ನೂಜ್ ಡೆಸ್ಕ್:ಎಣ್ಣೆ ಹೊಡೆದವರು ಯಾವುದೆ ಸಾಹಸ ಮಾಡಲು ಹಿಂಜರಿಯುವುದಿಲ್ಲ ತಮಗೆ ತಾವೆ ಮಹಾರಾಜರಂತೆ ವರ್ತಿಸುತ್ತಾರೆ ತೆಲಗು ಸಿನಿಮಾ ಗಬ್ಬರ್ ಸಿಂಗ್ ನ ಹಾಡು “ಮಂದು ಬಾಬುಲಮ್ ಮೆಮು ಮಂದು ಬಾಬುಲಯ್ ಮಂದು ಕೊಡಿತೆ ಮಾಕು ಮೇಮೆ ಮಹಾರಾಜುಲಮ್” ಎನ್ನುವಂತೆ ಮದ್ಯ ಕುಡಿದವರ ವರ್ತನೆಗಳನ್ನು ಡೈಲಾಗ್ ಬಗ್ಗೆ ಹೇಳುತ್ತ ಹೋದರೆ ದಿನ ಸಾಲದು ತಮಗೆ ಇಷ್ಟ ಬಂದಂತೆ ವರ್ತಿಸುತ್ತಾರೆ ಇವರ ವರ್ತನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಲೆಕ್ಕವಿಲ್ಲದಷ್ಟು ವೀಡಿಯೊಗಳಿವೆ. ಇಷ್ಟೆಲ್ಲ ಯಾಕೆ ಪ್ರಸ್ತಾವನೆ ಅಂದರೆ ಇತ್ತೀಚೆಗೆ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯಲ್ಲಿ ಕುಡುಕನೊಬ್ಬ ಘೋರ ಪ್ರಮಾದ ಮಾಡಿದ್ದಾನೆ ಸದ್ಯ ಯಾವುದೆ ಸಾವು ನೋವು ಆಗಿಲ್ಲ.
ಎಣ್ಣೆ ಹೊಡೆದ ವ್ಯಕ್ತಿಯೊಬ್ಬ ಒಬ್ಬಂಟಿಯಾಗಿ ಬಸ್ ನಿಲ್ದಾಣಕ್ಕೆ ಹೋಗಿ ಕೊತ್ತಚರವು-ಹಿಂದೂಪುರ ಬಸ್ ಹತ್ತಲು ಬಂದಿದ್ದಾನೆ ನಂತರ ಬಸ್ ಕೆಳಗೆ ಹೋಗಿ ಸ್ಟಪನಿ ಟೈರ್ ಹಿಡಿದುಕೊಂಡು ಜೋತಾಡುತ್ತ ಇದ್ದಾನೆ ಬಸ್ ಚಲಿಸಿದೆ ಅದೂ ಕೂಡ ಒಂದು ಎರಡು ಕಿಲೋಮೀಟರ್ ಅಲ್ಲ.ಸುಮಾರು 15 ಕಿಲೋಮೀಟರ್ ಬಸ್ ಚಲಿಸಿದೆ ಬಸ್ ಚಲಿಸುತ್ತಿದ್ದರೆ ಬಸ್ ಹಿಂದೆ ಹೋಗುವರು ಟೈರ್ ಕೆಳಗೆ ಜೋತಾಡುತ್ತ ಇರುವುದನ್ನು ಗಮನಿಸಿ ಅಥವಾ ಕೆಲವು ವಾಹನ ಚಾಲಕರು ಬಸ್ ನಿಲ್ಲಿಸಿ ಚಾಲಕನ ಗಮನಕ್ಕೆ ತಂದಿದ್ದಾರೆ ವಿಷಯ ತಿಳಿದ ಚಾಲಕ ಬಸ್ ನಿಲ್ಲಿಸಿ ಬಸ್ಸಿನ ಕೆಳಗೆ ನೇತಾಡುತ್ತಿದ್ದ ವ್ಯಕ್ತಿ ಬಸ್ಸಿನ ಕೆಳಗಿರುವ ಬಿಡಿ ಟೈರ್ ಹಿಡಿದಿದ್ದು ಬಸ್ ಚಾಲಕ ಅವನನ್ನು ಎಳೆದು ಹಾಕಿದ್ದಾನೆ.ಕುಡುಕನ ಮೋಜೋ ಮಸ್ತಿನೋ ಅದೃಷ್ಟವಶಾತ್,ಬದುಕುಳಿದಿರುವುದೆ ಪವಾಡ ಎನ್ನುತ್ತಾರೆ ಪ್ರತ್ಯಕ್ಷ ದರ್ಶಿಗಳು.
Trending
- ಶ್ರೀನಿವಾಸಪುರ:ಕಸ ಹಾಕುವ ವಿಚಾರಕ್ಕೆ ಜಗಳ ಒಬ್ಬನ ಕೊಲೆ!
- ಶ್ರೀನಿವಾಸಪುರ:ವೇಶ್ಯಾವಾಟಿಕೆ ದಂಧೆ ಪೊಲೀಸ್ ದಾಳಿ, ಕಿಂಗ್ ಪಿನ್ ಮಹಿಳೆ ಬಂಧನ!
- ಶ್ರೀನಿವಾಸಪುರ:ವಾಹನ ಡಿಕ್ಕಿಯಾಗಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಪೇದೆ ನಿಧನ!
- ಶ್ರೀನಿವಾಸಪುರ:ಕರ್ನಾಟಕ ಬ್ಯಾಂಕ್ ಉದ್ಯೋಗಿ ಅಪಘಾತದಲ್ಲಿ ಸಾವು!
- ಲಂಚ ಪಡೆಯುತ್ತಿದ್ದ ಬಿಜೆಪಿ ಶಾಸಕ ಲೋಕಾಯುಕ್ತ ಬಲೆಗೆ!
- ಯಾವ ಐಟಿ-ಬಿಟಿ ಗೂ ಕಡಿಮೆ ಇಲ್ಲ,Dairy Farm ಆದಾಯ ಲಕ್ಷಗಟ್ಟಲೆ!
- ಬೆಂಗಳೂರಿನಲ್ಲಿ ಕುಬೇರರು ವಾಸಿಸುವ“ಬಿಲಿಯನೇರ್ಸ್ ಸ್ಟ್ರೀಟ್”ಎಲ್ಲಿದೆ?
- ಶ್ರೀನಿವಾಸಪುರ:ನೌಕರರ ಸಂಘದ ಹಾಲಿ-ಮಾಜಿ ಅಧ್ಯಕ್ಷರ ನಡುವೆ ಬಿದಿ ಜಗಳ!
Saturday, March 7



