ಶ್ರೀನಿವಾಸಪುರ:ನ್ಯಾಯಲಯದ ಸೂಚನೆಯಂತೆ 2010 ಹಾಗು 2013 ಆದೇಶದಂತೆ ನಿಯಮಾವಳಿಯಲ್ಲಿ ಕಂದಾಯ ಇಲಾಖೆ ಅನುಸರಿಸುವ ವಿಧಾನದಂತೆ ಸರ್ವೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ಹೇಳಿದರು.
ಹೈಕೋರ್ಟ್ ಸೂಚನೆಯಂತೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಅರಣ್ಯ ಇಲಾಖೆಯ ಭೂ ವಿವಾದ ಎನ್ನಲಾದ ಹೊಸಹುಡ್ಯ ಗ್ರಾಮದ ಜಿನಗಲಕುಂಟೆ ಸರ್ವೇ ನಂಬರ್ 1 ಹಾಗೂ 2 ರಲ್ಲಿನ ಜಮೀನು ಅನ್ನು ಎರಡು ದಿನಗಳ ಕಾಲ ಸರ್ವೆ ಮಾಡಿದ ನಂತರ ಹೇಳಿಕೆ ನೀಡಿದ ಅವರು ಜನವರಿ 30 ರ ಒಳಗೆ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಹೈಕೋರ್ಟ್ ನೀಡಿದ ಸೂಚನೆಂತೆ ಪಿರ್ಯಾದುದಾರರಿಗೆ ನೋಟೀಸ್ ನೀಡಿ ಸರ್ವೆ ಕಾರ್ಯವನ್ನು ರೊವರ್ ಯಂತ್ರ ಬಳಸಿ ಸುಮಾರು 25 ಮಂದಿ ಕಂದಾಯ ಹಾಗು ಸರ್ವೆ ಇಲಾಖೆ ಅಧಿಕಾರಿಗಳು ಹಾಗು ಅರಣ್ಯ ಇಲಾಖೆಯ 15 ಜನ ಮಾಪಕರು ರೋವರ್ ಜೊತೆ ಚೈನ್ ಬಳಸಿ ಏಕಕಾಲದಲ್ಲಿ ಸರ್ವೇ ಮಾಡಲಾಗಿದೆ.
ಗುಂಟರ್ಸ್ ಚೈನ್ ಬ್ರಿಟಿಷ್ ಕಾಲದಿಂದ ಬಳಕೆಯಲ್ಲಿದೆ ಅರಣ್ಯ ಇಲಾಖೆ
ಫಾರೆಸ್ಟ್ ಸೆಟಲ್ ಮೆಂಟ್ ಮ್ಯಾಪ್ ಅವಶ್ಯಕತೆ ಇಲ್ಲ ಇದಕ್ಕೆ ಸರ್ಕಾರದ ಅದೇಶ ಸಹ ಇದೆ ಅದರಂತೆ ಗುಂಟರ್ಸ್ ಚೈನ್ ಮೂಲಕವೆ ಅರಣ್ಯ ಹಾಗೂ ಕಂದಾಯ ಇಲಾಖೆಯ ಸರ್ವೇ ಕಾರ್ಯ ಮುಕ್ತಾಯವಾಗಿದ್ದು ಅರಣ್ಯ ಇಲಾಖೆಯ ಗಡಿ ಗುರುತಿಸುವ ಕೆಲಸ ಜಂಟಿಯಾಗಿ ಮಾಡಲಾಗಿದೆ ನಾಲ್ಕು ತಂಡಗಳಿಂದ ಸರ್ವೇ ಮಾಡಿಸಿರುವುದಾಗಿದ್ದು ಅರಣ್ಯ ಇಲಾಖೆಯ ಗಂಟರ್ಸ್ ಚೈನ್ ಮಾಪನ 100 ಲಿಂಕ್ 66 ಅಡಿಯಂತೆ ಸರ್ವೇ ಮಾಡಲಾಗಿದ್ದು ಇದರ ಅಳತೆ ಸರಿಯಾಗಿ ಇರುತ್ತೆ ಅಂತ ಅಧೀನ ಕಾರ್ಯದರ್ಶಿ ಅವರೇ ಹೇಳಿದ್ದಾರೆ.ಒತ್ತುವರಿಯಾಗಿದೆ ಎನ್ನುವುದು ಅರಣ್ಯ ವ್ಯಾಪ್ತಿಯಲ್ಲಿದೆ ಎಂದು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಸರಿನಾ ಹೇಳಿದರು.
ಈ ಸಂದರ್ಭದಲ್ಲಿ ಸರ್ವೆ ಇಲಾಖೆ ಅಧಿಕಾರಿ ಸಂಜಯ್,ತಾಲೂಕು ಅರಣ್ಯಾದಿಕಾರಿ ಮಹೇಶ್ ತಹಶೀಲ್ದಾರ್ ಸುಧೀಂದ್ರ ಅಡಿಷನಲ್ ಎಸ್.ಪಿ ರವಿಶಂಕರ್,ಮುಳಬಾಗಿಲು ಡಿವೈಎಸ್.ಪಿ ನಂದಕುಮಾರ್,ಶ್ರೀನಿವಾಸಪುರ ವೃತ್ತ ಪೋಲಿಸ್ ಸಿಐ ಗೊರವನಕೊಳ್ಳ,ಗೌವನಪಲ್ಲಿ ಸಿಐ ಶಿವಕುಮಾರ್ ಕೋಲಾರ್ ಸಿಐ ಸತೀಶ್,ಎಸ್.ಐ ಗಳಾದ ಜಯರಾಮ್,ಶ್ರೀರಾಮ್ ಮುಂತಾದವರು ಇದ್ದರು.
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Saturday, June 14