ಶ್ರೀನಿವಾಸಪುರ: ಬಿರುಗಾಳಿ ಸಮೇತದ ಮಳೆಯ ಆರ್ಭಟಕ್ಕೆ ಶ್ರೀನಿವಾಸಪುರ ಭಾಗದ ಜೀವನಾಡಿ ಮಾವಿನಕಾಯಿಗಳು ನೆಲದ ಪಾಲಾಗಿದೆ ಸುಮಾರು ಒಂದು ಗಂಟೆಯ ಕಾಲ ಬೀಸಿದಂತ ಬಿರುಗಾಳಿಗೆ ಬಾರಿಗಾತ್ರದ ಮರಗಳು ನೆಲಕ್ಕೂರಳಿದೆ.
ಭಾನುವಾರ ಸಂಜೆ ಬಿರುಸಾದ ರಕ್ಕಸ ಗಾಳಿ ಮಳೆಯಿಂದ ಇಲ್ಲಿನ ರೈತಾಪಿ ಜನರ ವಾರ್ಷಿಕ ಜೀವನಾಡಿ ಬೆಳೆಯಾದ ಮಾವು ಸಂಪೂರ್ಣವಾಗಿ ನೆಲಕಚ್ಚಿದೆ ಗಂಟೆಗೆ ಅಂದಾಜು 30-40 ಕೀ.ಮಿ ವೇಗದಲ್ಲಿ ಬೀಸಿದಂತ ಗಾಳಿಯ ರಭಸಕ್ಕೆ ವಿಶೇಷವಾಗಿ ರೋಣೂರು ಹೋಬಳಿ ಕಸಬಾ ಹಾಗು ಯಲ್ದೂರು ಹೋಬಳಿಯ ಭಾಗದಲ್ಲಿ ಹೆಚ್ಚು ಬೆಳೆ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.ಮಾವು ಬೆಳೆಯ ಜೊತೆಗೆ ತೋಟಗಾರಿಕೆ ಬೆಳೆಗಳಾದ ಟಮ್ಯಾಟೊ ಸೇರಿದಂತೆ ಇತರೆ ಬೆಳೆಗಳು ಹಾಳಾಗಿದೆ.ಶೇಡ್ ಮನೆಗಳ ತಗಡಿನ ರೇಖುಗಳು ಗಾಳಿಯ ಆರ್ಭಟಕ್ಕೆ ಹಾರಿಹೋಗಿದೆ.
ಇದ-ಬದ್ದ ಬೆಳೆಯೂ ಹೋಯಿತು
ಕಳೆದ ಎರಡು ಮೂರು ತಿಂಗಳ ಹಿಂದೆ ಬಿದ್ದಂತ ಆಲಿಕಲ್ಲು ಮಳೆಯಿಂದ ಶೇ%60 ರಷ್ಟು ಮಾವು ಬೆಳೆ ಹೂ ಹಾಗು ಪಿಂದೆ ಹಂತದಲ್ಲಿಯೇ ಹಾಳಾಗಿತ್ತು ಇದ್ದ 30-40 ಭಾಗದಷ್ಟು ಬೆಳೆ ಇನ್ನೇನು ಹತ್ತು ಹದಿನೈದು ದಿನಗಳಲ್ಲಿ ಕೊಯ್ಲು ಮಾಡಬೇಕಿದ್ದ ಮಾವು ಬೆಳೆ ಗಾಳಿಯ ರಭಸಕ್ಕೆ ಹಾಗು ಕೆಲವೊಂದು ಗ್ರಾಮಗಳಲ್ಲಿ ಆಲಿಕಲ್ಲು ಬಿದ್ದು ನೆಲದ ಪಾಲಾಗಿದೆ ಎಂದು ರೈತ ಸೂರ್ಯನಾರಯಣ ಹೇಳುತ್ತಾರೆ
ಪರಿಹಾರಕ್ಕೆ ಅಗ್ರಹ
ಇಂದು ಬಿದ್ದ ಬಿರುಗಾಳಿ ಸಮೇತ ಮಳೆಯಿಂದ ಮಾವು ಬೆಳೆ ನಷ್ಟಕ್ಕೆ ಒಳಗಾಗಿದ್ದು ಮಾವುಬೆಳೆಗಾರರಿಗೆ ಸರ್ಕಾರ ತೋಟಗಾರಿಕೆ ಹಾಗು ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಿ ಬೆಳೆಹಾನಿ ಪರಿಹಾರ ಕೊಡಬೇಕು ಎಂದು ಮಾವು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡ ನವೀನ್ ಕುಮಾರ್ ಸರ್ಕಾರವನ್ನು ಹಾಗು ಇದಕ್ಕೆ ಸ್ಥಳೀಯ ಶಾಸಕರು ವಿಧಾನಪರಿಷತ್ ಸದಸ್ಯರು ಸ್ಪಂದಿಸಬೇಕು ಎಂದು ಒತ್ತಾಯಿಸಿದ್ದಾರೆ.
Trending
- ಶ್ರೀನಿವಾಸಪುರ:ಸೂರ್ಯನ ಪ್ರತಾಪಕ್ಕೆ ತತ್ತರಿಸುತ್ತಿರುವ ಜನ!
- ಆಂಧ್ರದ ಅಮರಾವತಿ ದೇಶದ ಮೊದಲ ‘Quantum Valley’!
- ಭಾರತೀಯ ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ! ಪ್ರತಿಭಟನೆ ವ್ಯಕ್ತಪಡಿಸಿದ ಭಾರತ.
- ಪ್ರೊಫೆಷನಲ್ ಕೊರಿಯರ್ಸ್ ವತಿಯಿಂದ “ಪ್ರೊ ಇಎಕ್ಸ್ ಅಲ್ಟ್ರಾ”ಸೇವೆ ಆರಂಭ!
- ಶ್ರೀನಿವಾಸಪುರ:ನಿವೃತ್ತ ಸೈನಿಕನನ್ನು ಸನ್ಮಾನಿಸಿದ ಸಚಿವ ಮುನಿಯಪ್ಪ
- ಆಂಧ್ರದ ರಾಜಧಾನಿ “ಅಮರಾವತಿ” ಕೇಂದ್ರ ಸರ್ಕಾರ ಗೆಜೆಟ್ ಘೋಷಣೆ.
- ಶ್ರೀನಿವಾಸಪುರ:ಜಗಜೀವನರಾಮ್ ಜಯಂತಿ ಮೆರವಣಿಗೆ ಶಾಸಕ ವೆಂಕಟಶಿವಾರೆಡ್ಡಿ ಭಾಗಿ.
- ಶ್ರೀನಿವಾಸಪುರ:ಮಹಿಳಾ ಉದ್ಯಮಿ ರತ್ನಮ್ಮಗೆ ರಾಣಿ ಚನ್ನಮ್ಮ ರಾಜ್ಯ ಪ್ರಶಸ್ತಿ!
Thursday, April 23



