ನ್ಯೂಜ್ ಡೆಸ್ಕ್:ಕರ್ನಾಟಕ ವಿಧಾನಸಭೆ ಚುನಾವಣಾ ವೇಳಾಪಟ್ಟಿಯ ದಿನಾಂಕ ಪ್ರಕಟವಾಗಿದೆ ಎಂದು ಸಾಮಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಮಾಹಿತಿಯುಳ್ಳ ವೇಳಾಪಟ್ಟಿಯ ಪೋಸ್ಟರ್ ಸತ್ಯಾಸತ್ಯತೆ ಇಲ್ಲಿದೆ.
ಕರ್ನಾಟಕ ವಿಧಾನಸಭೆಗೆ ಚುನಾವಣೆ ಸಿದ್ದತೆಗಳು ನಡೆಯುತ್ತಿದೆ ವೇಳಾ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ವೇಳಾ ಪಟ್ಟಿಯೊಂದನ್ನು ಹಂಚಿಕೊಂಡಿದ್ದು ಎಲ್ಲಡೇ ವೈರಲ್ ಆಗಿದ್ದು ನಕಲಿ ವೇಳಾಪಟ್ಟಿಯಲ್ಲಿರುವಂತೆ ಚುನಾವಣೆ ಮಾರ್ಚ್ 27ರಿಂದ ನೀತಿ ಸಂಹಿತಿ ಜಾರಿ, ಏಪ್ರಿಲ್ 17, ಚುನಾವಣಾ ಅಧಿಸೂಚನೆ ಪ್ರಕಟ, ಏಪ್ರಿಲ್ 26 ರಿಂದ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ, ಏಪ್ರಿಲ್ 27 ರಂದು ನಾಮಪತ್ರಗಳ ಪರಿಶೀಲನೆ ನಡೆಯುತ್ತದೆ,ಮೇ12 ಕ್ಕೆ ಮತದಾನ ನಡೆಯಲಿದ್ದು, ಮೇ 15ಕ್ಕೆ ಮತ ಎಣಿಕೆ ಕಾರ್ಯನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ ಎಂಬ ಮಾಹಿತಿ ಇರುವಂತ ಪೋಸ್ಟ್ರ್ ಹರಿದಾಡುತ್ತಿದೆ.ನಕಲಿ ವೇಳಾಪಟ್ಟಿಯಂತೆ ಇಡಿ ಕರ್ನಾಟಕದಲ್ಲಿ ಒಂದೇ ಹಂತದ ಚುನಾವಣೆ ನಡೆಯುವ ರಿತಿ ಇದೆ.
ಆದರೆ ಅದರ ಸತ್ಯಾಸತ್ಯತೆ ಇಲ್ಲಿದೆ
ಸಾಮಾಜಿಕ ಜಾಲತಾಣಗಳಲ್ಲಿ ಹಂಚಿರುವಂತ 2023ರ ಚುನಾವಣಾ ವೇಳಾ ಪಟ್ಟಿಯ ನಿಜಾಂಶ ಪರಿಶೀಲಿಸಿದರೆ ನಕಲಿ ವೇಳಾ ಪಟ್ಟಿ ಎಂದು ಹೇಳಲಾಗಿದೆ.ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ಈ ಹಿಂದಿನ 2018ರ ಹಳೆಯ ವೇಳಾಪಟ್ಟಿಯನ್ನೇ ಎಡಿಟ್(EDIT) ಮಾಡಲಾಗಿದ್ದು ಫೋಟೊದಲ್ಲಿ 2018 ಇರುವ ಕಡೆ 2023 ಎಂದು ನಮೂದಿಸಿ ಎಡಿಟ್ ಮಾಡಲಾಗಿದೆ. ಎಡಿಟ್ ಮಾಡಿದ ಫೋಟೊವನ್ನೇ ಎಲ್ಲೆಡೆ ಶೇರ್ ಮಾಡಿದ ಪರಿಣಾಮ,ನಕಲಿಯನ್ನು ಅಸಲಿ ಎಂದು ನಂಬಿದ ಜನತೆ ಅದನ್ನೇ 2023 ಚುನಾವಣೆ ವೇಳಾಪಟ್ಟಿ ಎಂದು ನಂಬಿ ಜಾಲತಾಣಗಳಲ್ಲಿ ಹಂಚಿಕೊಂಡ ಪರಿಣಾಮ ಓಡಾಡುತ್ತಿದೆ.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Sunday, June 15