Author: Srinivas_Murthy

ನ್ಯೂಜ್ ಡೆಸ್ಕ್:ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಬರೆದು ಕರ್ನಾಟಕದ ಮಾವು ಬೆಳೆಗಾರರು ಎದರಿಸುತ್ತಿರುವ ಸಮಸ್ಯೆಗಳನ್ನು ಮತ್ತು ಪಡುತ್ತಿರುವ ತೊಂದರೆಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.ನಿಮ್ಮ ಅಧಿಕಾರಿಗಳು ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಂದಾಗಿ ನಮ್ಮ ರಾಜ್ಯದ ಮಾವಿನ ರೈತರು ಇನ್ನಿಲ್ಲದಂತೆ ತೊಂದರೆಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿರುವ ಅವರು ಕರ್ನಾಟಕದಲ್ಲಿ ಬೆಳೆದ ತೋತಾಪುರಿ ಮಾವಿನ ಹಣ್ಣುಗಳನ್ನು ಚಿತ್ತೂರು ಜಿಲ್ಲೆಯ ತಿರಳು ಫ್ಯಾಕ್ಟರಿಗಳಿಗೆ ಮಾರಾಟ ಮಾಡುವುದು ಮೊದಲಿನಿಂದಲು ಬಂದಿರುವ ಸಂಪ್ರದಾಯ ಎಂದು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದು ಚಿತ್ತೂರು ಜಿಲ್ಲಾಧಿಕಾರಿ ಕರ್ನಾಟಕದಿಂದಿಂದ ಬರುವ ಮಾವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದಾರೆ ಇದರೊಂದಿಗೆ ಆಂಧ್ರದ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಮತ್ತು ಮಾರುಕಟ್ಟೆ ಇಲಾಖೆಗಳ ಅಧಿಕಾರಿಗಳ ಸಮೂಹ ಕರ್ನಾಟಕ-ಆಂಧ್ರದ ಗಡಿಯಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಿ ತಪಾಸಣೆ ಮಾಡುತ್ತಿದ್ದಾರೆ ಎಂದು ವಿವರಿಸಿರುವ ಸಿದ್ದರಾಮಯ್ಯನವರು ಇದರಿಂದ ಕರ್ನಾಟಕದ ಮಾವಿನ ರೈತರಿಗೆ ತೊಂದರೆಯಾಗಿದೆ, ನಮ್ಮ ಕರ್ನಾಟಕ ರಾಜ್ಯದ ರೈತರು ಬಹಳ ವರ್ಷಗಳಿಂದ ಸೌಹಾರ್ದತೆಯಿಂದ ಚಿತ್ತೂರು ಜಿಲ್ಲೆಯ ಸಂಸ್ಕರಣ ಘಟಕಗಳಿಗೆ ಮತ್ತು…

Read More

ಶ್ರೀನಿವಾಸಪುರ:ವರ್ಷಪೂರ್ತಿ ಕಾದು ಕುಳತಿದ್ದ ಮಾವಿನ ಬೆಳೆಗಾರರನ ಪರಿಸ್ಥಿತಿ ಚಿಂತಾಜನಕವಾಗಿದೆ ಮಾರುಕಟ್ಟೆಯಲ್ಲಿ ಈ ಬಾರಿ ಮಾವಿಗೆ ಕನಿಷ್ಠ ಹಣ ಬರುವ ಭರವಸೆ ಇಲ್ಲವಾಗಿದೆ.ಶ್ರೀನಿವಾಸಪುರ ಕೇಂದ್ರಿಕೃತವಾಗಿ ಜಿಲ್ಲಾದ್ಯಂತ ಬೆಳೆಯುವ ಜೀವನಾಡಿ ಬೆಳೆ ಮಾವಿನ ಸಿಸನ್ ಅನ್ನು ನಂಬಿಕೊಂಡಿದ್ದ ಸಣ್ಣ-ಪುಟ್ಟ ಮಾವು ರೈತಾಪಿ ಕುಟುಂಬಗಳು ಮಾವಿಗೆ ದರ ಇಲ್ಲದೆ ಬೆಳೆಗಾರರಿಗೆ ಬರಸಿಡಿಲು ಬಡೆದಂತಾಗಿದೆ.ಮಾವು ಕೊಯ್ಲು ಮಾಡಿಕೊಂಡು ಬಂದು ಮಂಡಿಗಳಿಗೆ ಹಾಕಿದರೆ ಟ್ರ್ಯಾಕ್ಟರ್ ಬಾಡಿಗೆ ಕೂಲಿ ಸಹ ಗಿಟ್ಟಲ್ಲ ಎನ್ನುತ್ತಾರೆ ರೈತ ಶ್ರೀರಾಮಯ್ಯ.ಕಣ್ಣಿರೇ ದರಈ ವರ್ಷ ಮಾವಿನ ರೈತರು ಕಣ್ಣೀರು ಹಾಕುವಂತಾಗಿದೆ ಹಲವು ವರ್ಷಗಳಿಂದ ತಮ್ಮ ಬದುಕಿಗೆ ಜೀವನಾಧಾರ ಎಂದು ತೋಟಗಳಲ್ಲಿ ಮಾವಿನ ಮರಗಳನ್ನು ಮಕ್ಕಳನ್ನು ಆರೈಕೆ ಮಾಡುವಂತೆ ಮಾವು ಕೃಷಿ ಮಾಡಿಕೊಂಡು ಬಂದಿದ್ದ ರೈತಾಪಿ ಜನಕ್ಕೆ ಮಾವಿನ ಬೆಳೆ ಇಳುವರಿಯೋ ಇಲ್ಲ ಬೆಲೆನೂ ಇಲ್ಲದಂತಾಗಿ ನಿರಾಶೆ ಉಳಿದಿದೆ ತೊತಾಪುರಿ ಮಾವಿನ ಕಾಯಿ ಕೇವಲ 4 ರಿಂದ 5 ರೂಪಾಯಿಗೆ ಮಾರಾಟವಾಗುತ್ತಿದ್ದು ಇದರಿಂದ ಮಾವಿನ ರೈತ ತೀವ್ರ ನಷ್ಟ ಅನುಭವಿಸುವಂತಾಗಿದೆ ಬೆಲೆ ಇಲ್ಲ ಎಂದು ಮಾವು ಕೊಯ್ಲು…

Read More

ಶ್ರೀನಿವಾಸಪುರ:ಶ್ರೀನಿವಾಸಪುರದಲ್ಲಿ ಮಾವುಮಾರುಕಟ್ಟೆಯಲ್ಲಿ ಏನೇನೂ ಸರಿ ಇಲ್ಲಿ ಎಲ್ಲವು ಮೋಸ ರೈತ ತರುವಂತ ಮಾವಿಗೆ 100 ವ್ಯವಹಾರಕ್ಕೆ ಮಂಡಿ ಮಾಲೀಕರು 10 ರೂಪಾಯಿ ಕಮೀಷನ ಪಡೆಯುತ್ತಾರೆ. ಒಂದು ಕ್ವಿಂಟಾಲ್‌ಗೆ 50 ಕೆ.ಜಿ ತರಗು ತೆಗೆಯುತ್ತಾರೆ. ನಾವು ತಂದಿರುವ ಮಾಲು ಎಷ್ಟು ರೂಪಾಯಿಗೆ ಮಾರಾಟವಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದಿಲ್ಲ ಎಂದು ಮಾವು ಬೆಳೆಗಾರರು ವಿಶ್ವ ಪ್ರಸಿದ್ಧ ಶ್ರೀನಿವಾಸಪುರದ ಮಾವಿನ ಮಾರುಕಟ್ಟೆಗೆ ಭೇಟಿ ನೀಡಿದ್ದ ಉಪಲೋಕಾಯುಕ್ತ ಬಿ.ವೀರಪ್ಪ ಅವರಲ್ಲಿ ದೂರಿದರು.ಮಾವು ವಹಿವಾಟು ನಡೆದ ತಕ್ಷಣ ನಮಗೆ ಹಣ ಚುಕ್ತಾ ಮಾಡುವುದಿಲ್ಲ ಕೆಲ ದಿನಗಳು ಬಿಟ್ಟುಕೊಂಡು ಬಂದ ನಂತರ ಬಿಳಿ ಚೀಟಿಯಲ್ಲಿ ವಹಿವಾಟು ವಿವರಗಳನ್ನು ಬರೆದುಕೊಡುತ್ತಾರೆ. ಪ್ರಶ್ನೆ ಮಾಡಿದರೆ ಯಾವುದೆ ಉತ್ತರ ಹೇಳುವುದಿಲ್ಲ ಎಂದು ರೈತರು ಸಾಲು ಸಾಲು ಸಮಸ್ಯೆಗಳ ಬಗ್ಗೆ ಉಪಲೋಕಾಯುಕ್ತರ ಗಮನಕ್ಕೆ ತಂದರು.ಇದಕ್ಕೆ ಸ್ಪಂದಿಸಿದ ಅವರು ಎಪಿಎಂಸಿ ಪ್ರಭಾರೆ ಕಾರ್ಯದರ್ಶಿ ಹರೀಶ್‌ ಅವರನ್ನು ತರಾಟೆಗೆ ತೆಗೆದುಕೊಂಡು ರೈತರು ಹೇಳುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಬಗೆಹರಿಸುವಂತೆ ಸೂಚಿಸಿದರು.ಟವಲ್ ಕೆಳಗಿನ ವಹಿವಾಟು ನಿಲ್ಲಿಸಿಉಪ…

Read More

ಮುಳಬಾಗಿಲು:ಭಾರತೀಯ ಸಂಸ್ಕೃತಿಗಳಲ್ಲಿ ಕೃಷಿ ಸಂಸ್ಕೃತಿ ಅತ್ಯಂತ ಉನ್ನತ ಪರಂಪರೆಯಲ್ಲಿತ್ತು ದೇಶದ ಮೇಲೆ ನಡೆದ ದಾಳಿಕೊರರ ಅತಿಕ್ರಮಣದ ಪರಿಣಾಮ ವಿದೇಶಿ ಪ್ರಭಾವ ನಮ್ಮ ಸಾಂಸೃತಿ ನೆಲೆಗಟ್ಟುಗಳ ಮೇಲೆ ನಡೆದು ಮನುಷ್ಯರೊಂದಿಗೆ ಈ ನೆಲದ ಮಹತ್ವದ ವ್ಯವಸಾಯದ ಸಂಪ್ರದಾಯಗಳು ಸೇರಿದಂತೆ ಜಲ ಸೇರಿದಂತೆ ಪ್ರಕೃತಿ ವಿಕೃತಿಯಾಗುವತ್ತ ಸಾಗಿದೆ ಎಂದು ಪಿಚ್ಚಗುಂಡ್ಲಹಳ್ಳಿ ಶ್ರೀ ಆದಿಪರಾಶಕ್ತಿ ಪೀಠಾಧಿಪತಿ ತಿಮ್ಮಪ್ಪಸ್ವಾಮಿ ಅಭಿಮತ ವ್ಯಕ್ತಪಡಿಸಿದರು.ಅವರು ಮುಳಬಾಗಿಲು ತಾಲೂಕಿನ ಅವಣಿ ಹೋಬಳಿ ಪಿಚ್ಚಗುಂಡ್ಲಹಳ್ಳಿ ಗ್ರಾಮದ ಬಂಡೆಯ ಮೇಲೆ ಭಾರತೀಯ ಕಿಸಾನ್ ಸಂಘದ ಸಹಯೋಗದಲ್ಲಿ ಪಿಚ್ಚಗುಂಡ್ಲಹಳ್ಳಿ ಶ್ರೀ ಆದಿಪರಾಶಕ್ತಿ ಪೀಠ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಭೂಮಿ (ಮಣ್ಣು) ಪೂಜೆ,ಭತ್ತದ ರಾಶಿ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿ ಮಾತನಾಡಿದರು,ವಿದೇಶಿ ಆಡಳಿತಗಾರರ ಅಕ್ರಮಣದಿಂದ ನಮ್ಮ ಪೂರ್ವಿಕರು ಮಾಡಿಕೊಂಡು ಬರುತ್ತಿದ್ದ ಕೃಷಿ ಪದ್ಧತಿಗಳು, ಪರಂಪರೆಗಳು ಕಣ್ಮರೆಯಾಗಲು ಕಾರಣವಾಯಿತು ಈ ನೆಲದ ಧಾರ್ಮಿಕ ತಳಹದಿಗೂ ಧಕ್ಕೆಯಾಗಿ ಪರಸ್ಪರ ಸೌಹಾರ್ದತ ಭಾವನೆಗಳು ಮರೆಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.ಮುಂಗಾರು ಕೃಷಿ ಆರಂಭದಲ್ಲಿ ಹೊಲದಲ್ಲಿ ನೇಗಿಲುಕಟ್ಟಿ ಭೂಮಿ ಪೂಜೆ ನೆರವೇರಿಸಿ ಎತ್ತುಗಳಿಗೆ ಪೂಜೆ ಸಲ್ಲಿಸಿ…

Read More

ಶ್ರೀನಿವಾಸಪುರ:ತಾಲೂಕಿನ ಅಭಿವೃದ್ಧಿ ದೃಷ್ಠಿಯಿಂದ ಯದರೂರು ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ ಇದರಿಂದ ಯಾವ ರೈತರಿಗೂ ಅನ್ಯಾಯ ಆಗುವುದಿಲ್ಲ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.ಯದರೂರು ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆ ಕುರಿತಾಗಿ ರೈತರಿಂದ ಆಕ್ಷೇಪಣ ಅರ್ಜಿಗಳನ್ನು ಸ್ವೀಕರಿಸುವ ಮುನ್ನ   ನಡೆದಂತ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ನಾನು ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ ಕೈಗಾರಿಕೆಗಳ ಸ್ಥಾಪನೆಯಿಂದ ಸ್ಥಳಿಯವಾಗಿ ಉದ್ಯೋಗಗಳ ಸೃಷ್ಟಿಯಾಗುತ್ತದೆ ಟೌನ್ ಶಿಪ್ ಬೆಳೆಯಲು ಸಹಕಾರಿಯಾಗುತ್ತದೆ ಇದೆಲ್ಲವು ಅಭಿವೃದ್ಧಿಗೆ ಪೂರಕ ವಾತವರಣ ಕಲ್ಪಿಸುತ್ತದೆ ಎಂದರು.ಕೆಎಐಡಿಬಿ ವಿಶೇಷ ಭೂಸ್ವಾಧಿನಾಧಿಕಾರಿ ವೆಂಕಟಲಕ್ಷ್ಮಿ ಯವರು ಮಾತನಾಡಿ, ಕಂದಾಯ ವ್ಯಾಪ್ತಿಯಲ್ಲಿ ಗ್ರಾಮದ ಸಮೀಪ 1273 ಜಮೀನು ಕೈಗಾರಿಕೆಗಳಿಗೆ ಗುರುತಿಸಲಾಗಿದೆ ಈ ಪೈಕಿ 551  ಮಂದಿ ಖಾತೆದಾರರಿದ್ದಾರೆ, ಈ ಭಾಗದಲ್ಲಿ ಕೈಗಾರಿಕೆಗಳು ಸ್ಥಾಪನೆ ಆಗಬೇಕ, ಬೇಡವ ಎಂಬ ಬಗ್ಗೆ ರೈತರಿಂದ ಆಕ್ಷೇಪ ಸ್ವೀಕರಿಸಲು ನೋಟೀಸ್​ ನೀಡಲಾಗಿತ್ತು. ಆದರಂತೆ ಕೆಎಐಡಿಬಿ ಇಲಾಖೆಯ ವಿಶೇಷ ಭೂ ಸ್ವಾಧಿನಾಧಿಕಾರಿ ಸಭೆ ನಡೆಸುತ್ತಿರುವುದಾಗಿ ಹೇಳಿದರು. ಶಾಸಕ ವೆಂಕಟಶಿವಾರೆಡ್ಡಿ ಅವರು ಕೈಗಾರಿಕೆಗಳ ಸ್ಥಾಪಿಸಿ ಅದರಿಂದ ಈ ಭಾಗದ ಜನರಿಗೆ ಏನೆಲ್ಲಾ ಅನಕೂಲ…

Read More

ಶ್ರೀನಿವಾಸಪುರ:ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಮಾವು ಬೆಳೆಗಾರ ಸಂಘ ಹಾಗು ರೈತ ಸಂಘದ ಕಾರ್ಯಕರ್ತರು, ಬೆಳೆಗಾರರು ಮಾವು ವ್ಯಾಪರಸ್ಥರು,ಮಾವು ಮಂಡಿ ಮಾಲಿಕರು ರಸ್ತೆ ತಡೆ ಪ್ರತಿಭಟನೆ ನಡೆಸಿದರು.ಪಟ್ಟಣದ ಇಂದಿರಾಭವನ್ ವೃತ್ತದಲ್ಲಿ ಮಾವು ಬೆಳೆಗಾರರು ಆಕ್ರೋಶ ಭರಿತರಾಗಿ ಪ್ರತಿಭಟನೆ ನಡೆಸಿ ಮಾವು ಬೆಲೆ ಪಾತಾಳಾಕ್ಕೆ ಕುಸಿದಿದ್ದು ಬೆಳೆಗಾರರು ವ್ಯಾಪರಸ್ಥರು ಕಂಗಾಲಾಗಿದ್ದಾರೆ ಸರ್ಕಾರ ಈ ಕೂಡಲೇ ಬೆಂಬಲ ಬೆಲೆ ಘೋಷಣೆ ಮಾಡಬೇಕು ಎಂದು ಅಗ್ರಹಿಸಿದರು.ಬೆಳೆದಂತ ಮಾವು ಬೆಳೆಗೆ ಸೂಕ್ತ ಬೆಲೆ ಸಿಗದೆ ಮಾವು ಬೆಳೆಗಾರ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಯಾಕತೆ ವ್ಯಕ್ತಪಡಿಸಿದರು.ಬೆಳೆಗಾರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರಬೇಕು ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿ ಸರ್ಕಾರದಿಂದ ಬೆಂಬಲ ಬೆಲೆ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.ಪ್ರತಿಭಟನೆಯಲ್ಲಿ ಮಾವು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ನಿಲಟೂರುಚಿನ್ನಪ್ಪರೆಡ್ಡಿ,ಕಾರ್ಯದರ್ಶಿ ಪಾತಕೋಟೆ ನವೀನ್ ಕುಮಾರ್,ರೈತ ಸಂಘದ ನಂಬಿಹಳ್ಳಿಶ್ರೀರಾಮರೆಡ್ಡಿ,ನಿಲಟೂರುಚಂದ್ರಾರೆಡ್ಡಿ,ರೈತ ಕಾರ್ಮಿಕ ಮುಖಂಡ ಫಾರೂಕ್, ಅಸ್ಲಾಂ,ಮಂಡಿ ಮಾಲಿಕರಾದ ಶ್ರೀರಾಮ್,ಜಾವಿದ್ ಅನ್ಸಾರಿ, ಪೊಬ್ಬತಿಹರಿ ಮುಂತಾದವರು ಭಾಗವಹಿಸಿದ್ದರು. ರಸ್ತೆ ತಡೆ ನಡೆಸಿ…

Read More

ನ್ಯೂಜ್ ಡೆಸ್ಕ್:ಸರ್ಕಾರಿ ಬಸ್ಸುಗಳಲ್ಲಿ ಹದಿಹರೆಯದ ಗೆಳೆಯ ಮತ್ತು ಗೆಳತಿ ಜೋಡಿಗಳ ಅತಿರೇಕದ ವರ್ತನೆ ಇತ್ತಿಚಿಗೆ ವಾಹನ ನಿರ್ವಾಹಕರಿಗೆ ತಲೆನೋವಾಗಿ ಪರಿಣಮಿಸಿದೆ.ಶಾಲ ಕಾಲೇಜು ಸಮವಸ್ತ್ರದೊಂದಿಗೆ ತಮ್ಮ ಗೆಳೆಯ ಗೆಳತಿಯರೊಂದಿಗೆ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಕರು ಕಡಿಮೆ ಇರುವಂತ ಬಸ್ಸಿನ ಕೊನೆಯ ಸೀಟು ಆರಿಸಿಕೊಂಡು ಕೂರುವ ಇವರು ತಮ್ಮ ಸುತ್ತಲು ಯಾರಿದ್ದಾರೆ ಎಲ್ಲಿದ್ದೇವೆ ಎಂಬ ಕನಿಷ್ಟ ಅರಿವು ಇಲ್ಲದಂತೆ “ನ ಲಜ್ಜಾಃ ನ ಭಯಂ” ಎಂಬ ನಾನ್ನೂಡಿಯಂತೆ ಸರಸ ಸಲ್ಲಾಪದ ಹುಚ್ಚಾಟದಲ್ಲಿ ತೊಡಗುತ್ತಾರೆ ಎಂಬ ಆರೋಪ ಇದೆ ಇವರು ಎಗ್ಗುಸಿಗ್ಗಿಲ್ಲದೆ ಯಾವುದೆ ಭಯ ಇಲ್ಲದೆ ಬೆಚ್ಚಗಿನ ಅಪ್ಪುಗೆಯಲ್ಲಿ ಭಾವನೆಗಳನ್ನು ಶೇರ್ ಮಾಡಿಕೊಂಡು ಇಂಗ್ಲಿಷ್ ಚಲನಚಿತ್ರದ ದೃಶ್ಯಗಳನ್ನು ಮೀರಿಸುವಂತೆ ಲಿಪ್ ಲಾಕ್ ಮಾಡಿಕೊಂಡು ವಿಹರಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತವರ ಬಗ್ಗೆ ವಾಹನ ನಿರ್ವಾಹಕರು ಹಲವಾರು ಬಾರಿ ಗದರಿದರು ಡೋಂಟ್ ಕೇರ್ ಎನ್ನುವಂತೆ ಇರುತ್ತದೆ ಹದಿಹರೆಯದ ಗೆಳೆಯ ಮತ್ತು ಗೆಳತಿ ಜೋಡಿಗಳ ವರ್ತನೆ.

Read More

ಚಿಂತಾಮಣಿ: ಕೊರೋನಾ ವೈರಸ್​ ಈಗ ಚಿಂತಾಮಣಿಗೂ ವಕ್ಕರಿಸಿದೆ. ಸದ್ಯ ಕೊರೋನಾ ಸೋಂಕಿತ ವ್ಯಕ್ತಿಯನ್ನು ಗುರುತಿಸಲಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 13 ಜನರ ಸ್ಯಾಂಪಲ್ ಶೇಖರಿಸಲಾಗಿದ್ದು ಇದರಲ್ಲಿ ನಾಲ್ಕು ಜನಕ್ಕೆ ಪಾಸಿಟಿವ್ ದೃಡಪಟ್ಟಿದೆ.ಇದರಲ್ಲಿ ಒರ್ವ ಚಿಂತಾಮಣಿ ವ್ಯಕ್ತಿ ಎಂದು ಹೇಳಲಾಗಿದೆ ಪಾಸಿಟಿವ್ ದೃಡಪಟ್ಟಿರುವ ವ್ಯಕ್ತಿ ಉತ್ತರಪ್ರದೇಶದವನಾಗಿದ್ದು ಬಟ್ಟೆ ವ್ಯಾಪಾರಿ ಎಂದು ಗುರುತಿಸಲಾಗಿದೆ ಈತ ಅರಾಮಾಗಿದ್ದು ಅತಂಕ ಪಡುವ ಅಗತ್ಯ ಇಲ್ಲ ಎಂದು ವೈದ್ಯಕೀಯ ಇಲಾಖೆಯವರು ಹೇಳಿದ್ದಾರೆ.ಕೊರೋನಾ ವಿಚಾರದಲ್ಲಿ ಯಾರು ಅತಂಕ ಪಡುವ ಅಗತ್ಯ ಇಲ್ಲ ಜಾಗ್ರತೆ ವಹಿಸಬೇಕಾಗಿದೆ ಎಂದು ತಾಲೂಕು ಆಡಳಿತ ಹೇಳಿದೆ.

Read More

ಶ್ರೀನಿವಾಸಪುರ:ಮಾವಿನ ದರ ಕುಸಿತದಿಂದ ಮಾವು ಬೆಳೆಗಾರರು ಕಂಗಾಲಾಗಿದ್ದಾರೆ.ತೋತಾಪುರಿ ಸೇಂದೂರಾ (ರಾಜಗಿರಾ) ರಸಪುರಿ ದರ ತೀವ್ರವಾಗಿ ಕುಸಿದಿದೆ ಮಾವು ಸಗಟು ವ್ಯಾಪಾರಸ್ಥರು ಮಾರುಕಟ್ಟೆಯತ್ತ ಮುಖ ಮಾಡುತ್ತಿಲ್ಲ.ಇದರ ಜೊತೆಗೆ ಆಂಧ್ರ ತಮಿಳುನಾಡು ರಾಮನಗರ ಭಾಗಗಳಲ್ಲೂ ಏಕಕಾಲಕ್ಕೆ ಎಲ್ಲಾ ಕಡೆ ಮಾವು ಮಾರುಕಟ್ಟೆಗೆ ಬಂದಿರುವುದರಿಂದ ಮಾವಿನ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.ಹವಾಮಾನ ಏರುಪೇರಾಗಿ ಫೆಬ್ರವರಿ ತಿಂಗಳಲ್ಲಿನ ಬಿಸಿಲಿನ ತೀವ್ರತೆ ಇದ್ದ ಪರಿಣಾಮ ಶೇ.70ರಷ್ಟು ಮಾವಿನ ಬೆಳೆ ಬಿಸಿಲಿನ ಆಘಾತಕ್ಕೆ ಹಾನಿಯಾಗಿ ಶೇ.30ರಿಂದ 40ರಷ್ಟು ಫಸಲು ಬಂದಿದೆ. ಜೊತೆಗೆ ಬೆಲೆ ಕುಸಿತ ಇರುವುದು ಈ ಬಾರಿ ಮಾವು ಬೆಳೆಗಾರನ ಕೈ ಹಿಡಿಯುವಲ್ಲಿ ವಿಫಲವಾಗಿದೆ ಎನ್ನಬಹುದು. ಶ್ರೀನಿವಾಸಪುರ ಕೇಂದ್ರಿಕೃತವಾಗಿ ವಿಭಜಿತ ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಬೆಳೆಯುವ ತೋತಾಪುರಿ ಮಾವಿನಕಾಯಿ ಈ ಬಾರಿ ಬೆಳೆಗಾರರಿಗೆ ಕಹಿಯಾಗಿದೆ. ಕಾಯಿ ಬೆಲೆ ಕೆಜಿಗೆ 7-8 ರುಪಾಯಿ ಗಡಿ ದಾಟಿಲ್ಲ. ಚಿಲ್ಲರೆ ಧಾರಣೆ ಚನ್ನಾಗಿದೆಚಿಲ್ಲರೆ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಬೆಲೆ ದುಬಾರಿಯಾಗಿದೆ ಅಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ ಆದರೆ…

Read More

ಭಾರತದ ನೆಲದಲ್ಲಿ ಆದೇಷ್ಟೊ ದೇವಾಲಯಗಳನ್ನು ನಿರ್ಮಿಸಲಾಗಿದೆ ಅವುಗಳಲ್ಲಿ ಕೆಲ ದೇವಾಲಯಗಳಲ್ಲಿ ಇರುವ ನಿಗೂಢ ರಹಸ್ಯಗಳು ವಿಸ್ಮಯಗೊಳಿಸುತ್ತವೆ. ಕೆಲ ದೇಗುಲುಗಳ ವಾಸ್ತುಶಿಲ್ಪ ವಿನ್ಯಾಸಗಳು, ಕೊಠಡಿಗಳ ರಚನೆ, ವಿಗ್ರಹಗಳಲ್ಲಿನ ರಹಸ್ಯಗಳು ವಿಜ್ಞಾನಿಗಳಿಗೆ ಅಧ್ಯಯನಕಾರರಿಗೆ ಮತ್ತು ಇತಿಹಾಸಕಾರರಿಗೆ ಪ್ರಶ್ನೆಗಳಾಗಿ ಉಳಿದುಕೊಂಡಿದೆ. ವಿಸ್ಮಯಕಾರಿ ರಹಸ್ಯ ಎನ್ನುವಂತೆ ಮಾನವನಿಂದ ಬೇದಿಸಲು ಸಾಧ್ಯವಾಗದ ಅನೂಹ್ಯವಾದ ವಿಸ್ಮಯ ಹಾಗು ವಿಶೇಷವಾದ ದೇವಾಲಯವೊಂದು ತೆಲಂಗಾಣ ರಾಜ್ಯದಲ್ಲಿ ಇದ್ದು ಅತ್ಯಂತ ಗಮನಾರ್ಹ ಎನ್ನಬಹುದು. ಇದನ್ನು ಮುಲ್ಲೂರು ಶ್ರೀ ನರಸಿಂಹಸ್ವಾಮಿ ದೇವಾಲಯ ಎನ್ನುತ್ತಾರೆ. ತೆಲಂಗಾಣದ ವರಂಗಲ್ ನಗರದಿಂದು ಸುಮಾರು 130 ಕೀ.ಮಿ ದೂರ ಹಾಗು ಭದ್ರಾಚಲಂನಿಂದ ಸುಮಾರು 90 ಕೀ.ಮಿ ದೂರದ ಮುಲುಗು ಜಿಲ್ಲೆಯ ಮಂಗಪೇಟೆ ಮಂಡಲದ ಮುಲ್ಲೂರಿನಲ್ಲಿರುವ ಬೆಟ್ಟಗಳ ಮೇಲೆ ನೆಲೆನಿಂತಿರುವ ಶ್ರೀ ನರಸಿಂಹ ಸ್ವಾಮಿ ದೇವಾಲಯ Hemachala Narasimha Swamy Temple ಇದನ್ನು ಹೇಮಾಚಲ ನರಸಿಂಹ ಸ್ವಾಮಿ ದೇವಾಲಯ ಎಂದು ಕರೆಯಲಾಗುತ್ತದೆ. ನ್ಯೂಜ್ ಡೆಸ್ಕ್:ಮಲ್ಲೂರಿನಲ್ಲಿರಿನ ಹೇಮಾಚಲ ನರಸಿಂಹಸ್ವಾಮಿ ದೇವಾಲಯ ಹಲವು ವೈಶಿಷ್ಠತೆಗಳನ್ನು ಹೊಂದಿದೆ. ಈ ದೇವಾಲಯದಲ್ಲಿನ ವಿಗ್ರಹದಲ್ಲಿ ರಹಸ್ಯ ಅಡಗಿವೆ. ಇದನ್ನು ಭೇದಿಸಲು…

Read More