ನ್ಯೂಜ್ ಡೆಸ್ಕ್:ಭಕ್ತಿಯ ಸಂಕೇತವಾದ ಅಯೋಧ್ಯೆ ಶ್ರೀರಾಮಚಂದ್ರ ಭಾರತೀಯರ ಅಚ್ಚುಮೆಚ್ಚಿನ ದೇವರು ಭಾವನಾತ್ಮಕವಾಗಿ ಶ್ರೀರಾಮನ್ನು ಪ್ರೀತಿಯೊಂದಿಗೆ ಪೂಜಿಸುತ್ತಾರೆ ದೇಶದ ಸಂಸ್ಕೃತಿ, ನಂಬಿಕೆ, ಪರಂಪರೆಯ ಐತಿಹಾಸಿಕ ಸಂಕೇತ. ಶ್ರೀರಾಮನ ಆದರ್ಶ ನಮ್ಮ ಜೀವನದಲ್ಲೂ ಇರಲಿ ಎಂದು ಭಯಸುತ್ತಾರೆ ಇಂತಹ ಶ್ರೀರಾಮನಿಗೆ ಈಗಿನ ತೆಲಂಗಾಣ ರಾಜ್ಯದ ಭದ್ರಾಚಲಂ ಶ್ರೀಸೀತಾರಾಮರಿಗೆ ರಾಮದಾಸು ಎಂಬ ಭಕ್ತ ದೇವಸ್ಥಾನ ನಿರ್ಮಿಸಿದ್ದು ಇತಿಹಾಸ ರಾಮದಾಸನ ಸಿನಿಮಾ ನೋಡಿದ ಬಹುತೇಕರಿಗೆ ಆತನ ಭಕ್ತಿಯ ಕುರಿತಾಗಿ ಸಾಕಷ್ಟು ತಿಳಿದಿರುತ್ತದೆ ಅಷ್ಟೊಂದು ಆಪ್ಯಾಯತೆ ಪ್ರೀತಿಯಿಂದ ಭದ್ರಾಚಲಂ ನಲ್ಲಿ ತನ್ನ ಪ್ರೀತಿಯ ರಾಮಯ್ಯನಿಗೆ ಶ್ರೀಸೀತಾರಾಮನ ದೇವಾಲಯವನ್ನು ಭಕ್ತ ರಾಮದಾಸು ಪ್ರೀತಿಯಿಂದ ಕಟ್ಟಿಸಿರುವುದು ಇತಿಹಾಸ.
ಇಷ್ಟೊಂದು ಭಕ್ತಿ ಪವಿತ್ರ್ಯತೆಯ ಭದ್ರಾಚಲಂ ಶ್ರೀಸೀತಾರಾಮ ದೇವಸ್ಥಾನ ಗೋದಾವರಿ ನದಿ ತೀರದ ಪಶ್ಚಿಮ ದಿಕ್ಕಿನತ್ತ ಮುಖ ಮಾಡಿರುವುದು ಈ ದೇವಸ್ಥಾನದ ವಿಶೇಷತೆಯಾಗಿದೆ ಇದು ಭಗವಾನ್ ರಾಮನಿಗೆ ಸಮರ್ಪಿತವಾಗಿರುವ ವಿಶಿಷ್ಟ ದೇವಾಲಯವಾಗಿ “ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯ” ಕ್ಕೆ ಹೆಸರುವಾಸಿಯಾಗಿದೆ. ಇದು ಪ್ರಸ್ತುತ ಭಾರಯದಲ್ಲಿ ಅಯೋಧ್ಯೆಯ ನಂತರ ಅತಿದೊಡ್ಡ ಶ್ರೀರಾಮಕ್ಷೇತ್ರವಾಗಿದೆ
ಈಗ ಇಂತಹುದೆ ಭದ್ರಾಚಲಂ ಶ್ರೀಸೀತಾರಾಮ ದೇವಸ್ಥಾನವನ್ನು ಸಪ್ತಸಾಗರದಾಚೆ ದೂರದ ಅಮೆರಿಕಾ ದೇಶದ ಅಂಟ್ಲಾಂಟ ನಗರದ ಹೈವೆಯಲ್ಲಿ ನಿರ್ಮಾಣವಾಗಲಿದೆ. ಶ್ರೀರಾಮ ಸಂಸ್ಥಾನ ಇನ್ಕಾರ್ಪೋರೇಟೆಡ್ ಸಂಸ್ಥೆ ಭಕ್ತರ ಸಹಕಾರದೊಂದಿಗೆ ಸುಮಾರು 250 ಕೋಟಿ ದೇಣಿಗೆಯೊಂದಿಗೆ ದೇವಾಲಯ ನಿರ್ಮಾಣಮಾಡಲಿದ್ದಾರೆ ಎಂದು ಶ್ರೀರಾಮ ಸಂಸ್ಥಾನದ ಅಧ್ಯಕ್ಷ ಪದ್ಮನಾಭಾಚಾರ್ಯ ಹೇಳಿದ್ದಾರೆ. 2019ರಲ್ಲಿ ಅಮೆರಿಕದ ಅಟ್ಲಾಂಟಾದ ಹೆದ್ದಾರಿಯಲ್ಲಿ 33 ಎಕರೆ ಪ್ರದೇಶದಲ್ಲಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಲಾಗಿದ್ದು 2025ರ ಶ್ರೀರಾಮ ನವಮಿ ವೇಳೆಗೆ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದ್ದು 200 ಶಿಲ್ಪಿಗಳು, 15 ಎಂಜಿನಿಯರ್ಗಳು ಮತ್ತು ವಾಸ್ತುಶಿಲ್ಪಿಗಳು ಕಡಪ ಜಿಲ್ಲೆಯ ಅಲ್ಲಗಡ್ಡದ ಖ್ಯಾತ ಶಿಲ್ಪಿ ಡಿ ರಾಮಕೃಷ್ಣಮಾಚಾರ್ಯರ ಮೇಲ್ವಿಚಾರಣೆಯಲ್ಲಿ ಅವಿರತವಾಗಿ ಕಾರ್ಯಗಳು ನಡೆಯುತ್ತಿರುವುದಾಗಿ ಹೇಳುತ್ತಾರೆ ಸಂಸ್ಥಾನದ ಪ್ರತಿನಿಧಿಗಳಾದ ಜಡಾ ಕಾಶಿವಿಶ್ವನಾಥ ಶರ್ಮಾ ಮತ್ತು ಎಂ ಸಂತೋಷ ಶರ್ಮಾ ಇದ್ದರು.
Trending
- ದ್ವೇಷ ಬೇಡ,ಎಲ್ಲರಿಗೂ ಬಾಗಿಲು ತೆರೆದಿದೆ.ಜೆಡಿಎಸ್ ಕಾರ್ಯಕರ್ತರಿಗೆ CM ಡಿಕೆಶಿ ಆಹ್ವಾನ!
- ಕರ್ನಾಟಕದಿಂದ ರಾಜ್ಯಸಭೆಗೆ ಆಂಧ್ರದ ಶರ್ಮಿಳಾ ಹೆಸರು ಪರಿಗಣನೆಗೆ!
- ಶ್ರೀನಿವಾಸಪುರ:ಹೈವೇ ರಸ್ತೆಯಲ್ಲಿ ಬಾರಿ ವಾಹನಗಳ ಅಪಾಯಕಾರಿ ಪಾರ್ಕಿಂಗ್!
- ಶ್ರೀನಿವಾಸಪುರ:ಟಾಟಾ ಇಂಡಿಕಾ ಕಾರು ಡಿಕ್ಕಿ ದ್ವಿಚಕ್ರ ವಾಹನ ಸವಾರರ ಸಾವು!
- social media ದಲ್ಲಿ ಫೇಮಸ್ ಆಯಿತು ಯುವಕನ ಗಹಗಹಿಸಿ ನಗು!
- ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ”ಬೈಕ್ ಟ್ಯಾಕ್ಸಿ”ವಿರುದ್ದ ಕ್ರಮ ಜರುಗಿಸಿ!
- ಶ್ರೀನಿವಾಸಪುರ:ಎಂ.ಜಿ.ರಸ್ತೆ ಅತಿವೇಗದ ಬೈಕ್ ಚಾಲನೆ ಅಪಘಾತ ನಾಲ್ವರಿಗೆ ಗಾಯ!
- ಅಗ್ರಿಗೋಲ್ಡ್ ಸಂತ್ರಸ್ತರಿಗೆ ಆರು ತಿಂಗಳೊಳಗೆ ನ್ಯಾಯ ಒದಗಿಸುವಂತೆ AP ಸಿಎಂ ಸೂಚನೆ!
Sunday, June 7



