ಶ್ರೀನಿವಾಸಪುರ: ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ,ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸನ್ ಹತ್ಯೆ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಶ್ರೀನಿವಾಸಪುರ ಬಂದ್ ಸಂಪೂರ್ಣವಾಗಿ ಯಶಸ್ವಿಯಾಯಿತು.
ಪಟ್ಟಣದ ವ್ಯಾಪಾರಸ್ಥರು,ಹೋಟೆಲ್ ಮಾಲಿಕರು ಮುಂಜಾನೆಯಿಂದಲೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳ ಬಾಗಿಲು ಮುಚ್ಚಿ ಬಂದ್ ಬೆಂಬಲಿಸಿದ್ದರು,ಆಟೋ ಚಾಲಕರು ಮತ್ತು ಖಾಸಗಿ ವಾಹನಗಳ ಚಾಲಕರು ಮಾಲಿಕರು ತಮ್ಮ ವಾಹನಗಳನ್ನು ಬೀದಿಗಿಳಿಸದೆ ಬಂದ್ ಗೆ ಸಹಕಾರ ನೀಡಿದ್ದರು,ಬಂದ್ ಅಂಗವಾಗಿ ಬಹುತೇಕ ಶಾಲಾಕಾಲೇಜುಕಳಿಗೆ ರಜಾ ಘೋಷಿಸಲಾಗಿತ್ತು,ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಖಾಸಗಿ ಬ್ಯಾಂಕುಗಳು ವಾಣಿಜ್ಯ ಸಂಸ್ಥೆಗಳು ಬಾಗಿಲು ತೆಗೆದಿದ್ದಾದರೂ ಪ್ರತಿಭಟನಾಕಾರರು ಅವುಗಳ ಬಾಗಿಲು ಹಾಕಿಸಿದರು.ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಮುಳಬಾಗಿಲು.ಕೋಲಾರ,ಚಿಂತಾಮಣಿಗೆ ಒಡಾಡಿತಾದರು ಪಟ್ಟಣದ ಒಳಗೆ ಬಾರದೆ ಹೊರ ವಲಯದ ಸುಮಾರು 1-2 ಕೀ.ಮಿ ದೂರದಿಂದ ಬಸ್ಸುಗಳನ್ನು ಆಪರೇಟ್ ಮಾಡಿದರು,ಬಂದ್ ಬೆಂಬಲಿಸಿ ಪ್ರತಿಭಟನೆಯಲ್ಲಿ ಪುರಷರು ಅಷ್ಟೆ ಅಲ್ಲದೆ ಮಹಿಳೆಯರು ಯುವತಿಯರು ಸ್ವಯಂ ಪ್ರೇರಿತರಾಗಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಬಂದ್ ಗೆ ಕರೆ ನೀಡಿದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಇಂದಿರಾಭವನ್ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ರಚಿಸಿ ಹತ್ಯೆ ಮಾಡಿದವರನ್ನು ಉಗ್ರ ಶಿಕ್ಷೆಗೆ ಒಳಪಡಿಸುವಂತೆ ಅಗ್ರಹಿಸಿ, ಕ್ರಾಂತಿಗೀತೆಗಳನ್ನು ಹಾಡಿದರು.ನಂತರ ಪಟ್ಟಣದ ಮುಖ್ಯ ರಸ್ತೆ, ಎಂ.ಜಿ.ರಸ್ತೆ,ರಾಜಾಜಿ ರಸ್ತೆ ವಲ್ಲಭಾಯಿ ರಸ್ತೆ, ಅಜಾದ್ ರಸ್ತೆಗಳಲ್ಲಿ ಮುಖ್ಯರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ನಂತರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಹತ್ಯೆಯಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿರುವ ಎಲ್ಲಾ ಆರೋಪಿಗಳನ್ನು ಮಂಪರು ಪರಿಕ್ಷೆಗೆ ಒಳಪಡಿಸಬೇಕು,ಪ್ರಕರಣವನ್ನು ಸಿಒಡಿ ತನಿಖೆಗೆ ನೀಡಬೇಕು,ಕೊಲೆ ಪ್ರಕರಣ ಸಂಬಂದಿಸಿದಂತೆ ಉಚ್ಛಾ ನ್ಯಾಯಲಯದ ಪ್ರಾಸಿಕ್ಯೂಟರ್ ನೇಮಕ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದರು.
ಬಂದ್ ಬೆಂಬಲಿಸಿ ರಿಪಬ್ಲಿಕ್ ಪಾರ್ಟಿ,ಕಾಂಗ್ರೆಸ್ ಪಕ್ಷದ,ದಲಿತ ಸಂಘಟನೆಗಳ,ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
Breaking News
- ಶ್ರೀನಿವಾಸಪುರದಲ್ಲಿ TARGET ಒಂಟಿ ಮನೆ ದರೋಡೆ
- ಅಸೆಂಬ್ಲಿಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಶಾಸಕರು!
- ಆಂಧ್ರ ಪ್ರಭಾವಿಮಂತ್ರಿ ಲೋಕೆಶ್ ರನ್ನು ಭೇಟಿಮಾಡಿದ ಶಾಸಕ ವೆಂಕಟಶಿವಾರೆಡ್ಡಿ
- ಕೋಲಾರದಲ್ಲಿ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಉಪನ್ಯಾಸಕರು
- ಕೋಲಾರ ಜಿಲ್ಲೆಗೆ ಒಕ್ಕರಿಸಿರುವ “ಓಜಿಕುಪ್ಪಂ ಕದೀಮರ ಗ್ಯಾಂಗ್”!
- ಪಂಚೆಯಲ್ಲಿ ಬಂದ ರೈತನನ್ನು ತಡೆದ ಮಾಲ್ ಸಿಬ್ಬಂದಿ ಸಾರ್ವಜನಿಕರ ವಿರೋಧ!
- ಶ್ರೀನಿವಾಸಪುರದಲ್ಲಿ ಹಾಡುಹಗಲೆ ಸ್ಕೂಟರನಲ್ಲಿದ್ದ ಹಣ ಕದ್ದ ಖದೀಮರ ಗ್ಯಾಂಗ್!
- ಅಂದು ಅಂಗನವಾಡಿ ಟೀಚರ್ ಇಂದು MLA
- ಅಮೇರಿಕಾದ ಅಟ್ಲಾಂಟದಲ್ಲೂ ಭದ್ರಾಚಲಂ ಶ್ರೀರಾಮಯ್ಯನ ದೇವಾಲಯ
- ಕಾಶ್ಮೀರದಲ್ಲಿ ಮತ್ತೆ ಗರಿಗೆದರುತ್ತಿರುವ ಉಗ್ರರ ಕೃತ್ಯಗಳು!
Friday, July 26