ಕೋಲಾರ-ಮಾಲೂರು ನಡುವಿನ ವಕ್ಕಲೇರಿ ಬಳಿ ಇರುವ ಮಾರ್ಕಂಡೇಯ ದೇವಾಲಯ ವಿಶಾಲವಾದ ಏಕಶಿಲಾ ಬೆಟ್ಟದ ಮೇಲೆ ನಿರ್ಮಿತವಾಗಿದ್ದು, ಈ ಬೃಹತ್ ವಿಶಾಲವಾದ ಬಂಡೆಯಲ್ಲಿ ಕಪ್ಪಾದ ಪಟ್ಟಿಯು ಬಂಡೆಯ ದಕ್ಷಿಣ ಪಾರ್ಶ್ವದಿಂದ ಗರ್ಭಾಂಕಣದವರೆಗೆ ಬಂಡೆಯಲ್ಲಿ ಮೂಡಿ ಬಂದಿದೆ. ಇದರ ಬಗ್ಗೆ ಯಮಧರ್ಮರಾಯನು ಮಾರ್ಕಂಡೇಯನಿಗೆ ಯಮಪಾಶವನ್ನು ಹಾಕಿ ಎಳೆದ ಕುರುಹುಗಳು ಬೆಟ್ಟದ ಮೇಲಿರುವ ಬಾವಿಯಲ್ಲಿ ಇಂದಿಗೂ ಕಾಣಸಿಗುತ್ತದೆ ಎನ್ನುವ ನಂಬಿಕೆ.ಯಮಧರ್ಮ ಸ್ವತಃ ಬಂದು ಮಾರ್ಕಂಡೇಯನ ಮೆಲೆ ಪಾಶ ಹಾಕಿ ಎಳೆದಾಗ ಮಾರ್ಕಂಡೇಯ ತನ್ನ ಕೈಗಳಿಂದ ಶಿವಲಿಂಗವನ್ನು ತಬ್ಬಿ ಹಿಡಿದ ಪರಿಣಾಮ ಶಿವಲಿಂಗದ ಮೇಲೆ ಉಗುರಿನ ಗುರುತುಗಳು ಮೂಡಿದ್ದು ಈಗಲೂ ಶಿವಲಿಂಗದ ಮೇಲಿವಿಯಂತೆ. ಮಾಲೂರು:ಬಂಗಾರದನಾಡು ರೇಷ್ಮೆಯ ಬೀಡು ಹಾಲಿನಭೂಮಿ ಹಾಗು ಅಪಾರ ಪ್ರಾಕೃತಿಕ ಸಂಪತ್ತು ಹೊಂದಿರುವ ಕೋಲಾರ ಜಿಲ್ಲೆಯಲ್ಲಿ ಕೋಲಾರ-ಮಾಲೂರು ನಡುವಿನ ವಕ್ಕಲೇರಿ ಬಳಿ ಪುರಾತನ ಐತಿಹಾಸಿಕ ಪುಣ್ಯಕ್ಷೇತ್ರ ಶ್ರೀ ಮಾರ್ಕಂಡೇಯ ದೇವಾಲಯ ಇದೆ.ಅರಣ್ಯಪ್ರದೇಶದ ಬೆಟ್ಟಗುಡ್ಡಗಳ ಸಾಲಿನಲ್ಲಿ ರಮಣೀಯ ಪ್ರಕೃತಿ ಹಸಿರಿನ ಮದ್ಯೆ ಮಾರ್ಕಂಡೇಶ್ವರಸ್ವಾಮಿ ಬೆಟ್ಟ ಇದ್ದು ಅಲ್ಲಿ ಶ್ರೀ ಮಾರ್ಕಂಡೇಶ್ವರಸ್ವಾಮಿಯ ಬೃಹತ್ ದೇವಾಲಯವಿದೆ ಇಲ್ಲಿ ಈಶ್ವರನನ್ನು…
Author: Srinivas_Murthy
ಶ್ರೀನಿವಾಸಪುರ:ಕೇಂದ್ರ ಲೋಕಸೇವಾ ಆಯೋಗ 2024ನೇ ಸಾಲಿನ ಯುಪಿಎಸ್ಸಿ ಸಿವಿಲ್ ಸೇವೆಗಳ ಪರೀಕ್ಷೆ ಫಲಿತಾಂಶ ಬಿಡುಗಡೆ ಮಾಡಿದ್ದು ಈ ವರ್ಷದ ಫಲಿತಾಂಶದಲ್ಲಿ ದೇಶದ ಮೊದಲ ಟಾಪರ್ ಆಗಿ ಶಕ್ತಿ ದುಬೆ ಹೊರಹೊಮ್ಮಿದ್ದರೆ.ಕರ್ನಾಟಕ ರಾಜ್ಯಮಟ್ಟದಲ್ಲಿ ಆರ್ ರಂಗಮಂಜು 24ನೇ ರ್ಯಾಂಕ್ನಲ್ಲಿ ಸಿಎಸ್ಇ ಪಾಸ್ ಮಾಡಿದ್ದರೆ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ಪಟ್ಟಣದ ಉಪಾಧ್ಯಾಯ ದಂಪತಿ ಡಾ.ಆರ್.ರವಿಕುಮಾರ್ ಹಾಗೂ ಎಸ್.ಎನ್.ನಂದಿನಿ ಮಗಳು ಡಾ.ಮಾಧವಿ 446ನೇ ರ್ಯಾಂಕ್ಗಳಿಸಿದ್ದಾರೆ.ಕೋಲಾರ ತಾಲೂಕಿನ ಇರಗಸಂದ್ರ ಗ್ರಾಮದ ಕೃಷಿಕ ದಂಪತಿ ಆನಂದಪ್ಪ ಮತ್ತು ಸುಶೀಲಮ್ಮನವರ ಪುತ್ರ ಆಗ್ರಿಕಲ್ಚರ್ ಬಿಎಸ್ಸಿ ಪದವೀಧರ ಎ.ಮಧು 544ನೇ ರಾಂಕ್ ಗಳಿಸಿದ್ದಾರೆ. ಉಪಾಧ್ಯಾಯ ದಂಪತಿ ಪುತ್ರಿ ಸಾಧನೆಮೂಲತಃ ಶ್ರೀನಿವಾಸಪುರ ಪಟ್ಟಣದ ನಿವಾಸಿಗಳಾಗಿ ಮುತಕಪಲ್ಲಿ ಸರ್ಕಾರಿ ಶಾಲೆ ಮುಖ್ಯ ಶಿಕ್ಷಕರಾಗಿರುವ ಡಾ.ಆರ್.ರವಿಕುಮಾರ್ ಹಾಗೂ ಲಕ್ಷ್ಮೀಸಾಗರದಲ್ಲಿ ಸರ್ಕಾರಿ ಶಿಕ್ಷಕಿಯಾಗಿರುವ ನಂದಿನಿ ದಂಪತಿ ಪುತ್ರಿ ಮಾಧವಿಪಟ್ಟಣದ ಶೈಲೇಂದ್ರ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ವೇಣು ವಿದ್ಯಾಸಂಸ್ಥೆಯಲ್ಲಿ ಪ್ರೌಢಶಾಲೆ ಅಭ್ಯಾಸ ಮಾಡಿದ್ದು ಕೋಲಾರದ ಸಹ್ಯಾದ್ರಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿ ರಾಜಾಜಿನಗರ ಇಎಸ್ಐ ವೈದ್ಯಕಿಯ ಮಹಾವಿದ್ಯಾಲಯದಲ್ಲಿ ಎಂಬಿಬಿಎಸ್ ಪದವಿ…
ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ಹಣ್ಣು-ಹಂಪಲುಗಳು, ಗಿಡಮೂಲಿಕೆಗಳು ಆರೋಗ್ಯ ವೃದ್ಧಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.ಇದನ್ನು ಪೂರ್ವಿಕರು ಸಾಬಿತು ಪಡಿಸಿದ್ದಾರೆ ಇಂದಿಗೂ ಮಾರಣಾಂತಿಕ ಕಾಯಿಲೆಗಳು ಗಿಡಮೂಲಿಕೆಗಳಿಂದ ತಯಾರಿಸಿದ ಔಷದಿಗಳಿಂದ ಗುಣವಾದ ಹಲವಾರು ಉದಾಹರಣೆಗಳು ಇವೆ. ಕಾರ್ಬೋಹೈಡ್ರೇಟ್ಗಳು: 18.70 ಗ್ರಾಂ, ಪ್ರೋಟೀನ್: 1.67 ಗ್ರಾಂ,ಕೊಬ್ಬು: 1.2 ಗ್ರಾಂ ಸಕ್ಕರೆ: 14 ಗ್ರಾಂ,ಫೈಬರ್: 7 ಗ್ರಾಂ ಇರಲಿದೆ. ಹೆಲ್ತ್ ಡೆಸ್ಕ್: ದಾಳಿಂಬೆ ಹಣ್ಣಿನಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿದ್ದು ಇದರ ರಸ/ಜ್ಯೂಸ್ ಆರೋಗ್ಯಕರ ಎನ್ನುತ್ತಾರೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಟ್ಯೂಮರ್ ಗುಣಲಕ್ಷಣಗಳು ಇದ್ದು ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲ ಕೂಡ ಇದಿಯಂತೆ. ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅದರ ಜ್ಯೂಸ್ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲಿದ್ದು ಇದರಿಂದಾಗಿ ನಮ್ಮ ಮಾನಸಿಕ ಒತ್ತಡವನ್ನು ನಿವಾರಣೆ ಮಾಡುವ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ ರಕ್ತದ ಒತ್ತಡವನ್ನು ನಿಯಂತ್ರಣಕ್ಕೆ ತರುವ ಮೂಲಕ ಹೃದಯ ಆರೋಗ್ಯ…
ಶ್ರೀನಿವಾಸಪುರ:ಹಳ್ಳ ಕೊಳ್ಳಗಳಿಂದ ಕೂಡಿ ಹಾಳಾದ ರಸ್ತೆಗೆ ಮಣ್ಣು ಹಾಕಿ ಹಳ್ಳ ಮುಚ್ಚಿ ಮೆಲ್ನೋಟಕ್ಕೆ ಮೇಕಪ್ ಮಾಡಿದರೆ ಸಾಕ ಅಧಿಕಾರಿಗಳೆ ಹಿಗೇಂದು ಈ ರಸ್ತೆಯಲ್ಲಿ ಓಡಾಡುವ ದ್ವೀಚಕ್ರ ವಾಹನ ಸವಾರರ ಮಾತು.ಈ ರಸ್ತೆ ಗ್ರಾಮವೊಂದರ ರಸ್ತೆಯಲ್ಲ ಬದಲಾಗಿ ಶ್ರೀನಿವಾಸಪುರ ತಾಲೂಕಿನ ಗಡಿಯಂಚಿನ ಆಂಧ್ರದ ಚಂಬಕೂರು,ರಾಮಸಮುದ್ರಂ ಮದನಪಲ್ಲಿ ಭಾಗಕ್ಕೆ ಹೊಂದಿಕೊಂಡಿರುವ ತಾಲೂಕಿನ ಸೋಮಯಾಜಲಹಳ್ಳಿ,ಪುಲಗೂರಕೋಟೆ ಲಕ್ಷ್ಮೀಪುರ ಭಾಗದ ಜನತೆ ಶ್ರೀನಿವಾಸಪುರ ಪಟ್ಟಣಕ್ಕೆ ಬರಲು ಈ ರಸ್ತೆಯನ್ನು ಬಳಸುತ್ತಾರೆ ಈಗ ರಸ್ತೆ ಹಳ್ಳಬಿದ್ದು ಹಾಳಾಗಿದೆ ಗುಂಡಿಗಳಿಂದ ತುಂಬಿದ್ದು ತಿರುವುಗಳಲ್ಲಿ ದ್ವಿಚಕ್ರವಾಹನ ಸವಾರ ಅನಾಮತ್ತು ಕೆಳಗೆ ಬೀಳುವಷ್ಟು ಡಾಂಬರು ಕಿತ್ತುಹೋಗಿದೆ.ನನಬಾರ್ಡ್ ಯೋಜನೆಯಲ್ಲಿ ನಿರ್ಮಾಣ ಗ್ರಾಮೀಣ ಸಂಪರ್ಕ ರಸ್ತೆಯನ್ನು ಹಿಂದಿನ ಶಾಸಕರ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿಯ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ದಿ ಇಲಾಖೆ ನಿರ್ಮಿಸಿದ್ದು ಈಗ ರಸ್ತೆ ಹಾಳಾಗಿದೆ, ಗ್ರಾಮೀಣ ರಸ್ತೆಯಲ್ಲಿ ಸೋಮಯಾಜಲಹಳ್ಳಿ ಭಾಗದ ಜಲ್ಲಿಕ್ರಷರ್ ನಿಂದ ಬರುವಂತ ಟಿಪ್ಪರ್ ಲಾರಿಗಳು,ಮರಳು ಟ್ರಾಕ್ಟರಗಳು ಓಡಾಡುವ ಪರಿಣಾಮ ಸಂಪೂರ್ಣವಾಗಿ ಹಾಳಾಗಿದೆ ಮಳೆ ಬಂದರೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ಗದ್ದೆಯಂತಾಗುತ್ತದೆ ಒಣಗಿದೆ…
ಶ್ರೀನಿವಾಸಪುರ:ನನ್ನ ಅಧಿಕಾರವದಿಯಲ್ಲಿ ಶ್ರೀನಿವಾಸಪುರ ಪಟ್ಟಣದಲ್ಲಿ ಅಂಬೇಡ್ಕರ್ ಪುತ್ತಳಿ ಅನಾವರಣ ಮಾಡಲಾಯಿತು,ಈಗ ಅಂದಾಜು 5 ಕೋಟಿ ರೂಗಳ ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಶಿಘ್ರದಲ್ಲಿಯೇ ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ G. K. Venkatashiva Reddy ತಿಳಿಸಿದರು. ಅವರು ತಾಲೂಕು ಕಚೇರಿ ಮುಂಬಾಗದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಡಾ.ಬಿ.ಅರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಕೊಳ್ಳೂರು ಗ್ರಾಮಾ ಠಾಣಾ ವ್ಯಾಪ್ತಿಯಲ್ಲಿ 2 ಎಕರೆ ಜಾಗವನ್ನು ಅಂಬೇಡ್ಕರ್ ಭವನ ನಿರ್ಮಾಣ ಮಾಡಲು ಮೀಸಲು ಇಡಸಲಾಗಿದೆ. ಅಲ್ಲಿ ಜಿಲ್ಲೆಯಲ್ಲೆ Kolar district ಮಾದರಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಕುರಿತಾಗಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪನವರನ್ನು ಮನವಿ ಮಾಡಿರುತ್ತೇನೆ ಎಂದರು.ಕೌನ್ಸಿಲರ್ ಶ್ರೀನಿವಾಸನ್ ನೆನೆದ ಶಾಸಕದಿವಂಗತ ಕೌನ್ಸಿಲರ್ ಶ್ರೀನಿವಾಸನ್ ನನ್ನ ಜೊತೆಯಲ್ಲಿದ್ದಾಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು ಅವರೊಂದಿಗೆ ಕೂಡಿ ಅಂಬೇಡ್ಕರ್ ಉದ್ಯಾನವನ ನಿರ್ಮಿಸಿ ಅಂಬೇಡ್ಕರ್ ಪುತ್ತಳಿ ಅನಾವರಣ ಮಾಡಲಾಯಿತು ಎಂದು ಶ್ರೀನಿವಾಸನ್ ಅವರನ್ನು ಶಾಸಕ ವೆಂಕಟಶಿವಾರೆಡ್ಡಿ ನೆನಪಿಸಿಕೊಂಡರು.ಇಂದಿನ ರಾಜಕಾರಣವೆ ವಿಭಿನ್ನಕ್ಷೇತ್ರದ ಜನತೆ ನನ್ನನ್ನು…
ಅಕ್ರಮವಾಗಿ ಉಳುಮೆ ಆರೋಪದ ಟ್ರ್ಯಾಕ್ಟರ್ ರೈತರನ್ನು ವಶಕ್ಕೆ ಪಡೆದ ಅರಣಾಧಿಕಾರಿಗಳು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾದ ರೈತ ನಾಗರಾಜ್ ಶ್ರೀನಿವಾಸಪುರ:ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿದ್ದ ಭೂಮಿಯಲ್ಲಿ ಉಳುಮೆ ಮಾಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಟ್ರ್ಯಾಕ್ಟರ್ ಗಳನ್ನು ಹಾಗು ರೈತರನ್ನು ವಶಕ್ಕೆ ಪಡೆದ ಘಟನೆ ಇಂದು ತಾಲೂಕಿನ ಕೇತಗಾನಹಳ್ಳಿ ಗ್ರಾಮದಲ್ಲಿ ನಡೆಯಿತು.ತೆರವು ಮಾಡಿದ ತಾಲೂಕಿನ ಕೇತಗಾನಹಳ್ಳಿ ಗ್ರಾಮದ ವಿವಾದಿತ ಭೂಮಿ ಇರುವ 29 ರ ಅರಣ್ಯ ಪ್ರದೇಶದ ಭೂಮಿಯಲ್ಲಿ ರೈತರು ಉಳುಮೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕೇತಗಾನಹಳ್ಳಿ ಗ್ರಾಮದಲ್ಲಿನ ರೈತರಿಗೆ ಸೇರಿದ ಟ್ರ್ಯಾಕ್ಟರ್ ಗಳನ್ನು ರೈತರನ್ನು ಪೋಲಿಸರ ಬದ್ರತೆಯಲ್ಲಿ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿರುತ್ತಾರೆ.ಕಳೆದ ಶನಿವಾರ ತೆರವು ಭೂಮಿಯಲ್ಲಿ ಉಳುಮೆ ಮಾಡಲು ಮುಂದಾದ ರೈತರನ್ನು ತಡೆದ ಅರಣ್ಯಾಧಿಕಾರಿಗಳು ಹಾಗು ರೈತರ ನಡುವೆ ತಳ್ಳಾಟ,ನೂಕಾಟ ನಡೆದು ಸ್ಥಳದಲ್ಲಿ ಪ್ರಕ್ಷಬ್ದ ಪರಿಸ್ಥಿತಿ ಏರ್ಪಟ್ಟಿತು.ನಂತರದಲ್ಲಿ ಪೋಲಿಸರ ಮದ್ಯಪ್ರವೇಶದಿಂದ ರೈತರಾಗಲಿ ಹಾಗು ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಯಾವುದೇ ಕಾರಣಕ್ಕೂ ಜಮೀನುಗಳಿಗೆ ಹೋಗದಂತೆ ಯಥಾ ಸ್ಥಿತಿ…
ಯಲ್ದೂರಿನಲ್ಲಿ ರಥೋತ್ಸವ ತನ್ನದೇ ಆದ ವೈಶಿಷ್ಟ್ಯತೆಯನ್ನು ಹೊಂದಿದೆ. ರಥೋತ್ಸವದಿನದಂದು ಊರಿನಲ್ಲಿ ಸಂಭ್ರಮ ಮನೆ ಮಾಡಿರುತ್ತದೆ ಹಬ್ಬದ ವಾತವರಣ ಮೂಡಿಸುವಂತೆ ಗ್ರಾಮದ ತುಂಬ ಯುವಕರು ಸಡಗರದಿಂದ ತಿರುಗಾಡುತ್ತ ಒಡಾಡುತ್ತ ಇರುತ್ತಾರೆ ಇಲ್ಲಿನ ನ್ಯಾಷನಲ್ ಹೈಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ಹಿಡಿದು ಯಲ್ದೂರಿನಲ್ಲಿ ಬದುಕಿ ಕಟ್ಟಿಕೊಂಡು ಜೀವನ ಮಾಡಿದ್ದ ಮಾಡುತ್ತಿರುವ ಹಾಗು ಅಲ್ಲೆ ನೆಲೆ ನಿಂತ ಯುವಕರು ಬದುಕು ಆರಿಸಿ ದೇಶ ವಿದೇಶಗಳಲ್ಲಿ ನೆಲೆನಿಂತ ಬಹುತೇಕ ಯುವಕರು ಯುವತಿಯರು ಗ್ರಾಮದ ನಡುವೆ ಇರುವಂತ ಬೃಹತ್ ಶ್ರೀಕೋದಂಡರಾಮ ದೇವಾಲಯದ ಜಾತ್ರೆಗೆ ಆಗಮಿಸಿ connect ಆಗುತ್ತಾರೆ. ಶ್ರೀರಾಮ ಭಕ್ತಿಯ ಸಂಕೇತ ಎನ್ನುವಂತೆ ಹಿರಿಯ,ಕಿರಿಯ ಸ್ನೇಹಿತರೂ ಬಂಧುಗಳು ಸಹೋದರ,ಸಹೋದರಿಯರೂ ಜಾತ್ರೆ ನೆಪದಲ್ಲಿ ಭಕ್ತಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳುತ್ತ ಹಳೆಯ ನೆನಪುಗಳೊಂದಿಗೆ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ weekend ಸಂದರ್ಭದಲ್ಲಿ ಜಾತ್ರೆ ಬಂದರೆ ಒಂದೇರಡು ದಿನ ಊರಲ್ಲಿ ಇದ್ದು ಸ್ನೇಹಿತರೊಂದಿಗೆ ಎರಡು ದಿನಗಳ ಬೊನಸ್ ಸಂಭ್ರಮ ಆಚರಿಸುತ್ತಾರೆ ಇಲ್ಲವಾದರೆ rotine life ಎನ್ನುವಂತೆ ಬಂದುಹೋಗುತ್ತಾರೆ. ಶ್ರೀನಿವಾಸಪುರ:ತಾಲೂಕಿನ ಯಲ್ದೂರಿನ ಐತಿಹಾಸಿಕ ವೈಷ್ಣವ ಪುಣ್ಯಕ್ಷೇತ್ರ ಶ್ರೀ…
ಶ್ರೀನಿವಾಸಪುರ: ತಾಲೂಕಿನ ಖ್ಯಾತ ವಿದ್ಯಾಸಂಸ್ಥೆ ಪಿ.ಯು.ಸಿ ಪರಿಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದೆ ದ್ವಿತೀಯ ಪಿ.ಯು.ಸಿ ಪರಿಕ್ಷೆಯಲ್ಲಿ ಶೇಕಡಾ 95 ರಷ್ಟು ಫಲಿತಾಂಶ ಬಂದಿದೆ ಎಂದು ವಿಷನ್ ಇಂಡಿಯಾ ಶಾಲೆ ಮುಖ್ಯಸ್ಥ ಖ್ಯಾತ ವೈದ್ಯ ಡಾ: ಕೆ.ಎನ್. ವೇಣುಗೋಪಾಲ್ ತಿಳಿಸಿದರು.ಅವರು ತಾಲ್ಲೂಕಿನ ರೋಣೂರು ಕ್ರಾಸ್ನಲ್ಲಿರುವ ವಿ.ಐ.ಪಿ. ಪಿ.ಯು.ಕಾಲೇಜಿನ ಆವರಣದಲ್ಲಿ ಪಿ.ಯು.ಸಿ ಪರಿಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಮಾತನಾಡಿದರು.ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 68 ವಿದ್ಯಾರ್ಥಿಗಳು, ಮತ್ತು ವಾಣಿಜ್ಯ ವಿಭಾಗದಲ್ಲಿ 43 ವಿದ್ಯಾರ್ಥಿಗಳು ಸೇರಿ ಒಟ್ಟು 114 ವಿದ್ಯಾರ್ಥಿಗಳು ಪರೀಕ್ಷೆ ತಗೆದುಕೊಂಡಿದ್ದರು.ಅವರಲ್ಲಿ ವಿಜ್ಞಾನ ವಿಷಯದಲ್ಲಿ 70 ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಿದ್ದು 68 ವಿದ್ಯಾರ್ಥಿಗಳು ತೇರ್ಗಡೆ ಹೊಂದಿರುತ್ತಾರೆ,ಅದರಲ್ಲಿ ಸಫಿಯಾ ಕೌಸರ್ 600 ಅಂಕಗಳಿಗೆ 578 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಒಟ್ಟು 44 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇವರಲ್ಲಿ 43 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು ಶ್ರುತಿ .ಆರ್. 600 ಅಂಕಗಳಿಗೆ 567 ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ…
ದಾವಣಗೆರೆ ಖಾಸಗಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಕೃಪಾ, ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ತಾಂಡಾದ ಕಾವ್ಯ ಬಸಪ್ಪ ಲಮಾಣಿ , ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಅಗಸನೂರು ಗ್ರಾಮದ ಮಲ್ಲಯ್ಯ- ನಾಗರತ್ನ ದಂಪತಿಯ ಪುತ್ರಿ ವಿಜಯಲಕ್ಷ್ಮಿ ಮೈಸೂರಿನ ಒಂಟಿಕೊಪ್ಪಲಿನ ಸರ್ಕಾರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯಾ ಕಲಾಮಂದಿರ ಅಪಾರ್ಟ್ಮೆಂಟ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನ್ಯೂಜ್ ಡೆಸ್ಕ್:ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದ ನಾಲ್ವರು ವಿದ್ಯಾರ್ಥಿನಿಯರು ನೇಣು ಶಾರಣಾದ ಧಾರುಣ ಘಟನೆ ರಾಜ್ಯದ ನಾನಾ ಕಡೆಗಳಲ್ಲಿ ನಡೆದಿದೆ.ಹಿರೇಕೆರೂರಿನ ಕಾವ್ಯದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದಕ್ಕೆ ಬೇಸರಗೊಂಡ ಹಿರೇಕೆರೂರು ತಾಲೂಕಿನ ಚಿನ್ನಮುಳಗುಂದ ತಾಂಡಾದ ವಿದ್ಯಾರ್ಥಿನಿ ಕಾವ್ಯ ಬಸಪ್ಪ ಲಮಾಣಿ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ.ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪರಿಕ್ಷೆ ಬರದಿದ್ದ ವಿದ್ಯಾರ್ಥಿನಿ ಕಾವ್ಯ ನಾಲ್ಕು ವಿಷಯದಲ್ಲಿ ಫೇಲ್ ಆಗಿದ್ದಳು. ಇದರಿಂದ ಬೇಸರಗೊಂಡು, ಮನೆಯಲ್ಲಿ ಯಾರೂ…
ಶ್ರೀನಿವಾಸಪುರ:ಶ್ರೀ ರಾಮನವಮಿ ಪ್ರಯುಕ್ತ ಶ್ರೀನಿವಾಸಪುರ ತಾಲೂಕಿನ ಎಲ್ಲಾ ವೈಷ್ಣವ, ಶ್ರೀರಾಮ ಹಾಗೂ ಆಂಜನೇಯಸ್ವಾಮಿ ದೇವಾಲಯಗಳಿಗೆ ಸಾವಿರಾರು ಭಕ್ತರು ಆಗಮಿಸಿ ದರ್ಶನ ಪಡೆದು, ಪೂಜೆ ಸಲ್ಲಿಸಿದ್ದರುಬೆಳಗ್ಗೆಯಿಂದಲೇ ಭಕ್ತರು ಶ್ರದ್ಧಾ ಭಕ್ತಿಯಿಂದ ವೈಷ್ಣವ ಮಂದಿರಗಳಿಗೆ ಭೇಟಿ ಇತ್ತು ಭಗವಂತನ ದರ್ಶನ ಪಡೆದರು, ಶ್ರೀ ರಾಮನ ದೇವಾಲಯಗಳಲ್ಲಿ ಜೈ ಶ್ರೀರಾಮ್ ಘೋಷಣೆಗಳು ಕೂಗುತ್ತ ಭಕ್ತರು ರಾಮನ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನಿತರಾದರು.ವಿಶೇಷವಾಗಿ ತಾಲೂಕಿನ ಯಲ್ದೂರು ಪುರಾಣ ಪ್ರಸಿದ್ಧ ಶ್ರೀ ಕೋದಂಡರಾಮಸ್ವಾಮಿ ದೇವಾಲಯದಲ್ಲಿ ವಿಶೇಷ ಅಲಂಕಾರ ಪೂಜೆ ಕಾರ್ಯಕ್ರಮಗಳು ನಡೆಯಿತು.ಎನ್ ಮರೇಪಲ್ಲಿ ಶ್ರೀ ಪಂಚಮುಖಿ ಅಂಜನೇಯ ದೇವಾಲಯದಲ್ಲಿ ರಾಮತಾರಕ ಹೋಮ ಪೂಜೆ ಸೀತಾರಾಮ ಕಲ್ಯಾಣೋತ್ಸವ ಆಯೋಜಿಸಲಾಗಿತ್ತು.ಶ್ರೀನಿವಾಸಪುರ ಪಟ್ಟಣದಲ್ಲಿ ವಲ್ಲಭಾಯ್ ರಸ್ತೆಯಲ್ಲಿ ರಾಮರ ಗುಡಿಯಲ್ಲಿ ಶ್ರೀರಾಮನವಮಿಯಂದು ಇಡಿ ರಾತ್ರಿ ಭಜನೆ ನಡೆಯಿತು ಮೂರು ದಿನಗಳ ಕಾಲ ವಿಶೇಷ ಕಾರ್ಯಕ್ರಮಗಳು ನಡೆಯಿತು. ಪಾನಕ ಪನ್ಯಾರ ಹಂಚಿದ ಯುವಕ ಸಂಘಗಳುದೇವಾಲಯಗಳಲ್ಲಿ ಸೇರಿದಂತೆ ಯುವಕ ಸಂಘಗಳು ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಮುಳಬಾಗಿಲು ವೃತ್ತದ ಆಟೋ ನಿಲ್ದಾಣ,ಎಂ.ಜಿ ರಸ್ತೆಯ ತರಕಾರಿ ಮಾರುಕಟ್ಟೆ ವೃತ್ತ,…