ಶ್ರೀನಿವಾಸಪುರ:ಹಣದ ವಿಚಾರವಾಗಿ ಕರ್ನಾಟಕದ ಇಬ್ಬರು ಆಂಧ್ರದ ರಾಮಸಮುದ್ರಂನಲ್ಲಿ ಜಗಳ ಆಡಿಕೊಂಡಿದ್ದು ನಂತರ ಊರಿಗೆ ವಾಪಸ್ಸು ಆಗಿದ್ದಾರೆ ಸಂಜೆ ಗ್ರಾಮದ ಬಸ್ ನಿಲ್ದಾಣದ ಬಳಿ ನ್ಯಾಯ ಪಂಚಾಯಿತಿ ಮಾಡುವ ಸಲುವಾಗಿ ಇಬ್ಬರು ಸೇರಿಕೊಂಡು ಜಗಳ ಆಡಿಕೊಂಡಿದ್ದಾರೆ ಈ ಸಂದರ್ಭದಲ್ಲಿ ಚಾಕುವಿನಿಂದ ಇರಿಯಲಾಗಿದ್ದು ಒರ್ವ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿ ಗ್ರಾಮದ ಬಸ್ ನಿಲ್ದಾಣದ ಬಳಿ ಇಂದು ಸೋಮವಾರ ರಾತ್ರಿ 8 ಗಂಟೆ ಸಮಯದಲ್ಲಿ ನಡದಿರುತ್ತದೆ.
ಮೃತನನ್ನು ಗುಂತವಾರಿಪಲ್ಲಿ ಮಂಜುನಾಥ್(32) ಎಂದು ಗುರತಿಸಲಾಗಿದೆ ಮೃತ ಮಂಜುನಾಥ್ ಹಾಗು ಕೂಳಗೂರ್ಕಿಯ ಶಿಮೂರ್ತಿ ಇಬ್ಬರು ಹಣಕಾಸು ವಿಚಾರವಾಗಿ ಆಂಧ್ರದ ರಾಮಸಮುದ್ರಂನಲ್ಲಿ ಇಂದು ಕಿತ್ತಾಡಿಕೊಂಡಿದ್ದಾರೆ ಇಬ್ಬರು ಊರಿಗೆ ವಾಪಸ್ಸು ಬಂದಿದ್ದಾರೆ ಮತೆ ತಡ ಸಂಜೆ ಇಬ್ಬರು ಸೋಮಯಾಜಲಹಳ್ಳಿ ಬಸ್ ನಿಲ್ದಾಣದ ಬಳಿ ನ್ಯಾಯ ಪಂಚಾಯಿತಿ ಹೆಸರಿನಲ್ಲಿ ಸೇರಿದ್ದಾರೆ ಅಲ್ಲಿ ಮತ್ತೆ ಜಗಳ ಆಡಿಕೊಂಡಿದ್ದು ಪರಸ್ಪರ ತಳ್ಳಾಡಿಕೊಂಡಿದ್ದಾರೆ ಈ ಸಂದರ್ಬದಲ್ಲಿ ಶಿಮೂರ್ತಿ ಕೈಯಲ್ಲಿದ್ದ ಚಾಕುವಿನಿಂದ ಇರಿದಿದ್ದಾಗಿ ಹೇಳಲಾಗಿದ್ದು ಪೋಲಿಸರ ತನಿಖೆಯಲ್ಲಿ ಸತ್ಯಾಂಶ ಹೋರಬರಬೇಕಾಗಿದೆ.
ಶಿವಮೂರ್ತಿ ಮನೆಗೆ ಬೆಂಕಿ ಹಚ್ಚಲು ಮುಂದಾದ ಗುಂಪು
ಚಾಕು ಇರಿತದಿಂದ ಮಂಜುನಾಥ್ ಸಾವನಪ್ಪಿರುವ ಸುದ್ದಿ ಹರಡುತ್ತಿದ್ದಂತೆ ಮೃತ ಮಂಜುನಾಥ್ ಕಡೆಯವರು ಗುಂಪು ಗೂಡಿಕೊಂಡು ಕೂಳಗುರ್ಕಿಯಲ್ಲಿನ ಶಿಮೂರ್ತಿ ಮನೆ ಮೇಲೆ ದಾಳಿಮಾಡಿ ಮನೆಗೆ ಬೆಂಕಿ ಹಚ್ಚಲು ಮುಂದಾಗಿದ್ದು ಸಕಾಲದಲ್ಲಿ ಪೋಲಿಸರು ಆಗಮಿಸಿ ಗುಂಪನ್ನು ಚದುರಿದ್ದಾರೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



