ಶ್ರೀನಿವಾಸಪುರ:ತಾಲೂಕಿನ ಯಲ್ದೂರಿನಲ್ಲಿ ಶ್ರದ್ಧಾ ಭಕ್ತಿಯಿಂದ ಗಂಗಮ್ಮ ಜಾತ್ರೆಯ ದೀಪೋತ್ಸವ ನಡೆಸಲಾಯಿತು,ಗ್ರಾಮದ ಶಕ್ತಿ ದೇವತೆಗಳ ದೇವಾಲಯಗಳಲ್ಲಿ ದೀಪೋತ್ಸವ ಕಾರ್ಯಕ್ರಮ ಆಯೋಜಿಸಿ ನಂತರ ಗಂಗಮ್ಮ ದೇವಾಲಯದ ಪೂಜಾರಿ ದೀಪ ಹೋತ್ತು ದೇವಾಲಯ ಸುತ್ತುತ್ತಾರೆ. ಯಲ್ದೂರು ನಡುಬಿದಿಯಲ್ಲಿರುವ ಗಂಗಮ್ಮ ದೇವಾಲಯದಲ್ಲಿ ಆನಾದಿಕಾಲದಿಂದಲೂ ಗ್ರಾಮದ ಆಚಾರದಂತೆ ಹೊಸ ಸಂವತ್ಸರ ಯುಗಾದಿ ನಂತರ ಬರುವ ಮೊದಲ ಸೋಮವಾರ ಗಂಗಮ್ಮನ ಜಾತ್ರೆ ಆಚರಿಸಿಕೊಂಡು ಬರಲಾಗುತ್ತಿದೆ ಎನ್ನುತ್ತಾರೆ ಗ್ರಾಮಸ್ಥರು. ಗಂಗಜಾತ್ರೆ ಎಂದು ಆಚರಿಸುವ ಗಂಗಮ್ಮ ದೇವರ ಮೂಲಮೂರ್ತಿಗೆ ಅಭಿಷೇಕ ವಿವಿಧ ರೀತಿಯ ಬಣ್ಣದ ಹೂಗಳಿಂದ ಅಲಂಕಾರ ನೈವೇದ್ಯ ಸೇರಿದಂತೆ ವಿವಿಧ ರೀತಿಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಕಷ್ಟ ಇದೆ ನಿವಾರಿಸು ತಾಯಿ ಎಂದು ಗಂಗಮ್ಮ ನಲ್ಲಿ ನಿವೇದಿಸಿಕೊಂಡರೆ ಕಷ್ಟಗಳನ್ನು ಗಂಗಮ್ಮ ತಾಯಿ ನೀವಾರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.
ಕಷ್ಟ ಇದೆ ನಿವಾರಿಸು ತಾಯಿ ಎಂದು ಗಂಗಮ್ಮ ನಲ್ಲಿ ನಿವೇದಿಸಿಕೊಂಡರೆ ಕಷ್ಟಗಳನ್ನು ಗಂಗಮ್ಮ ತಾಯಿ ನೀವಾರಿಸುತ್ತಾಳೆ ಎಂಬುದು ಇಲ್ಲಿನ ಜನರ ನಂಬಿಕೆ.ಉತ್ತಮ ಮಳೆ ಬೆಳೆಯಾಗುತ್ತದೆ,ಗ್ರಾಮದ ಜನರನ್ನು ಸುರಕ್ಷತೆಯಿಂದ ಕಾಪಾಡುತ್ತಾಳೆ ಎಂದು ನಂಬಿ ಹರಿಕೆ ಹೊತ್ತ ಗ್ರಾಮಸ್ಥರು ಭಕ್ತಿ ಭಾವದಿಂದ ಶಕ್ತಾನುಸಾರ ಗಂಗಮ್ಮ ದೇವರಿಗೆ ತಂಬಿಟ್ಟು ಹಾರತಿ ಸಮರ್ಪಿಸಿ ಧನ್ಯರಾಗುತ್ತಾರೆ.
Trending
- ಶಾಸಕ ಕೊತ್ತೂರು ಮಂಜುನಾಥ್ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸುಳಿವು ನೀಡಿದ ನಂಜೇಗೌಡ!
- ಮಗಳಾಡಿದ ಮಾತಿನಿಂದ ತಾಯಿಯ ಮಂತ್ರಿ ಸ್ಥಾನಕ್ಕೆ ಧಕ್ಕೆ!
- ಶ್ರೀನಿವಾಸಪುರ:ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕನ ಅಸಭ್ಯ ವರ್ತನೆ ಆರೋಪ!
- ನೇಪಾಳ ಪ್ರವಾಹ:ಶಿಕ್ಷಕನ ಸಮಯ ಪ್ರಜ್ಞೆ ಬದುಕುಳಿದ ಸಾವಿರಾರು ವಿದ್ಯಾರ್ಥಿಗಳು!
- ಬೆಂಗಳೂರು:ಬಿಜೆಪಿ ಮುಖಂಡನ ಅಪಹರಣ Twest ಆಂಧ್ರ ಪೋಲಿಸರ ವಶದಲ್ಲಿ!
- ಶ್ರೀನಿವಾಸಪುರ:ವರ್ಗಾವಣೆಗೊಂಡ ಬ್ಯಾಂಕ್ ಮೆನೇಜರ್ ಗೆ ಬೀಳ್ಕೊಡುಗೆ!
- ಶ್ರೀನಿವಾಸಪುರ:ಸೋಮಯಾಜಲಹಳ್ಳಿ SRV ಮೇಷ್ಟ್ರು ಇನ್ನಿಲ್ಲ!
- ಶ್ರೀನಿವಾಸಪುರ:ಜಾಗ ಕೊಟ್ಟರೆ ಇಲಾಖೆ ಚರ್ಚಿಸಿ ಉದ್ಯೋಗಾವಕಾಶ ಸಚಿವ!
Sunday, September 6



