ಶ್ರೀನಿವಾಸಪುರ:ಅತಿವೇಗದದಿಂದ ತೆರಳುತ್ತಿದ್ದ ಮಹಿಂದ್ರಾ ಎಸ್.ಯು.ವಿ ಕಾರು ಡಿಕ್ಕಿ ಹೋಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಧಾರುಣ ಘಟನೆ ತಾಲ್ಲೂಕಿನ ಗೌವನಪಲ್ಲಿ ಪೋಲಿಸ್ ಠಾಣೆ ವ್ಯಾಪ್ತಿಯ ಕಡಪಾ-ಬೆಂಗಳೂರು ಹೆದ್ದಾರಿಯಲ್ಲಿ ತಾಡಿಗೋಳ್ ಕ್ರಾಸ್ ಬಳಿ ಇಂದು ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿರುವ ಬೈಕ್ ಸವಾರರನ್ನು ತಾಡಿಗೋಳ್ ಗ್ರಾಮದ ಶಂಕರಪ್ಪ(38) ಹಾಗು ಮ್ಯಾಕಲಗಡ್ಡ ಗ್ರಾಮದ ಮುನಿಶಾಮಿ(40) ಎಂದು ಗುರುತಿಸಲಾಗಿದೆ.
ಆಂಧ್ರದ ಮದನಪಲ್ಲಿಯಿಂದ ಬೆಂಗಳೂರಿಗೆ ಹೊರಟಿದ್ದ ಮಹಿಂದ್ರಾ ಹೈಬ್ರಿಡ್ ಕಾರು ತಾಡಿಗೊಳ್ ಕ್ರಾಸ್ ಬಳಿ ಜಲ್ಲಿ ಟಿಪ್ಪರ್ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಬೈಕ್ ಸವಾರರಿಗೆ ಡಿಕ್ಕಿ ಹೊಡೆದಿದ್ದು ಡಿಕ್ಕಿ ಹೊಡೆದ ರಭಸಕ್ಕೆ ಅತಿಯಾದ ವೇಗದಲ್ಲಿ ಸಾಗುತ್ತಿದ್ದ ಕಾರು ರಸ್ತೆ ಪಕ್ಕದ ಟಮ್ಯಾಟೋ ತೋಟಕ್ಕೆ ನುಗ್ಗಿದೆ.ಬೈಕನಲ್ಲಿದ್ದ ಇಬ್ಬರು ಸ್ಥಳದಲ್ಲಿಯೆ ಸಾವನಪ್ಪಿರುತ್ತಾರೆ.
ಈ ಬಗ್ಗೆ ಗೌವನಪಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಂಧ್ರ ರಾಜಕಾರಣಿ ಕಾರು!
ಅತಿವೇಗದ ಚಾಲನೆಯಿಂದ ಇಬ್ಬರು ಗ್ರಾಮಸ್ಥರ ಸಾವಿಗೆ ಕಾರಣವಾದ ಮಹಿಂದ್ರಾ XUV ಕಾರು ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ರಾಯಚೂಟಿಯ ಆಡಳಿತ ರೂಡ ರಾಜಕಾರಣಿಯದು ಎನ್ನಲಾಗುತ್ತಿದೆ ಕಾರು ಬೆಂಗಳೂರಿಗೆ ತೆರಳುತ್ತಿದ್ದು ಕಾರಿನ ಮುಂಬಾಗದ ಗಾಜಿನ ಮೇಲೆ GOVT WHIP(ಸರ್ಕಾರಿ ಸಚೇತಕ) ಎಂದು ಸ್ಟೀಕರ್ ಅಂಟಿಸಲಾಗಿದೆ ಈ ಬಗ್ಗೆ ಗೌವನಪಲ್ಲಿ ಠಾಣಾಧಿಕಾರಿಯನ್ನು ಕೇಳಿದರೆ ವಾಹನದ ಸಂಖ್ಯೆ AP13AC6570 ಇದೆ ಸರ್ ಆದರೆ ಈ ಬಗ್ಗೆ ನಮಗೇನೂ ತಿಳಿಯದು ಎಂದು ಜಾರಿಕೊಳ್ಳುವ ಉತ್ತರ ಹೇಳುತ್ತಾರೆ
Trending
- ಕರ್ನಾಟಕ ಮಾವು ಆಂಧ್ರ ನಿಷೇದಿಸಿರುವುದು ಒಕ್ಕೂಟ ವ್ಯವಸ್ಥೆಗೆ ಪೆಟ್ಟು ಸಿದ್ದರಾಮಯ್ಯ!
- ಶ್ರೀನಿವಾಸಪುರ:ಮಾವು ದರ ಕುಸಿತ,ಆಂಧ್ರದವರು ಬೇಡ ಅಂದ್ರಾ ಕರ್ನಾಟಕ ಮಾವನ್ನು!
- SRINIVASPUR ಮಾರುಕಟ್ಟೆಯಲ್ಲಿ ಮೋಸ ರೈತರಿಂದ ಲೋಕಾಯುಕ್ತರಿಗೆ ದೂರು
- ಮುಳಬಾಗಿಲು:ದಾಳಿಕೊರರ ಅತಿಕ್ರಮಣ ಕೃಷಿ ಸಂಸ್ಕೃತಿ ಮೇಲೂ ಪರಿಣಾಮ!
- ಶ್ರೀನಿವಾಸಪುರ ಅಭಿವೃದ್ಧಿಗೆ ಕೈಗಾರಿಕೆಗಳು ಸಹಕಾರಿ ವೆಂಕಟಶಿವಾರೆಡ್ಡಿ
- ಶ್ರೀನಿವಾಸಪುರ:ಮಾವು ಬೆಂಬಲ ಬೆಲೆಗೆ ಅಗ್ರಹಿಸಿ ರೈತರಿಂದ ರಸ್ತೆ ತಡೆ! ಬಂದ್ ಎಚ್ಚರಿಕೆ
- ಟೀನೇಜ್ ಗೆಳೆಯ ಗೆಳತಿಯರ “ನ ಲಜ್ಜಾಃ ನ ಭಯಂ” ಬಸ್ಸಿನಲ್ಲೆ ಅತಿರೇಕ!
- ಚಿಂತಾಮಣಿಗೂ ವಕ್ಕರಿಸಿದ ಕೊರೋನಾ! ಆತಂಕ ಬೇಡ
Tuesday, June 17