವಾರ ನಡೆದಂತ ರಾಹು-ಕೇತು ಪೂಜೆಗಳು ಸಾರ್ವಕಾಲಿಕ ದಾಖಲೆಯಾಗಿದೆ.
ದೇವಸ್ಥಾನದಲ್ಲಿ ಐದು ವಿವಿಧ ಧರದ ಟಿಕೆಟ್ ಗಳಲ್ಲಿ ರಾಹು-ಕೇತು ಸರ್ಪದೋಷ ನಿವಾರಣಾ ಪೂಜೆಗಳು ನಡೆಯುತ್ತವೆ ರಾಹು-ಕೇತು ಪೂಜೆಗಳ ದಾಖಲೆ
ರಾಹು-ಕೇತು ಪೂಜಾ ಟಿಕೆಟ್ ಗಳು ಭಾನುವಾರ ಒಂದೇ ದಿನ 9,168 ಟಿಕೆಟ್ಗಳು ಮಾರಾಟವಾಗಿವೆ. 14 ತಿಂಗಳ ಹಿಂದೆ ಐದು ವಿಭಾಗಗಳಲ್ಲಿ ದಾಖಲೆಯ 7,200 ಟಿಕೆಟ್ಗಳು ಮಾರಾಟವಾಗಿದ್ದು, ಆಷಾಢ ಮಾಸದ ಭಾನುವಾರ ಅಮಾವಾಸ್ಯೆ ಬಂದಿದ್ದರಿಂದ ಜನತೆ ದೇವಾಲಯದಲ್ಲಿ ಪೂಜೆ ಮಾಡಲು ಮುಗಿಬಿದಿದ್ದು ಒಂದೇ ದಿನ 9,168 ರಾಹುಕೇತು ಪೂಜೆಯ ಟಿಕೆಟ್ ಮಾರಾಟವಾಗಿ ಹೊಸ ದಾಖಲೆ ನಿರ್ಮಿಸಿದೆ. ಶ್ರೀಕಾಳಹಸ್ತೀಶ್ವರ ದೇವಸ್ಥಾನದ ರಾಹುಕೇತು ಮಂಟಪಗಳು ಬೆಳಗ್ಗೆಯಿಂದ ಸಂಜೆಯವರೆಗೆ ಭಕ್ತರಿಂದ ತುಂಬಿ ತುಳುಕಾಡುತಿತ್ತು 5,000 ರೂ ಮೊತ್ತದ 154 ಟಿಕೆಟ್ ಗಳು,2,500 ರೂ ಮೊತ್ತದ 610ಟಿಕೆಟ್ ಗಳು,1,500 ರೂ ಮೊತ್ತದ 933ಟಿಕೆಟ್ ಗಳು,750 ರೂ ಮೊತ್ತದ 2,288 ಟಿಕೆಟ್ ಗಳು,500 ರೂ ಮೊತ್ತದ 5,183ಟಿಕೆಟ್ ಗಳು,,. ಸೇರಿ ಒಟ್ಟು 9,168 ರಾಹುಕೇತು ಪೂಜಾ ಟಿಕೆಟಗಳು ಮಾರಾಟವಾಗಿದೆ ಎನ್ನುತ್ತಾರೆ ದೇವಾಲಯದ ಇವಿಒಎಸ್ ಎನ್ ಮೂರ್ತಿ.
ಇದಲ್ಲದೆ, ಐದು ಬಗೆಯ ಪ್ರಸಾದಗಳ 29,505 ಪ್ಯಾಕೆಟ್ಗಳು ಮಾರಾಟವಾಗಿದ್ದು, ಇದು ಸಹ ದಾಖಲೆಯ ಮಾರಾಟ ಎನ್ನುತ್ತಾರೆ ಭಾನುವಾರವಷ್ಟೇ ದೇವಸ್ಥಾನಕ್ಕೆ ವಿವಿಧ ಪೂಜೆ, ಸೇವಾ ಟಿಕೆಟ್ ಗಳ ಮೂಲಕ ಸುಮಾರು ಎರಡು ಕೋಟಿ ಅದಾಯ ಬಂದಿದೆ ಎನ್ನುತ್ತಾರೆ.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Monday, June 8



