ನ್ಯೂಜ್ ಡೆಸ್ಕ್:ಬಹುತೇಕ ನಾಸ್ತಿಕರು ತಿರುಪತಿಗೆ ಹೋಗುತ್ತಾರೆ ತಿರುಮಲ ಬೆಟ್ಟಕ್ಕೆ ಹತ್ತಿಹೋಗುತ್ತಾರೆ ಇನ್ನು ಕೆಲವರು ಬಸ್ಸಿನಲ್ಲೊ ಅನಕೂಲವಂತರು ಕಾರಲ್ಲೋ ಹೋಗಿ ಶ್ರೀ ನಿಲಯದಲ್ಲಿ ಶ್ರೀ ವೆಂಕಟೇಶ್ವರನ ದರ್ಶನ ಮಾಡಿಕೊಂಡು ವಾಪಸ್ಸು ಆಗುವುದು ಸಾಮಾನ್ಯ ಆಗುತ್ತಿದೆ.ಒಂದು ಕಾಲದಲ್ಲಿ ಕಾಶಿ ಆಯೋದ್ಯ ರಾಮೇಶ್ವರಕ್ಕೆ ಯಾತ್ರೆಗೆ ಹೊಗುವಂತೆ ಮೂರನಾಲ್ಕು ದಿನಗಳ ತಿರುಪತಿ ಪುಣ್ಯಕ್ಷೇತ್ರಕ್ಕೆ ಹೋಗಿ ಶ್ರೀ ವೇಂಕಟೇಶ್ವರ ದರ್ಶನ ಮಾಡಿಕೊಂಡು ತಿರುಮಲ ಬೆಟ್ಟದ ಪ್ರಕೃತಿಯ ಹಸಿರು ಸೌಂದರ್ಯವನ್ನು ಸವಿದು ನಂತರ ತಿರುಪತಿ ಪಟ್ಟಣದಲ್ಲಿರುವ ಗೋವಿಂದರಾಜಸ್ವಾಮಿ ಅಲಮೇಲು ಮಂಗಾಪುರ ಸೇರಿದಂತೆ ವಿವಿಧ ದೇವಾಲಯಗಳ ದರ್ಶನ ಮಾಡಿಕೊಂಡು ಮೂರುನಾಲ್ಕು ದಿನಗಳ ಯಾತ್ರೆ ಮುಗಿಸಿ ಬರುತ್ತಿದ್ದ ಕಾಲವೊಂದಿತ್ತು ಈಗ ಎಲ್ಲವು ಬದಲಾಗಿದೆ ಬಿಝಿ ಲೈಫ್ ನಲ್ಲಿ ಕಾಲಕ್ಕೆ ತಕ್ಕಂತೆ ತಿರುಮಲ ಆನ್ ಲೈನ್ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ ತಿರುಮಲೇಶನ ದರ್ಶನ ಆಫಿಸ್ ವಿಸಿಟ್ ತರಹ ಆಗಿದೆ ಆನ್ ಲೈನ್ ಟಿಕೆಟ್ ಪಡೆದವರು ಅಪಾಯಿಂಟ್ ಮೆಂಟ್ ಪಡೆದವರಂತೆ ಟಿಕೆಟ್ ನಲ್ಲಿ ನೀಡಿದ ಸಮಯಕ್ಕೆ ಹೋಗಿ ದರ್ಶನ ಮುಗಿಸಿ ಆತುರ ಆತುರವಾಗಿ ತಮ್ಮ ಊರುಗಳಿಗೆ…
Author: Srinivas_Murthy
ಶ್ರೀನಿವಾಸಪುರ: ಹಿಂದುಗಳ ಅತ್ಯತಂತ ಪವಿತ್ರವಾದ ಬೆಳಕಿನ ಹಬ್ಬ ದೀಪಾವಳಿ, ಈ ಹಬ್ಬದಲ್ಲಿ ಹುಡುಗರಿಂದ ಹಿಡಿದು ದೊಡ್ಡವರತನಕ ನರಕಾಸುರನ ಸಂಹಾರ ಮಾಡಿದ ದಿನವಾಗಿ ಪಟಾಕಿ ಹೊಡೆದು ಸಂಭ್ರಮಿಸುತ್ತಾರೆ. ಹಾಗೆ ಸ್ಥಳೀಯವಾಗಿ ಗ್ರಾಮೀಣ ಭಾಗದಲ್ಲಿ ಕೇದಾರೇಶ್ವರ ವ್ರತಾಚರಣೆ(ಕಜ್ಜಾಯಗಳ ಹಬ್ಬ) ಸೋಮವಾರಗಳು ಕಿರುದೀಪಾವಳಿ ಕೊನೆ ಸೋಮವಾರ ಹೀಗೆ ಕಾರ್ತಿಕ ಮಾಸದ ತಿಂಗಳ ಪೂರ್ತಿ ಹಬ್ಬ ಆಚರಿಸುವುದು ವಾಡಿಕೆ, ಹೀಗೆ ಹಬ್ಬ ಮಾಡುವವರು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ ಅಂತಹ ಪಟಾಕಿಗಳನ್ನು ಮಾರಾಟಮಾಡಲು ಶ್ರೀನಿವಾಸಪುರದಲ್ಲಿ ಪಟಾಕಿ ವ್ಯಾಪಾರಸ್ಥರೆ ಇಲ್ಲದಂತಾಗಿ ಪಟಾಕಿ ಪ್ರಿಯರು ನಿರಾಸೆಗೊಂಡಿದ್ದಾರೆ. ಮಕ್ಕಳ ಅಟಿಕೆ ಪಿಸ್ತೂಲ್,ಯುವಕರ ಲಕ್ಷ್ಮೀ ಪಟಾಕಿ, ಆಟಮ್ ಭಾಮ್,ಯುವತಿಯರ ಫ್ಲವರ್ ಪಾಟ್,ಭೂಚಕ್ರಗಳು ಸಿಗದೆ ನಿರಾಸೆ ಗೊಂಡ ಅವರು ಕೊನೆಗೆ ಸೊಂದುಗೊಂದಿಗಳಲ್ಲಿ ಅನಧಿಕೃತವಾಗಿ ಚೀಟಿ ಪಟಾಕಿ ಏಜೆಂಟರು ಮಾರುವ ಕಡಿಮೆ ಗುಣಮಟ್ಟದ ಪಟಾಕಿಗಳನ್ನು ದುಬಾರಿ ಧರ ಕೊಟ್ಟು ತಂದು ಪಟಾಕಿ ಸಿಡಿಸಿ ಆಸೆ ತಿರಿಸಿಕೊಂಡ ಬಗ್ಗೆ ಹೇಳುತ್ತಾರೆ.ಯಾಕೆ ಈ ವರ್ಷ ಮಾರುಕಟ್ಟೆಯಲ್ಲಿ ಪಟಾಕಿ ವ್ಯಾಪಾರ ಇಲ್ಲ?ಅನೇಕಲ್ ನಲ್ಲಿ ಪಟಾಕಿ ಗೋದಾಮಿಗೆ ಬೆಂಕಿ ತಗುಲಿ ದುರಂತದಲ್ಲಿ ಸಾವು-ನೋವುಗಳಾಗಿದ್ದವು.…
ಶ್ರೀನಿವಾಸಪುರ:ಕೋಲಾರ ಜಿಲ್ಲೆಯಲ್ಲಿ ಇತ್ತಿಚಿಗೆ ಹೆಚ್ಚುತ್ತಿರುವ ಕ್ರೈಮ್ ಕುರಿತಂತೆ ಕೋಲಾರ ಜಿಲ್ಲಾ ಪೊಲೀಸರು ಎಚ್ಚೆತ್ತುಕೊಂಡಂತಿದೆ ಇತ್ತಿಚಿಗೆ ನಡೆದಂತ ನಾಲ್ಕೈದು ಕೊಲೆ ಕೆಸುಗಳ ವಿಚಾರವಾಗಿ ಕೋಲಾರ ಜಿಲ್ಲಾ ಪೋಲಿಸ್ ಇಲಾಖೆ ವಿರುದ್ದ ಸಾರ್ವಜನಿಕರಿಂದ ತೀವ್ರ ವಿಮರ್ಶೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಪೋಲಿಸ್ ಅಧಿಕಾರಿಗಳು ಸಡನ್ ಆಗಿ ಅಲರ್ಟ್ ಆಗಿದ್ದಾರೆ ಪೋಕರಿಗಳು ಪಟಾಲಂಗಳು ಕೂರುವ ಅಡ್ದೆಗಳ ಮೇಲೆ ಏಕಾಏಕಿ ದಾಳಿ ಮಾಡಿರುವ ಪೋಲಿಸರು ಬೀಡಾಡಿ ಪೋಕರಿಗಳಿಗೆ ತಕ್ಕ ಪಾಠಾ ಕಲಿಸಿದ್ದಾರೆ ಇಂದು ಶ್ರೀನಿವಾಸಪುರದ ಹಳೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಕ್ಕೆ ಜೀಪ್ ನುಗ್ಗಿಸಿದ ಪೋಲಿಸರು ನಂದಿನಿ ಪಾರ್ಲರ್ ಹಿಂಬಾಗದಲ್ಲಿ ಅರಾಮಾಗಿ ಸಿಗರೇಟ್ ಹೊಡೆಯುತ್ತಿದ್ದ ಬಿಲ್ಡ್ ಪ ಕೊಡುತ್ತ ಕೂತು ಹರಟೆ ಹೊಡೆಯುತ್ತಿದ್ದ ಕಾಲೇಜು ಹುಡುಗರಿಗೆ ಬೆತ್ತ ಬೀಸಿ ಅಲ್ಲಿಂದ ಓಡಿಸಿದ್ದಾರೆ ಬಾಲಕಿಯರ ಕಾಲೇಜು ಆವರಣದಲ್ಲಿ ಗುಂಪುಗಳು ಕಟ್ಟಿಕೊಂಡು ಅಡ್ಡಾಡುತ್ತಿದ್ದ ಯುವಕರಿಗೆ ಇನ್ನೊಮ್ಮೆ ಇತ್ತ ಬರಬಾರದು ಎಂದು ಎಚ್ಚರಿಸಿ ಕಳಿಸಿದ್ದಾರೆ.ಶ್ರೀನಿವಾಸಪುರ ಪಟ್ಟಣ ಪೊಲೀಸ್ ಠಾಣೆಯ ಸಬ್ ಇನ್ಸಪೇಕ್ಟರ್ ಗಳಾದ ಜೈರಾಮ್ ಹಾಗೂ ನಂಜುಂಡಪ್ಪ…
ಶ್ರೀನಿವಾಸಪುರ:ಸರ್ಕಾರಿ ಶಾಲೆ ಜಮೀನು ಒತ್ತುವರಿ ವಿಚಾರದಲ್ಲಿ ಗ್ರಾಮದ ಎರಡು ಗುಂಪುಗಳ ನಡುವೆ ಹೊಡೆದಾಟಗಳಾಗಿರುವ ಘಟನೆ ಇಂದು ಗೌವನಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಪಾಪಿಶೆಟ್ಟಿಪಲ್ಲಿ ಗ್ರಾಮದಲ್ಲಿ ನಡೆದಿರುತ್ತದೆ.ಪಾಪಿಶೆಟ್ಟಿಪಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಜಮೀನು ಒತ್ತುವರಿಯಾಗಿದ್ದು ಈ ಸಂಬಂದ ಶಾಲೆಯ ಮುಖ್ಯೋಪಾದ್ಯಾಯ ಎಲ್.ಶ್ರೀರಾಮ್ ಅವರು ಗೌವನಪಲ್ಲಿ ಗ್ರಾಮಪಂಚಾಯಿತಿಗೆ ಅರ್ಜಿ ನೀಡಿ ಶಾಲೆ ಜಮೀನು ಅಳತೆ ಮಾಡಿಕೊಡುವಂತೆ ಮನವಿ ಮಾಡಿದ್ದರು ಅದರಂತೆ ಇಂದು ಗೌವನಪಲ್ಲಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೌಸ್ ಸಾಬ್ ಮತ್ತು ಸಿಬ್ಬಂದಿ ಪಾಪಿಶೆಟ್ಟಿಪಲ್ಲಿ ಗ್ರಾಮಕ್ಕೆ ತೆರಳಿ ಶಾಲಾ ಜಮೀನು ಅಳತೆ ಮಾಡಲು ತಯಾರಿ ನಡೆಸುತ್ತಿದ್ದಂತೆ ಗ್ರಾಮದಲ್ಲಿ ಜಮೀನು ವಿಚಾರವಾಗಿ ಪರ-ವಿರೋಧವಾಗಿ ಎರಡು ಗುಂಪುಗಳು ಶಾಲೆ ಬಳಿ ಜಮಾವಣೆಯಾಗಿ ಪರಸ್ಪರ ಆರೋಪ ಪ್ರತ್ಯಾರೋಗಳನ್ನು ಮಾಡಿಕೊಳ್ಳುತ್ತಿದ್ದಂತೆ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿಬ್ಬಂದಿ ಅಳತೆ ಮಾಡದೆ ವಾಪಸ್ಸು ಬಂದಿರುತ್ತಾರೆ ನಂತರದಲ್ಲಿ ಗ್ರಾಮದ ಸರ್ಕಾರಿ ಶಾಲೆ ಜಮೀನು ಅನ್ನು ಶಾಲೆ ಆವರಣಕ್ಕೆ ಹೊಂದಿಕೊಂಡಂತೆ ಇರುವ ಶ್ರೀನಿವಾಸ್ ಅನ್ನುವರು ಒತ್ತುವರಿ ಮಾಡಿದ್ದಾರೆ ಜಮೀನು ಒತ್ತುವರಿ ವಿಚಾರ ಇತ್ಯರ್ಥ ಆಗುವವರಿಗೂ…
ಶ್ರೀನಿವಾಸಪುರ:ಬರ ಅದ್ಯಯನಕ್ಕೆ ಹಾಗು ತಾಲೂಕಿನಲ್ಲಿ ಅರಣ್ಯ ಭೂಮಿ ತೆರವು ಕಾರ್ಯಚರಣೆಯಿಂದ ಜಮೀನು ಕಳೆದುಕೊಂಡ ರೈತರನ್ನು ಸಂತೈಸಲು ರಾಜ್ಯ ಬಿಜೆಪಿ ಮುಖಂಡರು ಇಂದು ಶ್ರೀನಿವಾಸಪುರಕ್ಕೆ ಆಗಮಿಸಿ ಬರ ವೀಕ್ಷಣೆ ಮಾಡಿ ಭೂಮಿ ಕಳೆದುಕೊಂಡ ರೈತರ ಸಮಸ್ಯೆ ಆಲಿಸಿದರು.ಶ್ರೀನಿವಾಸಪುರ ತಾಲ್ಲೂಕಿನ ಪಾತಪಲ್ಲಿಗೆ ಆಗಮಿಸಿದ ಬಿಜೆಪಿ ಮುಖಂಡರ ತಂಡ ಪಾತಪಲ್ಲಿ ಗ್ರಾಮದ ರೈತರ ತೋಟಗಳಿಗೆ ಅಧ್ಯನ ತಂಡ ಭೇಟಿ ನೀಡಿ ಪರಿಶೀಲಿಸಿತು.ಸುರಿವ ಮಳೆಯಲ್ಲೆ ರೈತರೊಂದಿಗೆ ಹೊಲಗಳಲ್ಲಿ ಓಡಾಡಿದ ಬಿಜೆಪಿ ಮುಖಂಡ ಚಿ.ಟಿ.ರವಿ ಸಂಸದ ಮುನಿಸ್ವಾಮಿ ರೈತರಿಂದ ಮಾಹಿತಿ ಪಡೆದರು.ಸ್ವಾತಂತ್ರ್ಯ ಪೂರ್ವದಲ್ಲಿ ಜಮೀನು ಮಂಜೂರು ಆಗಿದ್ದು ಅರಣ್ಯ ಇಲಾಖೆಯವರು ರಾತ್ರೋರಾತ್ರಿ ದೌರ್ಜನ್ಯದಿಂದ ಜಮೀನಿನೊಳಗೆ ಪ್ರವೇಶ ಮಾಡಿ ಬಹು ಗಾತ್ರದ ಮಾವಿನ ಮರಗಳನ್ನು ನಾಶಪಡಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಮಯದಲ್ಲಿ ರೈತರನ್ನು ಹೀನಾಯವಾಗಿ ಹೊರ ತಳ್ಳಿದರು ಎಂದು ರೈತ ಚೌಡರೆಡ್ಡಿ ಅಳಲು ತೋಡಿಕೊಂಡರು.ನಮಗೆ ಕಂದಾಯ ಇಲಾಖೆಯಿಂದ ಮಂಜೂರು ಆಗಿರುವುದಕ್ಕೆ ಸಮರ್ಪಕವಾದ ದಾಖಲೆಗಳು ಸಹ ಇವೆ, ಒತ್ತುವರಿ ತೆರವಿಗೂ ಮುನ್ನ ಕಾನೂನಿನ ಪ್ರಕಾರ ಪೂರ್ವ ನೋಟೀಸ್ ನೀಡಿಲ್ಲ, ಇಲಾಖಾ ಅಧಿಕಾರಿಗಳ…
ಕೋಲಾರ:ಯಾಕೋ ಕೋಲಾರ ಜಿಲ್ಲೆಯಲ್ಲಿ ಸರಣಿ ಕೊಲೆಗಳಾಗುತ್ತಿದೆ ಮೊನ್ನೆ ಶ್ರೀನಿವಾಸಪುರದಲ್ಲೊಂದು ಮಹಿಳೆ ಕೊಲೆ ಆನಂತರದಲ್ಲಿ ಮಾಲೂರಿನಲ್ಲೊಂದು ಯುವರಾಜಕಾರಣಿ ಹತ್ಯೆ ನಡೆಯುತ್ತದೆ,ನಿನ್ನೆ ಶ್ರೀನಿವಾಸಪುರದಲ್ಲೊಬ್ಬ ಪ್ರಭಾವಿ ರಾಜಕಾರಣಿಯನ್ನು ಹುಡುಗರು ಕೊಂದು ಹಾಕ್ತಾರೆ ಇಂದು ಕೋಲಾರದಲ್ಲಿ ನೆತ್ತರು ಹರದಿದ್ದು ಅಪ್ರಾಪ್ತ ವಿದ್ಯಾರ್ಥಿಯನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದೆ ಇನ್ನೂ ಮೊದಲನೆ ವರ್ಷದ ಪಿಯುಸಿ ಓದುತ್ತಿರುವ ಸದ್ರೂಪಿ ಸುಂದರ ವಿದ್ಯಾರ್ಥಿ ದುಷ್ಕರ್ಮಿಗಳ ಆರ್ಬಟಕ್ಕೆ ಸಿಲುಕಿ ಬರ್ಬರವಾಗಿ ಹತ್ಯೆಯಾಗಿದ್ದಾನೆ.ಕೊಲೆಯಾದ ಯುವಕನನ್ನು ಕೋಲಾರ ನಗರದ ಟೇಕಲ್ ರಸ್ತೆಯ ಪೇಟೆ ಚಾಮನಹಳ್ಳಿ(ಪಿಸಿ)ಬಡಾವಣೆಯ ಶಾಂತಿ ನಗರದ ನಿವಾಸಿ ಪೇಯಿಂಟಿಂಗ್ ಕೆಲಸ ಮಾಡುವ ಅರುಣ್ ಸಿಂಗ್-ಸುಶೀಲಾ ದಂಪತಿ ಮಗ ಕಾರ್ತಿಕ್ ಸಿಂಗ್ ಇತ ಕೋಲಾರದ ಎಸ್.ಡಿ.ಸಿ ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಮೊದಲನೆ ವರ್ಷದ ಪಿಯುಸಿ ವಿದ್ಯಾರ್ಥಿ ಓದಿನಲ್ಲಿ ತುಂಬಾ ಇಂಟಿಲಿಜೆಂಟ್ ಚಿಗುರು ಮೀಸೆಯ ಹುಡುಗ ಯಾವ ಹಿರೋಗು ಕಡಿಮೆ ಇಲ್ಲದಂತಿದ್ದ ಎಲ್ಲಾ ಹುಡುಗರಿಗಿದ್ದಂತೆ ಇವನಿಗೂ ಕನಸುಗಳಿತ್ತು ಅದರಂತೆ ಹೇರ್ ಸ್ಟೈಲ್ ಮಾಡಿಸಿಕೊಂಡು ಇತರರು ಹೊಟ್ಟೆ ಕಿಚ್ಚುಪಡುವಷ್ಟು ಸದ್ರುಪಿಯಾಗಿದ್ದ ಸ್ಥಳೀಯ ಬಡಾವಣೆ ಹುಡುಗರಿಗೆ ಇವನನ್ನು ನೋಡಿದರೆ ಕೊಂಚ…
ಶ್ರೀನಿವಾಸಪುರ:ಆಂಧ್ರದ ಗಡಿಭಾಗದಲ್ಲಿರುವ ಶ್ರೀನಿವಾಸಪುರದ ವಿದ್ಯಾರ್ಥಿಗಳು ಕನ್ನಡವನ್ನು ಆಡು ಭಾಷೆಯಾಗಿ ಬಳಸುವ ಮೂಲಕ ಗಡಿ ಗ್ರಾಮಗಳಲ್ಲಿ ಕನ್ನಡ ಭಾಷೆಯನ್ನು ಬೆಳಸ ಬೇಕು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷ ಕುಬೇರಗೌಡ ಕರೆ ಇತ್ತರು.ಅವರು ಶ್ರೀನಿವಾಸಪುರ ಪಟ್ಟಣದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಹೆಚ್.ಎನ್.ಎಸ್ ಬೇಕರಿ ಮಾಲಿಕ ರಾಘವೇಂದ್ರ ಅವರು ಶ್ರೀಭುವನೇಶ್ವರಿ ಗೆಳೆಯರ ಬಳಗದ ಸಹಕಾರದೊಂದಿಗೆ ಆಯೋಜಿಸಿದ್ದ ಕನ್ನಡ ರಾಜೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಂಧ್ರದ ಗಡಿಯಲ್ಲಿನ ನಮ್ಮ ರಾಜ್ಯದ ಗಡಿ ಗ್ರಾಮಗಳಲ್ಲಿ ವಿಶೇಷವಾಗಿ ಪರ ರಾಜ್ಯದ ಮಕ್ಕಳು ಬಂದು ಕನ್ನಡ ಕಲಿಯುತ್ತಿದ್ದಾರೆ ಇದೊಂದು ವಿಶೇಷವಾದ ಕನ್ನಡ ಸೇವೆಯಾಗಿದೆ ಎಂದರು, ನಾಡಿನ ಒಳಗೆ ಕನ್ನಡ ಸಾಹಿತ್ಯ ಮತ್ತು ಬರವಣಿಗೆಯ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳುವ ಮೂಲಕ ಭಾಷಾ ಸಾಹಿತ್ಯದ ಬಗ್ಗೆ ಅರಿವು ಪಡೆದುಕೊಳ್ಳುವಂತೆ ಹೇಳಿದರು.ಈ ಕಾರ್ಯಕ್ರಮದಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರು ಅಂಕಗಳಿಸಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ನವ್ಯಶ್ರೀ.ಬಿ, ದರ್ಶನ್.ಡಿ.ಎಂ, ಹರ್ಷಿತ.ಬಿ.ಎನ್, ತನುಶ್ರೀ.ಜಿ.ವಿ, ಸಿಂದೂರಾಣಿ.ಜಿ ಮತ್ತು ರಾಷ್ಟ್ರೀಯ ಸಾರಿಗೆ ಇಲಾಖೆಯ ಆಯೋಜಿಸಿದ್ದ ರಾಷ್ಟ್ರೀಯ…
ಶಿಡ್ಲಘಟ್ಟ:ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನಲ್ಲಿ ಮಾರಕ ಅಪಾಯಕಾರಿ ಝೀಕಾ ವೈರಸ್ ಪತ್ತೆಯಾಗಿದೆ.ಝೀಕಾ ವೈರಸ್ ಹರಡದಂತೆ ತಡೆಯುವ ಮುಂಜಾಗರೂಕತಾ ಕ್ರಮವಾಗಿ ರಾಜ್ಯದ 68 ಕಡೆಗಳಲ್ಲಿನ ಸೊಳ್ಳೆಗಳನ್ನು ಹಿಡಿದು ಅವುಗಳಲ್ಲಿ ಮಾರಣಾಂತಿಕ ವೈರಸ್ ಇದೆಯೇ ಎಂದು ತಜ್ಞರು ಪರೀಕ್ಷೆ ನಡೆಸಿದ್ದರು. ಇದರ ಅನ್ವಯ ಚಿಕ್ಕಬಳ್ಳಾಪುರ ಜಿಲ್ಲೆಯ ಆರು ಪ್ರದೇಶಗಳಲ್ಲಿ ಸೊಳ್ಳೆಗಳನ್ನು ಹಿಡಿದು ಪರೀಕ್ಷಿಸಲಾಗಿತ್ತು.ಶಿಡ್ಲಘಟ್ಟ ತಾಲೂಕಿನ ತಲಕಾಯಲಬೆಟ್ಟ ವ್ಯಾಪ್ತಿಯಲ್ಲಿನ ಸೊಳ್ಳೆಗಳಲ್ಲಿ ಮಾರಕ ಝೀಕಾ ವೈರಸ್ ಪತ್ತೆಯಾಗಿದೆ. ಮಾರಕ ವೈರಸ್ಗಳು ಪತ್ತೆಯಾದ ಹಿನ್ನಲೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ವಿಶೇಷ ಸಭೆಗಳನ್ನು ನಡೆಸಿ ವೈರಸ್ ಹರಡದಂತೆ ತಡೆಯಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಿದ್ದಾರೆ.ತಲಕಾಯಲಬೆಟ್ಟದ ಸುಮಾರು 5 ಕಿ.ಮೀ. ವ್ಯಾಪ್ತಿಯ ವೆಂಕಟಾಪುರ, ದಿಬ್ಬೂರಹಳ್ಳಿ, ಬಚ್ಚನಹಳ್ಳಿ, ವಡ್ಡಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿರುವ ಆರೋಗ್ಯ ಸಿಬ್ಬಂದಿ 30 ಗರ್ಭಿಣಿಯರು ಮತ್ತು ಜ್ವರಪೀಡಿತ 7 ಮಂದಿ ರಕ್ತವನ್ನು ಪರೀಕ್ಷೆಗಾಗಿ ಸ್ಯಾಂಪೆಲ್ ಪಡೆದು ಬೆಂಗಳೂರಿಗೆ ಕಳುಹಿಸಿದ್ದಾರೆ.ಆರೋಗ್ಯ ಸಿಬ್ಬಂದಿ ಸ್ಥಳೀಯವಾಗಿ ಬಿಟ್ಟುಬಿಟ್ಟು ನಿಘಾ ವಹಿಸಲಾಗುತ್ತಿದೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮನುಷ್ಯರಲ್ಲಿ ಝೀಕಾ…
ನ್ಯೂಜ್ ಡೆಸ್ಕ್: ತನ್ನ ಶಾಸಕರನ್ನು ನಿಯಂತ್ರಿಸುವಲ್ಲಿ ರಾಜ್ಯ ಕಾಂಗ್ರೆಸ್ ವಿಫಲವಾಗಿದೀಯಾ! ಕಾಕಾತಾಳಿಯ ಎನ್ನುವಂತೆ ಕಳೆದ ಒಂದು ವಾರದಿಂದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣದ ಮುಖಂಡರು ನೀಡುತ್ತಿರುವ ಪರ ವಿರೋಧಿ ಹೇಳಿಕೆಗಳು ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದು ಇದರ ಗಂಭೀರತೆ ಅರಿತ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ರಾಜ್ಯ ಕಾಂಗ್ರೆಸ್ ವಿಚಾರದಲ್ಲಿ ಎಂಟ್ರಿ ಕೊಟ್ಟಿದೆ.ಕಾಂಗ್ರೆಸ್ ಹೈಕಮಾಂಡ್ ಮುಖಂಡರಾದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಬ್ಬರನ್ನು ಕೂರಿಸಿಕೊಂಡು ಬೆಂಗಳೂರಿನ ಕಾಂಗ್ರೆಸ್ ಆಫಿಸ್ ನಲ್ಲಿ ಹೈವೋಲ್ಟೇಜ್ ಮೀಟಿಂಗ್ ಮಾಡಿದ್ದಾರೆ ಸಭೆಯಲ್ಲಿ ನಾಲ್ಕು ಜನ ಮಾತ್ರ ಭಾಗವಹಿಸಿದ್ದು ಇದೊಂದು ಮಹತ್ವದ ಸಭೆ ಎನ್ನಲಾಗುತ್ತಿದೆ.ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಹತ್ತರ ಸಭೆಯಲ್ಲಿ ಆಸಕ್ತಿಕರ ಘಟನೆಗಳು ನಡೆದಿದ್ದು ಮೂಲಗಳ ಪ್ರಕಾರ, ನಿಗಮ ಮಂಡಳಿಗಳಿಗೆ ನೇಮಕ ವಿಚಾರದಲ್ಲಿ ಸಿಎಂ-ಡಿಸಿಎಂ ನಡುವೆ ಟಾಕ್ ವಾರ್ ನಡೆದಿಯಂತೆ ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್…
ಶ್ರೀನಿವಾಸಪುರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಯಾರಿಂದಲೂ ಸಾಧ್ಯವಿಲ್ಲ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ ಕಾಂಗ್ರೆಸ್ ಪಕ್ಷದ ಯಾವ ಶಾಸಕರು ಸಿಎಂ ಬದಲಾವಣೆ ಬಯಸುತ್ತಿಲ್ಲ ವಿರೋಧ ಪಕ್ಷದ ಶಾಸಕರು ಮಾತ್ರ ವಿನಾಕರಣ ಗೊಂದಲ ಸೃಷ್ಠಿಸುತ್ತಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಕರ್ ಹೇಳಿದರು.ಅವರು ಇಂದು ಶ್ರೀನಿವಾಸಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ ಅಧಿಕಾರ ಸಿಕ್ಕಿಲ್ಲ ಎನ್ನುವ ಕಾರಣಕ್ಕೆ ಹತಾಶೆಯಿಂದ ವಿರೋಧ ಪಕ್ಷದವರು ಗೊಂದಲ ಸೃಷ್ಠಿಮಾಡುತ್ತಿದ್ದಾರೆ ಕಾಂಗ್ರೆಸ್ ಪಕ್ಷದ 136 ಶಾಸಕರು ಒಗ್ಗಟ್ಟಾಗಿದ್ದೀವಿ,ಯಾರು ಎನೇ ಹೇಳಲಿ ಸುಭದ್ರ ಸರ್ಕಾರದಲ್ಲಿ ಉತ್ತಮ ಆಡಳಿತ ನೀಡುತ್ತಿದ್ದೇವೆರಮೇಶ್ ಕುಮಾರ್ ನಾಯಕತ್ವ ನಮಗೆ ಸ್ಪೂರ್ತಿಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಮಾರ್ಗದರ್ಶನ, ನಾಯಕತ್ವದ ಗುಣಗಳು ನಮಗೆ ಸ್ಪೂರ್ತಿಯಾಗಿದ್ದು ಅವರ ಹಿರಿತನ ಅನುಭವವನ್ನ ಪಕ್ಷ ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲಿದೆ ಇದರಲ್ಲಿ ಯಾವುದೆ ಮಾತೆ ಇಲ್ಲ ಎಂದರು.ಮೋದಿ ಅವರ ಹವಾ ಕಡಿಮೆಯಾಗುತ್ತಿದೆದೇಶದಲ್ಲಿ ಮೋದಿ ಆಡಳಿತಕ್ಕೆ ಜನ ಬೆಸೆತ್ತಿದ್ದಾರೆ ಅವರ ಹವಾ ದಿನೆ ದಿನೆಕಡಿಮೆಯಾಗುತ್ತಿದೆ ವಿರೋಧಿ ಅಲೆ ಹೆಚ್ಚಾಗುತ್ತಿದೆ ಎಂದ ಅವರು ಜನ ಮನ್ನಣೆ ಪಡೆದಿರುವ…