ಶ್ರೀನಿವಾಸಪುರ:ತಾಲೂಕಿನಲ್ಲಿ ಆಮ್ ಆದ್ಮಿ ಪಕ್ಷ ಸಂಘಟನೆಯಲ್ಲಿ ಖ್ಯಾತ ವೈದ್ಯ ಡಾ.ವೆಂಕಟಾಚಲ ಪೂರ್ತಿಯಾಗಿ ತೊಡಗಿಸಿಕೊಂಡು ತಾಲೂಕಿನಾದ್ಯಂತ ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಭಿರಗಳನ್ನು ಆಯೋಜಿಸುತ್ತ ಜನರ ನಾಡಿ ಮೀಡಿತ ಹಿಡಿದು ಸಾಗುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಆರೋಗ್ಯ ಶಿಭಿರಗಳನ್ನು ಆಯೋಜಿಸಿ ಜನರ ಆರೋಗ್ಯ ಆಂದೋಲನ ಮೂಲಕ ಚಿಕಿತ್ಸೆ ಕೊಡುವುದು ಸೇರಿದಂತೆ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳ ಕುರಿತಾದ ಮಾಹಿತಿ ಸಂಗ್ರಹಣೆ ಹಾಗು ಆರೋಗ್ಯ ಜಾಗ್ರತೆ ಮೂಡಿಸುತ್ತಿದ್ದೇವೆ ಎನ್ನುತ್ತಾರೆ ಇಲ್ಲಿನ ರಾಜಕೀಯ ವ್ಯವಸ್ಥೆಯಲ್ಲಿ ಮಾನವೀಯತೆ ಇಲ್ಲದಂತಾಗಿದೆ ಹಿರಿಯರ ನಿರ್ಲಕ್ಷತ್ಯೆ ಗ್ರಾಮೀಣರ ಆರೋಗ್ಯದ ಬಗ್ಗೆ ಉದಾಸೀನ ಇಲ್ಲಿ ಎದ್ದು ಕಾಣುತ್ತಿದೆ ಎಂದ ಅವರು ಕ್ಷೇತ್ರದಲ್ಲಿ ಸರ್ಕಾರದವತಿಯಿಂದ ನೀಡುವ ಮೂಲಭೂತ ಸೌಕರ್ಯಗಳನ್ನು ಓಟು ರಾಜಕೀಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.
![](https://www.vcsnewz.com/wp-content/uploads/2022/12/51222.2.jpg)
![](https://www.vcsnewz.com/wp-content/uploads/2022/12/51222.1.jpg)
ಪ್ರತಿ ಸಂತೇಯಲ್ಲೂ ಆರೋಗ್ಯ ಕೇಂದ್ರ
ತಾಲೂಕಿನಲ್ಲಿ ನಡೆಯುವಂತ ಪ್ರತಿ ಸಂತೆಯಲ್ಲೂ ಡಾ.ವೆಂಕಟಾಚಲ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿ ಅಲ್ಲಿಗೆ ಬರುವಂತ ಜನರ ಮಧುಮೇಹ,ರಕ್ತದೊತ್ತಡದಂತ ಖಾಯಿಲೆಗಳನ್ನು ಪರಿಕ್ಷಿಸಿ ಅಂತಹ ವ್ಯಕ್ತಿಗಳಿಗೆ ಸಮತೋಲನಾ ಆಹಾರಪದ್ದತಿ ಮತ್ತು ಜೀವನ ಶೈಲಿ ಕುರಿತಾಗಿ ವಿಶೇಷವಾಗಿ ಅರಿವು ಮೂಡಿಸಿ ಸಲಹೆಗಳನ್ನು ನೀಡುವುದಾಗಿ ಹೇಳಿದರು.