ಶ್ರೀನಿವಾಸಪುರ:ತಾಲೂಕಿನಲ್ಲಿ ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಳದಲ್ಲಿ ಹೈಡ್ರಾಮ ನಡೆದು ಕೆಲ ಹೊತ್ತು ಸಂಸದ ಮುನಿಸ್ವಾಮಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ನಡುವೆ ಮಾತಿನ ಚಕಮುಖಿ ನಡೆಯಿತು.
ಕಂದಾಯ ಇಲಾಖೆ ಹಾಗು ಅರಣ್ಯ ಇಲಾಖೆ ಜಂಟಿ ಸರ್ವೆ ಆಗುವ ವರಿಗೂ ಅರಣ್ಯ ತೆರವು ಕಾರ್ಯಾಚರಣೆ ನಿಲ್ಲಿಸುವಂತೆ ಸಂಸದ ಮುನಿಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕಾರ್ಯಾಚರಣೆಯ ಸ್ಥಳಕ್ಕೆ ಹೋಗಲು ಮುಂದಾದಾಗ ಅರಣ್ಯ ಇಲಾಖೆ ಹಾಗು ಪೊಲೀಸ್ ಸಿಬ್ಬಂದಿ ಸಂಸದರನ್ನು ಸ್ಥಳದಿಂದ ಕದಲದಂತೆ ಸುತ್ತುವರಿದಿದ್ದರಿಂದ ಸ್ಥಳದಲ್ಲಿ ಕೆಲಹೊತ್ತು ಬೀಗುವಿನ ವಾತಾವರಣ ನಿರ್ಮಾಣವಾಗಿತ್ತು.ನಂತರದಲ್ಲಿ ಕೆಲ ರೈತರು ಕಂದಾಯ ಇಲಾಖೆ ಜಮೀನಿಗಳಿಗೆ ನೀಡಿರುವ ದಾಖಲೆಗಳನ್ನು ಸಂಸದರಿಗೆ ನೀಡಿದಾಗ ಸಂಸದ ಮುನಿಸ್ವಾಮಿ ತಹಶೀಲ್ದಾರ್ ಅವರಿಗೆ ದೂರವಾಣಿ ಮೂಲಕ ಮಾತನಾಡಿ ಕಂದಾಯ ಇಲಾಖೆ ನೀಡಿರುವ ದಾಖಲೆಗಳನ್ನು ಇಟ್ಟುಕೊಂಡು ಸಾಗುವಳಿ ಮಾಡುತ್ತಿರುವ ರೈತರ ಜಮೀನು ಅರಣ್ಯ ಇಲಾಖೆಯವರು ಕಿತ್ತುಕೊಳ್ಳುತ್ತಿದ್ದರು ನೀವು ಯಾಕೆ ರೈತರಿಗೆ ಸ್ಪಂದಿಸುತ್ತಿಲ್ಲ ಎಂದು ಪ್ರಶ್ನಿಸಿದರು,ಎಪ್ಪತ್ತು-ಎಂಬತ್ತು ವರ್ಷಗಳಿಂದ ರೈತರು ಜಮೀನು ದಾಖಲೆ ಹೊಂದಿದ್ದರು ಕರುಣೆ ಇಲ್ಲದಂತೆ ಏಕಾಏಕಿ ಮರಗಳನ್ನು ಯಾಕೆ ತೆರವು ಮಾಡ್ತಿದೀರಿ ಎಂದು ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ತರಾಟೆಗೆ ತಗೆದುಕೊಂಡರು. ಅರಣ್ಯ ಇಲಾಖೆ ಅಧಿಕಾರಿಗಳ ವರ್ತನೆ ಕುರಿತಾಗಿ ಸೂಕ್ತ ವೇದಿಕೆಗಳ ಮೂಲಕ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದು ಮುಂದಿನ ದಿನಗಳಲ್ಲಿ ರೈತರ ಹಕ್ಕಿಗಾಗಿ ಹೋರಾಟ ಮಾಡುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್,ಮುಖಂಡರಾದ ರೋಣುರುಚಂದ್ರಶೇಖರ್,ಕೆ.ಎಂ.ಎಫ್ ಮಾಜಿ ನಿರ್ದೇಶಕ ದ್ವಾರಸಂದ್ರ ಮುನಿವೆಂಕಟಪ್ಪ,ರಘುನಾಥಗೌಡ ರೈತಮುಖಂಡ ಮುಳಬಾಗಿಲು ಗೋಪಾಲ್ ಮುಂತಾದವರು ಇದ್ದರು
Breaking News
- IAS ಗಂಡನ ಬಿಟ್ಟು ರೌಡಿ ಜತೆ ಹೋದ ಗರತಿಯ ಕಥೆ ಏನಾಯಿತು?
- ಶ್ರೀನಿವಾಸಪುರದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ವೀಕಲಚೇತನರಿಗೆ ವೀಲ್ ಚೇರ್ ವಿತರಣೆ.
- ಶ್ರೀನಿವಾಸಪುರದಲ್ಲಿ TARGET ಒಂಟಿ ಮನೆ ದರೋಡೆ
- ಅಸೆಂಬ್ಲಿಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಶಾಸಕರು!
- ಆಂಧ್ರ ಪ್ರಭಾವಿಮಂತ್ರಿ ಲೋಕೆಶ್ ರನ್ನು ಭೇಟಿಮಾಡಿದ ಶಾಸಕ ವೆಂಕಟಶಿವಾರೆಡ್ಡಿ
- ಕೋಲಾರದಲ್ಲಿ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಉಪನ್ಯಾಸಕರು
- ಕೋಲಾರ ಜಿಲ್ಲೆಗೆ ಒಕ್ಕರಿಸಿರುವ “ಓಜಿಕುಪ್ಪಂ ಕದೀಮರ ಗ್ಯಾಂಗ್”!
- ಪಂಚೆಯಲ್ಲಿ ಬಂದ ರೈತನನ್ನು ತಡೆದ ಮಾಲ್ ಸಿಬ್ಬಂದಿ ಸಾರ್ವಜನಿಕರ ವಿರೋಧ!
- ಶ್ರೀನಿವಾಸಪುರದಲ್ಲಿ ಹಾಡುಹಗಲೆ ಸ್ಕೂಟರನಲ್ಲಿದ್ದ ಹಣ ಕದ್ದ ಖದೀಮರ ಗ್ಯಾಂಗ್!
- ಅಂದು ಅಂಗನವಾಡಿ ಟೀಚರ್ ಇಂದು MLA
Saturday, July 27