ಶ್ರೀನಿವಾಸಪುರ:ಚುನಾವಣೆ ನಿನ್ನೆ ನಡೆದಿದ್ದು ಚುನಾವಣೆ ನಡೆಯುವ ಸಂದರ್ಬದಲ್ಲಿ ಹೈದರಾಲಿ ಮೊಹಲ್ಲಾದ ಉರ್ದು ಶಾಲೆ ಮತಗಟ್ಟೆ 147 ಬಳಿ ಎರಡು ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಕೈ ಕೈ ಮೀಲಾಯಿಸಿದ್ದು ಕಾಂಗ್ರೆಸ್ ಪುರಸಭೆ ಸದಸ್ಯ ಎ.ಟಿ.ಎಸ್. ತಜಮಲ್ ಹಾಗು ಜೆ.ಡಿ.ಎಸ್. ಮುಖಂಡ ಸಾಧಿಕ್ ನಡುವೆ ತೀವ್ರ ಹೊಡೆದಾಟಗಳಾಗಿತ್ತು ಈ ಸಮಯದಲ್ಲಿ ಪೋಲಿಸರು ಲಾಠಿ ಚಾರ್ಜ್ ಮಾಡಿ ಕಾರ್ಯಕರ್ತರನ್ನು ಚದುರಿಸಿದ್ದರು ಆದರೆ ನಿನ್ನೆಯ ಗಲಾಟೆ ಇಂದು ಸಹ ಮುಂದುವರೆದಿದ್ದು ಇಂದು ಗುರುವಾರ ಸಂಜೆ ಉರ್ದು ಸ್ಕೂಲ್ ಬಳಿ ಕುಳತಿದ್ದ ಎ.ಟಿ.ಎಸ್. ತಜಮಲ್ ಅವರನ್ನು ಸಾಧಿಕ್ ಕಡೆಯವರು ಎನ್ನಲಾದ ಯುವಕರು ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ,ಹಲ್ಲೆಗೊಳಗಾದ ವ್ಯಕ್ತಿಯನ್ನು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿಸ್ಥೆಗಾಗಿ ಕೋಲಾರಕ್ಕೆ ಸಾಗಿಸಲಾಗಿದೆ.
ಪಟ್ಟಣದ ಚಿಂತಾಮಣಿ ವೃತ್ತ ಸುತ್ತ ಮುತ್ತ ತ್ವೇಷಮಯ ವಾತಾವರಣ ನಿರ್ಮಾಣವಾಗಿ ಜನ ಅತಂಕ ಗೊಂಡಿದ್ದಾರೆ.ಮುನ್ನೆಚರಿಕೆ ಕ್ರಮವಾಗಿ ಸ್ಥಳದಲ್ಲಿ ರಾಜ್ಯ ಸಶಸ್ತ್ರ ಮೀಸಲು ಪಡೆ ಪೋಲಿಸರನ್ನು ನಿಯೋಜಿಸಿ ಬಿಗಿ ಬದ್ರತೆ ಎರ್ಪಡಿಸಿದೆ,ಘಟನಾ ಸ್ಥಳಕ್ಕೆ ಕೋಲಾರ ಜಿಲ್ಲಾ ಎಸ್.ಪಿ ನಾರಯಣ್ ಡಿ.ವೈ.ಎಸ್.ಪಿ ಜೈಶಂಕರ್ ಭೇಟಿ ನೀಡಿದ್ದಾರೆ, ಪಟ್ಟಣದಲ್ಲಿ ಸೇಕ್ಷನ್ 144 ಜಾರಿ ಮಾಡಲಾಗಿದೆ.
Trending
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ರಸ್ತೆ ಅಪಘಾತ ಇಬ್ಬರ ಸಾವು!
- ಮಾವು ಬೆಳೆಗಾರರಿಂದ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ,ಅಹೋರಾತ್ರಿ ಧರಣಿ!
- Sorry,Papa:ನಿಮ್ಮ ಕನಸು ಈಡೇರಿಸಲಾಗಲಿಲ್ಲ,ಸೋತು ಹೋದೆ ಎಂದ BTech ಪದವೀಧರ!
- ಅಣ್ಣನ LOVE ನಿರಾಕರಿಸಿದ ವಿದ್ಯಾರ್ಥಿನಿಯ ಹತ್ಯೆ ಮಾಡಿದ ತಮ್ಮ!
- ಆಂಧ್ರದ ಮಾವು ಚಿಂತಾಮಣಿ ಪ್ಯಾಕ್ ಹೌಸ್ ಸಹಕಾರದೊಂದಿಗೆ ಸಿಂಗಾಪುರಕ್ಕೆ!
- “ಏನ್ ಹುಡ್ಗಿರೋ” ಕೆಲಸ ಹಣಕ್ಕಾಗಿ ಹೆತ್ತ ಅಪ್ಪ-ಅಮ್ಮನನ್ನು ಕೊಂದ ಪಾಪಿ ಮಗಳು!
- ಶ್ರೀನಿವಾಸಪುರ ಅರಣ್ಯ ತೆರವು ಜಾಗದಲ್ಲಿ ಅರಣ್ಯ ಇಲಾಖೆ ವನಮಹೋತ್ಸವ
- ಅಮ್ಮ,ಅಜ್ಜಿ ಮಾವನನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಯುವಕ!
Thursday, July 23



