ಶ್ರೀನಿವಾಸಪುರ: ಮಾನಸೀಕವಾಗಿ ಮನನೊಂದ ವ್ಯಕ್ತಿಯೊಬ್ಬ ತನ್ನ ಇಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಶ್ರೀನಿವಾಸಪುರ ತಾಲ್ಲೂಕಿನ ಯಲ್ದೂರು ಹೋಬಳಿ ಶಿಗಪಲ್ಲಿ@ಶೀಗೆಹಳ್ಳಿ ಗ್ರಾಮದಲ್ಲಿ ನಡೆದಿದೆ.
ಇಬ್ಬರು ಮಕ್ಕಳಿಗೆ ವಿಷ ಕುಡಿಸಿ ತಾನು ನೇಣಿಗೆ ಶರಣಾದ ತಂದೆಯೊಬ್ಬನ ಕಥೆ,ಕೃಷಿ ಕಾರ್ಮಿಕನಾಗಿದ್ದ ಶಿಗಪಲ್ಲಿ ನಾರಾಯಣಸ್ವಾಮಿ (40) ಹೆಂಡತಿ ಹಾಗು ಇಬ್ಬರು ಮಕ್ಕಳೊಂದಿಗೆ ಗ್ರಾಮದಲ್ಲಿಯೇ ವಾಸವಾಗಿದ್ದ ಇತ್ತಿಚಿಗೆ ಗಂಡ ಹೆಂಡತಿ ನಡುವೆ ಅನ್ಯೊನ್ಯತೆ ಕಡಿಮೆಯಾಗಿ ಪತ್ನಿ ಕಾಣೆಯಾಗುತ್ತಾಳೆ, ಈ ಬಗ್ಗೆ ಗ್ರಾಮದಲ್ಲಿ ಹಲವಾರು ಉಹಾಪೋಹಗಳು ಹರಡುತ್ತವೆ,ನಂತರದ ಬೆಳವಣಿಗೆಯಲ್ಲಿ ಆಕೆ ಕೋಲಾರದ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿರುವುದಾಗಿ ಹೇಳುತ್ತಾರೆ,ಇತ್ತ ನಾರಯಣಸ್ವಾಮಿ ಬಗ್ಗೆ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಹಳೆಯ ಪ್ರಕರಣಕ್ಕೆ ಸಂಬಂದಿಸಿದಂತೆ ದೂರು ಇದ್ದು ಪೋಲಿಸರು ಕರೆದಾಗ ಠಾಣೆಗೆ ಹೋಗಿಬರುತ್ತಿದ್ದ, ಹೀಗೆ ಹಲವಾರು ರಿತಿಯಲ್ಲಿ ಮಾನಸಿಕವಾಗಿ ತೊಳಲಾಟಕ್ಕೆ ಸಿಲುಕಿದ್ದ ಆತ ತನ್ನ ಇಬ್ಬರು ಮಕ್ಕಳಾದ ಪವನ್ (12) ಮತ್ತು ನಿತಿನ್ (10) ವಿಷ ಕುಡಿಸಿ ತಾನು ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸುತ್ತಾರೆ.
ಈ ಸಂಬಂಧ ಶ್ರೀನಿವಾಸಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಇನ್ಸಪೇಕ್ಟರ್ ಗೊರವನಕೊಳ್ಳ ಭೇಟಿ ನೀಡಿರುತ್ತಾರೆ.
Breaking News
- IAS ಗಂಡನ ಬಿಟ್ಟು ರೌಡಿ ಜತೆ ಹೋದ ಗರತಿಯ ಕಥೆ ಏನಾಯಿತು?
- ಶ್ರೀನಿವಾಸಪುರದಲ್ಲಿ ಧರ್ಮಸ್ಥಳ ಸಂಸ್ಥೆಯಿಂದ ವೀಕಲಚೇತನರಿಗೆ ವೀಲ್ ಚೇರ್ ವಿತರಣೆ.
- ಶ್ರೀನಿವಾಸಪುರದಲ್ಲಿ TARGET ಒಂಟಿ ಮನೆ ದರೋಡೆ
- ಅಸೆಂಬ್ಲಿಯಲ್ಲಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಬಿಜೆಪಿ-ಜೆಡಿಎಸ್ ಶಾಸಕರು!
- ಆಂಧ್ರ ಪ್ರಭಾವಿಮಂತ್ರಿ ಲೋಕೆಶ್ ರನ್ನು ಭೇಟಿಮಾಡಿದ ಶಾಸಕ ವೆಂಕಟಶಿವಾರೆಡ್ಡಿ
- ಕೋಲಾರದಲ್ಲಿ ಕೈ ಕೈ ಮಿಲಾಯಿಸಿ ಬಡಿದಾಡಿಕೊಂಡ ಉಪನ್ಯಾಸಕರು
- ಕೋಲಾರ ಜಿಲ್ಲೆಗೆ ಒಕ್ಕರಿಸಿರುವ “ಓಜಿಕುಪ್ಪಂ ಕದೀಮರ ಗ್ಯಾಂಗ್”!
- ಪಂಚೆಯಲ್ಲಿ ಬಂದ ರೈತನನ್ನು ತಡೆದ ಮಾಲ್ ಸಿಬ್ಬಂದಿ ಸಾರ್ವಜನಿಕರ ವಿರೋಧ!
- ಶ್ರೀನಿವಾಸಪುರದಲ್ಲಿ ಹಾಡುಹಗಲೆ ಸ್ಕೂಟರನಲ್ಲಿದ್ದ ಹಣ ಕದ್ದ ಖದೀಮರ ಗ್ಯಾಂಗ್!
- ಅಂದು ಅಂಗನವಾಡಿ ಟೀಚರ್ ಇಂದು MLA
Saturday, July 27