- ಎಲ್ಲಾ ಸಮುದಾಯದವರು ನನ್ನವರೆ
- ನಾನು ಜಾತಿವಾರು ರಾಜಕಾರಣ ಮಾಡುವುದಿಲ್ಲ
- ಪರಿಶಿಷ್ಠ ಜಾತಿ ಪಂಗಡದವರಿಗೆ ಸರ್ಕಾರಿ ಸೌಲತ್ತು ಕೊಡಿಸದ ಶಾಸಕ
ಶ್ರೀನಿವಾಸಪುರ: ಕಳೆದ ಎರಡು ಚುನಾವಣೆಗಳಲ್ಲಿ ಸೋತಿರುವ ಮಾಜಿ ಶಾಸಕ ಹಾಗು ಜೆ.ಡಿ.ಎಸ್ ಅಭ್ಯರ್ಥಿ ವೆಂಕಟಶಿವಾರೆಡ್ಡಿ ಈ ಚುನಾವಣೆಯಲ್ಲಿ ಶತಾಯಗತಾಯ ಗೆಲವು ಸಾಧಿಸಬೇಕು ಎಂದು ತಾಲೂಕಿನಾದ್ಯಂತ ಕಾಲಿಗೆ ಚಕ್ರ ಕಟ್ಟಿಕೊಂಡು ನಿರಂತರವಾಗಿ ಒಡಾಡುತ್ತಿದ್ದು ಅವರು ಇಂದು ಶ್ರೀನಿವಾಸಪುರ ಪಟ್ಟಣದಲ್ಲಿ ಸಹಸ್ರಾರು ಜನರೊಂದಿಗೆ ಭರ್ಜರಿ ರ್ಯಾಲಿ ಮೂಲಕ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು,ಪಟ್ಟಣದ ಕಟ್ಟೆ ಕೆಳಗಿನ ಪಾಳ್ಯದಿಂದ ಆರಂಭವಾದ ರೋಡ್ ಶೋ ವಲ್ಲಭಾಯಿ ರಸ್ತೆ ಶಂಕರಮಠದ ವೃತ್ತ,ರಂಗಾರಸ್ತೆ ವೃತ್ತ ಮುಳಬಾಗಿಲು ವೃತ್ತ ಎಂ.ಜಿ.ರಸ್ತೆ ಮೂಲಕ ಇಂದಿರಾಭವನ್ ಸರ್ಕಲ್ ನಿಂದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಾರಿಗೂ ಸಾಗಿತ್ತು ಈ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.
![](https://www.vcsnewz.com/wp-content/uploads/2023/04/9423.2.jpg)
![](https://www.vcsnewz.com/wp-content/uploads/2023/04/9423.3-1024x462.jpg)
![](https://www.vcsnewz.com/wp-content/uploads/2023/04/9423.7.jpg)
ಪಟ್ಟಣದ ಬಿ.ಎಲ್. ಕುಟುಂಬದ ಸದಸ್ಯೆ ಪುರಸಭೆ ಮಾಜಿ ಅಧ್ಯಕ್ಷೆ ಚಂದ್ರಕಲಾ ಅವರ ನೇತೃತ್ವದಲ್ಲಿ ಬಿ.ಎಲ್.ಸೀನಾ,ದುರ್ಗಾಪ್ರಸಾದ್,ಗೌತಮ್ ಮುಂತಾದವರು ಸೇರ್ಪಡೆಯಾದರು. ಗಾರೆ ಮೇಸ್ತ್ರೀ ಕುಟುಂಬ ಎಂದು ಖ್ಯಾತಿ ಪಡೆದಿರುವ ಈರಗಕ್ಕಗಾರಿ ನಾಗರಾಜ್ ಮತ್ತು ಸಹೋದರರು,ಬಿಲ್ಡಿಂಗ್ ಕಂಟ್ರಾಕ್ಟರ್ ನೆತ್ತೊಳ್ಳು ಶ್ರೀರಾಮ್ ಕುಟುಂಬದವರು,ಬಾಂಬೆ ನಾಗರಾಜ್,ಮುನಿರಾಜ್,ಕುಂಬಾರ ಸಮುದಾಯದ ಹಿರಿಯ ಮುಖಂಡ ಕೆ.ಕೆ.ಕೃಷ್ಣಪ್ಪ,ಕುರುಬ ಸಮಾಜದ ಮುಖಂಡ ಬಿ.ಪಿ.ನಾರಯಣಸ್ವಾಮಿ ಸೇರಿದಂತೆ ದೊಡ್ದ ಸಂಖ್ಯೆಯಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ಸೇರ್ಪಡೆಯಾದರು.
![](https://www.vcsnewz.com/wp-content/uploads/2023/04/9423.5.jpg)
![](https://www.vcsnewz.com/wp-content/uploads/2023/04/9423.6.jpg)